AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vidura Niti : ಜೀವನದಲ್ಲಿ ಯಶಸ್ಸು ಗಳಿಸಲು ಈ ಗುಣಗಳು ನಿಮ್ಮರಲಿ ಎನ್ನುತ್ತಾನೆ ವಿದುರ

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಏನನ್ನಾದರೂ ಸಾಧಿಸಬೇಕು, ಎಲ್ಲರಂತೆ ಇರಬಾರದು ಎನ್ನುವುದಿರುತ್ತದೆ. ಹೀಗಾಗಿ ಕೆಲವರು ತಮ್ಮದೇ ಹಾದಿ ಸೃಷ್ಟಿಸಿ ಜೀವನದಲ್ಲಿ ಯಶಸ್ಸು ಗಳಿಸಿ ನಾಲ್ಕು ಜನರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಆದರೆ ಈ ಕೆಲವು ಗುಣಗಳು ವ್ಯಕ್ತಿಯಲ್ಲಿದ್ದರೆ ಜೀವನದಲ್ಲಿ ಗೆಲ್ಲಲು ಸಾಧ್ಯವಂತೆ. ಹಾಗಾಗಿ ವಿದುರನು ತನ್ನ ನೀತಿಯಲ್ಲಿ ಆ ಗುಣಗಳನ್ನು ಉಲ್ಲೇಖಿಸಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Vidura Niti : ಜೀವನದಲ್ಲಿ ಯಶಸ್ಸು ಗಳಿಸಲು ಈ ಗುಣಗಳು ನಿಮ್ಮರಲಿ ಎನ್ನುತ್ತಾನೆ ವಿದುರ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 03, 2025 | 10:32 AM

Share

ಯಶಸ್ಸು ಯಾರಿಗೆ ತಾನೇ ಬೇಡ ಹೇಳಿ, ಎಲ್ಲರೂ ಕೂಡ ತಮ್ಮ ಜೀವನದಲ್ಲಿ ತಾನು ಅಂದುಕೊಂಡದ್ದನ್ನು ಸಾಧಿಸಬೇಕು, ಗೆಲುವು ನಮ್ಮದಾಗಬೇಕೆಂದು ಬಯಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದುದ್ದಕ್ಕೂ ಈ ಯಶಸ್ಸಿಗಾಗಿ ಹೋರಾಡುತ್ತಿರುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ಯಶಸ್ಸು ಬೇಕು ಎನ್ನುವುದಿರುತ್ತದೆ. ಆದರೆ ವಿದುರನು ಈ ಕೆಲವು ಗುಣಗಳನ್ನು ಅಳವಡಿಸಿಕೊಂಡರೆ ಯಶಸ್ಸು ನಿಮ್ಮದಾಗುತ್ತದೆ. ಜೀವನ ಎನ್ನುವ ಯುದ್ಧವನ್ನು ಸುಲಭವಾಗಿ ಗೆಲ್ಲಬಹುದು ಎಂದಿದ್ದಾನೆ.

  • ಈ ಜನರನ್ನು ಮಾತ್ರ ನಂಬಿ : ನಂಬಿಕೆ ಗಳಿಸಿಕೊಳ್ಳುವುದು ಬಹಳ ಕಷ್ಟಕರ. ಹೀಗಾಗಿ ಎಲ್ಲರನ್ನು ಕಣ್ಣು ಮುಚ್ಚಿ ನಂಬಬೇಡಿ. ಹೀಗಾಗಿ ಒಬ್ಬ ವ್ಯಕ್ತಿಯನ್ನು ನಂಬಿ ಎಲ್ಲವನ್ನು ಹೇಳಿಕೊಳ್ಳುವ ಮೂಲಕ ಆ ವ್ಯಕ್ತಿಯೂ ನಂಬಿಕೆ ಅರ್ಹನೇ ಇಲ್ಲವೇ ಎನ್ನುವುದನ್ನು ನೂರು ಬಾರಿ ಯೋಚಿಸುವುದು ಬಹಳ ಮುಖ್ಯ. ಹೀಗಾಗಿ ಜೀವನದಲ್ಲಿ ಗೆಲ್ಲಲು ನಂಬಿಕೆ ಯೋಗ್ಯರಾದವರನ್ನು ಮಾತ್ರ ನಂಬಿ ಎನ್ನುವ ಸಲಹೆ ನೀಡುತ್ತಾನೆ ವಿದುರ.
  • ಈ ಮೂರು ಅಂಶದಿಂದ ದೂರವಿರಿ : ಗೆಲುವು ಸಾಧಿಸಲು ಈ ಮೂರು ವಿಷಯಗಳು ದೂರವಿರಲಿ ಎನ್ನುತ್ತಾನೆ ವಿದುರ. ಕಾಮ, ಕ್ರೋಧ ಹಾಗೂ ದುರಾಸೆ ಎನ್ನುವ ಮೂರು ಅಂಶಗಳು ಮನುಷ್ಯನನ್ನು ಸೋಲಿನಿಂದ ದೂರವಿಡುತ್ತದೆ. ಹೀಗಾಗಿ ನಿಮ್ಮ ಜೀವನದಲ್ಲಿ ಈ ಮೂರಕ್ಕೆ ಹೆಚ್ಚು ಮಹತ್ವ ನೀಡದಿರುವುದು ಉತ್ತಮ.
  • ಕೆಟ್ಟ ಕೆಲಸಕ್ಕೆ ಕೈ ಹಾಕಬೇಡಿ : ಒಳ್ಳೆಯ ಕೆಲಸವನ್ನು ಮಾಡುವವನು ಹಾಗೂ ಕೆಟ್ಟ ಕೆಲಸಗಳಿಂದ ದೂರವಿರುವವನನ್ನು ಯೋಗ್ಯ ವ್ಯಕ್ತಿ ಎಂದು ಕರೆಯಲಾಗುತ್ತದೆ. ಹೀಗಾಗಿ ಕೆಟ್ಟ ಕೆಲಸವು ಗೆಲುವಿನ ಹಾದಿಗೆ ತೊಡಕಾಗಬಹುದು. ಇದರಿಂದ ಸದಾ ಒಳ್ಳೆಯದ್ದನ್ನೇ ಮಾಡುತ್ತಾ ಇತರರಿಗೂ ಒಳ್ಳೆಯದ್ದನ್ನೇ ಬಯಸುವ ಮನಸ್ಥಿತಿ ನಿಮ್ಮದಾಗಲಿ.
  • ಸಮಾನವಾಗಿ ಸ್ವೀಕರಿಸುವ ಗುಣ : ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ನಿಮ್ಮನ್ನು ಹೊಗಳಿದರೆ ಹಿಗ್ಗಿ ಹೀರೆಕಾಯಿಯಂತಾಗಬೇಡಿ. ಇನ್ಯಾರದೋ ನೋವು ಮಾಡಿದರೆ ಅಥವಾ ಅವಮಾನ ಮಾಡಿದರೆ ಅದಕ್ಕೂ ಕುಗ್ಗಬೇಡಿ. ಎರಡನ್ನು ಸಮಾನವಾಗಿ ಸ್ವೀಕರಿಸುವ ಗುಣವು ವ್ಯಕ್ತಿಯನ್ನು ಗೆಲುವಿನ ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ.
  • ಶ್ರಮ ವಹಿಸಿ ಪೂರ್ಣ ಮನಸ್ಸಿನಿಂದ ಕೆಲಸ ಮಾಡಿ : ಕೆಲಸವನ್ನು ಮಾಡಿ ಮುಗಿಸಬೇಕೆಲ್ಲವೇ ಎಂದು ಆ ಕಾರ್ಯ ಮಾಡಬೇಡಿ. ಅದು ಗೆಲುವನ್ನು ತಂದು ಕೊಡುವುದಿಲ್ಲ. ಕೆಲವೊಮ್ಮೆ ಬೇಕೋ ಬೇಡವೋ ಎನ್ನುವಂತೆ ಕೆಲಸ ಮಾಡಿದರೆ ಅದು ಪೂರ್ಣವಾಗದೇ ಅರ್ಧಕ್ಕೆ ನಿಂತು ಹೋಗಬಹುದು. ಹೀಗಾಗಿ ಪೂರ್ಣ ಮನಸ್ಸಿನಿಂದ ಮಾಡಿದ ಕಷ್ಟ ಪಟ್ಟು ಮಾಡಿದ ಕೆಲಸವು ಒಂದೊಳ್ಳೆ ಫಲವನ್ನೇ ತಂದು ಕೊಡುತ್ತದೆ.
  • ಮನಸ್ಸನ್ನು ನಿಯಂತ್ರಿಸುವ ಕಲೆ ಗೊತ್ತಿರಲಿ : ಹುಚ್ಚುಕೋಡಿ ಮನಸ್ಸು ಹೇಳಿದ ಮಾತನ್ನು ಕೇಳುವುದೇ ಇಲ್ಲ. ಹೀಗಾಗಿ ಜೀವನದಲ್ಲಿ ಯಶಸ್ಸು ಸಾಧಿಸಲು ಮನಸ್ಸನ್ನು ನಿಗ್ರಹಿಸುವುದು ತಿಳಿದಿರಬೇಕು. ಹೀಗಾಗಿದ್ದಾಗ ಮಾತ್ರ ಹಿಡಿದ ಕೆಲಸವನ್ನು ಮಾಡಿ ಮುಗಿಸಲು ಸಾಧ್ಯ. ಯಾರಿಗೆ ಮನಸ್ಸನ್ನು ಹತೋಟಿಯಲ್ಲಿಡಲು ತಿಳಿದಿದೆಯೋ ಆ ವ್ಯಕ್ತಿಯೂ ಗೆಲುವಿನತ್ತ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ.
  • ದಾನ ಮಾಡುವ ಗುಣ ಇರಲಿ : ವಿದುರನ ಪ್ರಕಾರ ದಾನ ಮಾಡುವುದು ಒಳ್ಳೆಯ ಗುಣಗಳಲ್ಲಿ ಒಂದು ವ್ಯಕ್ತಿಯೂ ಬಲಿಷ್ಠನಾಗಿದ್ದಾಗ ಇತರರನ್ನು ಯಾರು ಕ್ಷಮಿಸುತ್ತಾನೋ ಅಥವಾ ಬಡವನಾಗಿದ್ದಾಗಲೂ ದಾನ ಮಾಡುವ ಗುಣ ಹೊಂದಿರುವ ವ್ಯಕ್ತಿಯೂ ಸ್ವರ್ಗದಲ್ಲಿ ನೆಲೆಸುತ್ತಾನಂತೆ. ಈ ಗುಣವಿದ್ದರೆ ಜೀವನದಲ್ಲಿ ಗೆದ್ದಂತೆ ಲೆಕ್ಕ. ಹೀಗಾಗಿ ದಾನ ಮಾಡುವ ಗುಣವನ್ನು ಅಳವಡಿಸಿಕೊಳ್ಳಿ ಎಂದು ವಿದುರ ಸಲಹೆ ನೀಡುತ್ತಾನೆ.
  • ರೋಗದಿಂದ ದೂರವಾಗಿರಿ : ಅನಾರೋಗ್ಯವಿದ್ದರೆ ಹಣವು ಖರ್ಚಾಗುತ್ತದೆ. ಹೀಗಾಗಿ ಸರಿಯಾದ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ. ರೋಗ ಮುಕ್ತರಾಗುವುದು ಕೂಡ ಯಶಸ್ಸಿನಲ್ಲಿ ಒಂದು. ಆರೋಗ್ಯವಿದ್ದರೆ ಅಂದುಕೊಂಡದ್ದನು ಸಾಧಿಸಬಹುದು. ರೋಗದಿಂದ ಮುಕ್ತರಾಗುವುದು ಕೂಡ ಯಶಸ್ಸಿನ ದಾರಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
  • ಸೋಮಾರಿಗಳಿಗೆ ಕಿಂಚಿತ್ತೂ ಸಹಾಯ ಮಾಡಬೇಡಿ : ಸೋಮಾರಿ ವ್ಯಕ್ತಿಗಳು ನಿಮ್ಮ ಸುತ್ತ ಮುತ್ತಲಿನಲ್ಲಿದ್ದರೆ ಅವರಿಗೆ ಸಹಾಯ ಮಾಡಬೇಡಿ. ಹಣ ನೀಡುವುದು ಹಾಗೂ ಸಹಾಯ ಮಾಡುವುದನ್ನೇ ಬಂಡವಾಳವಾಗಿಸಿಕೊಳ್ಳುತ್ತಾರೆ. ನೀವು ಮಾಡುವ ಸಹಾಯದಿಂದ ಕೆಲಸ ಕಾರ್ಯ ಮಾಡುವುದಿಲ್ಲ. ಅವರೊಂದಿಗಿನ ಸಹವಾಸವು ನಿಮ್ಮನ್ನು ಕೂಡ ಸೋಮಾರಿಯನ್ನಾಗಿಸುತ್ತದೆ. ಹೀಗಾಗಿ ಈ ವ್ಯಕ್ತಿಗಳ ಸಹವಾಸ ಹಾಗೂ ಇವರಿಗೆ ಸಹಾಯ ಮಾಡಬೇಡಿ ಎನ್ನುತ್ತಾನೆ ವಿದುರ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ