Weight Loss

Weight Loss

ತೂಕ ಇಳಿಸಿಕೊಳ್ಳುವುದು ಕೇವಲ ಸುಂದರವಾಗಿ ಕಾಣಲು ಮಾತ್ರವಲ್ಲ; ಆರೋಗ್ಯಕ್ಕೂ ಬಹಳ ಅಗತ್ಯ. ದೇಹದ ತೂಕ ಅತಿಯಾದರೆ ಆ ಬೊಜ್ಜಿನಿಂದಾಗಿ ಡಯಾಬಿಟಿಸ್, ಅಧಿಕ ರಕ್ತದೊತ್ತಡ (ಬಿಪಿ), ಹೃದ್ರೋಗ ಸೇರಿದಂತೆ ಅನೇಕ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ, ತೂಕವನ್ನು ಕಡಿಮೆ ಮಾಡಿಕೊಳ್ಳಲು ನಮ್ಮ ಡಯೆಟ್​ನಲ್ಲಿ ಫೈಬರ್, ಕ್ಯಾಲ್ಸಿಯಂ, ಐರನ್, ಅಧಿಕ ನೀರಿನಂಶವಿರುವ ಆಹಾರಗಳನ್ನು ಹೆಚ್ಚು ಸೇರಿಸಿಕೊಳ್ಳಬೇಕು. ಇದರ ಜೊತೆಗೆ ದಿನನಿತ್ಯ 30 ನಿಮಿಷಗಳ ವಾಕಿಂಗ್ ಅಥವಾ ಜಾಗಿಂಗ್, ಲಘು ವ್ಯಾಯಾಮಗಳು ಕೂಡ ಅತ್ಯಗತ್ಯ. ಆದರೆ, ತೂಕ ಇಳಿಸಿಕೊಳ್ಳಲು ಅತಿಯಾದ ಮೆಡಿಸಿನ್ಗಳನ್ನು ಸೇವಿಸಬೇಡಿ. ಇದರ ಬದಲು ಆರೋಗ್ಯಕರ ರೀತಿಯಲ್ಲೇ ತೂಕ ಇಳಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಯಾವ ರೀತಿಯ ಅಡ್ಡಪರಿಣಾಮಗಳೂ ಆಗದಂತೆ ಎಚ್ಚರ ವಹಿಸಬಹುದಾಗಿದೆ.

ಇನ್ನೂ ಹೆಚ್ಚು ಓದಿ

Weight Loss: ತೂಕ ಇಳಿಸಲು ಪ್ರಯತ್ನಿಸುತ್ತಿದ್ದೀರಾ?; ರಾತ್ರಿ ಈ 5 ಆಹಾರ ಸೇವಿಸಬೇಡಿ

ತೂಕ ಇಳಿಸಿಕೊಳ್ಳಬೇಕೆಂಬುದು ದಪ್ಪವಿರುವ ಬಹುತೇಕ ಜನರ ದೊಡ್ಡ ಗುರಿ. ಇದಕ್ಕೆ ವ್ಯಾಯಾಮ, ಜಾಗಿಂಗ್, ದೈಹಿಕ ಚಟುವಟಿಕೆಯ ಜೊತೆಗೆ ನಾವು ಸೇವಿಸುವ ಆಹಾರವೂ ಕಾರಣವಾಗುತ್ತದೆ. ತೂಕ ಇಳಿಸುವ ಆಹಾರವು ನಮ್ಮ ದೇಹದೊಳಗಿನ ಹೆಚ್ಚುವರಿ ಕೊಬ್ಬನ್ನು ಸುಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

Almond Oil: ಬಾದಾಮಿ ಎಣ್ಣೆಯನ್ನು ಏಕೆ ಸೇವಿಸಬೇಕು? ಇಲ್ಲಿವೆ 10 ಕಾರಣ

ಬಾದಾಮಿ ಬಹಳ ಪೌಷ್ಟಿಕಾಂಶಯುಕ್ತವಾದ ಡ್ರೈಫ್ರೂಟ್ ಆಗಿದೆ. ಬಾದಾಮಿ ಕೊಬ್ಬಿನಲ್ಲಿ ಬಹಳ ಸಮೃದ್ಧವಾಗಿವೆ, ಇದು ಎಣ್ಣೆಯ ಪರಿಪೂರ್ಣ ಮೂಲವಾಗಿದೆ. ಸಿಹಿ ಬಾದಾಮಿಗಳನ್ನು ಸಾಮಾನ್ಯವಾಗಿ ತಿನ್ನಲಾಗುತ್ತದೆ ಮತ್ತು ಆಹಾರಗಳು, ಎಣ್ಣೆಗಳು ಮತ್ತು ಸೌಂದರ್ಯವರ್ಧಕಗಳನ್ನು ತಯಾರಿಸಲು ಬಳಸಲಾಗುತ್ತದೆ. ಕಹಿ ಬಾದಾಮಿಯು ಔಷಧೀಯ ಗುಣಗಳನ್ನು ಹೊಂದಿದೆ. ಆದರೆ, ಅವುಗಳನ್ನು ಸರಿಯಾಗಿ ಸಂಸ್ಕರಿಸದಿದ್ದಲ್ಲಿ ವಿಷಕಾರಿಯಾಗಬಹುದು.

Weight Loss: ತೂಕ ಇಳಿಸಬೇಕಾ? ಈ ತಪ್ಪುಗಳನ್ನೆಂದೂ ಮಾಡಬೇಡಿ

ತೂಕ ಇಳಿಸಲು ಬಹಳ ಪ್ರಯತ್ನ ಪಡುತ್ತೀರಾ? ತೂಕ ಇಳಿಸಲು ವ್ಯಾಯಾಮ, ಜಿಮ್ ವರ್ಕ್​ಔಟ್, ಡಯೆಟ್ ಮಾಡುವವರು ಮಾಡುವ ಕೆಲವು ಸಾಮಾನ್ಯ ತಪ್ಪುಗಳಿಂದಾಗಿ ತೂಕ ಇಳಿಸಲು ಕಷ್ಟವಾಗುತ್ತದೆ. ಅವರ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಯಶಸ್ವಿಯಾಗಿ ತೂಕ ಇಳಿಸಿಕೊಳ್ಳಬಹುದು.

Weight Loss Tips: ಬೇಸಿಗೆಯಲ್ಲಿ ಹೈಡ್ರೇಟ್ ಮಾಡಲು ಮಾತ್ರವಲ್ಲ ತೂಕ ಇಳಿಸುವವರೂ ಸೌತೆಕಾಯಿ ತಿನ್ನಿ

ಬೇಸಿಗೆಯಲ್ಲಿ ತೂಕ ಇಳಿಸಲು ಬಹುತೇಕ ಜನರು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಬೇಸಿಗೆಯಲ್ಲಿ ಮೈ ಸಿಕ್ಕಾಪಟ್ಟೆ ಬೆವರುವುದರಿಂದ ಇದು ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತದೆ. ಮತ್ತು ಪ್ರತಿಯೊಬ್ಬರೂ ಗಮನಹರಿಸಬೇಕಾದ ಒಂದು ವಿಷಯವೆಂದರೆ ಅತಿಯಾದ ಬೆವರುವಿಕೆಯಿಂದ ನಿಮ್ಮನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವುದು ಬಹಳ ಸವಾಲಿನ ಕೆಲಸ. ನಿಮ್ಮ ದೇಹವನ್ನು ಹೈಡ್ರೇಟ್ ಮಾಡಲು ದ್ರವ ಪದಾರ್ಥ ಮತ್ತು ನೀರಿನಂಶ ಹೆಚ್ಚಾಗಿರುವ ಆಹಾರವನ್ನು ಹೆಚ್ಚು ಸೇವಿಸಬೇಕು.

Weight Loss Tips: ವೇಗವಾಗಿ ತೂಕ ಇಳಿಸಲು ಈ 7 ಹಣ್ಣುಗಳನ್ನು ತಿನ್ನಿ

ಒತ್ತಡದ ಜೀವನ, ವೇಗದ ಜೀವನಶೈಲಿ, ಇಡೀ ದಿನ ಕುಳಿತುಕೊಂಡು ಕೆಲಸ ಮಾಡುವುದು, ಕಳಪೆ ಆಹಾರ ಪದ್ಧತಿ ಹೀಗೆ ನಾನಾ ಕಾರಣಗಳಿಂದ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುವ ಕೆಲವು ಹಣ್ಣುಗಳ ಬಗ್ಗೆ ಮಾಹಿತಿ ಇಲ್ಲಿದೆ.

ನಿಯಮಿತವಾಗಿ ಏಕೆ ಸೈಕಲ್ ಓಡಿಸಬೇಕು? ಇದರಿಂದ ಏನು ಉಪಯೋಗ?

ಆರೋಗ್ಯವಂತರಾಗಿರಲು ನೀವು ದೈಹಿಕವಾಗಿ ಸಕ್ರಿಯರಾಗಿರಬೇಕು. ನಿಯಮಿತ ದೈಹಿಕ ಚಟುವಟಿಕೆಯು ಬೊಜ್ಜು, ಹೃದ್ರೋಗ, ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆ, ಮಧುಮೇಹ ಮತ್ತು ಸಂಧಿವಾತದಂತಹ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದಕ್ಕೆ ನಿಮಗೆ ಸೈಕ್ಲಿಂಗ್ ಸಹಾಯ ಮಾಡುತ್ತದೆ.

ಹಾಲಿಗೆ ಇಸಾಬ್ಗೋಲ್ ಹಾಕಿ ಕುಡಿಯುವುದರಿಂದ ಆರೋಗ್ಯಕ್ಕೆ ಏನು ಉಪಯೋಗ?

Isabgol Health Benefits: ಇಸಾಬ್ಗೋಲ್ ಅನ್ನು ಸೈಲಿಯಮ್ ಹಸ್ಕ್ ಎಂದೂ ಕರೆಯುತ್ತಾರೆ. ಇದು ಆಹಾರದ ಫೈಬರ್ ಆಗಿದ್ದು, ಮಲವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಗೆ ಸಾಮಾನ್ಯವಾಗಿ ಬಳಸುವ ಮನೆಮದ್ದುಗಳಲ್ಲಿ ಒಂದಾಗಿದೆ. ಇಸಾಬ್ಗೋಲ್ ಅನ್ನು ಹಾಲಿಗೆ ಹಾಕಿ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ತೂಕ ಇಳಿಸಲು ಸ್ವಿಮ್ಮಿಂಗ್ ಒಳ್ಳೆಯದಾ? ಸೈಕ್ಲಿಂಗ್ ಉತ್ತಮವಾ?

ನೀವೇನಾದರೂ ತೂಕ ಇಳಿಸಿಕೊಳ್ಳಲು ಮನಸು ಮಾಡಿದ್ದರೆ ಈಗಾಗಲೇ ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿರುತ್ತೀರಿ. ಅದರಲ್ಲಿ ಸೈಕ್ಲಿಂಗ್, ಸ್ವಿಮ್ಮಿಂಗ್ ಕೂಡ ಸೇರಿರಬಹುದು. ಆದರೆ, ಬೇಗ ತೂಕ ಇಳಿಸಲು ಈಜುವುದು ಒಳ್ಳೆಯದಾ? ಅಥವಾ ಸೈಕ್ಲಿಂಗ್ ಉತ್ತಮವಾ? ಇಲ್ಲಿದೆ ಮಾಹಿತಿ.

ತೂಕ ಇಳಿಸಿಕೊಳ್ಳಲು ಮಧ್ಯಂತರ ಉಪವಾಸ ಮಹಿಳೆಯರಿಗೆ ಸುರಕ್ಷಿತವೇ?

ಮಧ್ಯಂತರ ಉಪವಾಸವು ಜನರು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಮತ್ತು ಕೊಬ್ಬಿನ ಉತ್ತಮ ನಿಯಂತ್ರಣದೊಂದಿಗೆ ಉತ್ತಮ ಆರೋಗ್ಯವನ್ನು ಪಡೆಯಲು ಸಹಾಯ ಮಾಡುತ್ತದೆ ಎಂಬುದು ನಿಜ. ಆದರೆ, ತಜ್ಞರ ಪ್ರಕಾರ, ಈ ಮಧ್ಯಂತರ ಉಪವಾಸ ಆಹಾರ ಯೋಜನೆ ಮಹಿಳೆಯರಿಗೆ ಒಳ್ಳೆಯದಲ್ಲ.

Weight Loss: ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಈ 5 ಹಣ್ಣುಗಳನ್ನು ತಿನ್ನಿ

Summer Fruits: ಬೇಸಿಗೆ ಶುರುವಾಗಿದೆ. ಬೇಸಿಗೆ ಕಾಲದಲ್ಲಿ ಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ನೀರಿನಂಶ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಕಾರಣದಿಂದಲೇ ಬೇಸಿಗೆಯಲ್ಲಿ ಹೆಚ್ಚು ಹಣ್ಣುಗಳನ್ನು ತಿನ್ನಲು ವೈದ್ಯರು, ಡಯೆಟಿಷಿಯನ್​ಗಳು ಶಿಫಾರಸು ಮಾಡುತ್ತಾರೆ. ಆದರೆ, ಹಣ್ಣುಗಳನ್ನು ತಿನ್ನುವುದರಿಂದ ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳುವುದು ಕೂಡ ಸುಲಭವಾಗುತ್ತದೆ ಎಂಬುದು ನಿನಗೆ ಗೊತ್ತಾ?

ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ