AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Laughter Day 2022: ಇಂದು ವಿಶ್ವ ನಗು ದಿನ; ಏನಿದರ ವಿಶೇಷ? ಮೊದಲಿಗೆ ಆಚರಿಸಿದ್ದು ಎಲ್ಲಿ? ಕುತೂಹಲಕರ ಮಾಹಿತಿ ಇಲ್ಲಿದೆ

ವಿಶ್ವ ನಗು ದಿನ: ಇಂದು (ಮೇ.1) ವಿಶ್ವ ನಗು ದಿನ. ನಗುವಿನ ಮಹತ್ವ ನಿಮಗೆ ತಿಳಿಸಿದಿದೆಯೇ? ನಗುವಿನ ದಿನವನ್ನು ಮೊದಲು ಆಚರಿಸಿದ್ದು ಯಾವಾಗ? ಇಲ್ಲಿದೆ ನೋಡಿ.

World Laughter Day 2022: ಇಂದು ವಿಶ್ವ ನಗು ದಿನ; ಏನಿದರ ವಿಶೇಷ? ಮೊದಲಿಗೆ ಆಚರಿಸಿದ್ದು ಎಲ್ಲಿ? ಕುತೂಹಲಕರ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:May 01, 2022 | 8:51 AM

Share

ಸರ್ವ ರೋಗಕ್ಕೂ ನಗುವೊಂದೇ ಪರಮ ಔಷಧ ಎನ್ನುತ್ತಾರೆ. ಹಾಗಾದರೆ ರೋಗಕ್ಕೆಲ್ಲವೂ ಅದೇ ಔಷಧವೇ ಎಂದು ಕೇಳಬೇಡಿ. ರೋಗವನ್ನು ಎದುರಿಸುವಲ್ಲಿ ನಮ್ಮನ್ನು, ನಮ್ಮ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುತ್ತದೆ ಈ ನಗು. ಅಷ್ಟೇ ಅಲ್ಲ, ನೀವು ನಗುತ್ತಾ ಸಂತೋಷವಾಗಿದ್ದರೆ ಯಾವ ಖಾಯಿಲೆ ನಿಮ್ಮ ಬಳಿ ಸುಳಿದೀತು ಹೇಳಿ? ವಿಶ್ವ ನಗು ದಿನವು (World Laughter Day) ನಗುವಿನ ಮಹತ್ವವನ್ನು ಜನರಿಗೆ ತಿಳಿಸಲು ಇರುವ ಒಂದು ದಿನ. ಅದರಲ್ಲೂ ಪ್ರಸ್ತುತ ಜಗತ್ತು ಕೊರೊನಾ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಜನರು ನಗುವಿನೊಂದಿಗೆ ಅವುಗಳನ್ನು ಎದುರಿಸಿದರೆ, ಚಿಂತೆಗಳ ಭಾರ ತುಸು ಕಡಿಮೆಯಾಗುತ್ತವೆ. ಆದ್ದರಿಂದಲೇ ನಗು ನಿಜಕ್ಕೂ ಅತ್ಯುತ್ತಮವಾದ ಔಷಧಿ. ನಗುವಿನ ಮಹತ್ವ ನಿಮಗೆ ತಿಳಿಸಿದಿದೆಯೇ? ನಗುವಿನ ದಿನವನ್ನು ಮೊದಲು ಆಚರಿಸಿದ್ದು ಯಾವಾಗ? ಇಲ್ಲಿದೆ ನೋಡಿ.

ವಿಶ್ವ ನಗು ದಿನವನ್ನು ಮೊದಲು ಆಚರಿಸಿದ್ದು ನಮ್ಮ ಭಾರತದಲ್ಲಿ!

ಜಗತ್ತಿನ ಅನೇಕ ಮೇಧಾವಿಗಳು ವಿಶೇಷ ದಿನವನ್ನು ಮೊದಲು ಆರಂಭಿಸಿದ್ದಾರೆ. ಈ ಮೂಲಕ ಜಗತ್ತು ಆಯಾ ದಿನಗಳಂದು ಅವರನ್ನು ಸ್ಮರಿಸಿಕೊಳ್ಳುತ್ತದೆ. ಆದರೆ ಜಗತ್ತಿಗೆ ನಗುವ ಮಹತ್ವವನ್ನು ಮೊದಲು ತಿಳಿಸಿಕೊಟ್ಟಿದ್ದು, ಇದಕ್ಕೆ ಒಂದು ವಿಶೇಷ ದಿನವನ್ನು ಪರಿಚಯಿಸಿದ್ದು ಭಾರತೀಯರೇ! ವಿಶ್ವ ನಗು ದಿನವನ್ನು ಮೊದಲು ಆಚರಿಸಿದ್ದು ಮುಂಬೈನಲ್ಲಿ. 1998 ರಲ್ಲಿ ‘ನಗು ಯೋಗ ಚಳುವಳಿ’ಯ ಸಂಸ್ಥಾಪಕ ಡಾ ಮದನ್ ಕಟಾರಿಯಾ ಅವರು ಚಳುವಳಿಯ ಮೂಲಕ ಒಂದು ವಿಚಾರ ಪ್ರತಿಪಾದಿಸಿದರು. ನಗು ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸಬಹುದು ಎಂದು ಅವರು ಊಹಿಸಿದ್ದರು. ಇದರ ಪರಿಣಾಮ ನಿಧಾನವಾಗಿ ನಗರಗಳಲ್ಲಿ ‘ಲಾಫಿಂಗ್ ಕ್ಲಬ್’ಗಳು ಜನ್ಮತಾಳಿದವು. ಹೀಗೆ ನಿಧಾನವಾಗಿ ವಿಶ್ವ ನಗು ದಿನ ಹುಟ್ಟಿಕೊಂಡಿತು.

ನಗುವಿನ ಮಹತ್ವವೇನು ಗೊತ್ತಾ?

ನಗುವುದರಿಂದ ನಿಮ್ಮ ಚಿಂತೆಗಳು ಮಾಯವಾಗುವುದಿಲ್ಲ, ಆದರೆ ದೈಹಿಕವಾಗಿ ದೇಹಕ್ಕೆ ಅಗತ್ಯವಾದ ಅದ್ಭುತವಾದ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಸಂತೋಷವಾಗಿರುವಾಗ ಮತ್ತು ವಿನೋದದಿಂದ ತುಂಬಿದ ಜೀವನಶೈಲಿಯನ್ನು ಹೊಂದಿರುವಾಗ ಒತ್ತಡದಿಂದ ಉಂಟಾಗುವ ಅನೇಕ ಸಮಸ್ಯೆಗಳನ್ನು ಎದರಿಸಲು ನಗುವು ಸಹಾಯ ಮಾಡುತ್ತದೆ. ಇದಕ್ಕಾಗಿಯೇ ಅನೇಕ ಮಂದಿ ಬೆಳಗೆದ್ದ ತಕ್ಷಣ ವಾಕಿಂಗ್ ಎಂದು ಪಾರ್ಕ್ಗಳಿಗೆ ತೆರಳಿ ಒಂದು ಕಡೆ ನಿಂತು ಸ್ನೇಹಿತರೆಲ್ಲರೂ ಒಟ್ಟಾಗಿ ನಕ್ಕು ನಲಿಯುತ್ತಾರೆ. ಹೀಗೆ ಮಾಡುವುದರಿಂದ ನಮ್ಮಲಿರು ಒತ್ತಡ ಕಮ್ಮಿಯಾಗಿ ಆರೋಗ್ಯಕ್ಕೆ ಉತ್ತಮ ಪ್ರಯೋಜನವಾಗುತ್ತದೆ.

ನೀವು ನಗುವುದರ ಮೂಲಕ 40-60 ಕ್ಯಾಲೋರಿಯನ್ನು ಬರ್ನ್ ಮಾಡಬಹುದು. ಮತ್ತು ನಗುವುದರಿಂದ ಮುಖದ ಸ್ನಾಯು ವ್ಯಾಯಾಮ ಕೂಡ ಆಗುತ್ತದೆ. ಇದರಿಂದ ಮುಖದ ತ್ವಚೆ ಹೆಚ್ಚು ಕಾಂತಿದಾಯಕವಾಗುತ್ತದೆ. ಇದರಿಂದ ಟಿ-ಕೋಶಗಳು (T-cells) ಸುಧಾರಿಸುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರೂ ನಗುವನ್ನೇ ಸಂಗತಿಯನ್ನಾಗಿಸಿಕೊಂಡರೆ ಉತ್ತಮ. ಏಕೆಂದರೆ ನಗುವಿನಿಂದ ರಕ್ತದ ಒತ್ತಡ ಸಮಸ್ಯೆ ಬೇಗ ಬಗೆಹರಿಯುತ್ತದೆ. ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಇದು ಅದ್ಭುತ ಮಾರ್ಗವಾಗಿದೆ. ಇದಲ್ಲದೆ, ನಗು ಜನರನ್ನು ಹತ್ತಿರ ತರುತ್ತದೆ ಮತ್ತು ಎಷ್ಟೇ ಕಷ್ಟ, ಒತ್ತಡವಿದ್ದರೂ ಅದರ ವಿರುದ್ಧ ಹೋರಾಡಲು ಶಕ್ತಿಯನ್ನು ತುಂಬುತ್ತದೆ.

ಇದನ್ನೂ ಓದಿ: International Workers Day 2022: ಇಂದು ಕಾರ್ಮಿಕರ ದಿನಾಚರಣೆ; ಏನಿದರ ಇತಿಹಾಸ ಹಾಗೂ ಮಹತ್ವ? ಇಲ್ಲಿದೆ ನೋಡಿ

ಪ್ರೇಯಸಿಯನ್ನು ಕರೆಸಿಕೊಳ್ಳಲು ಪ್ರತಿ ಬಾರಿ ಖಾಸಗಿ ವಿಮಾನ ಕಳಿಸುತ್ತಿದ್ದ ವಂಚಕ ಸುಕೇಶ್​; ಕೊನೆಗೆ ಜೈಲುಪಾಲು

Published On - 8:45 am, Sun, 1 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ