AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಪದೇ ಪದೇ ಎಸಿ ಆನ್, ಆಫ್ ಮಾಡುತ್ತಿದ್ದರೆ ಏನಾಗುತ್ತದೆ?

ನಿಮಗೂ ಪದೇಪದೆ ಎಸಿಯನ್ನು ಆನ್ ಮತ್ತು ಆಫ್ ಮಾಡುವ ಅಭ್ಯಾಸವಿದೆಯೇ? ಹಾಗಾದರೆ ಈ ಸುದ್ದಿಯನ್ನು ತಪ್ಪದೆ ಓದಿ. ಎಸಿ ಕೇವಲ ಗಾಳಿಯನ್ನು ತಂಪು ಮಾಡುವುದಷ್ಟೇ ಅಲ್ಲ, ರೂಮಿನೊಳಗಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಎಸಿಯನ್ನು ಪದೇ ಪದೇ ಆಫ್ ಮಾಡುವುದರಿಂದ ರೂಮಿನಲ್ಲಿ ಮತ್ತೆ ತೇವಾಂಶ ಹೆಚ್ಚಾಗಿ, ಸೆಖೆ ಉಂಟಾಗುತ್ತದೆ. ಇಷ್ಟೇ ಅಲ್ಲ, ಎಸಿಯನ್ನು ಆಗಾಗ ಆನ್, ಆಫ್ ಮಾಡುವುದರಿಂದ ಇನ್ನಷ್ಟು ಸಮಸ್ಯೆಗಳು ಉಂಟಾಗುತ್ತವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ನೀವು ಪದೇ ಪದೇ ಎಸಿ ಆನ್, ಆಫ್ ಮಾಡುತ್ತಿದ್ದರೆ ಏನಾಗುತ್ತದೆ?
Ac
ಸುಷ್ಮಾ ಚಕ್ರೆ
|

Updated on: May 27, 2026 | 9:13 PM

Share

ನವದೆಹಲಿ, ಮೇ 27: ಈ ಬಾರಿಯ ಬೇಸಿಗೆ ಜೋರಾಗಿದೆ. ಹಲವೆಡೆ ಉಷ್ಣಅಲೆ (Heat Wave)  ಉಂಟಾಗಿದೆ. ಬಿಸಿಲಿನಿಂದಾಗಿ ಜನರು ಪರದಾಡುತ್ತಿದ್ದಾರೆ. ಸೆಖೆಯನ್ನು ಸಹಿಸಲಾಗದೆ ಫ್ಯಾನ್‌ಗಳು, ಕೂಲರ್‌ಗಳು ಮತ್ತು ಎಸಿಗಳನ್ನು (AC) ಬಳಸುತ್ತಿದ್ದಾರೆ. ಫ್ಯಾನ್​ನಲ್ಲೂ ಸೆಖೆ ನೀಗದೆ ಎಸಿ ಬಳಸುತ್ತಿದ್ದಾರೆ. ಆದರೆ, ಕೆಲವರಿಗೆ ರೂಂ ತಂಪಾದಾಗ ಎಸಿ ಆಫ್ ಮಾಡಿ, ಮತ್ತೆ ಸೆಖೆ ಅನಿಸಿದಾಗ ಅದನ್ನು ಆನ್ ಮಾಡುವ ಅಭ್ಯಾಸವಿದೆ. ನಿಮಗೂ ಆ ಅಭ್ಯಾಸವಿದೆಯೇ? ಈ ರೀತಿ ಪದೇ ಪದೇ ಎಸಿ ಆನ್ ಮತ್ತು ಆಫ್ ಮಾಡುವುದರಿಂದ ಗಂಭೀರ ಹಾನಿ ಉಂಟಾಗುತ್ತದೆ ಎಂದು ನಿಮಗೆ ಗೊತ್ತಾ?

ಪದೇಪದೆ ಎಸಿ ಆಫ್ ಮತ್ತು ಆನ್ ಮಾಡುವುದರಿಂದ ಏನಾಗುತ್ತದೆ?:

ವಿದ್ಯುತ್ ಬಿಲ್ ತೀವ್ರವಾಗಿ ಹೆಚ್ಚಾಗುತ್ತದೆ:

ಅನೇಕರು ರೂಮ್ ತಣ್ಣಗಾದ ತಕ್ಷಣ ಏಸಿ ಆಫ್ ಮಾಡಿ, ಮತ್ತೆ ಸೆಖೆಯಾದಾಗ ಆನ್ ಮಾಡುತ್ತಾರೆ. ಹೀಗೆ ಮಾಡುವುದರಿಂದ ಕರೆಂಟ್ ಬಿಲ್ ಉಳಿಯುವುದಿಲ್ಲ, ಬದಲಿಗೆ ಹೆಚ್ಚಾಗುತ್ತದೆ. ಪ್ರತಿ ಬಾರಿ ನಾವು ಎಸಿ ಆಫ್ ಮಾಡಿ ಮತ್ತೆ ಆನ್ ಮಾಡಿದಾಗ, ಎಸಿ ಮೋಟಾರ್ ಮತ್ತೆ ಕೊಠಡಿಯನ್ನು ತಂಪಾಗಿಸಲು ಹೆಚ್ಚಿನ ಶಕ್ತಿಯನ್ನು ಬಳಸಬೇಕಾಗುತ್ತದೆ. ಇದು ವಿದ್ಯುತ್ ಬಳಕೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ನಿಮ್ಮ ತಿಂಗಳ ವಿದ್ಯುತ್ ಬಿಲ್ ಅನಿರೀಕ್ಷಿತವಾಗಿ ಹೆಚ್ಚಾಗುತ್ತದೆ.

ಇದನ್ನೂ ಓದಿ: ಹೆಚ್ಚು ಸಮಯ ಎಸಿಯಲ್ಲಿ ಇರುವವರಿಗೆ ಉಸಿರಾಟ ಮತ್ತು ಚರ್ಮದ ಸಮಸ್ಯೆ ಕಂಡುಬರುವುದಕ್ಕೆ ಕಾರಣ ಏನ್ ಗೊತ್ತಾ?

ಕಂಪ್ರೆಸರ್ ಮೇಲೆ ಒತ್ತಡ ಬೀಳುತ್ತದೆ:

ನೀವು ಪದೇ ಪದೇ ಆನ್-ಆಫ್ ಮಾಡಿದಾಗ ಕಂಪ್ರೆಸರ್ ಪ್ರತಿ ಬಾರಿಯೂ ತೀವ್ರ ಪ್ರಮಾಣದ ವಿದ್ಯುತ್ ಬಳಸಿಕೊಳ್ಳುತ್ತದೆ. ಅದೇ ಎಸಿ ಸತತವಾಗಿ ಆನ್ ಆಗಿದ್ದರೆ, ರೂಮ್ ತಾಪಮಾನಕ್ಕೆ ತಕ್ಕಂತೆ ಅದು ಕಡಿಮೆ ಕರೆಂಟ್ ಬಳಸುತ್ತದೆ. ಪದೇ ಪದೇ ಎಸಿ ಆಫ್ ಮಾಡಿ ಆನ್ ಮಾಡುವುದರಿಂದ ಅದರ ಮುಖ್ಯ ಘಟಕವಾದ ಕಂಪ್ರೆಸರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದು ಅಧಿಕ ಬಿಸಿಯಾಗಲು ಕಾರಣವಾಗುತ್ತದೆ ಮತ್ತು ಕಂಪ್ರೆಸರ್‌ನ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.

ಆಂತರಿಕ ಘಟಕಗಳು ಹಾನಿಗೊಳಗಾಗುತ್ತವೆ:

ACಯನ್ನು ಪದೇ ಪದೇ ಆನ್ ಮತ್ತು ಆಫ್ ಮಾಡುವುದರಿಂದ ACಯಲ್ಲಿರುವ ಆಂತರಿಕ ವಿದ್ಯುತ್ ಘಟಕಗಳು, ವೈರಿಂಗ್ ಮತ್ತು ಕೆಪಾಸಿಟರ್‌ಗಳು ಹಾನಿಗೊಳಗಾಗಬಹುದು. ಕೆಲವೊಮ್ಮೆ, ಶಾರ್ಟ್ ಸರ್ಕ್ಯೂಟ್‌ಗಳಿಂದಾಗಿ ಅವು ಸುಟ್ಟುಹೋಗುವ ಅಪಾಯವಿರುತ್ತದೆ.

ರೂಮ್ ಸರಿಯಾಗಿ ತಂಪಾಗುವುದಿಲ್ಲ:

ಎಸಿ ಆನ್ ಮಾಡಿದ ತಕ್ಷಣ ಇಡೀ ರೂಮ್ ತಂಪಾಗುವುದಿಲ್ಲ. ರೂಮಿನಲ್ಲಿರುವ ಗೋಡೆಗಳು, ಪೀಠೋಪಕರಣಗಳು ಎಲ್ಲವೂ ತಣ್ಣಗಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ನೀವು ರೂಮ್ ತಣ್ಣಗಾಗುವ ಮುನ್ನವೇ ಪದೇ ಪದೇ ಆಫ್ ಮಾಡುತ್ತಿದ್ದರೆ, ರೂಮಿನ ತಾಪಮಾನ ಏರುಪೇರಾಗುತ್ತಲೇ ಇರುತ್ತದೆ. ಇದರಿಂದ ನಿಮಗೆ ಸರಿಯಾದ ತಂಪು ವಾತಾವರಣ ಸಿಗುವುದಿಲ್ಲ.

ಇದನ್ನೂ ಓದಿ: ಸೆಖೆ ತಡೆಯಲಾಗದೆ ಎಸಿ ಕೊಡಿಸಿ ಎಂದ ಪತ್ನಿಗೆ ನೋ ಎಂದ ಗಂಡ; ಆಮೇಲಾಗಿದ್ದು ದುರಂತ!

ಆದ್ದರಿಂದ, ಎಸಿಯನ್ನು ಪದೇ ಪದೇ ಆನ್-ಆಫ್ ಮಾಡುವ ಬದಲು, ಒಂದು ನಿರ್ದಿಷ್ಟ ಮತ್ತು ಆರಾಮದಾಯಕ ತಾಪಮಾನಕ್ಕೆ (ಉದಾಹರಣೆಗೆ: 24C ಅಥವಾ 25C) ಸೆಟ್ ಮಾಡಿ ಹಾಗೇ ಬಿಡುವುದು ವಿದ್ಯುತ್ ಉಳಿತಾಯ ಮತ್ತು ಎಸಿಯ ಆಯಸ್ಸಿನ ದೃಷ್ಟಿಯಿಂದ ಅತ್ಯಂತ ಒಳ್ಳೆಯದು.

AC ಬಳಸುವ ಸರಿಯಾದ ವಿಧಾನ:

ಎಸಿಯನ್ನು ಪದೇ ಪದೇ ಆಫ್ ಮಾಡಿ ಆನ್ ಮಾಡುವ ಬದಲು, ಅದನ್ನು ಯಾವಾಗಲೂ 24ರಿಂದ 26 ಡಿಗ್ರಿ ಸೆಲ್ಸಿಯಸ್‌ನ ಸ್ಥಿರ ತಾಪಮಾನದಲ್ಲಿ ಚಲಾಯಿಸುವುದು ಉತ್ತಮ. ಈ ತಾಪಮಾನವು ನಮ್ಮ ದೇಹಕ್ಕೆ ಆರಾಮದಾಯಕವಾಗುವುದಲ್ಲದೆ, ವಿದ್ಯುತ್ ಬಿಲ್ ಅನ್ನು ಸಹ ಕಡಿಮೆ ಮಾಡುತ್ತದೆ. ನಿಮ್ಮ ಎಸಿ ರಿಮೋಟ್‌ನಲ್ಲಿ ಸ್ಲೀಪ್ ಮೋಡ್, ಇಕೋ ಮೋಡ್ ಮತ್ತು ಟೈಮರ್‌ನಂತಹ ವೈಶಿಷ್ಟ್ಯಗಳನ್ನು ಬಳಸುವ ಅಭ್ಯಾಸವನ್ನು ಮಾಡಿಕೊಳ್ಳಿ. ಕೋಣೆಯ ತಾಪಮಾನವನ್ನು ಅವಲಂಬಿಸಿ ಇವು ಸ್ವಯಂಚಾಲಿತವಾಗಿ ವಿದ್ಯುತ್ ಅನ್ನು ಸರಿಹೊಂದಿಸುತ್ತವೆ. ಅಲ್ಲದೆ, ಎಸಿ ಆನ್ ಆಗಿರುವಾಗ ಕೋಣೆಯ ಕಿಟಕಿಗಳು ಮತ್ತು ಬಾಗಿಲುಗಳು ಸಂಪೂರ್ಣವಾಗಿ ಮುಚ್ಚಲು ಮರೆಯಬೇಡಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​