AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ಟೇಕ್ ಆಫ್ ಆಗುವ ಮೊದಲು ಈ ಶಬ್ದ ಬರುತ್ತದೆ ಯಾಕೆ? ಇದು ಅಪಾಯದ ಮುನ್ನೆಚ್ಚರಿಕೆಯೇ?

ವಿಮಾನದಲ್ಲಿ ಬರುವ ಕೆಲವೊಂದು ಶಬ್ದಗಳು, ಪ್ರಯಾಣಿಕರಿಗೆ ಭಯ ಹುಟ್ಟಿಸಬಹುದು. ಆದರೆ ಈ ರೀತಿಯ ಶಬ್ದಗಳು ಯಾಕೆ ಬರುತ್ತದೆ ಎಂಬ ಬಗ್ಗೆ ನಿಮಗೆ ಗೊತ್ತಿರಲು ಸಾಧ್ಯವಿಲ್ಲ. ಹೆಚ್ಚಾಗಿ ವಿಮಾನ ಟೇಕ್ ಆಫ್ ಆಗುವಾಗ ಈ ಒಂದು ಭಯಾನಕ ಶಬ್ದವೊಂದು ಬರುತ್ತದೆ. ಆದರೆ ಇದು ಯಾವುದೇ ಅಪಾಯದ ಮುನ್ನೆಚ್ಚರಿಕೆ ಶಬ್ದವಲ್ಲ. ಮತ್ಯಾಕೆ ಈ ರೀತಿಯ ಶಬ್ದಗಳು ಬರುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ವಿಮಾನ ಟೇಕ್ ಆಫ್ ಆಗುವ ಮೊದಲು ಈ ಶಬ್ದ ಬರುತ್ತದೆ ಯಾಕೆ? ಇದು ಅಪಾಯದ ಮುನ್ನೆಚ್ಚರಿಕೆಯೇ?
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
| Edited By: |

Updated on: May 08, 2025 | 4:19 PM

Share

ವಿಮಾನದಲ್ಲಿ ಮೊದಲ ಬಾರಿ ಪ್ರಯಾಣಿಸುವವರು, ಈ ಬಗ್ಗೆ ತಿಳಿದುಕೊಳ್ಳಬೇಕು. ಇನ್ನು ಕೆಲವರಿಗೆ ವಿಮಾನದಲ್ಲಿ ಇರುವ ಕೆಲವೊಂದು ನಿಯಮಗಳು ಅಥವಾ ತಂತ್ರಜ್ಞಾನಗಳ ಬಗ್ಗೆ ಅರಿವು ಇರುವುದಿಲ್ಲ. ವಿಮಾನದಲ್ಲಿ ದೊಡ್ಡದಾಗಿ ಸೈರನ್ ಆಗುತ್ತದೆ ಅಥವಾ ಶಬ್ಧಗಳು ಸೃಷ್ಟಿಯಾಗುತ್ತದೆ. ಅದು ಯಾಕೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಈ ಶಬ್ದವು ಪವರ್ ಟ್ರಾನ್ಸ್‌ಫರ್ ಯೂನಿಟ್ (PTU) (Power Transfer Unit) ನಿಂದ ಬರುವ ಸಾಮಾನ್ಯ ಕಾರ್ಯಾಚರಣೆಯ ಶಬ್ದವಾಗಿದೆ. ಇದು ಹೈಡ್ರಾಲಿಕ್ ಪಂಪ್ ಆಗಿದ್ದು ಅದು ಸ್ವಯಂಚಾಲಿತವಾಗಿ ಈ ಶಬ್ದವನ್ನು ಉಂಟು ಮಾಡುತ್ತದೆ. ಈ ಶಬ್ದವು ಏಕ-ಎಂಜಿನ್ ಟ್ಯಾಕ್ಸಿ ಕಾರ್ಯಾಚರಣೆಗಳ ಸಮಯದಲ್ಲಿ ವಿಶೇಷವಾಗಿ ಆಗುತ್ತದೆ. ಈ ಬಗ್ಗೆ ಇಂಡಿಯಾನ್​​ ಎಕ್ಸ್​​​ಪ್ರಸ್ ಒಂದು ಮಾಹಿತಿಯನ್ನು ಹಂಚಿಕೊಂಡಿದೆ.

ಇದು ಟೇಕ್‌ಆಫ್‌ಗೆ ಮೊದಲು ಬಳಸಲಾಗುವ ಶಬ್ದವಾಗಿದೆ. ಇದು ಇಂಧನ-ಉಳಿತಾಯ ಅಳತೆಯಾಗಿದ್ದು,ಕೇವಲ ಒಂದು ಎಂಜಿನ್ ಮತ್ತು ಹೈಡ್ರಾಲಿಕ್ ವ್ಯವಸ್ಥೆಯು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ವಿಮಾನದ ಎಂಜಿನ್​​ನಲ್ಲಿ ಉಂಟಾಗುವ ಒತ್ತಡವನ್ನು ಮತ್ತೆ ಮರುಸ್ಥಾಪಿಸಲು PTU ಹೈಡ್ರಾಲಿಕ್ ವ್ಯವಸ್ಥೆಗಳ ನಡುವೆ ಇದು ಬದಲಾಗುತ್ತದೆ. ಇದು ಶಬ್ದವನ್ನು ಉತ್ಪಾದಿಸಲು ಹೈಡ್ರಾಲಿಕ್ ದ್ರವದ ಪರಸ್ಪರ ಸಂಪರ್ಕವನ್ನು ಸಾಧಿಸುತ್ತದೆ. ಯಾವ ಕಾರಣಕ್ಕೂ ಈ ಶಬ್ದವು ಯಾವುದೇ ಎಂಜಿನ್ ಸಮಸ್ಯೆಗಳು ಅಥವಾ ಅಪಾಯವನ್ನು ಸೂಚಿಸುವುದಿಲ್ಲ. ಇನ್ನು ವಿಮಾನದ ವಿಂಡೋ ಬಳಿ ಕುಳಿತುಕೊಂಡವರಿಗೆ ಮಾತ್ರ ಈ ಶಬ್ಧ ಕೇಳುತ್ತದೆ.

ಏರ್‌ಬಸ್ A320 ಮತ್ತು ಏರ್‌ಬಸ್ A330ಗಳಲ್ಲಿ ಮಾತ್ರ ಈ ಶಬ್ದ ಕೇಳಿ ಬರುತ್ತದೆ. ಈ ಬಗ್ಗೆ ಭಯಪಡುವ ಅಗತ್ಯ ಇಲ್ಲ. ಇದು ವಿಮಾನದ ಸುರಕ್ಷತೆಗಾಗಿ ಹಾಗೂ ಇಂಜಿನ್​​​ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇನ್ನು ಬಗ್ಗೆ ಮಾತನಾಡಿದ ಏವಿಯೇಷನ್ ​​ಟ್ರೈನಿಂಗ್ ಇಂಡಿಯಾದ ಸಂಸ್ಥಾಪಕ ಕರ್ನಲ್ ರಾಜಗೋಪಾಲನ್, ಇದು ಕೇವಲ ಒಂದು ಸಾಮಾನ್ಯ ವಿಮಾನ ಕಾರ್ಯವಿಧಾನವಾಗಿದೆ. ಒತ್ತಡವನ್ನು ಕಾಪಾಡಿಕೊಳ್ಳಲು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಹೈಡ್ರಾಲಿಕ್ ಪಂಪ್‌ನ ಶಬ್ದವಾಗಿದೆ. ಇದು ಸಿಂಗಲ್-ಎಂಜಿನ್ ಟ್ಯಾಕ್ಸಿ ಕಾರ್ಯಾಚರಣೆಗಳ ಸಮಯದಲ್ಲಿ ಈ ರೀತಿಯ ಶಬ್ದಗಳನ್ನು ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
15 ನಿಮಿಷದಲ್ಲಿ ಸುಲಭವಾಗಿ ಮಾಡಬಹುದು ಬೆಂಡೆಕಾಯಿ ಮಸಾಲೆ
Image
ಇಂತಹ ಮಹಿಳೆಯನ್ನು ನೀವು ಎಂದಿಗೂ ಮದುವೆಯಾಗಬಾರದಂತೆ
Image
ಈ ಪ್ರಶ್ನೆಗಳಿಗೆ ನೀವು ನೀಡುವ ಉತ್ತರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
Image
ರೈಲಿನ ಈ ಬೋಗಿಗಳಲ್ಲಿ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರಿಗೆ ನೋ ಎಂಟ್ರಿ

ಇದು ಪವರ್ ಟ್ರಾನ್ಸ್‌ಫರ್ ಯೂನಿಟ್ (PTU) ನಿಂದ ಉಂಟಾಗುತ್ತದೆ. ಟೇಕ್‌ಆಫ್ ಮಾಡುವ ಮೊದಲು ಇಂಧನವನ್ನು ಉಳಿಸಲು ವಿಮಾನ ತನ್ನ ಇಂಜಿನ್​​ಗಳನ್ನು ಆನ್ ಮಾಡುತ್ತದೆ. ಟೇಕ್‌ಆಫ್‌ಗೆ ಮೊದಲು ಹೋಲ್ಡಿಂಗ್ ಪಾಯಿಂಟ್ ಬಳಿ ಇರುವಾಗ ಈ ಶಬ್ದಗಳನ್ನು ಉಂಟು ಮಾಡುತ್ತದೆ. ಒಂದು ಎಂಜಿನ್ ಕಾರ್ಯನಿರ್ವಹಿಸುತ್ತಿರುವಾಗ, ನಂತರದಲ್ಲಿ ಒಂದು ಹೈಡ್ರಾಲಿಕ್ ವ್ಯವಸ್ಥೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಇನ್ನೊಂದು (ಇದು ಇನ್ನೂ ಸ್ವಿಚ್ ಆಗಿಲ್ಲ) ಅಸಮತೋಲನಗೊಂಡು ಒತ್ತಡವನ್ನು ಸೃಷ್ಟಿಸುತ್ತದೆ. ಅದಕ್ಕಾಗಿಯೇ ಈ ಶಬ್ದ ಸಂಭವಿಸುತ್ತದೆ ಎಂದು ಕರ್ನಲ್ ರಾಜಗೋಪಾಲನ್ ಹೇಳುತ್ತಾರೆ.

ಇದನ್ನೂ ಓದಿ: ರಾಜ್ಯದಿಂದ ರಾಜ್ಯಕ್ಕೆ ಪೊಲೀಸರ ಸಮವಸ್ತ್ರ ಭಿನ್ನವಾಗಿರುತ್ತದೆಯೇ? ಇಲ್ಲಿದೆ ಕಾರಣ

ವಿಮಾನ ಎರಡು ಹೈಡ್ರಾಲಿಕ್ ವ್ಯವಸ್ಥೆಗಳ ನಡುವೆ ವೇಗವಾಗಿ ಬದಲಾಗುತ್ತದೆ, ಇದು ಹೈಡ್ರಾಲಿಕ್ ದ್ರವದ ಪರಸ್ಪರ ಹರಿವನ್ನು ಸೃಷ್ಟಿಸುತ್ತದೆ. ಆಗ ಈ ಶಬ್ದ ಬರುತ್ತದೆ. ಶಬ್ದವು ಯಾವುದೇ ಎಂಜಿನ್ ಸಮಸ್ಯೆಗಳು ಅಥವಾ ಅಪಾಯದ ಸಂಕೇತವಲ್ಲ, ಮತ್ತು ಇದು A320 ನ ಹೈಡ್ರಾಲಿಕ್ ಸಿಸ್ಟಮ್ ಕಾರ್ಯಾಚರಣೆಯ ನಿಯಮಿತ ಭಾಗವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಫೈನಲ್​ನಲ್ಲಿ ಸಿಎಸ್​​ಕೆ ದಾಖಲೆ ಮುರಿದ ಆರ್​ಸಿಬಿ
ಫೈನಲ್​ನಲ್ಲಿ ಸಿಎಸ್​​ಕೆ ದಾಖಲೆ ಮುರಿದ ಆರ್​ಸಿಬಿ
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ