
ಮಳೆಗಾಲವೆಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ತುಂಬಾನೇ ಕಷ್ಟ. ಹವಾಮಾನದಲ್ಲಾಗುವ ಸಾಕಷ್ಟು ಬದಲಾವಣೆಗಳು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ತಂಪಾದ ವಾತಾವರಣವಿರುವ ಕಾರಣ ಆರೋಗ್ಯವು ಕೈ ಕೊಡುವ ಸಾಧ್ಯತೆಯೇ ಹೆಚ್ಚು. ಮಳೆಗಾಲದಲ್ಲಿ ಕೆಲವು ತರಕಾರಿಗಳು ಪ್ರತಿರಕ್ಷಣಾ ವ್ಯವಸ್ಥೆಗೆ ತೊಂದರೆಯನ್ನುಂಟು ಮಾಡುತ್ತದೆ. ಹೀಗಾಗಿ ಈ ತರಕಾರಿಯನ್ನು ಆದಷ್ಟು ತ್ಯಜಿಸುವುದು ಉತ್ತಮ.
* ಹಸಿರು ಎಲೆಗಳು ರಕಾರಿಗಳು : ಹಸಿರು ಎಲೆಗಳ ತರಕಾರಿಗಳು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಈ ಸಮಯದಲ್ಲಿ ಇದರ ಸೇವನೆಯು ಒಳ್ಳೆಯದಲ್ಲ.. ತರಕಾರಿಗಳನ್ನು ಸುಲಭವಾಗಿ ಕಲುಷಿತಗೊಳಿಸುವ ವಿವಿಧ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಈ ಮಳೆಗಾಲ ಸರಿಯಾದ ಸಮಯವಾಗಿದೆ. ಮಣ್ಣು ಕೂಡ ಕಲುಷಿತವಾಗಿರುವ ಕಾರಣ ಈ ಹಸಿರು ತರಕಾರಿಗಳ ಸೇವನೆಯನ್ನು ಆದಷ್ಟು ತಪ್ಪಿಸಿ.
* ಟೊಮೆಟೋ : ಮಳೆಗಾಲದಲ್ಲಿ ಟೊಮೆಟೋದ ಹುಳಿ ಅಂಶವು ಗ್ಯಾಸ್ ಅಥವಾ ಆಮ್ಲೀಯತೆ ಉಂಟು ಮಾಡುವ ಕಾರಣ ಇವುಗಳ ಸೇವನೆಯನ್ನು ಕಡಿಮೆ ಮಾಡುವುದು ಒಳಿತು.
ಇದನ್ನೂ ಓದಿ: ಎಚ್ಚರವಿರಲಿ… ಮುಂದೊಂದು ದಿನ ಮನುಷ್ಯನ ನಾಶಕ್ಕೆ ಇದು ಕಾರಣವಾಗಬಹುದು
* ಪಾಲಕ್ : ಮಳೆಗಾಲದಲ್ಲಿ ಕಬ್ಬಿಣ ಅಂಶವು ಕಡಿಮೆಯಿರುವ ಆಹಾರವನ್ನು ಸೇವಿಸಬೇಕಾಗಿರುವ ಕಾರಣ ಪಾಲಕ್ ಸೊಪ್ಪನ್ನು ಆದಷ್ಟು ತಪ್ಪಿಸಿ. ಮಳೆಗಾಲದಲ್ಲಿ ಇದರ ಸೇವನೆಯು ಜಠರ ಹಾಗೂ ಕರುಳಿನ ಸೋಂಕನ್ನು ಉಂಟು ಮಾಡುವ ಸಾಧ್ಯತೆಯೇ ಅಧಿಕ.
* ಹೂಕೋಸು : ಈ ತರಕಾರಿಯು ಗ್ಲುಕೋಸಿನೋಲೇಟ್ಗಳು ಎಂಬ ಸಂಯುಕ್ತಗಳನ್ನು ಹೊಂದಿದೆ. ಇದು ಅಲರ್ಜಿಯನ್ನು ಉಂಟು ಮಾಡುತ್ತದೆ. ಹೀಗಾಗಿ ಮಾನ್ಸೂನ್ ನಲ್ಲಿ ಈ ತರಕಾರಿಯನ್ನು ಸೇವಿಸದೆ ಇರುವುದೇ ಉತ್ತಮ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: