AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಯಾರಾದರೂ ಪ್ರೀತಿಸುವಂತೆ ನಾಟಕ ಮಾಡುತ್ತಿದ್ದರೆ ಎಂದು ತಿಳಿದುಕೊಳ್ಳವ ಸಂಕೇತಗಳೇನು? ಇಲ್ಲಿದೆ ನೋಡಿ

ಯಾರಾದರೂ ನಿಮ್ಮನ್ನು ಪ್ರೀತಿಸುತ್ತಿರುವಂತೆ ನಟಿಸುತ್ತಿದ್ದಾರೆ ಎಂಬುದಕ್ಕೆ ಏನಾದರೂ ಸಂಕೇತಗಳಿವೆಯಾ? ಅವರನ್ನು ನಂಬುವುದು ಹೇಗೆ? ನಿಮ್ಮ ಅವರ ಮಧ್ಯೆ ಯಾವ ರೀತಿಯ ನಡವಳಿಕೆಗಳಿರುತ್ತವೆ ಎಂಬುದರ ಬಗ್ಗೆ ತಿಳಿದುಕೊಂಡರೆ ತುಂಬಾ ಒಳಿತು. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Relationship: ಯಾರಾದರೂ ಪ್ರೀತಿಸುವಂತೆ ನಾಟಕ ಮಾಡುತ್ತಿದ್ದರೆ ಎಂದು ತಿಳಿದುಕೊಳ್ಳವ ಸಂಕೇತಗಳೇನು? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: May 10, 2023 | 3:53 AM

Share

ನೀವು ಯಾರನ್ನೋ ಇಷ್ಟ ಪಟ್ಟಿರುತ್ತೀರಿ. ಆದರೆ ಅವರ ಹಾವ-ಭಾವಗಳು ನಿಮಗೆ ಅನುಮಾನ ಹುಟ್ಟಿಸುತ್ತವೆ. ಅವರು ನಿಜವಾಗಿಯೂ ನಿಮ್ಮನ್ನು ಇಷ್ಟ ಪಡುತ್ತಾರೋ, ಇಲ್ಲವೋ ಎಂಬುದೇ ನಿಮಗೆ ಗೊಂದಲ ಹುಟ್ಟಿಸಿರುತ್ತದೆ. ಅಂತಹ ಸಂದರ್ಭಗಳಲ್ಲಿ ನೀವು ನಿಮ್ಮ ನಿರ್ಧಾರಗಳನ್ನು ಬಲಪಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಸರಿಯೋ ತಪ್ಪೋ ಎಂದು ನೀವೇ ನಿರ್ಧರಿಸಬೇಕಾಗುತ್ತದೆ.

ನಿಮ್ಮ ಗೆಳೆಯ ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಾನೆಯೇ ಎಂದು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ, ವಿಶೇಷವಾಗಿ ಅವನು ತನ್ನ ನಿಜವಾದ ರೂಪವನ್ನು ನಿಮಗೆ ತೋರಿಸಿರುವುದಿಲ್ಲ. ಎಲ್ಲ ವಿಷಯಗಳಲ್ಲಿಯೂ ತನ್ನ ಗುಣ, ವರ್ತನೆಯನ್ನು ಮರೆಮಾಚುವಲ್ಲಿ ತುಂಬಾ ನಿಪುಣನಾಗಿರುತ್ತಾನೆ. ನೀವು ಕೇಳಿರಬಹುದು ಊಸರವಳ್ಳಿ ಎಂಬ ಪದವನ್ನು, ಇದೆ ರೀತಿಯಲ್ಲಿ ವರ್ತಿಸುವ ಜನರನ್ನು ನಂಬುವುದು ತುಂಬಾ ಕಷ್ಟವೇ ಸರಿ. ಅವರು ತಮ್ಮ ವ್ಯಕ್ತಿತ್ವಗಳನ್ನು ವೇಗವಾಗಿ ಬದಲಾಯಿಸಬಹುದು, ಆ ವ್ಯಕ್ತಿ ನಿಜವಾಗಿಯೂ ಯಾರೆಂದು ನಿಮಗೆ ಯಾವುದೇ ಸಂದರ್ಭಗಳನ್ನೂ ಅರ್ಥಮಾಡಿಕೊಳ್ಳಲು ಆಗದಷ್ಟು ಬದಲಾಗುತ್ತಾನೆ. ಆದರೆ ನಿಮ್ಮ ಮನಸ್ಸಿನಲ್ಲಿ, ನಿಮ್ಮ ಗೆಳೆಯನ ಪ್ರೀತಿಯ ಬಗ್ಗೆ ಕನಿಷ್ಠ ಸ್ವಲ್ಪ ಗೊಂದಲವಿದ್ದರೆ, ನೀವು ಅದನ್ನು ಸರಿಪಡಿಸಿಕೊಳ್ಳಲೇ ಬೇಕು. ಅದು ಹೇಗೆ? ಎಂಬುದು ನಿಮ್ಮ ಪ್ರಶ್ನೆಯಾದರೆ ಇಲ್ಲಿದೆ ಉತ್ತರ. ನೀವು ಮುಖ್ಯವಾಗಿ ಗಮನಿಸಬೇಕಾದ ಕೆಲವು ಲಕ್ಷಣಗಳು ಇಲ್ಲಿವೆ. ಇವು ನಿಮ್ಮ ಜೀವನದಲ್ಲಿಯೂ ನಡೆಯುತ್ತಿದ್ದರೆ ನೀವು ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

-ನಿಮ್ಮನ್ನು ಪ್ರೀತಿಸುವುದಾಗಿ ನಟಿಸುವ ವ್ಯಕ್ತಿಯು ನಿಮ್ಮ ಮುಂದೆ ಅಸಮಂಜಸ ನಡವಳಿಕೆಯನ್ನು ಪ್ರದರ್ಶಿಸಬಹುದು. ಅಂದರೆ ಒಂದು ದಿನ ನಿಮ್ಮನ್ನು ತುಂಬಾ ಅಕ್ಕರೆಯಿಂದ ಮಾತನಾಡಿಸಿ, ನಿಮ್ಮ ಬಗ್ಗೆ ಅತಿಯಾದ ಕಾಳಜಿ ತೋರಿಸಿ, ಮರುದಿನ ಅದೆಲ್ಲದರಿಂದ ಹಿಂದೆ ಸರಿಯುತ್ತಾನೆ ಅಥವಾ ಭಾವನಾತ್ಮಕವಾಗಿ ದೂರವಿರುತ್ತಾನೆ. ಈ ಅಸಂಗತತೆಯು ನಿಮ್ಮ ಬಗ್ಗೆ ಅವನ ಭಾವನೆಗಳ ಬಗ್ಗೆ ನಿಮಗೆ ಗೊಂದಲ ಮತ್ತು ಅನಿಶ್ಚಿತತೆಯನ್ನು ಉಂಟುಮಾಡಬಹುದು.

-ಒಬ್ಬ ಮನುಷ್ಯನು ನಿಮ್ಮನ್ನು ಪ್ರೀತಿಸುತ್ತಿರುವಂತೆ ನಟಿಸುತ್ತಿರಬಹುದು ಎಂಬುದರ ಮತ್ತೊಂದು ಸಂಕೇತವೆಂದರೆ ಅವನು ನಿಮ್ಮೊಂದಿಗೆ ದೈಹಿಕವಾಗಿ ನಿಕಟವಾಗಿರಲು ಮಾತ್ರ ಆಸಕ್ತಿ ಹೊಂದಿದ್ದಾನೆ ಎಂಬುದು. ಅವನು ನಿಮಗೆ ತುಂಬಾ ಆತ್ಮೀಯವಾಗಿದ್ದಾನೆ ಎನಿಸಬಹುದು ಆದರೆ ಅದು ಅವನು ಬಯಸಿದಾಗ ಮಾತ್ರ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಅವನು ನಿಮ್ಮ ಭಾವನಾತ್ಮಕ ಅಗತ್ಯಗಳ ಬಗ್ಗೆ ಕಡಿಮೆ ಆಸಕ್ತಿ ತೋರಿಸಬಹುದು ಅಥವಾ ಲೈಂಗಿಕವಾಗಿ ಬಳಸಿಕೊಳ್ಳಬೇಕು ಎಂದಾಗ ಮಾತ್ರ ನಿಮ್ಮೊಂದಿಗೆ ಒಳ್ಳೆ ರೀತಿಯಲ್ಲಿ ಸಮಯ ಕಳೆಯಬಹುದು.

-ಒಬ್ಬ ಮನುಷ್ಯನು ನಿಮ್ಮನ್ನು ಪ್ರೀತಿಸುತ್ತಿರುವಂತೆ ನಟಿಸುತ್ತಿದ್ದರೆ, ಅವನು ಭಾವನಾತ್ಮಕವಾಗಿ ಬೇರೆಯಬಹುದಾದ ಅನ್ಯೋನ್ಯತೆಯನ್ನು ತಪ್ಪಿಸಬಹುದು. ಅವರು ತಮ್ಮ ಭಾವನೆಗಳ ಬಗ್ಗೆ ಮಾತನಾಡಲು ಅಥವಾ ನಿಮ್ಮೊಂದಿಗೆ ತಮ್ಮ ಜೀವನವನ್ನು ಹಂಚಿಕೊಳ್ಳಲು ಹಿಂಜರಿಯಬಹುದು. ನಿಮ್ಮೊಂದಿಗೆ ತನ್ನ ಭವಿಷ್ಯದ ಯೋಜನೆಗಳನ್ನು ಚರ್ಚಿಸುವುದನ್ನು ತಪ್ಪಿಸಬಹುದು. ನಿಮ್ಮ ಭಾವನೆಗಳಿಗೆ ಬೆಲೆ ಕೊಡದೆ ಹೋಗಬಹುದು. ಜೊತೆಗೆ ಅವುಗಳ ಬಗ್ಗೆ ಮಾತನಾಡಲು ನಿರಾಕರಿಸಬಹುದು.

-ನಿಮ್ಮನ್ನು ಪ್ರೀತಿಸುವವನು ನಿಮ್ಮನ್ನು ಗೌರವದಿಂದ ಪರಿಗಣಿಸದಿರಬಹುದು. ಅವನು ನಿಮ್ಮ ಭಾವನೆಗಳನ್ನು ಕಡೆಗಣಿಸಬಹುದು, ನಿಮ್ಮ ಅಭಿಪ್ರಾಯಗಳನ್ನು ತಳ್ಳಿಹಾಕಬಹುದು ಅಥವಾ ನಿಮ್ಮ ಸಾಧನೆಗಳನ್ನು ಕಡೆಗಣಿಸಬಹುದು. ಎಲ್ಲ ವಿಷಯಗಳಲ್ಲಿಯೂ ಅವನು ನಿಮ್ಮನ್ನು ನಿಯಂತ್ರಿಸುತ್ತಿರಬಹುದು. ಅವನು ನಿಮ್ಮನ್ನು ‘ಪರಿಪೂರ್ಣ’ ಸಂಗಾತಿಯ ಕಲ್ಪನೆಗೆ ಸರಿಹೊಂದುವ ವ್ಯಕ್ತಿಯಾಗಿ ನಿಮ್ಮನ್ನು ರೂಪಿಸಲು ಪ್ರಯತ್ನಿಸುತ್ತಿರಬಹುದು. ನಿಮ್ಮ ನಿಜವಾದ, ವ್ಯಕ್ತಿತ್ವವನ್ನು ಸ್ವೀಕರಿಸದೆಯೇ, ಅವರಿಗೆ ಬೇಕಾದಂತೆ ನಿಮ್ಮನ್ನು ಬದಲಾಯಿಸಲು ನೋಡಬಹುದು. ಈಗಾಗಲೇ ಬದಲಾಯಿಸಿಯೂ ಇರಬಹುದು.

ಇದನ್ನೂ ಓದಿ:Relationship: ನಿಮ್ಮ ದಾಂಪತ್ಯ ಸಂಬಂಧದಲ್ಲಿ ಈ ಕಷ್ಟ ಎದುರಾಗಬಹುದು? ಇದಕ್ಕೆ ಕಾರಣ ಇಲ್ಲಿದೆ

-ಅವನು ಎಂದಿಗೂ ಪಾಲಿಸದ ಭರವಸೆಗಳು ಅಥವಾ ಬದ್ಧತೆಗಳನ್ನು ನಿಮಗೆ ನೀಡಬಹುದು. ಅಥವಾ ಅವನ ಕ್ರಿಯೆಗಳಿಗೆ ವಿರುದ್ಧವಾದ ವಿಷಯಗಳನ್ನು ಹೇಳಬಹುದು. ಈ ಅಸಂಗತತೆಯು ಅವನ ಉದ್ದೇಶಗಳ ಬಗ್ಗೆ ಮತ್ತು ಅವನು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಾನೆಯೇ ಎಂಬುದರ ಬಗ್ಗೆ ನಿಮಗೆ ಅನಿಶ್ಚಿತತೆಯನ್ನು ಉಂಟುಮಾಡಬಹುದು.

ಇವೆಲ್ಲವೂ ನಿಮ್ಮ ಸಂಬಂಧಗಳ ಬೆಸುಗೆಗೆ ಮಾರಕವಾಗುವಂಥದ್ದು, ಇಂತಹ ಪರಿಸ್ಥಿತಿಯನ್ನು ನೀವು ಎದುರಿಸುತ್ತಿದ್ದೀರಿ ಎಂದರೆ ಈಗಲೇ ಎಚ್ಛೆತ್ತುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಮುಂದೆ ಮೋಸ ಹೋಗುವುದು ನೀವೇ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ