AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗಲು ಒತ್ತಡವಿದೆಯೇ? ಇದು ನಿಮ್ಮ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಕೊಳ್ಳಿ

ಮದುವೆಯಾಗಲು ಒತ್ತಡ ಹೇರುವ ಪ್ರತೀ ಪೋಷಕರು ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ. ಮದುವೆಯಾಗಲು ಸದಾ ನಿಮ್ಮ ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದರೆ ಅದು ನಿಮ್ಮ ಮಕ್ಕಳ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಕೊಳ್ಳಿ.

ಮದುವೆಯಾಗಲು ಒತ್ತಡವಿದೆಯೇ? ಇದು ನಿಮ್ಮ  ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಕೊಳ್ಳಿ
ಮದುವೆಯ ಒತ್ತಡ
ಅಕ್ಷತಾ ವರ್ಕಾಡಿ
|

Updated on: Mar 30, 2023 | 10:50 AM

Share

ಹೆಣ್ಣು 20 ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಮನೆಯಲ್ಲಿ ಮದುವೆ ಮಾತುಕತೆ ಪ್ರತೀ ದಿನ ಚರ್ಚೆಯಾಗುತ್ತಿರುತ್ತದೆ. ಇನ್ನೇನ್ನು ತನ್ನ ಕಾಲೇಜು ಜೀವನ ಮುಗಿಸಿ, ವೃತ್ತಿಪರ ಜೀವನದ ಕನಸು ಹೊತ್ತ ಹೆಣ್ಣಿಗೆ ತನ್ನ ಮನೆಯಿಂದಲೇ ಸಾಕಷ್ಟು ಮದುವೆಯ ಒತ್ತಡವಿರುತ್ತದೆ. ಆದರೆ ಮದುವೆಯಾಗಲು ಒತ್ತಡ ಹೇರುವ ಪ್ರತೀ ಪೋಷಕರು ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ. ಮದುವೆಯಾಗಲು ಸದಾ ನಿಮ್ಮ ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದರೆ ಅದು ನಿಮ್ಮ ಮಕ್ಕಳ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಕೊಳ್ಳಿ.

ಮದುವೆಯ ಒತ್ತಡ ಬರೀ ಹೆಣ್ಣಿಗೆ ಮಾತ್ರ ಸಂಬಂಧಿಸಿದಲ್ಲ ಬದಲಾಗಿ ಗಂಡಿನ ಮೇಲೆಯೂ ಸಾಕಷ್ಟು ಪರಿಣಾಮ ಬೀರುತ್ತದೆ. ಹೌದು ಇನ್ನೇನು ಇರುವ ಕೆಲಸವನ್ನು ಭದ್ರಪಡಿಸಿಕೊಂಡು, ಕೈ ತುಂಬಾ ಸಂಬಳ ಸಿಗಬೇಕೆನ್ನುವ ಕನಸುಗಳನ್ನು ಕಾಣುತ್ತಾ ಇರುವಾಗಲೇ ಗಂಡಿಗೂ ಮದುವೆಯ ಒತ್ತಡ ಹೇರಿ ಇಡೀ ಕುಟುಂಬದ ಜವಬ್ದಾರಿಯನ್ನು ಆತನ ಮೇಲೆ ಹೇರುವುದುಂಟು. ಇದ್ದಕ್ಕಿದ್ದಂತೆ, ನಿಮ್ಮ ಸ್ನೇಹಿತರೆಲ್ಲರೂ ಮದುವೆಯಾಗುತ್ತಿದ್ದಾರೆ. ನೀವು ಎಂದಿಗೂ ಮಾತನಾಡದ ಸಂಬಂಧಿಕರು ನೀವು ಯಾವಾಗ ಮದುವೆಯಾಗುತ್ತಿ? ಎಂದು ಪ್ರಶ್ನೆ ಮಾಡಿದಾಗ ಸಾಕಷ್ಟು ಕಿರಿ ಕಿರಿ ಮಾಡುವುದಂತೂ ಸಹಜ.

ಮದುವೆಯಾಗುವ ಒತ್ತಡವು ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಮನೋವಿಜ್ಞಾನ ಶಾಸ್ತ್ರಜ್ಞರಾದ ದಿವ್ಯಾ ಪಾಠಕ್ ಅವರ ಪ್ರಕಾರ, ಮದುವೆಯ ಒತ್ತಡವು ವ್ಯಕ್ತಿಯನ್ನು ವಿವಿಧ ಕಠಿಣ ಭಾವನೆಗಳನ್ನು ಅನುಭವಿಸುವಂತೆ ಮಾಡುತ್ತದೆ. ಇದಲ್ಲದೇ ವ್ಯಕ್ತಿ ಮಾನಸಿಕವಾಗಿ ಕುಗ್ಗಿ ಹೋಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಸಾಮಾಜಿಕ ಆತಂಕ:

ನೀವು ಯಾವುದೇ ಕುಟುಂಬದ ಕಾರ್ಯಕ್ರಮ ಅಥವಾ ಸಮಾರಂಭಕ್ಕೆ ಹೋಗುತ್ತಿರುವಿರಿ ಎಂದು ಕಲ್ಪಿಸಿಕೊಳ್ಳಿ. ನೀವು ನೋಡುತ್ತಿರುವುದು ನಿಮ್ಮ ವಯಸ್ಸಿನ ಜನರು ಮದುವೆಯಾಗುತ್ತಿರುವವರು, ಮದುವೆಯಾಗಲು ಸಿದ್ಧರಾಗಿರುವುದು ಅಥವಾ ಅವರ ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾರೆ. ಇದಲ್ಲದೇ ಮದುವೆ ಆಗುವಂತೆ ಒತ್ತಾಯಿಸುವುದು ಇವೆಲ್ಲವೂಗಳಿಂದಾಗಿ ನೀವು ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳಿಗೂ ಹೋಗಬಾರದು ಎಂದು ನಿರ್ಧರಿಸುವಂತೆ ಮಾಡುತ್ತದೆ.

ಖಿನ್ನತೆ:

ಮದುವೆಯಾಗಲು ಒತ್ತಡ ಬಂದಾಗ ದುಃಖ ಮತ್ತು ಹತಾಶತೆಯ ಕೆಲವು ಭಾವನೆಗಳನ್ನು ಪ್ರಚೋದಿಸಬಹುದು. ವಿಶೇಷವಾಗಿ ವ್ಯಕ್ತಿಯು ಸಂಗಾತಿಯನ್ನು ಹುಡುಕುವಲ್ಲಿ ಅಥವಾ ಅವರ ಗುರಿಗಳನ್ನು ಸಾಧಿಸುವಲ್ಲಿ ವಿಫಲವಾದೆ ಎಂದು ಭಾವಿಸಿದರೆ, ಆಪ್ತರಿಂದ ಕಾಳಜಿಯ ಹೆಸರಿನಲ್ಲಿ ಸಾಮಾಜಿಕ ಅವಮಾನವು ನಿರಾಶಾದಾಯಕವಾಗಿರುತ್ತದೆ ಮತ್ತು ಖಿನ್ನತೆಗೆ ಕಾರಣವಾಗುತ್ತದೆ ಎಂದು ಪಾಠಕ್ ಹೇಳುತ್ತಾರೆ.

ಇದನ್ನೂ ಓದಿ: ದೂರವಾದ ಸಂಬಂಧವನ್ನು ಸುಧಾರಿಸುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

ಮದುವೆಯ ಒತ್ತಡವನ್ನು ಹೇಗೆ ನಿಭಾಯಿಸುವುದು?

ಕುಟುಂಬ ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ:

ಪದೇ ಪದೇ ನಿಮ್ಮ ಮೇಲೆ ಮದುವೆಯ ಒತ್ತಡ ಹೇರುವ ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಮುಕ್ತವಾಗಿ ಮಾತಾಡಿ. ಮದುವೆಯ ಮಾತು ಬಂದ ಕೂಡಲೇ ಆದಷ್ಟು ನನ್ನ ವೈಯಕ್ತಿಕ ವಿಷಯದಿಂದ ದೂರವಿರಿ ಎಂದು ಹೇಳಿಬಿಡಿ.

ನಿಮ್ಮ ಜೀವನದ ಆಯ್ಕೆಗಳಲ್ಲಿ ವಿಶ್ವಾಸವಿರಲಿ:

ನಿಮ್ಮ ಜೀವನದಲ್ಲಿ ನೀವು ಯಾವುದೇ ಆಯ್ಕೆಗಳನ್ನು ಮಾಡುತ್ತಿದ್ದೀರಿ, ಅದು ಮದುವೆಗೆ ಸಂಬಂಧಿಸಿರಬಹುದು ಅಥವಾ ಇಲ್ಲದಿರಬಹುದು, ಒತ್ತಡದಿಂದಾಗಿ ಅವುಗಳನ್ನು ಅನುಮಾನಿಸಬೇಡಿ. “ಜೀವನದ ಆಯ್ಕೆಗಳನ್ನು ಜೊತೆಗೆ, ನಿಮ್ಮ ವೃತ್ತಿಜೀವನಕ್ಕೆ ಆದ್ಯತೆ ನೀಡಿ, ನಿಮ್ಮೊಂದಿಗೆ ಅಥವಾ ಇತರ ಸಂಬಂಧಗಳೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ ಎಂದು ದಿವ್ಯಾ ಪಾಠಕ್ ಸಲಹೆ ನೀಡುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ