AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mental Health: ಅತಿಯಾಗಿ ಆಲೋಚಿಸುವುದನ್ನು ನಿಯಂತ್ರಿಸುವುದು ಹೇಗೆ?

ಯಾವುದಾದರೂ ವಿಷಯದ ಕುರಿತು ಆಲೋಚನೆ ಮಾಡುವುದು ಸಾಮಾನ್ಯ, ಆದರೆ ಅತಿಯಾದ ಆಲೋಚನಾ ಕ್ರಮವು ಬೇರೆಯವರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ.

Mental Health: ಅತಿಯಾಗಿ ಆಲೋಚಿಸುವುದನ್ನು ನಿಯಂತ್ರಿಸುವುದು ಹೇಗೆ?
Overthinking
TV9 Web
| Edited By: |

Updated on: Aug 03, 2022 | 8:00 AM

Share

ಯಾವುದಾದರೂ ವಿಷಯದ ಕುರಿತು ಆಲೋಚನೆ ಮಾಡುವುದು ಸಾಮಾನ್ಯ, ಆದರೆ ಅತಿಯಾದ ಆಲೋಚನಾ ಕ್ರಮವು ಬೇರೆಯವರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ನಾವು ಕೆಲವೊಮ್ಮೆ ಕ್ಷುಲ್ಲಕ ವಿಷಯಗಳ ಬಗ್ಗೆ ತುಂಬಾ ಆಲೋಚನೆ ಮಾಡುತ್ತೇವೆ, ಸುಖಾಸುಮ್ಮನೆ ಬೇಡದ ಅಲೋಚನೆಗಳು ನಿಮ್ಮನ್ನು ಆವರಿಸಿಕೊಳ್ಳುತ್ತದೆ, ಈ ಆಲೋಚನೆಗಳು ನಮ್ಮನ್ನು ಅಸಮಾಧಾನಗೊಳಿಸುತ್ತವೆ, ದುಃಖಿಸುವಂತೆ ಮಾಡುತ್ತದೆ.

ವಾಸ್ತವದಿಂದ ನಮ್ಮನ್ನು ಬೇರ್ಪಡಿಸುತ್ತವೆ. ಯಾವ ಕ್ಷಣ ನೀವು ನೀವಲ್ಲದಿರುವ ಸಂಗತಿಗಳೊಂದಿಗೆ ಗುರುತಿಸಿಕೊಳ್ಳುವಿರೋ, ಆ ಕ್ಷಣವೇ ಮನಸ್ಸಿನ ಚಟುವಟಿಕೆ ಆರಂಭವಾಗುತ್ತದೆ.

ನಿಮಗೆ ಅದನ್ನು ನಿಲ್ಲಿಸಲಾಗುವುದಿಲ್ಲ. ನೀವು ಪ್ರಯತ್ನಿಸಿರುವಿರೇ? ಒಂದಿಷ್ಟು ಮನರಂಜನೆ ಪಡೆದು, ಜೀವನ ಸಾಗಿಸುತ್ತೀರಷ್ಟೇ. ನಿಮಗೆ ನೀವೇ ಮನರಂಜಿಸಿಕೊಳ್ಳಬೇಡಿ. 24 ಗಂಟೆಗಳ ಕಾಲ ಸುಮ್ಮನೆ ಕುಳಿತು, ಮನಸ್ಸನ್ನು ನಿಲ್ಲಿಸಲು ಶತಪ್ರಯತ್ನ ಮಾಡಿ. ಅದನ್ನು ನಿಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುವುದು ಎಂದು ನಿಮಗೇ ತಿಳಿಯುತ್ತದೆ. ಮೂರೇ ದಿನಗಳಲ್ಲಿ ನೀವು ಹುಚ್ಚರಾಗುವಿರಿ.

ಅತಿಯಾಗಿ ಯೋಚಿಸುವುದು ಅಭ್ಯಾಸವಾಗಿಬಿಡಬಹುದು, ಹಾಗೆಯೇ ಕ್ರಮೇಣವಾಗಿ ನಿಮ್ಮ ಮಾನಸಿಕ ಶಾಂತಿ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು.

ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಿ: ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಿ, ನೀವು ಆಲೋಚಿಸುತ್ತಿರುವ ವಿಷಯಕ್ಕೆ ನಿಜವಾಗಿಯೂ ಅಷ್ಟು ಪ್ರಾಮುಖ್ಯತೆ ಇದೆಯೇ ಎಂದು ಅರಿತುಕೊಳ್ಳಿ.

-ಒಮ್ಮೆ ನೀವು ಜೀವನವನ್ನು ಮನಸ್ಸು ತೋರಿಸುತ್ತಿರುವ ರೀತಿಯಲ್ಲಿ ನೋಡದೇ, ಕೇವಲ ಅದಿರುವ ರೀತಿಯಲ್ಲಿ ನೋಡಿದರೆ, ಆಗ ಎಲ್ಲವೂ ಬಹಳ ಚಿಕ್ಕದು ಎಂಬುದು ನಿಮಗೆ ಗೋಚರಿಸುತ್ತದೆ.

– ಅತಿಯಾಗಿ ಯೋಚಿಸುವುದು ವ್ಯಸನಕಾರಿಯಾಗಿರಬಹುದು ಮತ್ತು ಅದನ್ನು ಸಂಪೂರ್ಣವಾಗಿ ನಿಲ್ಲಿಸುವುದು ನಿಮಗೆ ದೊಡ್ಡ ಸವಾಲಾಗಬಹುದು. -ಆಲೋಚನೆಗಳನ್ನು ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಗಳನ್ನು ಮಾಡಬಹುದು.

-ಕೆಲವೊಮ್ಮೆ ಭಯದಿಂದಾಗಿ ಅತಿಯಾಗಿ ಯೋಚನೆ ಮಾಡುತ್ತೇವೆ, ಇದರಿಂದ ಇತರೆ ಕಾರ್ಯಗಳಿಗೆ ಅಡಚಣೆಯುಂಟಾಗುತ್ತದೆ.

-ಈಗ ನಡೆಯುತ್ತಿರುವ ವಿಷಯದ ಬಗ್ಗೆ ಕೊರಗುವುದರಲ್ಲಿ ಅರ್ಥವಿದೆ, ಆದರೆ ಒಂದೆರಡು ವರ್ಷಗಳ ಹಿಂದೆ ನಡೆದ ವಿಷಯದ ಬಗ್ಗೆ ಈಗ ನೆನಪು ಮಾಡಿಕೊಂಡು ಕೊರಗುವುದರಲ್ಲಿ ಅರ್ಥವಿಲ್ಲ.

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ