AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pigmentation: ಪಿಗ್ಮೆಂಟೇಶನ್ ಸಮಸ್ಯೆಯಿಂದ ಮುಖದ ಅಂದ ಹಾಳಾಗಿದ್ದರೆ ಈ ಮನೆಮದ್ದುಗಳನ್ನು ಬಳಸಿ

ಆಲೋವೇರಾ ಅಥವಾ ಅಲೋವೆರಾ ಜೆಲ್​ ಚರ್ಮದ ಸಮಸ್ಯೆಗೆ ಅತ್ಯುತ್ತಮ  ಮದ್ದು. ಪ್ರತಿದಿನ ರಾತ್ರಿ ಮಲಗುವ ಮುನ್ನ ಆಲೋವೆರಾವನ್ನು ಮುಖಕ್ಕೆ ಹಚ್ಚಿಕೊಂಡು ಮಲಗಿ ಇದರಿಂದ ಕ್ರಮೇಣ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.

Pigmentation: ಪಿಗ್ಮೆಂಟೇಶನ್ ಸಮಸ್ಯೆಯಿಂದ ಮುಖದ ಅಂದ ಹಾಳಾಗಿದ್ದರೆ ಈ ಮನೆಮದ್ದುಗಳನ್ನು ಬಳಸಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Feb 11, 2022 | 2:55 PM

Share

ಮುಖದ ಸೌಂದರ್ಯ (Beauty) ಎಲ್ಲರಿಗೂ ಮುಖ್ಯ.  ಆದರೆ ಒತ್ತಡದ ಬದುಕು, ಸೂರ್ಯನ ಬಿಸಿಲು, ಅತಿಯಾದ ಗ್ಯಾಜೆಟ್​ಗಳ ಬಳಕೆಯಿಂದ ಮುಖದ ಚರ್ಮ ಹೊಳಪನ್ನು ಕಳೆದುಕೊಳ್ಳುತ್ತದೆ. ಇದರಿಂದ ಮುಖದ ಮೇಲೆ ಕಪ್ಪು ಕಲೆಗಳು, ಚರ್ಮ ಕೆಂಪಾಗುವುದು, ಚರ್ಮ ಸುಟ್ಟಂತಾಗಿ ಕಪ್ಪಗಾಗುತ್ತದೆ. ಇದನ್ನು ಪಿಗ್ಮಂಟೇಶನ್ (Pigmentation)​ ಅಥವಾ ಮುಖದ ಮೇಲಿನ ಬಂಗು ಎಂದು ಕರೆಯುತ್ತಾರೆ.  ಇದು ಚರ್ಮಕ್ಕೆ ಯಾವುದೇ ರೀತಿಯ ಮಾಡುವುದಿಲ್ಲ. ಆದರೆ ಮುಖದ ಅಂದವನ್ನು ಕೆಡಿಸುತ್ತದೆ. ಮೇಕಪ್ (Makeup)​ ಮಾಡಿಕೊಂಡರೆ ಕಲೆಗಳು ಮುಚ್ಚುಹೋಗುತ್ತವೆ. ಅದರೆ ಮೇಕಪ್​ ಕೂಡ ಮುಖಕ್ಕೆ ಅಷ್ಟೇ ಹಾನಿಕಾರವಾಗಿರುವುದರಿಂದ ಬಳಕೆಯ ಮುನ್ನ ಎಚ್ಚರ ಅಗತ್ಯ. ಹೀಗಾಗಿ ಪಿಗ್ಮೆಂಟೇಶನ್​ ಸಮಸ್ಯೆಗಳಿಗೆ ಮನೆಮದ್ದು ಬಳಸುವುದು ಉತ್ತಮ ಜತೆಗೆ ಶಾಶ್ವತ ಪರಿಹಾರ ಕೂಡ ದೊರಕುತ್ತದೆ. ಹೀಗಾಗಿ ಈ ಸರಳ ವಿಧಾನಗಳನ್ನು ಬಳಸಿ ಮುಖದ ಮೇಲಿನ ಕಲೆಗಳನ್ನು ನಿವಾರಿಸಿಕೊಳ್ಳಿ.

ನಿಂಬೆ ರಸ: ವಿಟಮಿನ್​ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್​ ಗುಣಗಳನ್ನು ಹೊಂದಿರುವ  ನಿಂಬು ಮುಖದ ಮೇಲೆನ ಬಂಗು ಅಥವಾ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ನಿಂಬು ರಸದಲ್ಲಿ ಹತ್ತಿಯ ಉಂಡೆಯನ್ನು ನೆನಸಿ ಮುಖಕ್ಕೆ ಹಚ್ಚಿಕೊಳ್ಳಿ ಇದರಿಂದ ಕಲೆಗಳು ನಿವಾರಣೆಯಾಗುತ್ತದೆ.

ಆಲೋವೆರಾ: ಆಲೋವೇರಾ ಅಥವಾ ಅಲೋವೆರಾ ಜೆಲ್​ ಚರ್ಮದ ಸಮಸ್ಯೆಗೆ ಅತ್ಯುತ್ತಮ  ಮದ್ದು. ಪ್ರತಿದಿನ ರಾತ್ರಿ ಮಲಗುವ ಮುನ್ನ ಆಲೋವೆರಾವನ್ನು ಮುಖಕ್ಕೆ ಹಚ್ಚಿಕೊಂಡು ಮಲಗಿ ಇದರಿಂದ ಕ್ರಮೇಣ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಅಲ್ಲದೆ ನೀವು ಮೇಕಪ್​ ಹಾಕಿಕೊಳ್ಳುವ ಮೊದಲು ಚರ್ಮದ ರಕ್ಷಣೆಗೆ ಆಲೋವೆರಾವನ್ನು ಹಚ್ಚಿಕೊಳ್ಲಿ. ನಂತರ  ಒಂದೆರಡು ನಿಮಿಷ ಬಿಟ್ಟು ಪೌಂಡೇಶನ್​ ಕ್ರೀಮ್​ ಹಚ್ಚಿಕೊಳ್ಳಿ. ಇದರಿಂದ ಮೇಕಪ್​ ಕೂಡ ಮುಖದ ಮೇಲೆ ಹೆಚ್ಚು ಸಮಸಯ ಉಳಿಯುತ್ತದೆ.

ಆಲೂಗಡ್ಡೆ: ಕ್ಯಾಟೆಕೊಲೇಸ್ ಎನ್ನುವ ಅಂಶ ಮುಖವನ್ನು ಸ್ವಚ್ಛಗೊಳಿಸುತ್ತದೆ. ಬಂಗು, ಕಪ್ಪು ಕಲೆ,  ಕಾಂತಿ ಕಳೆದ ಚರ್ಮವನ್ನು ಸರಿಮಾಡುತ್ತದೆ. ಕ್ಯಾಟೆಕೊಲೇಸ್ ಅಂಶ ಆಲೋಗಡ್ಡೆಯಲ್ಲಿ ಇರುತ್ತದೆ. ಹೀಗಾಗಿ ಅದರ ರಸವನ್ನು ತೆಗೆದು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಮುಖದ ಸೌಂದರ್ಯ  ಉತ್ತಮವಾಗುತ್ತದೆ.

ಕಿತ್ತಳೆ ಸಿಪ್ಪೆ: ಆ್ಯಂಟಿ ಮೈಕ್ರೋಬಯಲ್​ ಮತ್ತು ವಿಟಮಿನ್​ ಸಿ ಅಂಶಗಳನ್ನು ಯಥೇಚ್ಛವಾಗಿ ಹೊಂದಿರುವ ಕಿತ್ತಳೆ ಸಿಪ್ಪೆ ನಿರ್ಜೀವ ಜೀವಕೋಶಗಳನ್ನು ತೊಡೆದುಹಾಕಿ ಮುಖವನ್ನು ಕಾಂತಿಯುತಗೊಳಿಸುತ್ತದೆ. ನೀವು ಕಿತ್ತಳೆ ಹಣ್ಣಿನ ಪೇಸ್​ ಮಾಸ್ಕ್​ಅನ್ನು ಕೂಡ ಹಾಕಿಕೊಳ್ಳಬಹುದು.

ಟೊಮೆಟೋ: ಮುಖದ ಅಂದವನ್ನು ಹೆಚ್ಚಿಸುವಲ್ಲಿ ಟೊಮೆಟೋ ಪಾತ್ರ ಬಹುದೊಡ್ಡದು. ಟೊಮೆಟೋವನ್ನು ಕತ್ತರಿಸಿ ಅದರ ಮೇಲೆ ಸಕ್ಕರೆಯನ್ನು ಹಾಕಿ ಮುಖಕ್ಕೆ ಉಜ್ಜುವುದರಿಂದ  ನೈಸರ್ಗಿಕ ಬ್ಲೀಚಿಂಗ್​ ಸಿಗುತ್ತದೆ. ಇದು ಚರ್ಮದ ಮೇಲಿರುವ ಸತ್ತ ಕೋಶಗಳನ್ನು ತೆಗೆದು ಹಾಕಿ ಚರ್ಮವನ್ನುಆಋಓಗ್ಯಯುತವಾಗಿಸುತ್ತದೆ.

ಮೊಸರು ಮತ್ತು ಅರಿಶಿನ: ಅರಿಶಿನ ಮತ್ತು ಮೊಸರಿನ ಮಿಶ್ರಣವನ್ನು ಮುಖಕ್ಕೆ ಹಚ್ಚಿದೆರೆ ಕಪ್ಪು ಕಲೆಗಳ ಜತೆಗೆ ಸಣ್ಣ ಮಟ್ಟದ  ಬ್ಲೀಚಿಂಗ್​ ಕೂಡ ಆಗುತ್ತದೆ. ಹೀಗಾಗಿ ಮೊಸರು ಕೂಡ ಮುಖದ ಚರ್ಮಕ್ಕೆ ಉತ್ತಮ ಪದಾರ್ಥವಾಗಿದೆ. ಅರಿಶಿನದಲ್ಲಿರುವ ಆ್ಯಂಟಿ ಆಕ್ಸಿಡೆಂಟ್​​ ಅಂಶಗಳು ಮುಖದ ಮೇಲೆ ಆಗುವಮೊಡವೆಗಳನ್ನು ನಿವಾರಿಸುತ್ತದೆ. ಜತೆಗೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:

ಮಲಗಿದ ಕೂಡಲೇ ನಿದ್ರೆ ಬರಬೇಕೇ? ನಿದ್ರಾಹೀನತೆಯಿಂದ ದೂರ ಇರಲು ಈ ಮಾರ್ಗ ಅನುಸರಿಸಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು