AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rangoli Garden: ಕರುನಾಡ ಹಳ್ಳಿಯ ಸೊಬಗನ್ನು ಪರಿಚಯಿಸುತ್ತಿದೆ ಬೆಂಗಳೂರಿನ ರಂಗೋಲಿ ಗಾರ್ಡನ್

ಕರ್ನಾಟಕದ ಸಾಂಸ್ಕೃತಿಕ ವಾಸ್ತುಕಲೆಗಳನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರಗಳನ್ನು ಬೆಂಗಳೂರಿನ ರಂಗೋಲಿ ಗಾರ್ಡನ್​​ನಲ್ಲಿ ಕಣ್ತುಂಬಿಸಿಕೊಳ್ಳಬಹುದು. ಇನ್ನಷ್ಟು ವಿವರ ಇಲ್ಲಿ ತಿಳಿದುಕೊಳ್ಳಿ.

Rangoli Garden: ಕರುನಾಡ ಹಳ್ಳಿಯ ಸೊಬಗನ್ನು ಪರಿಚಯಿಸುತ್ತಿದೆ ಬೆಂಗಳೂರಿನ ರಂಗೋಲಿ ಗಾರ್ಡನ್
Rangoli Garden BangaloreImage Credit source: SUSHEELA NAIR
Follow us
ಅಕ್ಷತಾ ವರ್ಕಾಡಿ
|

Updated on:Jul 05, 2023 | 6:35 PM

ಹಚ್ಚಹಸಿರಿನ ಸುಂದರ ಪರಿಸರ, ಕೃಷಿ ಪ್ರಧಾನ ಅವಿಭಕ್ತ ಕುಟುಂಬ, ಜಾತ್ರೆ, ಹಬ್ಬ ಹರಿದಿನ ಸಂಭ್ರಮ ಕಣ್ಣಿಗೊಂದು ಹಬ್ಬ. ಹಳ್ಳಿ ಜೀವನವೇ ಸ್ವರ್ಗಕ್ಕೆ ಸಮ. ಆದರೆ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಹುಟ್ಟಿದ ಮಕ್ಕಳಿಗೆ ಹಳ್ಳಿ ಜೀವನ ಬಗ್ಗೆ ಅರಿವೇ ಇರುವುದಿಲ್ಲ. ಆದರೆ ಹಳ್ಳಿಗೆ ಹೋಗದೆಯೇ ನಿಮ್ಮ ಮಕ್ಕಳಿಗೆ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಹಳ್ಳಿ ಸೊಬಗು ಸಂಸ್ಕೃತಿಯನ್ನು ಪರಿಚಯಿಸಬಹುದು. ಹೌದು ಕಾರ್ನಾಟಕದ ಸಾಂಸ್ಕೃತಿಕ ವಾಸ್ತುಕಲೆಗಳನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರಗಳನ್ನು ಬೆಂಗಳೂರಿನ ರಂಗೋಲಿ ಗಾರ್ಡನ್​​ನಲ್ಲಿ ಕಣ್ತುಂಬಿಸಿಕೊಳ್ಳಬಹುದು.

ಎಲ್ಲಿದೆ ರಂಗೋಲಿ ಗಾರ್ಡನ್​​?

ಬೆಂಗಳೂರಿನ ಸಿಟಿ ಸ್ಟೇಷನ್​​ನಿಂದ ಸುಮಾರು 18 ಕಿ.ಮೀ ದೂರದಲ್ಲಿ ಜಕ್ಕೂರಿನ ರಾಚೇನಾ ಹಳ್ಳಿಯ ಶ್ರೀರಾಂಪುರ ಕ್ರಾಸ್​​​ ಬಳಿಯ ಮಹಾತ್ಮಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್‌ಮೆಂಟ್ ಒಳಗೆ ರಂಗೋಲಿ ಗಾರ್ಡನ್ಸ್ (ಮಾದರಿ ಕಲಾ ಗ್ರಾಮ) ಇದೆ. ನೀವಿಲ್ಲಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ಒಳಗಾಗಿ ಭೇಟಿ ನೀಡಬಹುದು. ಜೊತೆಗೆ ಇಲ್ಲಿ ಮಕ್ಕಳಿಗೆ(3-12ವರ್ಷ) 100 ರೂಪಾಯಿ ಹಾಗೂ ಉಳಿದವರಿಗೆ 200 ರೂಪಾಯಿ ಪ್ರವೇಶ ಶುಲ್ಕ ನೀಡಬೇಕು.

ಕರ್ನಾಟಕದ ಸಂಸ್ಕೃತಿಕ ವಾಸ್ತು ಕಲೆಗಳ ಸ್ತಬ್ಧ ಚಿತ್ರಗಳು:

ಹಳ್ಳಿಯ ಕುಲ ಕಸುಬು ಬಿಟ್ಟು ನಗರದ ಜೀವನಕ್ಕೆ ಒಡ್ಡಿಕೊಂಡು ಜೀವನ ನಡೆಸುತ್ತಿರುವ ಬೆಂಗಳೂರಿಗರಿಗೆ ತಮ್ಮ ಹುಟ್ಟೂರಿನ ಭಾಂಧವ್ಯವನ್ನು ಮತ್ತೆ ಬೆಸೆಯುವಂತೆ ಮಾದರಿ ಕಲಾ ಗ್ರಾಮವನ್ನು ನಿರ್ಮಾಣಗೊಳಿಸಲಾಗಿದೆ. ಇಲ್ಲಿನ ಸ್ತಬ್ಧ ಚಿತ್ರಗಳಲ್ಲಿ ನೀವು ಕೃಷಿ ಪ್ರಧಾನ ಕುಟುಂಬ, ಸಾಕು ಪ್ರಾಣಿಗಳು, ಜಾತ್ರೆ, ಗೋಲಿ ಆಡುವ ಮಕ್ಕಳ ಸೈನ್ಯ ಮುಂತಾದವುಗಳನ್ನು ಬಿಂಬಿಸಲಾಗಿದೆ.

ಇದನ್ನೂ ಓದಿ: ಒಂದು ದಿನದಲ್ಲಿ ಭೇಟಿ ನೀಡಬಹುದಾದ ಬೆಂಗಳೂರು ಗ್ರಾಮಾಂತರ ಪ್ರದೇಶದ ಪ್ರವಾಸಿ ತಾಣಗಳು

ಅನ್ಯಭಾಷಿಗರಿಗೂ ಕರ್ನಾಟಕದ ಹಳ್ಳಿ ಸೊಬಗನ್ನು ಪರಿಚಯಿಸಿ:

ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಬೇರೆ ಬೇರೆ ರಾಜ್ಯಗಳಿಂದ ಬಂದವರೇ ಹೆಚ್ಚು. ಆದ್ದರಿಂದ ನಿಮ್ಮ ಬಿಡುವಿನ ಅಥವಾ ವಾರಾಂತ್ಯದಲ್ಲಿ ನಿಮ್ಮ ಅನ್ಯ ರಾಜ್ಯಗಳ ಸಹೋದ್ಯೋಗಿಗಳನ್ನು ಹಾಗೂ ಗೆಳೆಯರನ್ನು ಈ ಮಾದರಿ ಕಲಾ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅನ್ಯಭಾಷಿಗರಿಗೂ ಕನ್ನಡದ ಹಳ್ಳಿ ಸೊಬಗನ್ನು ಪರಿಚಯಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 6:33 pm, Wed, 5 July 23

ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ