AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೆನಾಡಿನ ಪಾರಂಪರಿಕ ಗರಿ ಗರಿಯಾದ ತೊಡೆದೇವು ಸಿಹಿ ಖಾದ್ಯ ಮಾಡುವ ವಿಧಾನ ಇಲ್ಲಿದೆ

ಮಲೆನಾಡಿನ ಅತ್ಯಂತ ರುಚಿಕರ ಹಾಗೆಯೇ ಗರಿ ಗರಿಯಾದ ಖಾದ್ಯ ತೊಡೆದೇವು. ಈ ವಿಶೇಷ ಖಾದ್ಯವು ಮಲೆನಾಡಿನ ಹವ್ಯಕರ ಮನೆಯಲ್ಲಿ ಹೆಚ್ಚಾಗಿ ಕಂಡು ಬರುವ ತಿಂಡಿಯಾಗಿದೆ.

ಮಲೆನಾಡಿನ ಪಾರಂಪರಿಕ ಗರಿ ಗರಿಯಾದ ತೊಡೆದೇವು ಸಿಹಿ ಖಾದ್ಯ ಮಾಡುವ ವಿಧಾನ ಇಲ್ಲಿದೆ
ತೊಡೆದೇವು ಮಾಡುವ ವಿಧಾನ Image Credit source: Youtube
ಅಕ್ಷತಾ ವರ್ಕಾಡಿ
|

Updated on:Feb 09, 2023 | 3:48 PM

Share

ಮಲೆನಾಡಿನ ಅತ್ಯಂತ ರುಚಿಕರ ಹಾಗೆಯೇ ಗರಿ ಗರಿಯಾದ ಖಾದ್ಯ ತೊಡೆದೇವು. ಈ ವಿಶೇಷ ಖಾದ್ಯವು ಮಲೆನಾಡಿನ ಹವ್ಯಕರ ಮನೆಯಲ್ಲಿ ಹೆಚ್ಚಾಗಿ ಕಂಡು ಬರುವ ತಿಂಡಿಯಾಗಿದೆ. ಈಗಲೂ ಕೂಡ ಮಲೆನಾಡಿನ ಕಡೆಗಳ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಕಟ್ಟಿಗೆಯ ಒಲೆಯ ಮೇಲೆ ಮಡಿಕೆಯನ್ನು ತಲೆಕೆಳಗಾಗಿ ಇಟ್ಟು ಅಂದರೆ ಅದಕ್ಕೆ ತೊಡದೇವು ಎರೆಯುವ ಮಡಿಕೆ ಎಂದು ಕರೆಯುತ್ತಾರೆ.  ಈ ರೀತಿಯಾಗಿ ಖಾದ್ಯವನ್ನು ತಯಾರಿಸಲಾಗುತ್ತದೆ. ಸಾಗರ, ಯಲ್ಲಾಪುರ, ಶಿರಸಿ, ಸಿದ್ಧಾಪುರ, ಗೋಕರ್ಣಾ, ಕುಮುಟಾ ಸುತ್ತಮುತ್ತಲಲ್ಲಿ ಈ ತಿಂಡಿ ಭಾರೀ ಜನಪ್ರಿಯತೆಯನ್ನು ಹೊಂದಿದೆ.  ಇತ್ತೀಚೆಗಷ್ಟೇ  ಗರಿ ಗರಿಯಾದ ತೊಡೆದೇವು ಮಾಡುವ ವಿಧಾನವನ್ನು ಗಗನ್​​ ಶರ್ಮರವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ವೀಡಿಯೋ ಇಲ್ಲಿದೆ.

ತೊಡೆದೇವು ಮಾಡಲು ಬೇಕಾಗುವ ಪದಾರ್ಥಗಳು:

  • ದಪ್ಪ ಅಕ್ಕಿ 1ಕೆಜಿ
  • ಜೋನಿ ಬೆಲ್ಲ 1ಕೆಜಿ
  • ಅರಶಿನ ಪುಡಿ
  • ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ಹುಣಸೆ ಹಣ್ಣಿನ ಹಿತವಾದ ಪಾನಕ ಮಾಡುವ ವಿಧಾನ ಇಲ್ಲಿದೆ

ತೊಡೆದೇವು ಮಾಡುವ ವಿಧಾನ:

  • ಮೊದಲಿಗೆ ಅಕ್ಕಿಯನ್ನು ಮುಂಚಿನ ದಿನ ರಾತ್ರಿಯೇ ನೆನೆಸಿಟ್ಟುಕೊಳ್ಳಿ. ಮರುದಿನ ಅಕ್ಕಿಯನ್ನು ಚೆನ್ನಾಗಿ ತೊಳೆದಿಡಿ. ನಂತರ ನೆನೆಸಿಟ್ಟ ಅಕ್ಕಿ , ಜೋನಿ ಬೆಲ್ಲ, ಅರಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಹಿಟ್ಟು ಸಿದ್ಧವಾಗಿದೆ.
  • ನಂತರ ಒಲೆ ಮೇಲೆ ಒಂದು ಮಡಕೆಯನ್ನು ತಲೆಕೆಳಗಾಗಿ ಇಟ್ಟುಕೊಂಡು, ಇದನ್ನು ತೊಡದೇವು ಎರೆಯುವ ಮಡಿಕೆ ಎಂದು ಕರೆಯುತ್ತಾರೆ. ನಂತರ ಒಂದು ಸಣ್ಣ ಕೋಲಿಗೆ ಕಾಟನ್​​​ ಬಟ್ಟೆಯನ್ನು ಸುತ್ತಿ ರುಬ್ಬಿದ ಹಿಟ್ಟಿನಲ್ಲಿ ಅದ್ದಿ, ಒಲೆಯ ಮೇಲಿಟ್ಟ ಕಾದ ಮಡಿಕೆಯ ಮೇಲೆ ತುಂಬಾ ತೆಳ್ಳಗೆ ಹಚ್ಚಿ. ಇದು ಬೇಯಲು ಸಮಯ ಬೇಡ. ಒಂದೇ ಕ್ಷಣದಲ್ಲಿ ಇದು ಬೆಂದು ಹೋಗುತ್ತದೆ. ನಂತರ ಇದನ್ನು ನಾಜೂಕಾಗಿ ನಿಮಗೆ ಬೇಕಾದ ಆಕಾರದಲ್ಲಿ ಮಡಚಿಡಿ.
  • ನಂತರ ಒಲೆಯಿಂದ ಕೆಳಗಿಳಿಸಿ ಕೆಲವು ನಿಮಿಷಗಳ ವರೆಗೆ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಗಾಳಿಯಾಡದ ಕವರ್​​ ಒಳಗಡೆ ಶೇಖರಿಸಿಡಿ. ಇದು 15 ರಿಂದ 20 ದಿನಗಳ ವರೆಗೆ ಹಾಳಾಗದೇ ಹಾಗೆಯೇ ಉಳಿದು ಬಿಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 3:42 pm, Thu, 9 February 23

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?