AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಹೊಂದಾಣಿಕೆಯಿಲ್ಲದ ದಾಂಪತ್ಯವು ನೋವುಂಟುಮಾಡಬಹುದು, ಆದರೂ ಮುಂದುವರೆಯಲು ಕಾರಣ ಇಲ್ಲಿದೆ

ಹೊಂದಾಣಿಕೆಯಿಲ್ಲದ ದಾಂಪತ್ಯವು ನಿಮಗೆ ನೋವುಂಟುಮಾಡಬಹುದು ಮತ್ತು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಬಹುದು. ಆದರೂ ಕೂಡಾ ಜನರು ಇಂತಹ ಸಂಬಂಧವನ್ನು ತೊರೆಯಲು ಮತ್ತು ಹೆಚ್ಚು ಸಕಾರಾತ್ಮಕ ಜೀವನದತ್ತ ಸಾಗಲು ಹಿಂಜರಿಯುತ್ತಾರೆ.

Relationship: ಹೊಂದಾಣಿಕೆಯಿಲ್ಲದ ದಾಂಪತ್ಯವು ನೋವುಂಟುಮಾಡಬಹುದು, ಆದರೂ ಮುಂದುವರೆಯಲು ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Feb 02, 2023 | 6:46 PM

Share

ಹೊಂದಾಣಿಕೆಯಿಲ್ಲದ ದಾಂಪತ್ಯವು ನಿಮಗೆ ನೋವುಂಟುಮಾಡಬಹುದು ಮತ್ತು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಬಹುದು. ಆದರೂ ಕೂಡಾ ಜನರು ಇಂತಹ ಸಂಬಂಧವನ್ನು ತೊರೆಯಲು ಮತ್ತು ಹೆಚ್ಚು ಸಕಾರಾತ್ಮಕ ಜೀವನದತ್ತ ಸಾಗಲು ಹಿಂಜರಿಯುತ್ತಾರೆ. ಜನರು ತೃಪ್ತಿಕರವಲ್ಲದ ದಾಂಪತ್ಯದಲ್ಲಿ ಉಳಿಯಲು ಪ್ರಮುಖ ಕಾರಣಗಳು ಇಲ್ಲಿವೆ. ಆರೋಗ್ಯಕರ ಮತ್ತು ಸಂತೋಷದಾಯಕ ದಾಂಪತ್ಯವು ದೈನಂದಿನ ಜೀವನದಲ್ಲಿ ಬರುವ ಸವಾಲುಗಳನ್ನು ಲೆಕ್ಕಿಸದೆ ಆರಾಮದಾಯಕವಾಗಿ ಸಾಗುತ್ತದೆ. ಆದರೆ ಅತೃಪ್ತ ಅಥವಾ ನೆಮ್ಮದಿಯಿಲ್ಲದ ದಾಂಪತ್ಯವು ಇದಕ್ಕೆ ವಿರುದ್ಧವಾಗಿದೆ. ಇದು ನಿಮ್ಮ ಮಾನಸಿಕ ಶಾಂತಿಯನ್ನು ಕದಡಬಹುದು ಮತ್ತು ಜೀವನವನ್ನು ನಡೆಸಲು ನಿಮ್ಮನ್ನು ಒತ್ತಾಯಿಸಬಹುದು. ಹೊಂದಾಣಿಕೆಯಿಲ್ಲದ ದಾಂಪತ್ಯವು ನಿಮಗೆ ನೋವುಂಟುಮಾಡಬಹುದು ಮತ್ತು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಬಹುದು. ಆದರೂ ಕೂಡಾ ಜನರು ಅಂತಹ ಸಂಬಂಧವನ್ನು ತೊರೆಯಲು ಹಾಗೂ ಹೆಚ್ಚು ಸಕಾರಾತ್ಮಕ ಜೀವನದತ್ತ ಸಾಗಲು ಹಿಂಜರಿಯುತ್ತಾರೆ. ಜನರು ನೆಮ್ಮದಿಯಿಲ್ಲದ ದಾಂಪತ್ಯದಲ್ಲಿ ಉಳಿದುಕೊಳ್ಳಲು ಅನೇಕ ಕಾರಣಗಳಿವೆ ಬದಲಾವಣೆಯ ಭಯ, ಸೌಕರ್ಯ ವಲಯ, ಹಣ ಅಥವಾ ಜನರು ನಮ್ಮ ಬಗ್ಗೆ ಏನು ಯೋಚಿಸಬಹುದು ಎಂಬ ಭಯ ಕೂಡಾ ಇದಕ್ಕೆ ಪ್ರಮುಖ ಕಾರಣವಾಗಿದೆ.

ನೀವು ಮದುವೆಯ ಬಗ್ಗೆ ಯೋಚಿಸುವಾಗ, ಸುಖಾಂತ್ಯಗಳು ಸಾಮಾನ್ಯ ಗುರಿಯಾಗಿರುತ್ತವೆ. ಆದರೂ ಎಲ್ಲಾ ಮದುವೆಗಳು ನಗು ಮತ್ತು ಸಂತೋಷದಿಂದ ತುಂಬಿರುವುದಿಲ್ಲ. ದಂಪತಿಗಳು ಹೊಂದಾಣಿಕೆಯಿಲ್ಲದ ದಾಂಪತ್ಯದಲ್ಲಿ ತಮ್ಮನ್ನು ತಾವು ಕಂಡುಕೊಂಡಾಗ, ಮುಂದೆ ಏನು ಮಾಡಬೇಕೆಂದು ತಿಳಿಯುವುದು ಸವಾಲಾಗಿರಬಹುದು. ಇವೆಲ್ಲದರ ಹೊರತಾಗಿಯೂ ಮದುವೆಯು ಜೀವನಪರ್ಯಂತದ ಬದ್ಧತೆಯಾಗಿದೆ’ ಎಂದು ಗೇಟ್‌ವೇ ಆಫ್ ಹೀಲಿಂಗ್‌ನ ಸಂಸ್ಥಾಪಕಿ, ನಿರ್ದೇಶಕಿ ಹಾಗೂ ಸೈಕೋಥೆರಪಿಸ್ಟ್, ಲೈಫ್‌ಕೋಚ್ ಆದ ಡಾ. ಚಾಂದಿನಿ ತುಗ್ನೆಟ್ ಹೇಳುತ್ತಾರೆ.

ಇದನ್ನೂ ಓದಿ:Relationship: ದಾಂಪತ್ಯದಲ್ಲಿ ಸಂತೋಷವಿಲ್ಲದಿದ್ದರೂ ಸಂಬಂಧವನ್ನು ಮುಂದುವರೆಸಲು ಕಾರಣವೇನು?

ಹೊಂದಾಣಿಕೆಯಿಲ್ಲದ ದಾಂಪತ್ಯದಲ್ಲಿ ಯಾರಾದರೂ ಏಕೆ ಉಳಿಯುತ್ತಾರೆ?

ಡಾ. ಚಾಂದಿನಿ ತುಗ್ನೆಟ್ ಹೊಂದಾಣಿಕೆಯಿಲ್ಲದ ಮದುವೆಗಳಲ್ಲಿ ಉಳಿಯಲು ಇರುವ ಸಾಮಾನ್ಯ ಕಾರಣಗಳ ಬಗ್ಗೆ ಮಾತನಾಡಿದ್ದಾರೆ.

ಬದಲಾವಣೆಯ ಭಯ: ಇದು ವಿರೋಧಾಭಾಸವೆಂದು ತೋರುತ್ತದೆ, ಆದರೆ ಅತೃಪ್ತಿಕರ ಮದುವೆಗಳಲ್ಲಿ ಅನೇಕ ಜನರು ಅಪರಿಚಿತರಿಗೆ ಭಯ ಪಡುತ್ತಾರೆ. ವರ್ಷಗಳಿಂದ ಸಂಗಾತಿಯ ಜೊತೆಗಿದ್ದು, ಈಗ ಒಂಟಿ ಜೀವನವನ್ನು ನಡೆಸಲು ಮತ್ತು ಆ ಬದಲಾವಣೆಯನ್ನು ತಮ್ಮ ಜೀವನದಲ್ಲಿ ತರಲು ಭಯ ಪಡುತ್ತಾರೆ. ಬದಲಾವಣೆ ಮತ್ತು ಅನಿಶ್ಚಿತತೆಯ ಜೀವನವು ಹೊಂದಾಣಿಕೆಯಿಲ್ಲದ ದಾಂಪತ್ಯದಲ್ಲಿ ಉಳಿಯುವುದಕ್ಕಿಂತಲೂ ಹೆಚ್ಚು ಕಷ್ಟಕರವಾಗಿರುತ್ತದೆ.

ಸೌಕರ್ಯ: ನಮಗೆ ಗೊತ್ತಿರುವ ಯಾವುದನ್ನಾದರೂ ನಾವು ಮೆಚ್ಚಿಕೊಂಡಾಗ ಅದು ಕೆಟ್ಟದಾಗಿದ್ದರೂ ಸಹ, ಅದು ನಮಗೆ ಸಾಂತ್ವನ ನೀಡುತ್ತದೆ. ಏಕೆಂದರೆ ಅದು ಪರಿಚಿತ ಮತ್ತು ಸುರಕ್ಷಿತವಾಗಿದೆ. ಹೊಂದಾಣಿಕೆಯಿಲ್ಲದ ದಾಂಪತ್ಯದಲ್ಲಿ ಉಳಿಯುವವರು ಸಾಮಾನ್ಯವಾಗಿ ಈ ವರ್ಗಕ್ಕೆ ಸೇರುತ್ತಾರೆ. ಆದಾಗ್ಯೂ ದಂಪತಿಗಳು ಕಾಲಾನಂತರದಲ್ಲಿ ಸಂಬಂಧ ಎಷ್ಟೇ ಅಹಿತಕರವಾಗಿದ್ದರೂ ಸಹ ತಮ್ಮ ದಿನಚರಿ ಮತ್ತು ಅಭ್ಯಾಸಗಳಲ್ಲಿ ಆರಾಮದಾಯಕವಾಗಬಹುದು.

ಹಣಕಾಸು: ಹೊಂದಾಣಿಕೆಯಿಲ್ಲದ ದಾಂಪತ್ಯದಲ್ಲಿ ಉಳಿಯಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವಾಗ ಹಣದ ವಿಷಯಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ. ಕೆಲವು ದಂಪತಿಗಳಿಗೆ ವಿಚ್ಛೇದನ ಅಥವಾ ಬೇರ್ಪಡಿಕೆ ಎಂದರೆ ಅವರ ಹಣಕಾಸಿನ ಆಸ್ತಿಯನ್ನು ಒಂದು ಕುಟುಂಬಕ್ಕೆ ಬದಲಾಗಿ ಎರಡು ಕುಟುಂಬಗಳಿಗೆ ವಿಭಜಿಸುವುದು. ಈ ಕಾರಣದಿಂದ ಅತೃಪ್ತಿಕರ ದಾಂಪತ್ಯದಲ್ಲೇ ಅವರು ಉಳಿದು ಬಿಡುತ್ತಾರೆ.

ಸಮನ್ವಯಕ್ಕಾಗಿ ಭರವಸೆ: ಕೆಲವೊಮ್ಮೆ ತಮ್ಮ ಅತೃಪ್ತಿಯ ಹೊರತಾಗಿಯೂ ದಂಪತಿಗಳನ್ನು ಒಟ್ಟಿಗೆ ಇರಿಸಲು ಭರವಸೆ ಸಾಕು. ಒಬ್ಬ ಸಂಗಾತಿಯು ಅಂತಿಮವಾಗಿ ಪರಿಸ್ಥಿತಿಗಳು ಉತ್ತಮಗೊಳ್ಳುತ್ತವೆ ಎಂಬ ನಂಬಿಕೆಯನ್ನು ಹೊಂದಿದ್ದರೆ, ಸಮಯವು ಕಷ್ಟಕರವಾದಗಲೂ ಅವರು ಜೊತೆಗಿರುತ್ತಾರೆ ಏಕೆಂದರೆ ಅವರು ಅಂತಿಮವಾಗಿ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತಾರೆ ಮತ್ತು ದಂಪತಿಗಳಾಗಿ ಮತ್ತೆ ಸಂತೋಷವನ್ನು ಕಂಡುಕೊಳ್ಳುತ್ತೇವೆ ಎಮದು ಅವರು ಭಾವಿಸುತ್ತಾರೆ.

ಸಾಮಾಜಿಕ ಅಥವಾ ಧಾಮಿಕ ಕಟ್ಟುಪಾಡುಗಳು: ವಿಚ್ಛೇದನ ಪಡೆಯುವುದು ಅಥವಾ ಬೇರ್ಪಡುವುದನ್ನು ಒಬ್ಬರ ಕುಟುಂಬದ ಹಿನ್ನೆಲೆ ಅಥವಾ ಧಾರ್ಮಿಕ ಸಂಬಂಧವನ್ನು ಅವಲಂಬಿಸಿ ವಿಭಿನ್ನವಾಗಿ ನೋಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ದಾಂಪತ್ಯವನ್ನು ಕೊನೆಗೊಳಿಸುವುದು ವೈಫಲ್ಯ ಅಥವಾ ಅವಮಾನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗೂ ಸಮಾಜವು ನಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತದೆಯೋ ಎಂಬ ಭಯದಿಂದ ಹೊಂದಾಣಿಕೆಯಿಲ್ಲದಿದ್ದರೂ ದಂಪತಿಗಳು ಜೊತೆಯಲ್ಲಿರುತ್ತಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:46 pm, Thu, 2 February 23

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?