AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kidney Disease: ಕಿಡ್ನಿಯ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುವ ಪರಿಣಾಮಕಾರಿ ಮನೆಮದ್ದು ಇಲ್ಲಿದೆ

ಪೌಷ್ಟಿಕತಜ್ಞೆ ಭಕ್ತಿ ಕಪೂರ್ ತನ್ನ ಇತ್ತೀಚಿನ ಇನ್ಟಾಗ್ರಾಮ್ ಪೋಸ್ಟ್​​​ನಲ್ಲಿ ಅನಾರೋಗ್ಯಕರ ಮೂತ್ರಕೋಶದ ಬಗ್ಗೆ ಹಾಗೂ ಕೆಲವು ಪೌಷ್ಟಿಕ ಸಲಹೆಯನ್ನು ಅನುಸರಿಸುವ ಮೂಲಕ ಕಿಡ್ನಿಯ ಕಾರ್ಯವನ್ನು ಹೇಗೆ ಸುಧಾರಿಸಬಹುದು ಎಂಬುದರ ಬಗ್ಗೆ ಹಂಚಿಕೊಂಡಿದ್ದಾರೆ.

Kidney Disease: ಕಿಡ್ನಿಯ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುವ ಪರಿಣಾಮಕಾರಿ ಮನೆಮದ್ದು ಇಲ್ಲಿದೆ
ಅಕ್ಷತಾ ವರ್ಕಾಡಿ
|

Updated on: Feb 02, 2023 | 7:30 AM

Share

ದುರ್ಬಲ ಮೂತ್ರಕೋಶವು ರೋಗ ಅಥವಾ ಗಾಯದಿಂದಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವಗಳನ್ನು ತೆಗೆದುಹಾಕುತ್ತವೆ ಮತ್ತು ನೀರು, ಲವಣ ಮತ್ತು ಖನಿಜಗಳ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳುತ್ತವೆ. ಮೂತ್ರಪಿಂಡದ ಕಾಯಿಲೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಉಂಟಾಗಬಹುದು. ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯ ಸಂದರ್ಭದಲ್ಲಿ, ಮೂತ್ರಪಿಂಡಗಳು ಕ್ರಮೇಣ ತಮ್ಮ ಕಾರ್ಯವನ್ನು ಕಳೆದುಕೊಳ್ಳುತ್ತವೆ. ದುರ್ಬಲ ಮೂತ್ರಪಿಂಡದ ರೋಗಲಕ್ಷಣವು ಮೂತ್ರವಿಸರ್ಜನೆಯ ಹೆಚ್ಚಿದ ಪ್ರಚೋದನೆ, ಹಲವು ಬಾರಿ ಹಸಿವಾಗದಿರುವುದು, ಕಣ್ಣುಗಳ ಊದುವಿಕೆ, ದುರ್ವಾಸನೆ, ಸ್ನಾಯುಗಳ ಸೆಳೆತವನ್ನು ಒಳಗೊಂಡಿರುತ್ತದೆ.

ಪೌಷ್ಟಿಕತಜ್ಞೆ ಭಕ್ತ ಕಪೂರ್ ತನ್ನ ಇತ್ತೀಚಿನ ಇನ್ಟಾಗ್ರಾಮ್ ಪೋಸ್ಟ್​​ನಲ್ಲಿ ದುರ್ಬಲ ಮೂತ್ರಪಿಂಡದ ಲಕ್ಷಣಗಳು ಮತ್ತು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಮಾತನಾಡಿದ್ದಾರೆ. ಮೂತ್ರಪಿಂಡಗಳು ನಿಮ್ಮ ದೇಹದ ವೈಯಕ್ತಿಕ ಕಸ ಸಂಗ್ರಹಗಳಂತೆ ಕಾರ್ಯನಿರ್ವಹಿಸುತ್ತವೆ. ಮೂತ್ರಪಿಂಡಗಳು ದೇಹದಲ್ಲಿ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವ ಸಂಗ್ರಹವನ್ನು ತಡೆಯುತ್ತದೆ. ಎಲೆಕ್ಟ್ರೊಲೈಟ್ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಕೆಂಪು ರಕ್ತಕಣಗಳನ್ನು ಸೃಷ್ಟಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಬಲವಾದ ಮೂಳೆಗಳನ್ನು ನಿರ್ಮಿಸುತ್ತದೆ. ಕಿಡ್ನಿ ರೋಗವು ಬಹಳ ಮುಂದುವರೆಯುವವರೆಗೆ ಪತ್ತೆಯಾಗುವುದಿಲ್ಲ, ದುರಾದೃಷ್ಟವಶಾತ್ ಯಾರಿಗಾದರೂ ಕಿಡ್ನಿ ರೋಗ ಕಾಣಿಸಿಕೊಂಡರೆ ಡಯಾಲಿಸಿಸ್ ಅಥವಾ ಕಸಿ ಅಗತ್ಯವಿರುತ್ತದೆ ಎಂದು ಭಕ್ತಿ ಕಪೂರ್ ಹೇಳಿದ್ದಾರೆ.

ಅನಾರೋಗ್ಯ ಮೂತ್ರಪಿಂಡಗಳ ಲಕ್ಷಣಗಳು:

  • ಉಬ್ಬಿದ ಕಣ್ಣುಗಳು: ಇದು ಪ್ರೋಟೀನ್‌ನ ಅತಿಯಾದ ಸೇವನೆಯ ಕಾರಣದಿಂದಾಗಿರಬಹುದು.
  • ನೋಕ್ಟುರಿಯಾ: ಇದು ರಾತ್ರಿಯಲ್ಲಿ ನಿರಂತರವಾಗಿ ಮೂತ್ರವಿಸರ್ಜನೆಗಾಗಿ ಎಚ್ಚರಗೊಳ್ಳುವ ಸ್ಥಿತಿಯಾಗಿದೆ.
  • ಊದಿಕೊಂಡ ಮುಖ ಅಥವಾ ನೊರೆ ಮೂತ್ರ: ಇದು ನಿರ್ಜಲೀಕರಣದ ಕಾರಣದಿಂದಾಗಿರಬಹುದು. ನಿಮ್ಮ ವಿಷಯದಲ್ಲಿ ಹೀಗಾಗಿದ್ದರೆ, ನೀವು ಹೆಚ್ಚಾಗಿ ನೀರು ಕುಡಿಯಬೇಕಾಗುತ್ತದೆ.
  • ಕೆಟ್ಟ ಉಸಿರಾಟ ಅಥವಾ ನಿಮ್ಮ ಬಾಯಿಯಲ್ಲಿ ಲೋಹದಂತ ರುಚಿಯು ಅನಾರೋಗ್ಯಕರ ಮೂತ್ರಪಿಂಡದ ಸೂಚನೆಯಾಗಿರಬಹುದು.

ಇದನ್ನೂ ಓದಿ: ವಿವಿಧ ರೀತಿಯ ಸಂಧಿವಾತದ ಲಕ್ಷಣ ಹಾಗೂ ಚಿಕಿತ್ಸೆಯ ಕುರಿತು ತಜ್ಞರು ನೀಡಿದ ಸಲಹೆ ಇಲ್ಲಿದೆ

ಕಿಡ್ನಿಯ ಕಾರ್ಯವನ್ನು ಸುಧಾರಿಸಲು ಮನೆಮದ್ದು:

ನಿಂಬೆ ರಸವನ್ನು ಬಳಸಿ ಮತ್ತು ವಿಟಮಿನ್ ಸಿ ಅಧಿಕವಾಗಿರುವ ಆಹಾರವನ್ನು ಸೇವಿಸಿ:

ನಿಮ್ಮ ಪಾನೀಯಯಗಳಿಗೆ ನೀವು ನಿಯಮಿತವಾಗಿ ತಾಜಾ ಹಿಂಡಿದ ನಿಂಬೆಹಣ್ಣಿನ ರಸವನ್ನು ಸೇರಿಸಬಹುದು. ಸಿಟ್ರಸ್ ಹಣ್ಣುಗಳು, ಬ್ರೋಕೊಲಿ, ಸೌತೆಕಾಯಿ, ಹಸಿರು ಎಲೆ ತರಕಾರಿಗಳನ್ನು ಒಳಗೊಂಡಂತೆ ನಿಂಬೆ ಮತ್ತು ವಿಟಮಿನ್ ಸಿ ಭರಿತ ಆಹಾರಗಳು ಕಿಡ್ನಿಯ ಕಾರ್ಯವನ್ನು ನಿರ್ವಹಿಸಲು ಉಪಯುಕ್ತವಾಗಿದೆ. ಇದು ಕಿಡ್ನಿಯಲ್ಲಿ ಕಲ್ಲುಗಳ ಬೆಳವಣಿಗೆಯನ್ನು ತಡೆಯುತ್ತದೆ.

ಕಡಿಮೆ ಪೊಟ್ಯಾಸಿಯಮ್ ಹೊಂದಿರುವ ಆಹಾರವನ್ನು ಆಯ್ಕೆಮಾಡಿ:

ಬಾಳೆಹಣ್ಣು, ಕಿತ್ತಳೆ, ಆಲೂಗಡ್ಡೆ, ಪಾಲಕ್, ಟೊಮೆಟೊಗಳು ಹೆಚ್ಚಿನ ಪೊಟ್ಯಾಸಿಯಮ್ ಅಂಶಗಳನ್ನು ಹೊಂದಿದೆ. ಸೇಬು, ಎಲೆಕೋಸು, ಕ್ಯಾರೆಟ್, ಹಸಿರು ಬೀನ್ಸ್, ದ್ರಾಕ್ಷಿ, ಸ್ಟ್ರಾಬೆರಿಗಳು ಕಡಿಮೆ ಪೊಟ್ಯಾಸಿಯಮ್ ಅಂಶವನ್ನು ಹೊಂದಿದೆ. ಸೆಲರಿ(ಓಮ ಎಲೆ) ಜ್ಯೂಸ್: ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸೆಲರಿ ಜ್ಯೂಸ್ ಸಹಾಯ ಮಾಡುತ್ತದೆ. ಸೆಲರಿ ರಸವು ಖನಿಜ ಮತ್ತು ಲವಣಗಳನ್ನು ಒಳಗೊಂಡಿರುತ್ತದೆ. ಊಟಕ್ಕೆ ೩೦ ನಿಮಿಷಗಳ ಮುಂಚಿತವಾಗಿ ಪ್ರತಿದಿನ 1 ರಿಂದ 2 ಗ್ಲಾಸ್ ಸೆಲರಿ ಜ್ಯೂಸ್ ಸೇವಿಸಲು ಭಕ್ತಿ ಕಪೂರ್ ಸಲಹೆ ನೀಡಿದ್ದಾರೆ.

ದಂಡೇಲಿಯನ್(ಕಾಡು ಸೇವಂತಿಗೆ) ಬೇರು:

ದಂಡೇಲಿಯನ್ ಹೂವುಗಳಲ್ಲಿ ಉತ್ಕರ್ಷಣ ನಿರೋಧಕ ಗುಣಗಳನ್ನು ಕಾಣಬಹುದು. ಹೆಚ್ಚುವರಿಯಾಗಿ ದಂಡೇಲಿಯನ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಕಿಡ್ನಿಗಳು, ಪಿತ್ತಕೋಶ ಮತ್ತು ಯಕೃತ್ತನ್ನು ಶುದ್ಧೀಕರಿಸಲು ದಂಡೇಲಿಯನ್ ಗಿಡಮೂಲಿಕೆಯನ್ನು ತಜ್ಞರು ಬಳಸುತ್ತಾರೆ. ಉಪ್ಪು ಸೇರಿಸದ ಆಹಾರ ಉತ್ಪನ್ನಗಳಿಂದ ದೂರವಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ