AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೆನಾಡಿನ ಪಾರಂಪರಿಕ ಗರಿ ಗರಿಯಾದ ತೊಡೆದೇವು ಸಿಹಿ ಖಾದ್ಯ ಮಾಡುವ ವಿಧಾನ ಇಲ್ಲಿದೆ

ಮಲೆನಾಡಿನ ಅತ್ಯಂತ ರುಚಿಕರ ಹಾಗೆಯೇ ಗರಿ ಗರಿಯಾದ ಖಾದ್ಯ ತೊಡೆದೇವು. ಈ ವಿಶೇಷ ಖಾದ್ಯವು ಮಲೆನಾಡಿನ ಹವ್ಯಕರ ಮನೆಯಲ್ಲಿ ಹೆಚ್ಚಾಗಿ ಕಂಡು ಬರುವ ತಿಂಡಿಯಾಗಿದೆ.

ಮಲೆನಾಡಿನ ಪಾರಂಪರಿಕ ಗರಿ ಗರಿಯಾದ ತೊಡೆದೇವು ಸಿಹಿ ಖಾದ್ಯ ಮಾಡುವ ವಿಧಾನ ಇಲ್ಲಿದೆ
ತೊಡೆದೇವು ಮಾಡುವ ವಿಧಾನ Image Credit source: Youtube
ಅಕ್ಷತಾ ವರ್ಕಾಡಿ
|

Updated on:Feb 09, 2023 | 3:48 PM

Share

ಮಲೆನಾಡಿನ ಅತ್ಯಂತ ರುಚಿಕರ ಹಾಗೆಯೇ ಗರಿ ಗರಿಯಾದ ಖಾದ್ಯ ತೊಡೆದೇವು. ಈ ವಿಶೇಷ ಖಾದ್ಯವು ಮಲೆನಾಡಿನ ಹವ್ಯಕರ ಮನೆಯಲ್ಲಿ ಹೆಚ್ಚಾಗಿ ಕಂಡು ಬರುವ ತಿಂಡಿಯಾಗಿದೆ. ಈಗಲೂ ಕೂಡ ಮಲೆನಾಡಿನ ಕಡೆಗಳ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಕಟ್ಟಿಗೆಯ ಒಲೆಯ ಮೇಲೆ ಮಡಿಕೆಯನ್ನು ತಲೆಕೆಳಗಾಗಿ ಇಟ್ಟು ಅಂದರೆ ಅದಕ್ಕೆ ತೊಡದೇವು ಎರೆಯುವ ಮಡಿಕೆ ಎಂದು ಕರೆಯುತ್ತಾರೆ.  ಈ ರೀತಿಯಾಗಿ ಖಾದ್ಯವನ್ನು ತಯಾರಿಸಲಾಗುತ್ತದೆ. ಸಾಗರ, ಯಲ್ಲಾಪುರ, ಶಿರಸಿ, ಸಿದ್ಧಾಪುರ, ಗೋಕರ್ಣಾ, ಕುಮುಟಾ ಸುತ್ತಮುತ್ತಲಲ್ಲಿ ಈ ತಿಂಡಿ ಭಾರೀ ಜನಪ್ರಿಯತೆಯನ್ನು ಹೊಂದಿದೆ.  ಇತ್ತೀಚೆಗಷ್ಟೇ  ಗರಿ ಗರಿಯಾದ ತೊಡೆದೇವು ಮಾಡುವ ವಿಧಾನವನ್ನು ಗಗನ್​​ ಶರ್ಮರವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ವೀಡಿಯೋ ಇಲ್ಲಿದೆ.

ತೊಡೆದೇವು ಮಾಡಲು ಬೇಕಾಗುವ ಪದಾರ್ಥಗಳು:

  • ದಪ್ಪ ಅಕ್ಕಿ 1ಕೆಜಿ
  • ಜೋನಿ ಬೆಲ್ಲ 1ಕೆಜಿ
  • ಅರಶಿನ ಪುಡಿ
  • ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ಹುಣಸೆ ಹಣ್ಣಿನ ಹಿತವಾದ ಪಾನಕ ಮಾಡುವ ವಿಧಾನ ಇಲ್ಲಿದೆ

ತೊಡೆದೇವು ಮಾಡುವ ವಿಧಾನ:

  • ಮೊದಲಿಗೆ ಅಕ್ಕಿಯನ್ನು ಮುಂಚಿನ ದಿನ ರಾತ್ರಿಯೇ ನೆನೆಸಿಟ್ಟುಕೊಳ್ಳಿ. ಮರುದಿನ ಅಕ್ಕಿಯನ್ನು ಚೆನ್ನಾಗಿ ತೊಳೆದಿಡಿ. ನಂತರ ನೆನೆಸಿಟ್ಟ ಅಕ್ಕಿ , ಜೋನಿ ಬೆಲ್ಲ, ಅರಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಹಿಟ್ಟು ಸಿದ್ಧವಾಗಿದೆ.
  • ನಂತರ ಒಲೆ ಮೇಲೆ ಒಂದು ಮಡಕೆಯನ್ನು ತಲೆಕೆಳಗಾಗಿ ಇಟ್ಟುಕೊಂಡು, ಇದನ್ನು ತೊಡದೇವು ಎರೆಯುವ ಮಡಿಕೆ ಎಂದು ಕರೆಯುತ್ತಾರೆ. ನಂತರ ಒಂದು ಸಣ್ಣ ಕೋಲಿಗೆ ಕಾಟನ್​​​ ಬಟ್ಟೆಯನ್ನು ಸುತ್ತಿ ರುಬ್ಬಿದ ಹಿಟ್ಟಿನಲ್ಲಿ ಅದ್ದಿ, ಒಲೆಯ ಮೇಲಿಟ್ಟ ಕಾದ ಮಡಿಕೆಯ ಮೇಲೆ ತುಂಬಾ ತೆಳ್ಳಗೆ ಹಚ್ಚಿ. ಇದು ಬೇಯಲು ಸಮಯ ಬೇಡ. ಒಂದೇ ಕ್ಷಣದಲ್ಲಿ ಇದು ಬೆಂದು ಹೋಗುತ್ತದೆ. ನಂತರ ಇದನ್ನು ನಾಜೂಕಾಗಿ ನಿಮಗೆ ಬೇಕಾದ ಆಕಾರದಲ್ಲಿ ಮಡಚಿಡಿ.
  • ನಂತರ ಒಲೆಯಿಂದ ಕೆಳಗಿಳಿಸಿ ಕೆಲವು ನಿಮಿಷಗಳ ವರೆಗೆ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಗಾಳಿಯಾಡದ ಕವರ್​​ ಒಳಗಡೆ ಶೇಖರಿಸಿಡಿ. ಇದು 15 ರಿಂದ 20 ದಿನಗಳ ವರೆಗೆ ಹಾಳಾಗದೇ ಹಾಗೆಯೇ ಉಳಿದು ಬಿಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 3:42 pm, Thu, 9 February 23

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ