AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ 5 ನಿಮ್ಮ ಅಭ್ಯಾಸಗಳಿಂದ ನಿಮ್ಮ ಪರ್ಸ್​ ಸದಾ ಖಾಲಿ ಇರುತ್ತೆ, ಈಗಲೇ ಈ ಅಭ್ಯಾಸಗಳನ್ನು ಬದಲಾಯಿಸಿ

ಎಷ್ಟೇ ಸಂಬಳ ಬಂದರೂ ತಿಂಗಳಾಂತ್ಯಕ್ಕೆ ನಿಮ್ಮ ಪರ್ಸ್​ ಖಾಲಿಯೇ?, ಹಣವು ಹೇಗೆ ಖರ್ಚಾಗುತ್ತಿ ದೆ ಎಂದು ತಿಳಿಯುತ್ತಿಲ್ಲವೇ?. ಬಹಳಷ್ಟು ಬಾರಿ ನಾವು ನಮ್ಮ ವೆಚ್ಚಗಳನ್ನು ಹೆಚ್ಚಿಸುತ್ತಲೇ ಇರುತ್ತೇವೆ ಮತ್ತು ಉಳಿತಾಯದ ಬಗ್ಗೆ ಗಮನ ಹರಿಸುವುದಿಲ್ಲ.

ಈ 5 ನಿಮ್ಮ ಅಭ್ಯಾಸಗಳಿಂದ ನಿಮ್ಮ ಪರ್ಸ್​ ಸದಾ ಖಾಲಿ ಇರುತ್ತೆ, ಈಗಲೇ ಈ ಅಭ್ಯಾಸಗಳನ್ನು ಬದಲಾಯಿಸಿ
Money
TV9 Web
| Updated By: ನಯನಾ ರಾಜೀವ್|

Updated on: Sep 14, 2022 | 4:38 PM

Share

ಎಷ್ಟೇ ಸಂಬಳ ಬಂದರೂ ತಿಂಗಳಾಂತ್ಯಕ್ಕೆ ನಿಮ್ಮ ಪರ್ಸ್​ ಖಾಲಿಯೇ?, ಹಣವು ಹೇಗೆ ಖರ್ಚಾಗುತ್ತಿ ದೆ ಎಂದು ತಿಳಿಯುತ್ತಿಲ್ಲವೇ?. ಬಹಳಷ್ಟು ಬಾರಿ ನಾವು ನಮ್ಮ ವೆಚ್ಚಗಳನ್ನು ಹೆಚ್ಚಿಸುತ್ತಲೇ ಇರುತ್ತೇವೆ ಮತ್ತು ಉಳಿತಾಯದ ಬಗ್ಗೆ ಗಮನ ಹರಿಸುವುದಿಲ್ಲ.

ಆದರೆ, ಯಾವ ಅಭ್ಯಾಸಗಳಿಂದಾಗಿ ಹಣವು ನಿಮ್ಮ ಬಳಿ ಇರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ. ಈ ಅಭ್ಯಾಸಗಳು ಯಾವಾಗಲೂ ಜೇಬನ್ನು ಖಾಲಿ ಇಡುತ್ತವೆ, ತಕ್ಷಣ ಬದಲಾವಣೆಗಳನ್ನು ಮಾಡಿ

ಹೆಚ್ಚು ನಗದನ್ನು ಕೈಲಿಟ್ಟುಕೊಳ್ಳಬೇಡಿ: ಹೆಚ್ಚು ನಗದು ಕೈಯಲ್ಲಿದ್ದರೆ ಖರ್ಚು ಮತ್ತಷ್ಟು ಹೆಚ್ಚಾಗುತ್ತದೆ. ಅದೇ ಬ್ಯಾಂಕ್​ನಲ್ಲಿದ್ದರೆ ಖರ್ಚು ಮಾಡಬೇಕು ಎಂದೆನಿಸುವುದಿಲ್ಲ.

ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ: ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕು. ಹಾಗಾಗಿ ನೀವು ಗಳಿದೆಲ್ಲವನ್ನೂ ತಿಂಗಳ ಕೊನೆಯಲ್ಲಿ ಕಳೆದುಕೊಳ್ಳಬೇಡಿ. ಸ್ವಲ್ಪ ಉಳಿತಾಯವನ್ನು ನೀವು ಮಾಡಲೇಬೇಕು.

ಶಾಪಿಂಗ್ ಹವ್ಯಾಸ ತಪ್ಪಿಸಿ: ಕೆಲವರು ಪ್ರತಿ ತಿಂಗಳೂ ಶಾಪಿಂಗ್ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ, ಅದನ್ನು ಕಡಿಮೆ ಮಾಡಿ. ಕೆಲ ತಿಂಗಳುಗಳ ಕಾಲ ಮುಂದೂಡಿ. ಕೇವಲ ಅಗತ್ಯವಿರುವ ವಸ್ತುಗಳನ್ನಷ್ಟೇ ಖರೀದಿ ಮಾಡಿ.

ಶೋ ಆಫ್ ಮಾಡುವುದನ್ನು ಬಿಡಿ: ನನ್ನ ಬಳಿ ಇಂಥದ್ದಿದೆ ಅಂಥದ್ದಿದೆ ಎಂದು ಶೋ ಆಫ್ ಮಾಡುವುದನ್ನು ತಪ್ಪಿಸಿ. ನಿಮಗಾಗಿ ನೀವು ಬದುಕಿ. ಬೇರೆಯವರ ಬಳಿ ಇರುವ ವಸ್ತುಗಳನ್ನು ನೀವು ಕೂಡ ಕೊಂಡುಕೊಳ್ಳಬೇಕು ಎನ್ನುವ ಮನಸ್ಥಿತಿ ಬಿಡಿ.

ಪದೇ ಪದೇ ಪಾರ್ಟಿ ಅರೇಂಜ್ ಮಾಡಬೇಡಿ: ಕೆಲವರು ವಾರಕ್ಕೆ ನಾಲ್ಕು ದಿನ ಪಾರ್ಟಿ ಮಾಡುತ್ತಾರೆ, ಸ್ನೇಹಿತರನ್ನು ಆಹ್ವಾನಿಸುತ್ತಾರೆ. ಆದರೆ ಅದರಿಂದ ಪ್ರಯೋಜನವೇನಿದೆ. ಒಮ್ಮೊಮ್ಮೆ ಇಂತಹ ಪಾರ್ಟಿ ಮಾಡಬಹುದಷ್ಟೇ, ನಿಮಗೆ ಏನಾದರೂ ತಿನ್ನಬೇಕೆನಿಸಿದರೆ ನೀವೊಬ್ಬರೇ ತರಿಸಿಕೊಂಡು ತಿನ್ನಿ, ಅದರ ಬದಲು ಹತ್ತಾರು ಜನರ ಜತೆ ಪಾರ್ಟಿ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ