AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pet Food: ಮಾಂಸಾಹಾರಿ ಸಾಕು ನಾಯಿಗೆ ತರಕಾರಿ ತಿನ್ನುವುದನ್ನು ಅಭ್ಯಾಸ ಮಾಡುವುದು ಹೇಗೆ? ಇಲ್ಲಿವೆ ವೈದ್ಯರ ಸಲಹೆಗಳು

ಮಾಂಸಾಹಾರಿ ನಾಯಿಗಳನ್ನು ಸಸ್ಯಾಹಾರಿಯನ್ನಾಗಿ ಮಾಡಲು ಮತ್ತು ಅದರಿಂದ ನಾಯಿಗಳಿಗಾಗುವ ಪ್ರಯೋಜನಗಳ ಬಗ್ಗೆ ಸೂಪರ್‌ಟೇಲ್ಸ್‌ನ ಮುಖ್ಯ ಪಶುವೈದ್ಯ ಡಾ.ಶಾಂತನು ಕಲಾಂಬಿ ಅವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

Pet Food: ಮಾಂಸಾಹಾರಿ ಸಾಕು ನಾಯಿಗೆ ತರಕಾರಿ ತಿನ್ನುವುದನ್ನು ಅಭ್ಯಾಸ ಮಾಡುವುದು ಹೇಗೆ? ಇಲ್ಲಿವೆ ವೈದ್ಯರ ಸಲಹೆಗಳು
ಸಾಂಕೇತಿಕ ಚಿತ್ರ
TV9 Web
| Edited By: Rakesh Nayak Manchi|

Updated on: Jul 25, 2022 | 6:30 AM

Share

ಸಾಕು ಪ್ರಾಣಿ ನಾಯಿಗಳಿಗೆ ಮಾಂಸ ಅಂದರೆ ತುಂಬಾ ಇಷ್ಟ. ಮಾಂಸದೂಟ ಹಾಕಿದರೆ ಸಾಕು ಅದು ತಿನ್ನುವ ಶೈಲಿಯೇ ಬೇರೆಯೇ ಆಗಿರುತ್ತದೆ. ಹಣ ಇದ್ದವರಾದರೆ ನಿತ್ಯ ಮಾಂಸವನ್ನು ತಂದು ಹಾಕಬಹುದು, ಮದ್ಯಮ ವರ್ಗದವರು ಅಥವಾ ಬಡವರಾದರೆ ಹೇಗೆ ತಾನೆ ನಿತ್ಯ ಸಾಕು ನಾಯಿಗೆ ಮಾಂಸ ಹಾಕುವುದು ಅಲ್ವಾ? ಕೆಲವು ನಾಯಿಗಳಿಗಂತೂ ಮಾಂಸದೂಟವೇ ಬೇಕು. ಹೀಗಿದ್ದಾಗ ನಾಯಿಗಳಿಗೆ ಸಸ್ಯಾಹಾರ ಸೇವನೆಯ ಅಭ್ಯಾಸವನ್ನು ಹೇಗೆ ಮಾಡುವುದು? ಈ ಸುದ್ದಿ ಮೂಲಕ ನಿಮಗೆ ಮಾಹಿತಿ ನೀಡುತ್ತೇವೆ.

ಮಾಂಸಾಹಾರಿ ನಾಯಿಗಳನ್ನು ಸಸ್ಯಾಹಾರಿಯನ್ನಾಗಿ ಮಾಡಲು ಮತ್ತು ಅದರಿಂದ ನಾಯಿಗಳಿಗಾಗುವ ಪ್ರಯೋಜನಗಳ ಬಗ್ಗೆ ಸೂಪರ್‌ಟೇಲ್ಸ್‌ನ ಮುಖ್ಯ ಪಶುವೈದ್ಯ ಡಾ.ಶಾಂತನು ಕಲಾಂಬಿ ಅವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಮೊದಲು ನಾಯಿಗಳಿಗೆ ತರಕಾರಿಗಳನ್ನು ನೀಡುವುದರಿಂದ ಆಗುವ ಪ್ರಯೋಜನಗಳು ಏನು ಎಂದು ತಿಳಿದುಕೊಳ್ಳೋಣ.

ನಾಯಿಗಳಿಗೆ ತರಕಾರಿ ನೀಡುವುದರಿಂದ ಆಗುವ ಪ್ರಯೋಜನಗಳು

  • ಮಾಂಸಾಹಾರದಲ್ಲಿ ಕಂಡುಬರದ ಫೈಬರ್, ಖನಿಜಗಳು, ಉತ್ಕರ್ಷಣ ನಿರೋಧಕಗಳು, ಕಿಣ್ವಗಳು ತರಕಾರಿಗಳಲ್ಲಿ ಸಮೃದ್ಧವಾಗಿವೆ. ನಿಮ್ಮ ನಾಯಿಗೆ ವಿವಿಧ ರೀತಿಯ ತರಕಾರಿಗಳನ್ನು ನೀಡುವುದು ಮುಖ್ಯವಾಗಿದೆ. ಏಕೆಂದರೆ ಪ್ರತಿಯೊಂದು ವಿಧವು ತನ್ನದೇ ಆದ ಪೋಷಕಾಂಶಗಳನ್ನು ನೀಡುತ್ತದೆ.
  • ಸೌತೆಕಾಯಿಯಂತಹ ತರಕಾರಿಗಳು ನೀರಿನ ಉತ್ತಮ ಮೂಲಗಳಾಗಿವೆ. ಬೇಸಿಗೆಯಲ್ಲಿ ನಾಯಿಗೆ ಹಾಕಿದರೆ ನಿಮ್ಮ ನಾಯಿಯನ್ನು ಹೈಡ್ರೀಕರಿಸುತ್ತದೆ.
  • ವಿವಿಧ ಕಿಣ್ವಗಳು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸುತ್ತವೆ. ಹೀಗಾಗಿ ನಾಯಿ ತರಕಾರಿ ಸೇವಿಸುವುದರಿಂದ ಅದರ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರುತ್ತದೆ.
  • ತರಕಾರಿಗಳು ಫೈಬರ್‌ನಿಂದ ಸಮೃದ್ಧವಾಗಿವೆ, ಇದು ನಾಯಿಗಳ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಮುಖ್ಯವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಕರುಳಿನಲ್ಲಿರುವ ಲೋಳೆಯ ಒಳಪದರವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಮನೆಯಲ್ಲಿ ಸಾಕಿದ ನಾಯಿಗೆ ತರಕಾರಿಯನ್ನು ಮೆಚ್ಚಿಸುವುದೇ ಒಂದು ದೊಡ್ಡ ಸವಾಲು. ಹೀಗಿದ್ದಾಗ ತರಕಾರಿ ಸೇವಿಸುವಂತೆ ಮಾಡುವುದು ಹೇಗೆ? ವೈದ್ಯರು ನೀಡಿದ ಸಲಹೆ ಹೀಗಿವೆ:

  • ಬೇಯಿಸಿದ ಮತ್ತು ಹಿಸುಕಿದ ತರಕಾರಿಗಳನ್ನು ಚಿಕನ್ ಸಾರುಗಳೊಂದಿಗೆ ಸ್ವಲ್ಪ ಸ್ವಲ್ಪವೇ ಸಂಯೋಜಿಸಿ ಕೊಡಿ
  • 1 ರಿಂದ 4 ರವರೆಗೆ ಹೇಳಿದಂತೆ ಶೇ.10 ತರಕಾರಿಗಳನ್ನು ಶೇ.90ರಷ್ಟು ಚಿಕನ್ ಸಾರ್​ನಲ್ಲಿ ಬೆರೆಸಿ ಕೊಡಿ. ಕೆಲವು ದಿನಗಳ ನಂತರ ಶೇ.80ರಷ್ಟು ಕೋಳಿ ಸಾರಿನೊಂದಿಗೆ ಶೇ.20ರಷ್ಟು ತರಕಾರಿಗಳನ್ನು ಬೆರೆಸಿ ಕೊಡಿ. ಹೀಗೆ ದಿನಗಳು ಉರುಳುತ್ತಿದ್ದಂತೆ ಚಿಕನ್ ಸಾರ್ ಕಡಿಮೆ ಮಾಡುತ್ತಾ ತರಕಾರಿ ಪದಾರ್ಥವನ್ನು ಹೆಚ್ಚಿಸುತ್ತಾ ಹೋಗಿ.
  • ಕ್ಯಾರೆಟ್, ಬೀನ್ಸ್, ಸಿಹಿ ಗೆಣಸು, ಆಲೂಗಡ್ಡೆ, ಪಾಲಕ್, ಬೀನ್ಸ್, ಕೋಸುಗಡ್ಡೆ, ಸೆಲರಿ, ಬೀಟ್ರೂಟ್, ಸೌತೆಕಾಯಿ ಮತ್ತು ಬಟರ್ನಟ್ ಸ್ಕ್ವ್ಯಾಷ್​ನಂತಹ ಕೆಲವು ತರಕಾರಿಗಳನ್ನು ಕುದಿಸಿ ಅವುಗಳನ್ನು ಒಟ್ಟಿಗೆ ಮ್ಯಾಶ್ ಮಾಡಿ ಚಿಕನ್ ಸಾರು ಮತ್ತು ತುಂಡುಗಳೊಂದಿಗೆ ಬೆರೆಸಿ ಕೊಡಬಹುದು.
  • ತರಕಾರಿಗಳು ಮತ್ತು ಹಣ್ಣುಗಳೊಂದಿಗೆ ಒಟ್ಟು ಆಹಾರದ 10% ಅನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ