CIMA ಅವಾರ್ಡ್ಸ್ 2022ನಲ್ಲಿ ಪ್ರಥಮ ಸ್ಥಾನ ಪಡೆದ ಸುಮನ್ ಚಂದ್ರ

ಆರ್ಟ್ ಮತ್ತು ಹೆರಿಟೇಜ್ ಫೌಂಡೇಶನ್ ಸಹಯೋಗದೊಂದಿಗೆ ಸೆಂಟರ್ ಆಫ್ ಇಂಟರ್ನ್ಯಾಷನಲ್ ಮಾಡರ್ನ್ ಆರ್ಟ್ (CIMA) ಆಯೋಜಿಸಿದ, ಕಲ್ಲಿದ್ದಲು ಧೂಳು, ಇಟ್ಟಿಗೆ ಧೂಳು, ಇದ್ದಿಲು, ಅಕ್ರಿಲಿಕ್ ಮತ್ತು ಕ್ಯಾನ್ವಾಸ್‌ನಲ್ಲಿನ ಬ್ಲ್ಯಾಕ್ ಗ್ರೇವ್ 2 ಎಂಬ ಶೀರ್ಷಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಪಶ್ಚಿಮ ಬಂಗಾಳದ ಕಲಾವಿದ ಸುಮನ್ ಚಂದ್ರ ಪ್ರಥಮ ಸ್ಥಾನವನ್ನು ಪಡೆದುಕೊಂಡರು.

CIMA ಅವಾರ್ಡ್ಸ್ 2022ನಲ್ಲಿ ಪ್ರಥಮ ಸ್ಥಾನ ಪಡೆದ ಸುಮನ್ ಚಂದ್ರ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 08, 2022 | 7:02 PM

ಆರ್ಟ್ ಮತ್ತು ಹೆರಿಟೇಜ್ ಫೌಂಡೇಶನ್ ಸಹಯೋಗದೊಂದಿಗೆ ಸೆಂಟರ್ ಆಫ್ ಇಂಟರ್ನ್ಯಾಷನಲ್ ಮಾಡರ್ನ್ ಆರ್ಟ್ (CIMA) ಆಯೋಜಿಸಿದ, ಕಲ್ಲಿದ್ದಲು ಧೂಳು, ಇಟ್ಟಿಗೆ ಧೂಳು, ಇದ್ದಿಲು, ಅಕ್ರಿಲಿಕ್ ಮತ್ತು ಕ್ಯಾನ್ವಾಸ್‌ನಲ್ಲಿನ ಬ್ಲ್ಯಾಕ್ ಗ್ರೇವ್ 2 ಎಂಬ ಶೀರ್ಷಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಪಶ್ಚಿಮ ಬಂಗಾಳದ ಕಲಾವಿದ ಸುಮನ್ ಚಂದ್ರ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಅತ್ಯುತ್ತಮ ಚಿತ್ರ ಎಂಬ ಪ್ರಶಂಸೆಯನ್ನು  ಪಡೆದುಕೊಂಡರು ಈ ಬಗ್ಗೆ ಹೆರಿಟೇಜ್ ಫೌಂಡೇಶನ್ ಕೂಡ ಅಭಿಮಾನ ವ್ಯಕ್ತಪಡಿಸಿತ್ತು. 7.5ಲಕ್ಷ ರೂ. ನಗದು ಹಾಗೂ ಒಂದು ಟ್ರೋಫಿ ಮತ್ತು ಚಾಂಪಿಯನ್ ಶಿಫ್ ಕೂಡ ಪಡೆದುಕೊಂಡರು. ಇವರ ಈ ಸಾಧನೆಗೆ ರಾಷ್ಟ್ರೀಯ ಮಟ್ಟದಲ್ಲಿ ಭಾರಿ ಪ್ರಶಂಸೆಯನ್ನು ಪಡೆದುಕೊಂಡಿದೆ. CIMA ಅವಾರ್ಡ್ಸ್ 2022 ನಲ್ಲಿ ನಮ್ಮ ಕಲೆ ಮತ್ತು ಸಾಂಸ್ಕೃತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದೆ. ಇದು ಎರಡು ನಮ್ಮ ದೇಶದ ಆತ್ಮ ಮತ್ತು ಹೃದಯ, ಚಿತ್ರಕಲೆ ನಮ್ಮ ದೇಶದ ಯುವ ಪೀಳಿಗೆ ಧ್ವನಿಯಾಗಿ ನಿಂತಿದೆ. ಈ ಸ್ಪರ್ಧೆ ನಮ್ಮ ಯುವ ಸಮಾಜದ ಮೇಲೆ ಒಳ್ಳೆಯ ಪರಿಣಾಮವನ್ನು ಬೀರಬಹುದು ಎಂದು CIMA ನಿರ್ದೇಶಕಿ ರಾಖಿ ಸರ್ಕಾರ್ ಹೇಳಿದ್ದಾರೆ.

ಮೊದಲ ರನ್ನರ್-ಅಪ್ ಪ್ರಶಸ್ತಿಯನ್ನು ಸೋನಾಲ್ ವರ್ಷೇನಿಯಾಗೆ,  ಕೃತಿ ಕಿಸ್ಸಾ ಗೋಯಿ  ಮತ್ತು ಪರೇಶ್ ಮೈಟಿ 2 ನೇ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದರು ಹಾಗೂ   ಸ್ಲಿಪ್ ಕಲರ್‌ನಲ್ಲಿ ಸ್ಟ್ರಕ್ಚರಲ್ ಅನ್ಯಾಟಮಿ ಕೆಲಸಕ್ಕಾಗಿ ಅಕ್ಷಯ್ ಮೈತಿ ಪ್ರಶಸ್ತಿಯನ್ನು  ಪಡೆದರು.

ಎರಡು ವಿಶೇಷ ತೀರ್ಪುಗಾರರ ಪ್ರಶಸ್ತಿಗಳನ್ನು ತೆಲಂಗಾಣದ ಆಸಿಸ್ ಕುಮಾರ್ ಮಹಾಖುದ್ ಅವರಿಗೆ ವರ್ಚುವಲ್ ಸಾಂಗ್ ಶೀರ್ಷಿಕೆಯ ಆಡಿಯೊ ವಿಡಿಯೋ ಪ್ರೊಜೆಕ್ಷನ್‌ಗಾಗಿ ಮತ್ತು ರವಿ ಮೊರ್ಯ ಅವರು ಕ್ಯಾನ್ವಾಸ್‌ನಲ್ಲಿ ಶೀರ್ಷಿಕೆರಹಿತ ಅಕ್ರಿಲಿಕ್ ಮತ್ತು ಪೇಪರ್ ಕೊಲಾಜ್‌ಗಾಗಿ ನೀಡಲಾಯಿತು.

ಕಲಾ ಜಗತ್ತಿಗೆ ಅಮೂಲ್ಯ ಕೊಡುಗೆ ನೀಡಿದ ಪ್ರಮುಖ ಹೆಸರುಗಳನ್ನು ಗುರುತಿಸಿ, 2022 ರ CIMA ಪ್ರಶಸ್ತಿಗಳು ಆಧುನಿಕತಾವಾದಿ ಅರ್ಪಿತಾ ಸಿಂಗ್ ಮತ್ತು ಡಾ. ಭೌ ದಾಜಿ ಲಾಡ್ ಮ್ಯೂಸಿಯಂನ ವ್ಯವಸ್ಥಾಪಕ ಟ್ರಸ್ಟಿ ಮತ್ತು ಗೌರವ ನಿರ್ದೇಶಕರಾದ ತಸ್ನೀಮ್ ಜಕಾರಿಯಾ ಮೆಹ್ತಾ ಅವರನ್ನು ಮ್ಯೂಸಿಯಂನ “ಪುನಃಸ್ಥಾಪನೆ ಮತ್ತು ಪುನರ್ಯೌವನಗೊಳಿಸುವಿಕೆ” ಗಾಗಿ ಗೌರವಿಸಲಾಯಿತು.

ತಾಜಾ ಸುದ್ದಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ