AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ಟೇಕ್ ಆಫ್ ಆಗುವ ಮೊದಲು ಈ ಶಬ್ದ ಬರುತ್ತದೆ ಯಾಕೆ? ಇದು ಅಪಾಯದ ಮುನ್ನೆಚ್ಚರಿಕೆಯೇ?

ವಿಮಾನದಲ್ಲಿ ಬರುವ ಕೆಲವೊಂದು ಶಬ್ದಗಳು, ಪ್ರಯಾಣಿಕರಿಗೆ ಭಯ ಹುಟ್ಟಿಸಬಹುದು. ಆದರೆ ಈ ರೀತಿಯ ಶಬ್ದಗಳು ಯಾಕೆ ಬರುತ್ತದೆ ಎಂಬ ಬಗ್ಗೆ ನಿಮಗೆ ಗೊತ್ತಿರಲು ಸಾಧ್ಯವಿಲ್ಲ. ಹೆಚ್ಚಾಗಿ ವಿಮಾನ ಟೇಕ್ ಆಫ್ ಆಗುವಾಗ ಈ ಒಂದು ಭಯಾನಕ ಶಬ್ದವೊಂದು ಬರುತ್ತದೆ. ಆದರೆ ಇದು ಯಾವುದೇ ಅಪಾಯದ ಮುನ್ನೆಚ್ಚರಿಕೆ ಶಬ್ದವಲ್ಲ. ಮತ್ಯಾಕೆ ಈ ರೀತಿಯ ಶಬ್ದಗಳು ಬರುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ವಿಮಾನ ಟೇಕ್ ಆಫ್ ಆಗುವ ಮೊದಲು ಈ ಶಬ್ದ ಬರುತ್ತದೆ ಯಾಕೆ? ಇದು ಅಪಾಯದ ಮುನ್ನೆಚ್ಚರಿಕೆಯೇ?
ಸಾಂದರ್ಭಿಕ ಚಿತ್ರ Image Credit source: Getty Images
Follow us
ಮಾಲಾಶ್ರೀ ಅಂಚನ್​
| Updated By: ಸಾಯಿನಂದಾ

Updated on: May 08, 2025 | 4:19 PM

ವಿಮಾನದಲ್ಲಿ ಮೊದಲ ಬಾರಿ ಪ್ರಯಾಣಿಸುವವರು, ಈ ಬಗ್ಗೆ ತಿಳಿದುಕೊಳ್ಳಬೇಕು. ಇನ್ನು ಕೆಲವರಿಗೆ ವಿಮಾನದಲ್ಲಿ ಇರುವ ಕೆಲವೊಂದು ನಿಯಮಗಳು ಅಥವಾ ತಂತ್ರಜ್ಞಾನಗಳ ಬಗ್ಗೆ ಅರಿವು ಇರುವುದಿಲ್ಲ. ವಿಮಾನದಲ್ಲಿ ದೊಡ್ಡದಾಗಿ ಸೈರನ್ ಆಗುತ್ತದೆ ಅಥವಾ ಶಬ್ಧಗಳು ಸೃಷ್ಟಿಯಾಗುತ್ತದೆ. ಅದು ಯಾಕೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಈ ಶಬ್ದವು ಪವರ್ ಟ್ರಾನ್ಸ್‌ಫರ್ ಯೂನಿಟ್ (PTU) (Power Transfer Unit) ನಿಂದ ಬರುವ ಸಾಮಾನ್ಯ ಕಾರ್ಯಾಚರಣೆಯ ಶಬ್ದವಾಗಿದೆ. ಇದು ಹೈಡ್ರಾಲಿಕ್ ಪಂಪ್ ಆಗಿದ್ದು ಅದು ಸ್ವಯಂಚಾಲಿತವಾಗಿ ಈ ಶಬ್ದವನ್ನು ಉಂಟು ಮಾಡುತ್ತದೆ. ಈ ಶಬ್ದವು ಏಕ-ಎಂಜಿನ್ ಟ್ಯಾಕ್ಸಿ ಕಾರ್ಯಾಚರಣೆಗಳ ಸಮಯದಲ್ಲಿ ವಿಶೇಷವಾಗಿ ಆಗುತ್ತದೆ. ಈ ಬಗ್ಗೆ ಇಂಡಿಯಾನ್​​ ಎಕ್ಸ್​​​ಪ್ರಸ್ ಒಂದು ಮಾಹಿತಿಯನ್ನು ಹಂಚಿಕೊಂಡಿದೆ.

ಇದು ಟೇಕ್‌ಆಫ್‌ಗೆ ಮೊದಲು ಬಳಸಲಾಗುವ ಶಬ್ದವಾಗಿದೆ. ಇದು ಇಂಧನ-ಉಳಿತಾಯ ಅಳತೆಯಾಗಿದ್ದು,ಕೇವಲ ಒಂದು ಎಂಜಿನ್ ಮತ್ತು ಹೈಡ್ರಾಲಿಕ್ ವ್ಯವಸ್ಥೆಯು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ವಿಮಾನದ ಎಂಜಿನ್​​ನಲ್ಲಿ ಉಂಟಾಗುವ ಒತ್ತಡವನ್ನು ಮತ್ತೆ ಮರುಸ್ಥಾಪಿಸಲು PTU ಹೈಡ್ರಾಲಿಕ್ ವ್ಯವಸ್ಥೆಗಳ ನಡುವೆ ಇದು ಬದಲಾಗುತ್ತದೆ. ಇದು ಶಬ್ದವನ್ನು ಉತ್ಪಾದಿಸಲು ಹೈಡ್ರಾಲಿಕ್ ದ್ರವದ ಪರಸ್ಪರ ಸಂಪರ್ಕವನ್ನು ಸಾಧಿಸುತ್ತದೆ. ಯಾವ ಕಾರಣಕ್ಕೂ ಈ ಶಬ್ದವು ಯಾವುದೇ ಎಂಜಿನ್ ಸಮಸ್ಯೆಗಳು ಅಥವಾ ಅಪಾಯವನ್ನು ಸೂಚಿಸುವುದಿಲ್ಲ. ಇನ್ನು ವಿಮಾನದ ವಿಂಡೋ ಬಳಿ ಕುಳಿತುಕೊಂಡವರಿಗೆ ಮಾತ್ರ ಈ ಶಬ್ಧ ಕೇಳುತ್ತದೆ.

ಏರ್‌ಬಸ್ A320 ಮತ್ತು ಏರ್‌ಬಸ್ A330ಗಳಲ್ಲಿ ಮಾತ್ರ ಈ ಶಬ್ದ ಕೇಳಿ ಬರುತ್ತದೆ. ಈ ಬಗ್ಗೆ ಭಯಪಡುವ ಅಗತ್ಯ ಇಲ್ಲ. ಇದು ವಿಮಾನದ ಸುರಕ್ಷತೆಗಾಗಿ ಹಾಗೂ ಇಂಜಿನ್​​​ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇನ್ನು ಬಗ್ಗೆ ಮಾತನಾಡಿದ ಏವಿಯೇಷನ್ ​​ಟ್ರೈನಿಂಗ್ ಇಂಡಿಯಾದ ಸಂಸ್ಥಾಪಕ ಕರ್ನಲ್ ರಾಜಗೋಪಾಲನ್, ಇದು ಕೇವಲ ಒಂದು ಸಾಮಾನ್ಯ ವಿಮಾನ ಕಾರ್ಯವಿಧಾನವಾಗಿದೆ. ಒತ್ತಡವನ್ನು ಕಾಪಾಡಿಕೊಳ್ಳಲು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಹೈಡ್ರಾಲಿಕ್ ಪಂಪ್‌ನ ಶಬ್ದವಾಗಿದೆ. ಇದು ಸಿಂಗಲ್-ಎಂಜಿನ್ ಟ್ಯಾಕ್ಸಿ ಕಾರ್ಯಾಚರಣೆಗಳ ಸಮಯದಲ್ಲಿ ಈ ರೀತಿಯ ಶಬ್ದಗಳನ್ನು ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
15 ನಿಮಿಷದಲ್ಲಿ ಸುಲಭವಾಗಿ ಮಾಡಬಹುದು ಬೆಂಡೆಕಾಯಿ ಮಸಾಲೆ
Image
ಇಂತಹ ಮಹಿಳೆಯನ್ನು ನೀವು ಎಂದಿಗೂ ಮದುವೆಯಾಗಬಾರದಂತೆ
Image
ಈ ಪ್ರಶ್ನೆಗಳಿಗೆ ನೀವು ನೀಡುವ ಉತ್ತರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
Image
ರೈಲಿನ ಈ ಬೋಗಿಗಳಲ್ಲಿ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರಿಗೆ ನೋ ಎಂಟ್ರಿ

ಇದು ಪವರ್ ಟ್ರಾನ್ಸ್‌ಫರ್ ಯೂನಿಟ್ (PTU) ನಿಂದ ಉಂಟಾಗುತ್ತದೆ. ಟೇಕ್‌ಆಫ್ ಮಾಡುವ ಮೊದಲು ಇಂಧನವನ್ನು ಉಳಿಸಲು ವಿಮಾನ ತನ್ನ ಇಂಜಿನ್​​ಗಳನ್ನು ಆನ್ ಮಾಡುತ್ತದೆ. ಟೇಕ್‌ಆಫ್‌ಗೆ ಮೊದಲು ಹೋಲ್ಡಿಂಗ್ ಪಾಯಿಂಟ್ ಬಳಿ ಇರುವಾಗ ಈ ಶಬ್ದಗಳನ್ನು ಉಂಟು ಮಾಡುತ್ತದೆ. ಒಂದು ಎಂಜಿನ್ ಕಾರ್ಯನಿರ್ವಹಿಸುತ್ತಿರುವಾಗ, ನಂತರದಲ್ಲಿ ಒಂದು ಹೈಡ್ರಾಲಿಕ್ ವ್ಯವಸ್ಥೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಇನ್ನೊಂದು (ಇದು ಇನ್ನೂ ಸ್ವಿಚ್ ಆಗಿಲ್ಲ) ಅಸಮತೋಲನಗೊಂಡು ಒತ್ತಡವನ್ನು ಸೃಷ್ಟಿಸುತ್ತದೆ. ಅದಕ್ಕಾಗಿಯೇ ಈ ಶಬ್ದ ಸಂಭವಿಸುತ್ತದೆ ಎಂದು ಕರ್ನಲ್ ರಾಜಗೋಪಾಲನ್ ಹೇಳುತ್ತಾರೆ.

ಇದನ್ನೂ ಓದಿ: ರಾಜ್ಯದಿಂದ ರಾಜ್ಯಕ್ಕೆ ಪೊಲೀಸರ ಸಮವಸ್ತ್ರ ಭಿನ್ನವಾಗಿರುತ್ತದೆಯೇ? ಇಲ್ಲಿದೆ ಕಾರಣ

ವಿಮಾನ ಎರಡು ಹೈಡ್ರಾಲಿಕ್ ವ್ಯವಸ್ಥೆಗಳ ನಡುವೆ ವೇಗವಾಗಿ ಬದಲಾಗುತ್ತದೆ, ಇದು ಹೈಡ್ರಾಲಿಕ್ ದ್ರವದ ಪರಸ್ಪರ ಹರಿವನ್ನು ಸೃಷ್ಟಿಸುತ್ತದೆ. ಆಗ ಈ ಶಬ್ದ ಬರುತ್ತದೆ. ಶಬ್ದವು ಯಾವುದೇ ಎಂಜಿನ್ ಸಮಸ್ಯೆಗಳು ಅಥವಾ ಅಪಾಯದ ಸಂಕೇತವಲ್ಲ, ಮತ್ತು ಇದು A320 ನ ಹೈಡ್ರಾಲಿಕ್ ಸಿಸ್ಟಮ್ ಕಾರ್ಯಾಚರಣೆಯ ನಿಯಮಿತ ಭಾಗವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್