AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Achievement: ದಿನಗಳಲ್ಲ ಗಂಟೆ…! 100 ಗಂಟೆಯಲ್ಲಿ 100 ಕಿಮೀ ರಸ್ತೆ; ಘಾಜಿಯಾಬಾದ್-ಅಲಿಗಡ್ ಎಕ್ಸ್​ಪ್ರೆಸ್​ವೇ ಹೊಸ ಇತಿಹಾಸ

Ghaziabad-Aligarh Expressway Milestone: ಉತ್ತರಪ್ರದೇಶದ ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇನ 100 ಕಿಮೀ ರಸ್ತೆಯನ್ನು ಕೇವಲ 100 ಗಂಟೆಯಲ್ಲಿ ನಿರ್ಮಿಸಿ ದಾಖಲೆ ಬರೆಯಲಾಗಿದೆ. ಎಲ್ ಅಂಟ್ ಟಿ, ಕ್ಯೂಬ್ ಹೈವೇಸ್ ಮತ್ತು ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇ ಸಂಸ್ಥೆಗಳು ಈ ಕಾರ್ಯ ಮಾಡಿ ಸೈ ಎನಿಸಿವೆ.

Achievement: ದಿನಗಳಲ್ಲ ಗಂಟೆ...! 100 ಗಂಟೆಯಲ್ಲಿ 100 ಕಿಮೀ ರಸ್ತೆ; ಘಾಜಿಯಾಬಾದ್-ಅಲಿಗಡ್ ಎಕ್ಸ್​ಪ್ರೆಸ್​ವೇ ಹೊಸ ಇತಿಹಾಸ
ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇ ರಸ್ತೆ ನಿರ್ಮಾಣ ಕಾರ್ಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2023 | 10:57 AM

Share

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಭಾರತದ ರಸ್ತೆ ಮತ್ತು ರೈಲ್ವೆ ನಿರ್ಮಾಣ ಕಾರ್ಯಗಳಿಗೆ (Road and Rail Infrastructure) ಹೊಸ ಶಕ್ತಿಸಂಚಯ ಆದಂತಿದೆ. ಹಲವು ಸಾಧನೆ, ಮೈಲಿಗಲ್ಲುಗಳು ನಿರ್ಮಾಣವಾಗುತ್ತಿವೆ. ಇದೀಗ ಉತ್ತರಪ್ರದೇಶದಲ್ಲಿ ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇ (Ghaziabad-Aligarh Expressway) ಹೊಸ ಇತಿಹಾಸ ಬರೆದಿದೆ. ರಾಷ್ಟ್ರೀಯ ಹೆದ್ದಾರಿ 34ರ ಭಾಗವಾಗಿರುವ 118 ಕಿಮೀ ಉದ್ದದ ಈ ಎಕ್ಸ್​ಪ್ರೆಸ್​ವೇನಲ್ಲಿ 100 ಕಿಮೀ ಉದ್ದದ ರಸ್ತೆಯನ್ನು ಕೇವಲ 100 ಗಂಟೆಯಲ್ಲಿ ನಿರ್ಮಿಸಲಾಗಿದೆ. 100 ಗಂಟೆ ಎಂದರೆ ಸುಮಾರು 4 ದಿನ ಮಾತ್ರ.

ಈ ಸಾಧನೆ ಸಾಧ್ಯವಾಗಿದ್ದು ಒಂದು ಸ್ಪೆಷಲ್ ಪರ್ಪೋಸ್ ವೆಹಿಕಲ್​ನಿಂದ (ಎಸ್​ಪಿವಿ). ಈ ಎಕ್ಸ್​ಪ್ರೆಸ್​ವೇಗೆ ಬಿಟುಮಿನಸ್ ಕಾಂಕ್ರೀಟ್ ಹಾಕಲು ಈ ವಿಶೇಷ ವಾಹನ ಬಳಸಲಾಗಿದೆ. ಕ್ಯೂಬ್ ಹೈವೇಸ್, ಎಲ್ ಅಂಡ್ ಟಿ, ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇ ಸಂಸ್ಥೆಗಳು ಈ ರಸ್ತೆ ನಿರ್ಮಾಣದಲ್ಲಿ ಭಾಗಿಯಾಗಿದ್ದವು.

ಇದನ್ನೂ ಓದಿಅಸ್ಸಾಂನಲ್ಲಿ ಶಾಲಾ ಶಿಕ್ಷಕರಿಗೆ ನೂತನ ವಸ್ತ್ರ ಸಂಹಿತೆ ಜಾರಿ; ಟೀ ಶರ್ಟ್​, ಲೆಗ್ಗಿಂಗ್ಸ್​, ಜೀನ್ಸ್ ಧರಿಸುವಂತಿಲ್ಲ

ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕಾರ್ಯವನ್ನು ಶ್ಲಾಘಿಸಿ ಇದು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶಹಬ್ಬಾಸ್​ಗಿರಿ ನೀಡಿದ್ದಾರೆ.

‘ಭಾರತದ ರಸ್ತೆ ಸೌಕರ್ಯ ಉದ್ಯಮದ ಬದ್ಧತೆಗೆ ಸಾಕ್ಷಿಯಾಗಿದೆ ಈ ಸಾಧನೆ. ಕ್ಯೂಬ್ ಹೈವೇಶ್, ಎಲ್ ಅಂಡ್ ಮತ್ತು ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇ ಸಂಸ್ಥೆಗಳಿಗೆ ಧನ್ಯವಾದ ಹೇಳುತ್ತೇನೆ’ ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.

ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇ ರಸ್ತೆ ಪ್ರಾಮುಖ್ಯತೆ

ದೆಹಲಿಗೆ ಸಮೀಪ ಇರುವ ಘಾಜಿಯಾಬಾದ್ ಮತ್ತು ಆಲಿಗಡ್ ಎರಡೂ ಕೂಡ ಜನಸಂಖ್ಯೆ ಹೆಚ್ಚು ಇರುವ ನಗರಗಳು. ಈ ಎರಡು ನಗರಗಳನ್ನು ಜೋಡಿಸುವ ಎಕ್ಸ್​ಪ್ರೆಸ್ ವೇ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎನಿಸಿದೆ. ಈ ಎರಡು ನಗರಗಳ ಮಧ್ಯೆ ದಾದ್ರಿ, ಗೌತಮ್ ಬುದ್ಧ ನಗರ್, ಸಿಕಂದರಾಬಾದ್, ಬುಲಂದ್​ಶಹರ್ ಮತ್ತು ಖುದ್ರಾ ನಗರ ಮತ್ತು ಪಟ್ಟಣಗಳ ಮೂಲಕ ಈ ಎಕ್ಸ್​ಪ್ರೆಸ್ ಸಾಗಿ ಹೋಗುತ್ತದೆ.

ಇದನ್ನೂ ಓದಿG7 Summit: ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಬಹಳ ಕಡಿಮೆ ಅವಧಿಯಲ್ಲಿ ಸಾಗಾಟ ಸಾಧ್ಯವಾಗುವುದರಿಂದ ಯಾವುದೇ ಎಕ್ಸ್​ಪ್ರೆಸ್​ವೇಗಳು ಒಂದು ದೇಶದ ಅರ್ಥವ್ಯವಸ್ಥೆಗೆ ಅನುಕೂಲ ಎನಿಸುತ್ತವೆ. ಒಂದು ಉತ್ತಮ ಆರ್ಥಿಕತೆಯ ದೇಶದಲ್ಲಿ ಸೌಕರ್ಯ ವ್ಯವಸ್ಥೆ ಅತ್ಯುತ್ತಮವಾಗಿರುತ್ತದೆ. ಭಾರತದಲ್ಲೂ ಈ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ