ಉಪ್ಪಿಲ್ಲದ ಆಹಾರ, 10 ನಿಮಿಷದ ವಾಕ್; 1 ವರ್ಷದಲ್ಲಿ 23 ಕೆಜಿ ತೂಕ ಇಳಿಸಿಕೊಂಡ ಮಹಿಳೆ!

ತೂಕ ಇಳಿಸಿಕೊಳ್ಳಲು ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಆದರೆ, ನಮ್ಮ ಬದ್ಧತೆ, ಆಸಕ್ತಿ, ನಿಷ್ಠೆ ಇದ್ದರೆ ತೂಕ ಇಳಿಸುವುದು ಕಷ್ಟವೇನಲ್ಲ. ಇಲ್ಲೊಬ್ಬರು ಮಹಿಳೆ ಪ್ರತಿದಿನ ಕೇವಲ 10 ನಿಮಿಷ ವಾಕ್ ಮಾಡುವ ಮೂಲಕ, ಉಪ್ಪು ಹಾಕದ ಊಟ ಸೇವಿಸುವ ಮೂಲಕ 1 ವರ್ಷದಲ್ಲಿ 23 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇದು ಹೇಗೆ ಗೊತ್ತಾ? ತೂಕವನ್ನು ಕಡಿಮೆ ಮಾಡಿಕೊಳ್ಳಲು ಯಾವೆಲ್ಲ ಮಾರ್ಗಗಳನ್ನು ಅನುಸರಿಸಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.

ಉಪ್ಪಿಲ್ಲದ ಆಹಾರ, 10 ನಿಮಿಷದ ವಾಕ್; 1 ವರ್ಷದಲ್ಲಿ 23 ಕೆಜಿ ತೂಕ ಇಳಿಸಿಕೊಂಡ ಮಹಿಳೆ!
ಸಾಂದರ್ಭಿಕ ಚಿತ್ರ Image Credit source: iStock
Follow us
|

Updated on: Mar 11, 2024 | 1:10 PM

ತೂಕ ಇಳಿಸಿಕೊಳ್ಳುವುದು ಬಹಳಷ್ಟು ಜನರಿಗೆ ದೊಡ್ಡ ವಿಷಯವಲ್ಲ. ಆದರೆ, ಇನ್ನು ಕೆಲವರಿಗೆ ಸುಲಭವೂ ಅಲ್ಲ. ಕೆಲವು ಜನರು ಎಷ್ಟೇ ಪ್ರಯತ್ನಪಟ್ಟರೂ ದೇಹದ ಕೊಬ್ಬು ಕರಗಿಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಥೈರಾಯ್ಡ್ ಮತ್ತು PCODಯಂತಹ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವವರಿಗೆ ತೂಕ ಇಳಿಸಿಕೊಳ್ಳುವುದು ಸುಲಭದ ವಿಷಯವಲ್ಲ. ಹೆಚ್ಚೇನೂ ಡಯೆಟ್, ವರ್ಕ್​ಔಟ್ ಮಾಡದೆ ಕೇವಲ 1 ವರ್ಷದಲ್ಲಿ 23 ಕೆಜಿ ತೂಕವನ್ನು ಇಳಿಸಿಕೊಂಡ ಮಹಿಳೆಯೊಬ್ಬರ ಸಾಹಸಗಾಥೆ ಇಲ್ಲಿದೆ.

ತೂಕವನ್ನು ಇಳಿಸಿಕೊಳ್ಳುವ ಕಲ್ಪನೆಯು ನನ್ನ ಮನಸ್ಸಿನಲ್ಲಿ ಗಾಢವಾಗಿ ಕುಳಿತಿತ್ತು. ಅದರಿಂದಾಗಿ ಹಠದಿಂದ ಒಂದು ವರ್ಷದ ಅವಧಿಯಲ್ಲಿ 23 ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ ಎಂದು 30 ವರ್ಷದ ಆವಂತಿಕಾ ಸರನ್ ಹೇಳಿದ್ದಾರೆ. 1 ವರ್ಷದ ಹಿಂದೆ 90 ಕೆಜಿ ತೂಕವಿದ್ದ ಆವಂತಿಕಾ ಈಗ 67 ಕೆಜಿಗೆ ಇಳಿದಿದ್ದಾರೆ. ಆವಂತಿಕಾ ಅವರು ಈಗ ಮತ್ತಷ್ಟು ಯಂಗ್ ಆಗಿ ಕಾಣುತ್ತಿದ್ದಾರೆ. ನನ್ನ ತೂಕದ ಕಾರಣದಿಂದಾಗಿ ಕಡಿಮೆ ಆತ್ಮವಿಶ್ವಾಸವನ್ನು ಅನುಭವಿಸುತ್ತಿದ್ದೆ. ತೂಕವನ್ನು ಕಳೆದುಕೊಳ್ಳುವುದು ಮತ್ತು ನನ್ನ ಆರೋಗ್ಯದ ಬಗ್ಗೆ ಗಮನ ನೀಡುವುದು ನನಗೆ ಅತ್ಯಗತ್ಯವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Black Salt: ಉತ್ತಮ ಆರೋಗ್ಯಕ್ಕೆ ಬಿಳಿ ಉಪ್ಪಿನ ಬದಲು ಕಪ್ಪು ಉಪ್ಪು ಬಳಸಿ ನೋಡಿ

“ನಾನು ಎಂದಿಗೂ ಆಹಾರಪ್ರೇಮಿಯಾಗಿರಲಿಲ್ಲ. ಹಾಗಾಗಿ ನನ್ನ ಆಹಾರಕ್ರಮವನ್ನು ಸಂಪೂರ್ಣವಾಗಿ ಬದಲಾಯಿಸಿದ ನಂತರ ಅದನ್ನು ನಿಭಾಯಿಸಲು ನನಗೆ ಕಷ್ಟವಾಗಲಿಲ್ಲ. ಸಾಧ್ಯವಾದಷ್ಟು ಗ್ಲುಟನ್ ಅಂಶವಿರುವ ಆಹಾರ ಸೇವನೆ ಅವಾಯ್ಡ್ ಮಾಡಿದೆ. ಮಾಮೂಲಿ ಹಾಲು ಕುಡಿಯುವ ಬದಲು ಬಾದಾಮಿ ಹಾಲು ಕುಡಿಯತೊಡಗಿದೆ. ನಾನು ಚಪಾತಿಗಳನ್ನು ಸೇವಿಸುವುದನ್ನು ನಿಲ್ಲಿಸಿದೆ. ಎರಡು ವಾರಗಳಲ್ಲಿ ಒಮ್ಮೆ ಮಾತ್ರ ಮಲ್ಟಿಗ್ರೇನ್ ಬ್ರೆಡ್ ಅನ್ನು ಸೇವಿಸುತ್ತಿದ್ದೆ” ಎಂದು ಆವಂತಿಕಾ ತಮ್ಮ ತೂಕ ಇಳಿಸುವಿಕೆಯ ಪ್ರಯಾಣದ ಬಗ್ಗೆ ಹೇಳಿದ್ದಾರೆ.

“ವಾರದಲ್ಲಿ ಎರಡು ಬಾರಿ ಉಪ್ಪು ಹಾಕದ ಊಟ ಮಾಡಬೇಕೆಂದು ನಾನು ನಿಯಮ ಮಾಡಿಕೊಂಡಿದ್ದೇನೆ. ನಾನು ಥೈರಾಯ್ಡ್ ರೋಗಿಯಾಗಿರುವುದರಿಂದ ನನ್ನ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಹೀಗಾಗಿ, ನಾನು ವಾರದಲ್ಲಿ ಕನಿಷ್ಠ 2 ದಿನಗಳ ಕಾಲ ರಾತ್ರಿಯ ಊಟದಲ್ಲಿ ಉಪ್ಪನ್ನು ಸೇವಿಸುವುದನ್ನು ಅವಾಯ್ಡ್ ಮಾಡುತ್ತೇನೆ. ನಾನು ಇಂದಿನವರೆಗೂ ಈ ನಿಯಮಕ್ಕೆ ಬದ್ಧಳಾಗಿದ್ದೇನೆ. ಅದರಿಂದ ನನಗೆ ಸಾಕಷ್ಟು ಪ್ರಯೋಜನವಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Salt Side Effects: ಅತಿಯಾದ ಉಪ್ಪು ಸೇವನೆ ಕಡಿಮೆ ಮಾಡಲು ಹೀಗೆ ಮಾಡಿ

ಆವಂತಿಕಾ ಪ್ರತಿದಿನ 3.5 ಲೀಟರ್ ನೀರನ್ನು ತಪ್ಪದೆ ಸೇವಿಸುತ್ತಾರೆ. ನೀರು ಕುಡಿಯಲು ಮೊದಲು ಕಷ್ಟವಾಗುತ್ತಿದ್ದುದರಿಂದ ನೀರಿನಲ್ಲಿ ಜೀರಿಗೆ, ಮೆಂತ್ಯ ಮತ್ತು ಸೋಂಪಿನ ಕಾಳುಗಳನ್ನು ಕುದಿಸಿ ತಯಾರಿಸಿದ 1 ಲೀಟರ್ ಡಿಟಾಕ್ಸ್ ನೀರನ್ನು ಸೇವಿಸುತ್ತಿದ್ದರು. ಈಗಲೂ ಅದೇ ಅಭ್ಯಾಸ ಇಟ್ಟುಕೊಂಡಿದ್ದಾರೆ. ದಿನಕ್ಕೆ ಎರಡು ಬಾರಿ ಗ್ರೀನ್ ಚಹಾವನ್ನು ಕುಡಿಯುತ್ತಾರೆ. ದಿನಕ್ಕೆ ಒಮ್ಮೆ ಮಜ್ಜಿಗೆಯನ್ನು ಸೇವಿಸುತ್ತಾರೆ.

ದಿನವೂ ಯೋಗ ಮತ್ತು ಏರೋಬಿಕ್ಸ್‌ ಮಾಡುವ ಆವಂತಿಕಾ ಊಟವಾದ ನಂತರ 10 ನಿಮಿಷ ವಾಕ್ ಮಾಡಲು ಮರೆಯುವುದಿಲ್ಲ. ಇದು ಅವರ ತೂಕ ಇಳಿಸುವ ಪ್ರಯಾಣದಲ್ಲಿ ಸಾಕಷ್ಟು ಸಹಾಯ ಮಾಡಿದೆ. ನೀವು ಸಮಗ್ರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಬಯಸುವವರಾಗಿದ್ದರೆ 60% ಡಯಟ್ ಮತ್ತು 40% ವರ್ಕೌಟ್ ನಿಯಮವನ್ನು ಅನುಸರಿಸಿ ಎಂದು ಆವಂತಿಕಾ ಹೇಳುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ