Valentine’s day 2024: ಪ್ರೀತಿಯ ಜಲಧಾರೆ ನೀನು, ನಮ್ಮ ಪ್ರೀತಿ ಶುರುವಾಗಿ ಇಂದಿಗೆ ಆರು ವರ್ಷ

ಒಂಥರಾ ಮುಂಗಾರು ಮಳೆಯಂತೆ ನಮ್ಮ ಪ್ರೀತಿ ಒಮ್ಮೆ ಖುಷಿಯಾಗಿ ಹೃದಯ ಹೂವಾದರೆ, ಮತ್ತೊಮ್ಮೆ ಅತ್ತು ಕಲ್ಲಾಗುತ್ತೆ ನೆನಪುಗಳು ಕಾಡಿ ಬೇಡಿದರೂ ಕೊನೆಗೇ ಕಣ್ಣಿರಾಗಿ ಮೌನದಿಂದ ಮುಕ್ತಾಯವಾಗುತ್ತವೆ. ಆದರೂ ಬರೆದೆ ನಾನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ.

Valentine’s day 2024: ಪ್ರೀತಿಯ ಜಲಧಾರೆ ನೀನು, ನಮ್ಮ ಪ್ರೀತಿ ಶುರುವಾಗಿ ಇಂದಿಗೆ ಆರು ವರ್ಷ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 14, 2024 | 12:28 PM

ನಮ್ಮ ಪ್ರೀತಿ ಶುರುವಾಗಿ ಇಂದಿಗೆ ಆರು ವರ್ಷಗಳು ತುಂಬಿ ಏಳುನೇ ವರುಷ. ಈ ಏಳು ವರುಷದಲ್ಲಿ ಆಡಿದ ಮಾತುಗಳೇಷ್ಟೋ, ನೋವುಗಳನ್ನು ಅನುಭವಿಸಿದ ಪ್ರಸಂಗಳೇಷ್ಟೋ ನೋವಿನಲ್ಲೂ ಅನಂದ ಕಂಡ ಪ್ರೇಮಿಗಳೆಂದರೆ ನಾವೇ ಇರಬಹುದು ಅಲ್ಲವೇ..? ನಮ್ಮ ನೆನಪುಗಳ ಸಂಕೋಲೆಯಲ್ಲಿ ಕಾಡಿ-ಬೇಡಿ ಗೋಳಾಡಿಸಿ, ತೋಳಲಾಡಿಸುವ ನನ್ನೊಳಗೇ ಎಂದೂ ಮರೆಯದ ಮಾಸದ ನಿನ್ನ ನೆನಪುಗಳು ಜೀವನದ ಜೀವಾಳ ಕಹಿ ನೆನಪುಗಳು ಜೀವನದ ಮೆಟ್ಟಲುಗಳಾದರೆ, ಸವಿ ನೆನಪುಗಳು ನನ್ನ ಜೀವನಕ್ಕೇ ಮುನ್ನುಡಿಯಾಗಿದೆ.

ಒಂಥರಾ ಮುಂಗಾರು ಮಳೆಯಂತೆ ನಮ್ಮ ಪ್ರೀತಿ ಒಮ್ಮೆ ಖುಷಿಯಾಗಿ ಹೃದಯ ಹೂವಾದರೆ, ಮತ್ತೊಮ್ಮೆ ಅತ್ತು ಕಲ್ಲಾಗುತ್ತೆ ನೆನಪುಗಳು ಕಾಡಿ ಬೇಡಿದರೂ ಕೊನೆಗೇ ಕಣ್ಣಿರಾಗಿ ಮೌನದಿಂದ ಮುಕ್ತಾಯವಾಗುತ್ತವೆ. ಆದರೂ ಬರೆದೆ ನಾನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ.

ಪ್ರೀತಿ ಮಾಡಿ ಮದುವೆಯಾದರೆ ಅದರಲ್ಲಿ ಇರೋ ಖಷಿಯ ಪರಿಯೇ ಬೇರೆ. ನೀ.. ನನ್ನ ಬದುಕಿಗೆ ಬರಲಿಲ್ಲವೆಂದರೆ ನನ್ನ ಆಸೆ ಆಕ್ಷಾಂಶೆಯಲ್ಲವೂ ಆಗಿ ಉಳಿದುಕೊಳ್ಳತ್ತಿದವು ನೀ ನನ್ನ ಗುರಿಗಳಿಗೆ ರೆಕ್ಕೆ ಕೊಟ್ಟಿದ್ದೀಯಾ ಯಾರು ನನ್ನ ಜೊತೆ ಇಲ್ಲದಿದ್ದಾಗ ನೀ ನನಗೆ ಆಸರೆಯಾಗಿ ನಿಂತಿದ್ದೀಯಾ, ನಮ್ಮ ಇಬ್ಬರೂ ಪ್ರೀತಿ ಹೀಗೆ ಇರುತ್ತದೆ ಎಂದು ನಾನು ಎಂದೂ ಊಹಿಸಿಕೊಂಡಿರಲಿಲ್ಲ ಆರು ವರ್ಷದ ಪ್ರೀತಿ ಏಳುನೇ ವರ್ಷದಲ್ಲಿ ಸಪ್ತಪದಿ ತುಳಿಯುವಂತೆ ಆಗಿತ್ತು.

ಪ್ರೀತಿ ಮಾಡಿದವರೆಲ್ಲೂ ಮದುವೆಯಾಗುವುದಿಲ್ಲ ಎಂಬ ಮಾತುಗಳು ನಮ್ಮ ಜೀವನದಲ್ಲಿ ಸುಳ್ಳು ಆಗಿದೆ. ನಾವೀಗ ಮದುವೆಯಾಗಿ ಒಂದು ವರ್ಷ ತುಂಬುವ ಸಂತಸದಲ್ಲಿದ್ದೇವೆ. ಈ ಒಂದು ವರುಷದ ಜೀವನದಲ್ಲಿ ನಾವೂ ಕೂಡ ಎಲ್ಲರಂತೆ ಸುಖ-ದುಃಖಗಳನ್ನೂ ಅನುಭವಿಸಿದ್ದೇವೆ. ನಮ್ಮ ಇಬ್ಬರ ಜಗಳ  ಒಂದು ಗಂಟೆ ಮೀರಿ ಅತಿಯಾಗುವುದೇ ಇಲ್ಲ ನೀ ನನ್ನೊಂದಿಗೆ ಕೋಪನೇ ಮಾಡಿಕೊಳ್ಳುವುದಿಲ್ಲ ಯಾಕೆ..? ಯಾಕಿಷ್ಟು ನನ್ನ ಮೇಲೆ ನಿನಗೆ ಅತಿಯಾದ ಕಾಳಜಿ..? ನೀ ಇಷ್ಟೋಂದು ಪ್ರೀತಿ ಮಾಡುತ್ತೀಯಾ..?

ಇದನ್ನೂ ಓದಿ: ಜಾತಿ, ಅಂತಸ್ತು ನನ್ನ ಪ್ರೀತಿಗೆ ಮುಳುವಾಯ್ತು

ನೀನು ಯಾವಾಗ್ಲೂ ನನ್ನ ಜೊತೆಗೇ ಇರಬೇಕು ಅಂತ ಬಯಸುವ ಹಠಮಾರಿ ಮನಸ್ಸು ನನ್ನದು ನಿನ್ನ ಮೇಲೆ ನನಗೆ ಸಾಕಷ್ಟು ಪ್ರೀತಿ ಇದೆ ಅದನ್ನು ನಾನು ವ್ಯಕ್ತಪಡಿಸಿಲ್ಲ ನಿನ್ನನ್ನು ನಾನು ನನ್ನ ಪ್ರೀತಿಸುವುದಕ್ಕಿಂತಲೂ ಜಾಸ್ತಿ ಪ್ರೀತಿಸುತ್ತೇನೆ. ನಮ್ಮಿಬ್ಬರ ನಡುವೆ ಆ ದೇವರು ಪ್ರೀತಿ ಕರುಣಿಸಿದಕ್ಕೆ ನೀ ನನಗೆ ಸಿಕ್ಕಿದಕ್ಕೆ ಆ ದೇವರನ್ನು ಕೇಳೊದೊಂದೇ ನಾನು ಒಂದೇ ನಮ್ಮ ಪ್ರೀತಿ ಶಾಶ್ವತವಾಗಿರಲಿ ಮತ್ತು ಪರಿಪೂರ್ಣವಾಗಿರಲಿ….

ಸವಿತ. ಜಿ,  ನೆಲಮಂಗಲ, ಬೆಂಗಳೂರು

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ