AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದಲ್ಲಿ ಇಂದು ನೂತನ ಸಚಿವರ ಪ್ರಮಾಣವಚನ ಸ್ವೀಕಾರ; ಸಚಿನ್​ ಪೈಲಟ್ ಬಣದ ಐವರಿಗೆ ಮಂತ್ರಿ ಸ್ಥಾನ

Rajasthan Politics: ಮೊಟ್ಟಮೊದಲು ರಾಜೀನಾಮೆ ಶುರುವಾಗಿದ್ದು, ಕ್ಯಾಬಿನೆಟ್​ ಸಚಿವರಾಗಿದ್ದ ರಘು ಶರ್ಮಾ, ಹರೀಶ್ ಚೌಧರಿ ಮತ್ತು ಗೋವಿಂದ್​ ಸಿಂಗ್ ದೋತಸ್ರರಿಂದ. ಈ ಮೂವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಪಕ್ಷಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದ್ದರು.

ರಾಜಸ್ಥಾನದಲ್ಲಿ ಇಂದು ನೂತನ ಸಚಿವರ ಪ್ರಮಾಣವಚನ ಸ್ವೀಕಾರ; ಸಚಿನ್​ ಪೈಲಟ್ ಬಣದ ಐವರಿಗೆ ಮಂತ್ರಿ ಸ್ಥಾನ
ಸಚಿನ ಪೈಲಟ್​ ಮತ್ತು ಅಶೋಕ್​ ಗೆಹ್ಲೋಟ್​
TV9 Web
| Edited By: |

Updated on: Nov 21, 2021 | 7:36 AM

Share

ರಾಜಸ್ಥಾನ ರಾಜಕಾರಣದಲ್ಲಿ ಮಹಾನ್​ ನಾಟಕವೇ ನಡೆದುಹೋಗಿದೆ. ಅಶೋಕ್​ ಗೆಹ್ಲೋಟ್​ ಸಂಪುಟದ ಎಲ್ಲ ಮಂತ್ರಿಗಳೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಎಲ್ಲರ ರಾಜೀನಾಮೆಯೂ ಅಂಗೀಕಾರವಾಗಿದೆ. ಇನ್ನು ಅಶೋಕ್​ ಗೆಹ್ಲೋಟ್​ ಇಂದು ತಮ್ಮ ಹೊಸ ಸಂಪುಟ ರಚನೆ ಮಾಡಲಿದ್ದು, ಒಟ್ಟು 15 ಹೊಸ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಇವರಲ್ಲಿ 11 ಮಂದಿ ಕ್ಯಾಬಿನೆಟ್​ ದರ್ಜೆಯ ಸಚಿವರಾಗಿದ್ದರೆ, ನಾಲ್ಕು ಮಂದಿ ರಾಜ್ಯ ದರ್ಜೆ ಸಚಿವರು.  

ಒಂದು ಮಹತ್ವದ ಸಂಗತಿಯೆಂದರೆ ಇಂದು ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ 15 ಸಚಿವರಲ್ಲಿ 12 ಮಂದಿ ಹೊಸಬರು. ಅದರಲ್ಲೂ ಐವರು  ಮಾಜಿ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​​ ಬಣದವರು.  ಇಂದು ಪ್ರಮಾಣ ವಚನ ಸ್ವೀಕಾರ ಮಾಡುವವರ ಹೆಸರುಗಳ ಪಟ್ಟಿಯನ್ನು ಮಾಜಿ ಶಿಕ್ಷಣ ಸಚಿವ (ನಿನ್ನೆ ರಾಜೀನಾಮೆ ಕೊಟ್ಟಿರುವ ಸಚಿವ) ಗೋವಿಂದ್ ದತಾಸ್ರಾ ತಮ್ಮ ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡು ಶುಭಕೋರಿದ್ದಾರೆ.

ಮೊಟ್ಟಮೊದಲು ರಾಜೀನಾಮೆ ಶುರುವಾಗಿದ್ದು, ಕ್ಯಾಬಿನೆಟ್​ ಸಚಿವರಾಗಿದ್ದ ರಘು ಶರ್ಮಾ, ಹರೀಶ್ ಚೌಧರಿ ಮತ್ತು ಗೋವಿಂದ್​ ಸಿಂಗ್ ದೋತಸ್ರರಿಂದ. ಈ ಮೂವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಪಕ್ಷಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದ್ದರು. ಈ ಸಂಬಂಧ ಸೋನಿಯಾಗಾಂಧಿಯವರಿಗೆ ರಾಜೀನಾಮೆ ಸಲ್ಲಿಸಿ, ಪತ್ರವನ್ನೂ ಬರೆದಿದ್ದರು. ನಂತರ ಅಶೋಕ್​ ಗೆಹ್ಲೋಟ್​​ರ ಜೈಪುರದ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಳಿದ ಎಲ್ಲ ಸಚಿವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.   ಕಳೆದ ವರ್ಷವೂ ರಾಜಸ್ಥಾನ ರಾಜಕಾರಣದಲ್ಲಿ ಹೈಡ್ರಾಮಾ ನಡೆದಿತ್ತು. ಆಗ ಸಚಿನ್​ ಪೈಲಟ್​ ಮತ್ತು ಅವರ ಬಣದ 18 ಶಾಸಕರು ಬಂಡಾಯ ಎದ್ದು, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಕಾಂಗ್ರೆಸ್ ಹೈಕಮಾಂಡ್​ ಕೂಡ ಮಧ್ಯಪ್ರವೇಶ ಮಾಡಿತ್ತು.

ಇಂದು ಪ್ರಮಾಣವಚನ ಸ್ವೀಕರಿಸುತ್ತಿರುವ ಸಚಿವರ ಪಟ್ಟಿ ಇಲ್ಲಿದೆ: ಕ್ಯಾಬಿನೆಟ್​ ಮಂತ್ರಿಗಳು 1. ಹೇಮ್​ರಾಮ್​ ಚೌಧರಿ, 2) ಮಹೇಂದ್ರಜಿತ್​ ಸಿಂಗ್​ ಮಾಳವಿಯಾ, 3)ರಾಮ್​ಲಾಲ್​ ಜಾಟ್​, 4)ಮಹೇಶ್ ಜೋಶಿ, 5)ವಿಶ್ವೇಂದ್ರ ಸಿಂಗ್​, 6)ರಮೇಶ್​ ಮೀನಾ, 7) ಮಮತಾ ಭೂಪೇಶ್,​​ 8) ಭಜನ್​ಲಾಲ್​ ಜಟವಾ, 9)ಟಿಕಾರಾಮ್​ ಜುಲಿ 10)ಗೋವಿಂದ್​ ರಾಮ್ ಮೇಘ್ವಾಲ್​ 11)ಶಕುಂತಲಾ ರಾವತ್.

ರಾಜ್ಯ ಸಚಿವರು 1. ಜಹಿದಾ 2. ಬ್ರಿಜೇಂದ್ರ ಸಿಂಗ್​ ಓಲಾ, 3. ರಾಜೇಂದ್ರ ದುರ್ಹಾ 4. ಮುರಳೀಲಾಲ್​ ಮೀನಾ.

ಇವರಲ್ಲಿ ಹೇಮ್​ರಾಮ್​ ಚೌಧರಿ, ವಿಶ್ವೇಂದ್ರ ಸಿಂಗ್​, ರಮೇಶ್​ ಮೀನಾ, ಮುರಳೀಲಾಲ್ ಮೀನಾ ಮತ್ತು ಬ್ರಿಜೇಂದ್ರ ಸಿಂಗ್​ ಓಲಾ ಅವರು ಸಚಿನ್​ ಪೈಲಟ್ ಬಣದವರಾಗಿದ್ದಾರೆ.  ಭಜನ್​ಲಾಲ್​ ಜಾಟವ್​, ಮಮತಾ ಭೂಪೇಶ್​ ಭೈರ್ವಾ, ಟಿಕಾರಾಮ್​ ಜೂಲಿ ಎಸ್​ಸಿ ಸಮುದಾಯದವರು.

ಇದನ್ನೂ ಓದಿ:  ಅತಿಯಾಗಿ ಮೊಬೈಲ್​ ಬಳಸುತ್ತೀರಾ? ಅಡ್ಡಪರಿಣಾಮಗಳ ಬಗ್ಗೆ ಎಚ್ಚರ ಇರಲಿ

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ