AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ಟೇಕ್ ಆಫ್ ಆಗುವ ಮೊದಲು ಈ ಶಬ್ದ ಬರುತ್ತದೆ ಯಾಕೆ? ಇದು ಅಪಾಯದ ಮುನ್ನೆಚ್ಚರಿಕೆಯೇ?

ವಿಮಾನದಲ್ಲಿ ಬರುವ ಕೆಲವೊಂದು ಶಬ್ದಗಳು, ಪ್ರಯಾಣಿಕರಿಗೆ ಭಯ ಹುಟ್ಟಿಸಬಹುದು. ಆದರೆ ಈ ರೀತಿಯ ಶಬ್ದಗಳು ಯಾಕೆ ಬರುತ್ತದೆ ಎಂಬ ಬಗ್ಗೆ ನಿಮಗೆ ಗೊತ್ತಿರಲು ಸಾಧ್ಯವಿಲ್ಲ. ಹೆಚ್ಚಾಗಿ ವಿಮಾನ ಟೇಕ್ ಆಫ್ ಆಗುವಾಗ ಈ ಒಂದು ಭಯಾನಕ ಶಬ್ದವೊಂದು ಬರುತ್ತದೆ. ಆದರೆ ಇದು ಯಾವುದೇ ಅಪಾಯದ ಮುನ್ನೆಚ್ಚರಿಕೆ ಶಬ್ದವಲ್ಲ. ಮತ್ಯಾಕೆ ಈ ರೀತಿಯ ಶಬ್ದಗಳು ಬರುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ವಿಮಾನ ಟೇಕ್ ಆಫ್ ಆಗುವ ಮೊದಲು ಈ ಶಬ್ದ ಬರುತ್ತದೆ ಯಾಕೆ? ಇದು ಅಪಾಯದ ಮುನ್ನೆಚ್ಚರಿಕೆಯೇ?
ಸಾಂದರ್ಭಿಕ ಚಿತ್ರ Image Credit source: Getty Images
Follow us
ಮಾಲಾಶ್ರೀ ಅಂಚನ್​
| Updated By: ಸಾಯಿನಂದಾ

Updated on: May 08, 2025 | 4:19 PM

ವಿಮಾನದಲ್ಲಿ ಮೊದಲ ಬಾರಿ ಪ್ರಯಾಣಿಸುವವರು, ಈ ಬಗ್ಗೆ ತಿಳಿದುಕೊಳ್ಳಬೇಕು. ಇನ್ನು ಕೆಲವರಿಗೆ ವಿಮಾನದಲ್ಲಿ ಇರುವ ಕೆಲವೊಂದು ನಿಯಮಗಳು ಅಥವಾ ತಂತ್ರಜ್ಞಾನಗಳ ಬಗ್ಗೆ ಅರಿವು ಇರುವುದಿಲ್ಲ. ವಿಮಾನದಲ್ಲಿ ದೊಡ್ಡದಾಗಿ ಸೈರನ್ ಆಗುತ್ತದೆ ಅಥವಾ ಶಬ್ಧಗಳು ಸೃಷ್ಟಿಯಾಗುತ್ತದೆ. ಅದು ಯಾಕೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಈ ಶಬ್ದವು ಪವರ್ ಟ್ರಾನ್ಸ್‌ಫರ್ ಯೂನಿಟ್ (PTU) (Power Transfer Unit) ನಿಂದ ಬರುವ ಸಾಮಾನ್ಯ ಕಾರ್ಯಾಚರಣೆಯ ಶಬ್ದವಾಗಿದೆ. ಇದು ಹೈಡ್ರಾಲಿಕ್ ಪಂಪ್ ಆಗಿದ್ದು ಅದು ಸ್ವಯಂಚಾಲಿತವಾಗಿ ಈ ಶಬ್ದವನ್ನು ಉಂಟು ಮಾಡುತ್ತದೆ. ಈ ಶಬ್ದವು ಏಕ-ಎಂಜಿನ್ ಟ್ಯಾಕ್ಸಿ ಕಾರ್ಯಾಚರಣೆಗಳ ಸಮಯದಲ್ಲಿ ವಿಶೇಷವಾಗಿ ಆಗುತ್ತದೆ. ಈ ಬಗ್ಗೆ ಇಂಡಿಯಾನ್​​ ಎಕ್ಸ್​​​ಪ್ರಸ್ ಒಂದು ಮಾಹಿತಿಯನ್ನು ಹಂಚಿಕೊಂಡಿದೆ.

ಇದು ಟೇಕ್‌ಆಫ್‌ಗೆ ಮೊದಲು ಬಳಸಲಾಗುವ ಶಬ್ದವಾಗಿದೆ. ಇದು ಇಂಧನ-ಉಳಿತಾಯ ಅಳತೆಯಾಗಿದ್ದು,ಕೇವಲ ಒಂದು ಎಂಜಿನ್ ಮತ್ತು ಹೈಡ್ರಾಲಿಕ್ ವ್ಯವಸ್ಥೆಯು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ವಿಮಾನದ ಎಂಜಿನ್​​ನಲ್ಲಿ ಉಂಟಾಗುವ ಒತ್ತಡವನ್ನು ಮತ್ತೆ ಮರುಸ್ಥಾಪಿಸಲು PTU ಹೈಡ್ರಾಲಿಕ್ ವ್ಯವಸ್ಥೆಗಳ ನಡುವೆ ಇದು ಬದಲಾಗುತ್ತದೆ. ಇದು ಶಬ್ದವನ್ನು ಉತ್ಪಾದಿಸಲು ಹೈಡ್ರಾಲಿಕ್ ದ್ರವದ ಪರಸ್ಪರ ಸಂಪರ್ಕವನ್ನು ಸಾಧಿಸುತ್ತದೆ. ಯಾವ ಕಾರಣಕ್ಕೂ ಈ ಶಬ್ದವು ಯಾವುದೇ ಎಂಜಿನ್ ಸಮಸ್ಯೆಗಳು ಅಥವಾ ಅಪಾಯವನ್ನು ಸೂಚಿಸುವುದಿಲ್ಲ. ಇನ್ನು ವಿಮಾನದ ವಿಂಡೋ ಬಳಿ ಕುಳಿತುಕೊಂಡವರಿಗೆ ಮಾತ್ರ ಈ ಶಬ್ಧ ಕೇಳುತ್ತದೆ.

ಏರ್‌ಬಸ್ A320 ಮತ್ತು ಏರ್‌ಬಸ್ A330ಗಳಲ್ಲಿ ಮಾತ್ರ ಈ ಶಬ್ದ ಕೇಳಿ ಬರುತ್ತದೆ. ಈ ಬಗ್ಗೆ ಭಯಪಡುವ ಅಗತ್ಯ ಇಲ್ಲ. ಇದು ವಿಮಾನದ ಸುರಕ್ಷತೆಗಾಗಿ ಹಾಗೂ ಇಂಜಿನ್​​​ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇನ್ನು ಬಗ್ಗೆ ಮಾತನಾಡಿದ ಏವಿಯೇಷನ್ ​​ಟ್ರೈನಿಂಗ್ ಇಂಡಿಯಾದ ಸಂಸ್ಥಾಪಕ ಕರ್ನಲ್ ರಾಜಗೋಪಾಲನ್, ಇದು ಕೇವಲ ಒಂದು ಸಾಮಾನ್ಯ ವಿಮಾನ ಕಾರ್ಯವಿಧಾನವಾಗಿದೆ. ಒತ್ತಡವನ್ನು ಕಾಪಾಡಿಕೊಳ್ಳಲು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಹೈಡ್ರಾಲಿಕ್ ಪಂಪ್‌ನ ಶಬ್ದವಾಗಿದೆ. ಇದು ಸಿಂಗಲ್-ಎಂಜಿನ್ ಟ್ಯಾಕ್ಸಿ ಕಾರ್ಯಾಚರಣೆಗಳ ಸಮಯದಲ್ಲಿ ಈ ರೀತಿಯ ಶಬ್ದಗಳನ್ನು ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
15 ನಿಮಿಷದಲ್ಲಿ ಸುಲಭವಾಗಿ ಮಾಡಬಹುದು ಬೆಂಡೆಕಾಯಿ ಮಸಾಲೆ
Image
ಇಂತಹ ಮಹಿಳೆಯನ್ನು ನೀವು ಎಂದಿಗೂ ಮದುವೆಯಾಗಬಾರದಂತೆ
Image
ಈ ಪ್ರಶ್ನೆಗಳಿಗೆ ನೀವು ನೀಡುವ ಉತ್ತರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
Image
ರೈಲಿನ ಈ ಬೋಗಿಗಳಲ್ಲಿ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರಿಗೆ ನೋ ಎಂಟ್ರಿ

ಇದು ಪವರ್ ಟ್ರಾನ್ಸ್‌ಫರ್ ಯೂನಿಟ್ (PTU) ನಿಂದ ಉಂಟಾಗುತ್ತದೆ. ಟೇಕ್‌ಆಫ್ ಮಾಡುವ ಮೊದಲು ಇಂಧನವನ್ನು ಉಳಿಸಲು ವಿಮಾನ ತನ್ನ ಇಂಜಿನ್​​ಗಳನ್ನು ಆನ್ ಮಾಡುತ್ತದೆ. ಟೇಕ್‌ಆಫ್‌ಗೆ ಮೊದಲು ಹೋಲ್ಡಿಂಗ್ ಪಾಯಿಂಟ್ ಬಳಿ ಇರುವಾಗ ಈ ಶಬ್ದಗಳನ್ನು ಉಂಟು ಮಾಡುತ್ತದೆ. ಒಂದು ಎಂಜಿನ್ ಕಾರ್ಯನಿರ್ವಹಿಸುತ್ತಿರುವಾಗ, ನಂತರದಲ್ಲಿ ಒಂದು ಹೈಡ್ರಾಲಿಕ್ ವ್ಯವಸ್ಥೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಇನ್ನೊಂದು (ಇದು ಇನ್ನೂ ಸ್ವಿಚ್ ಆಗಿಲ್ಲ) ಅಸಮತೋಲನಗೊಂಡು ಒತ್ತಡವನ್ನು ಸೃಷ್ಟಿಸುತ್ತದೆ. ಅದಕ್ಕಾಗಿಯೇ ಈ ಶಬ್ದ ಸಂಭವಿಸುತ್ತದೆ ಎಂದು ಕರ್ನಲ್ ರಾಜಗೋಪಾಲನ್ ಹೇಳುತ್ತಾರೆ.

ಇದನ್ನೂ ಓದಿ: ರಾಜ್ಯದಿಂದ ರಾಜ್ಯಕ್ಕೆ ಪೊಲೀಸರ ಸಮವಸ್ತ್ರ ಭಿನ್ನವಾಗಿರುತ್ತದೆಯೇ? ಇಲ್ಲಿದೆ ಕಾರಣ

ವಿಮಾನ ಎರಡು ಹೈಡ್ರಾಲಿಕ್ ವ್ಯವಸ್ಥೆಗಳ ನಡುವೆ ವೇಗವಾಗಿ ಬದಲಾಗುತ್ತದೆ, ಇದು ಹೈಡ್ರಾಲಿಕ್ ದ್ರವದ ಪರಸ್ಪರ ಹರಿವನ್ನು ಸೃಷ್ಟಿಸುತ್ತದೆ. ಆಗ ಈ ಶಬ್ದ ಬರುತ್ತದೆ. ಶಬ್ದವು ಯಾವುದೇ ಎಂಜಿನ್ ಸಮಸ್ಯೆಗಳು ಅಥವಾ ಅಪಾಯದ ಸಂಕೇತವಲ್ಲ, ಮತ್ತು ಇದು A320 ನ ಹೈಡ್ರಾಲಿಕ್ ಸಿಸ್ಟಮ್ ಕಾರ್ಯಾಚರಣೆಯ ನಿಯಮಿತ ಭಾಗವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ