Monsoon Food Tips : ಮಳೆಗಾಲದಲ್ಲಿ ಈ ತರಕಾರಿಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ

ಮಳೆಗಾಲದಲ್ಲಿ ಬಿಡದೇ ಸುರಿಯುವ ಮಳೆಯ ನಡುವೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತವೆ. ಈ ಸಮಯದಲ್ಲಿ ಆಹಾರ ಪದ್ಧತಿಯನ್ನು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳಬಹುದು. ಸಮತೋಲಿತ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯತ್ತ ಗಮನ ಹರಿಸಬೇಕು. ಅದಲ್ಲದೇ ಈ ಋತುಮಾನದಲ್ಲಿ ಈ ತರಕಾರಿಯನ್ನು ಆದಷ್ಟು ಸೇವಿಸದೇ ಇರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

Monsoon Food Tips : ಮಳೆಗಾಲದಲ್ಲಿ ಈ ತರಕಾರಿಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ
Edited By:

Updated on: Jun 05, 2024 | 10:39 AM

ಮಳೆಗಾಲವೆಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ತುಂಬಾನೇ ಕಷ್ಟ. ಹವಾಮಾನದಲ್ಲಾಗುವ ಸಾಕಷ್ಟು ಬದಲಾವಣೆಗಳು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ತಂಪಾದ ವಾತಾವರಣವಿರುವ ಕಾರಣ ಆರೋಗ್ಯವು ಕೈ ಕೊಡುವ ಸಾಧ್ಯತೆಯೇ ಹೆಚ್ಚು. ಮಳೆಗಾಲದಲ್ಲಿ ಕೆಲವು ತರಕಾರಿಗಳು ಪ್ರತಿರಕ್ಷಣಾ ವ್ಯವಸ್ಥೆಗೆ ತೊಂದರೆಯನ್ನುಂಟು ಮಾಡುತ್ತದೆ. ಹೀಗಾಗಿ ಈ ತರಕಾರಿಯನ್ನು ಆದಷ್ಟು ತ್ಯಜಿಸುವುದು ಉತ್ತಮ.

* ಹಸಿರು ಎಲೆಗಳು ರಕಾರಿಗಳು : ಹಸಿರು ಎಲೆಗಳ ತರಕಾರಿಗಳು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಈ ಸಮಯದಲ್ಲಿ ಇದರ ಸೇವನೆಯು ಒಳ್ಳೆಯದಲ್ಲ.. ತರಕಾರಿಗಳನ್ನು ಸುಲಭವಾಗಿ ಕಲುಷಿತಗೊಳಿಸುವ ವಿವಿಧ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಈ ಮಳೆಗಾಲ ಸರಿಯಾದ ಸಮಯವಾಗಿದೆ. ಮಣ್ಣು ಕೂಡ ಕಲುಷಿತವಾಗಿರುವ ಕಾರಣ ಈ ಹಸಿರು ತರಕಾರಿಗಳ ಸೇವನೆಯನ್ನು ಆದಷ್ಟು ತಪ್ಪಿಸಿ.

* ಟೊಮೆಟೋ : ಮಳೆಗಾಲದಲ್ಲಿ ಟೊಮೆಟೋದ ಹುಳಿ ಅಂಶವು ಗ್ಯಾಸ್‌ ಅಥವಾ ಆಮ್ಲೀಯತೆ ಉಂಟು ಮಾಡುವ ಕಾರಣ ಇವುಗಳ ಸೇವನೆಯನ್ನು ಕಡಿಮೆ ಮಾಡುವುದು ಒಳಿತು.

ಇದನ್ನೂ ಓದಿ: ಎಚ್ಚರವಿರಲಿ… ಮುಂದೊಂದು ದಿನ ಮನುಷ್ಯನ ನಾಶಕ್ಕೆ ಇದು ಕಾರಣವಾಗಬಹುದು

* ಪಾಲಕ್ : ಮಳೆಗಾಲದಲ್ಲಿ ಕಬ್ಬಿಣ ಅಂಶವು ಕಡಿಮೆಯಿರುವ ಆಹಾರವನ್ನು ಸೇವಿಸಬೇಕಾಗಿರುವ ಕಾರಣ ಪಾಲಕ್ ಸೊಪ್ಪನ್ನು ಆದಷ್ಟು ತಪ್ಪಿಸಿ. ಮಳೆಗಾಲದಲ್ಲಿ ಇದರ ಸೇವನೆಯು ಜಠರ ಹಾಗೂ ಕರುಳಿನ ಸೋಂಕನ್ನು ಉಂಟು ಮಾಡುವ ಸಾಧ್ಯತೆಯೇ ಅಧಿಕ.

* ಹೂಕೋಸು : ಈ ತರಕಾರಿಯು ಗ್ಲುಕೋಸಿನೋಲೇಟ್‌ಗಳು ಎಂಬ ಸಂಯುಕ್ತಗಳನ್ನು ಹೊಂದಿದೆ. ಇದು ಅಲರ್ಜಿಯನ್ನು ಉಂಟು ಮಾಡುತ್ತದೆ. ಹೀಗಾಗಿ ಮಾನ್ಸೂನ್ ನಲ್ಲಿ ಈ ತರಕಾರಿಯನ್ನು ಸೇವಿಸದೆ ಇರುವುದೇ ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

 

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us