AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hair Care Tips: ಕೂದಲು ಸಮಸ್ಯೆಗೆ ಇಲ್ಲಿದೆ ಪರಿಹಾರ..! ಮನೆಯಲ್ಲೇ ತಯಾರಿಸಿ ನೈಸರ್ಗಿಕ ತೆಂಗಿನೆಣ್ಣೆ ಶಾಂಪೂ

ನೈಸರ್ಗಿಕವಾಗಿ ಮನೆಯಲ್ಲಿ ತಯಾರಿಸಿದ ಕೂದಲು ಉತ್ಪನ್ನಗಳನ್ನು ಬಳಸುವುದು ಉತ್ತಮ. ತೆಂಗಿನ ಎಣ್ಣೆಯಿಂದ ವಿಶೇಷವಾದ ಶಾಂಪೂವನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂದು ತಿಳಿಯಿರಿ.

Hair Care Tips: ಕೂದಲು ಸಮಸ್ಯೆಗೆ ಇಲ್ಲಿದೆ ಪರಿಹಾರ..! ಮನೆಯಲ್ಲೇ ತಯಾರಿಸಿ ನೈಸರ್ಗಿಕ ತೆಂಗಿನೆಣ್ಣೆ ಶಾಂಪೂ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jul 25, 2022 | 7:00 AM

Share

ಹೆಚ್ಚುತ್ತಿರುವ ಮಾಲಿನ್ಯ, ಧೂಳು, ಕೊಳಕು, ಜಂಕ್​ ಆಹಾರಗಳ ಸೇವನೆಯಿಂದಾಗಿ ಕೂದಲಿಗೆ (Hair)  ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಇದರ ಜೊತೆಗೆ ಕೆಮಿಕಲ್ ಯುಕ್ತ ಉತ್ಪನ್ನಗಳು ಕೂಡ ಕೂದಲಿನ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ. ನೀವು ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಲು ಬಯಸಿದರೆ, ನೀವು ಮೊದಲು ರಾಸಾಯನಿಕ ಉತ್ಪನ್ನಗಳನ್ನು ಬಳಸುವುದನ್ನು ತ್ಯಜಿಸಬೇಕು. ನೈಸರ್ಗಿಕವಾಗಿ ಮನೆಯಲ್ಲಿ ತಯಾರಿಸಿದ ಕೂದಲು ಉತ್ಪನ್ನಗಳನ್ನು ಬಳಸುವುದು ಉತ್ತಮ. ತೆಂಗಿನ ಎಣ್ಣೆಯಿಂದ ವಿಶೇಷವಾದ ಶಾಂಪೂವನ್ನು ಹೇಗೆ ತಯಾರಿಸಬೇಕೆಂದು ನಾವು ತಿಳಿದುಕೊಳ್ಳೋಣ. ಇದನ್ನು ಬಳಸುವುದರಿಂದ ಕೂದಲು ಮೃದುವಾಗಿ ಮತ್ತು ಬಲವಾಗಿ ಬೆಳೆಯುತ್ತದೆ.

ಇದನ್ನೂ ಓದಿ: Photo Gallery: ಜಗಳ ಮಾಡದೆ ನಿಮ್ಮವರಿಗೆ ಹೇಳಬೇಕಾಗಿರುವುದನ್ನು ಹೇಳುವುದು ಹೇಗೆ?

ತೆಂಗಿನ ಎಣ್ಣೆಯಿಂದ ಶಾಂಪೂ ಮಾಡುವುದು ಹೇಗೆ? ಪದಾರ್ಥಗಳು 

1. ಕ್ಯಾಸ್ಟೈಲ್ 1 ಕಪ್

2. 3/4 ಕಪ್ ನೀರು

3. ಟೇಬಲ್ ಉಪ್ಪು – 2 ಟೀಸ್ಪೂನ್

4. ತೆಂಗಿನ ಎಣ್ಣೆ – 2 ಟೀಸ್ಪೂನ್

5. ಜೊಜೊಬಾ ಎಣ್ಣೆ – 2 ಟೀಸ್ಪೂನ್

ಇದನ್ನೂ ಓದಿ: Pregnancy Tips: ಗರ್ಭಾವಸ್ಥೆಯಲ್ಲಿ ಈ ಆಹಾರಗಳನ್ನು ತಿಂದರೆ ಗರ್ಭಪಾತದ ಅಪಾಯ ಹೆಚ್ಚು

ತಯಾರಿಸುವ ವಿಧಾನ:

1. ಮೊದಲು ಮೈಕ್ರೋವೇವ್ ಸೇಫ್ ಬೌಲ್​​ನಲ್ಲಿ ನೀರು ಹಾಕಿ.

2. ಈಗ ಅದನ್ನು ಮೈಕ್ರೋವೇವ್​ನಲ್ಲಿ ಅರ್ಧ ನಿಮಿಷ ಇಡಿ.

3. ನಂತರ ಅದರಲ್ಲಿ ಕ್ಯಾಸ್ಟೈಲ್ ಸೋಪ್ ಸೇರಿಸಿ.

4. ಅದರ ನಂತರ ನಿಧಾನವಾಗಿ ಮಿಶ್ರಣ ಮಾಡಿ. ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ.

5. ಅದರ ನಂತರ ಉಪ್ಪು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

6. ಈಗ ಅದಕ್ಕೆ ಎಲ್ಲಾ ಬಗೆಯ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ.

7. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಬಾಟಲಿಯಲ್ಲಿ ಸಂಗ್ರಹಿಸಿ.

8. ಈ ಶಾಂಪೂವನ್ನು ಯಾವಾಗ ಬೇಕಾದರೂ ಕೂದಲಿಗೆ ಹಚ್ಚಬಹುದು.

9. ಈ ಶಾಂಪೂ ಹಚ್ಚಿದ ನಂತರ ಬೇರೆ ಯಾವುದೇ ಶಾಂಪೂ ಬಳಸಬೇಡಿ. ಆದಾಗ್ಯೂ, ತೆಂಗಿನ ಎಣ್ಣೆಯಿಂದ ನಿಮಗೆ ಅಲರ್ಜಿ ಇದ್ದರೆ, ಈ ಶಾಂಪೂ ಬಳಸುವುದನ್ನು ತಪ್ಪಿಸುವುದು ಉತ್ತಮ.

Published On - 7:00 am, Mon, 25 July 22

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ