AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rail Roko Agitation: ರೈಲು ಹಳಿಗಳ ಮೇಲೆ ಪ್ರತಿಭಟನೆಗೆ ಕುಳಿತ ರೈತರು; 160ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ರೈಲು ತಡೆ ಆಂದೋಲನ ನಡೆಯುತ್ತಿರುವ ರೈಲ್ವೆ ಸ್ಟೇಶನ್​, ಹಳಿಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ರೈಲ್ವೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಬೆಳಗ್ಗೆಯಿಂದ ಇಲ್ಲಿಯವರೆಗೆ ಯಾವುದೇ ರೈಲು ಹಳಿಗಳ ಮೇಲೆ ಬೇರೇನೂ ಅವಘಡಗಳು ಆಗಿಲ್ಲ. 

Rail Roko Agitation: ರೈಲು ಹಳಿಗಳ ಮೇಲೆ ಪ್ರತಿಭಟನೆಗೆ ಕುಳಿತ ರೈತರು; 160ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಹರ್ಯಾಣದ ಬಹದ್ದೂರ್​ಗಡ್​​ನಲ್ಲಿ ರೈಲು ಹಳಿಗಳ ಮೇಲೆ ರೈತರ ಪ್ರತಿಭಟನೆ (ಪಿಟಿಐ ಚಿತ್ರ)
TV9 Web
| Updated By: Lakshmi Hegde|

Updated on:Oct 18, 2021 | 3:50 PM

Share

ದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ (Farm Laws)ಗಳ ವಿರುದ್ಧ 11 ತಿಂಗಳಿಂದಲೂ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಇಂದು ಬೇರೊಂದು ಕಾರಣಕ್ಕೆ ಆರು ತಾಸುಗಳ ರೈಲು ತಡೆ ಆಂದೋಲನ ಹಮ್ಮಿಕೊಂಡಿವೆ. ಉತ್ತರಪ್ರದೇಶದ ಲಖಿಂಪುರ ಖೇರಿ (Lakhimpur Kheri)ಯಲ್ಲಿ ನಡೆದ ಹಿಂಸಾಚಾರದಲ್ಲಿ ಆರೋಪಿ ಎನ್ನಿಸಿರುವ ಆಶಿಶ್​ ಮಿಶ್ರಾ ತಂದೆ ಅಜಯ್​ ಮಿಶ್ರಾ (Ajay Mishra)ರನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂಬುದು ಈಗಿನ ಆಗ್ರಹ. ಇಂದು ದೇಶಾದ್ಯಂತ ರೈಲು ತಡೆ ಆಂದೋಲನ ನಡೆಸುವಂತೆ ಎಲ್ಲ ರೈತ ಸಂಘಟನೆಗಳಿಗೆ ಸಂಯುಕ್ತ ಕಿಸಾನ್​ ಮೋರ್ಚಾ ಕರೆ ನೀಡಿದ್ದು, ಅದರ ಪ್ರಕಾರ ಎಲ್ಲ ಕಡೆ ಪ್ರತಿಭಟನೆ ನಡೆಯುತ್ತಿದೆ. ಈ ರೈಲು ತಡೆ ಆಂದೋಲನ ಬೆಳಗ್ಗೆಯಿಂದ ಎಲ್ಲೆಲ್ಲಿ ಏನಾಯಿತು? ಯಾವ ಸ್ವರೂಪದಲ್ಲಿ  ನಡೆಯಿತು ಎಂಬಿತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ.. 

1. ಪಂಜಾಬ್​, ಹರ್ಯಾಣಗಳಲ್ಲಿ ಈ ರೈಲು ತಡೆ ಆಂದೋಲನದಿಂದ ಪ್ರಯಾಣಿಕರಿಗೆ ತುಂಬ ಅನನುಕೂಲವಾಗಿದೆ. ಒಟ್ಟಾರೆಯಾಗಿ 184 ಪ್ರದೇಶಗಳ 160 ರೈಲುಗಳ ಮೇಲೆ ರೈಲು ತಡೆ ಆಂದೋಲನ ಪ್ರಭಾವ ಬೀರಿದೆ. ಬಹುತೇಕ ರೈತರು ರೈಲ್ವೆ ಹಳಿಗಳ ಮೇಲೆಯೇ ಪ್ರತಿಭಟನೆಗೆ ಕುಳಿತಿದ್ದಾರೆ. ಇದರಿಂದಾಗಿ ವಿವಿಧೆಡೆಯಿಂದ ಸಂಚಾರ ಮಾಡಬೇಕಿದ್ದ 43 ರೈಲುಗಳು ರದ್ದುಗೊಂಡಿವೆ. 50 ರೈಲುಗಳು ಭಾಗಶಃ ರದ್ದಾಗಿವೆ. ಇನ್ನು 63 ರೈಲುಗಳನ್ನು ಅವು ಹೋಗಬೇಕಿದ್ದ ಸ್ಥಳಕ್ಕೆ ಹೋಗುವ ಮೊದಲು ತಡೆಯಲಾಗಿದೆ ಎಂದು ಉತ್ತರ ರೈಲ್ವೆ ವಲಯದ ಸಿಪಿಆರ್​ಒ ತಿಳಿಸಿದ್ದಾರೆ. ಈ ರೈಲುಗಳ ಮೂಲಕ ಪ್ರಯಾಣ ಮಾಡಬೇಕಿದ್ದ ಪ್ರಯಾಣಿಕರು ಸ್ಟೇಶನ್​​ಗಳಲ್ಲಿಯೇ ಪರದಾಡುವಂತಾಗಿದೆ.  ಹಾಗೇ, ಚಳವಳಿ ನಿರತ ರೈತರಿಂದ ಕಾನೂನು ಸುವ್ಯವಸ್ಥೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಅಗತ್ಯವಿರುವಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಲುಧಿಯಾನಾ ಪೊಲೀಸ್​ ಅಧಿಕಾರಿ ದೀಪಕ್​ ಪರೀಕ್​ ತಿಳಿಸಿದ್ದಾರೆ.

2. ದೆಹಲಿಗೆ ಬರುವ ಹಲವು ರೈಲುಗಳ ಮೇಲೆ ಈ ರೈಲ್​ ರುಕೋ (ರೈಲು ತಡೆ) ಆಂದೋಲನ ವ್ಯತಿರಿಕ್ತ ಪ್ರಭಾವ ಬೀರಿದೆ. ಇಲ್ಲಿಯವರೆಗೆ ಒಟ್ಟು 42 ರೈಲುಗಳು ತುಂಬ ತಡವಾಗಿ ಸಂಚಾರ ಮಾಡುತ್ತಿವೆ. ನಾವು ರೈಲುಗಳ ವೇಳಾಪಟ್ಟಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸದ್ಯಕ್ಕಂತೂ ಪ್ರಮುಖ ಮೂರು ಮಾರ್ಗಗಳಾದ ಪಾಲ್ವಾ, ಜಿಂದ್​ ಮತ್ತು ಅಂಬಾಲಾ ಮಾರ್ಗಗಳನ್ನು ಮುಚ್ಚಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

3.  ರೈಲು ತಡೆ ಆಂದೋಲನ ನಡೆಯುತ್ತಿರುವ ರೈಲ್ವೆ ಸ್ಟೇಶನ್​, ಹಳಿಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ರೈಲ್ವೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಬೆಳಗ್ಗೆಯಿಂದ ಇಲ್ಲಿಯವರೆಗೆ ಯಾವುದೇ ರೈಲು ಹಳಿಗಳ ಮೇಲೆ ಬೇರೇನೂ ಅವಘಡಗಳು ಆಗಿಲ್ಲ.  ಇನ್ನು ಚಂಡಿಗಡ್​​​ನ ಎಸ್​ಎಎಸ್​ ನಗರ ಜಿಲ್ಲೆಯ ದಪ್ಪರ್​ ರೈಲ್ವೆ ಸ್ಟೇಶನ್​​ನಲ್ಲಿ ರೈಲು ನಿಂತಿದ್ದು, ರೈತರ ಆಂದೋಲನದಿಂದಾಗಿ ಮುಂದಕ್ಕೆ ಹೋಗಲಾಗುತ್ತಿಲ್ಲ. ಇದರಿಂದ ಅದರಲ್ಲಿದ್ದ ಪ್ರಯಾಣಿಕರು ತುಂಬ ಕಷ್ಟಪಡುತ್ತಿದ್ದಾರೆ.  ಇನ್ನು ಹರ್ಯಾಣದ ಬಹದ್ದೂರ್​ಗಡ್​ನಲ್ಲಿ ರೈಲ್ವೆ ಹಳಿಗಳನ್ನು ರೈತರು ನಿರ್ಬಂಧಿಸಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಮಯವನ್ನು ಮುಂದೂಡಲಾಗಿದೆ. ಇದರ ಹೊರತಾಗಿ ಓಡಿಶಾ, ರಾಜಸ್ಥಾನಗಳಲ್ಲೂ ರೈತರ ಪ್ರತಿಭಟನೆಯಿಂದಾಗಿ ರೈಲು ಸಂಚಾರಕ್ಕೆ ತೊಡಕಾಗಿದೆ.

ಇದನ್ನೂ ಓದಿ: ರಮೋಲಾರನ್ನು ರಂಬೋಲಾ ಎಂದು ಕರೆದ ಮಂಜು ಪಾವಗಡ; ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್​ ಲೋಕೇಶ್​

‘ಹೀಗಾದರೆ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ..’-ಮೇಘಾಲಯ ರಾಜ್ಯಪಾಲರಿಂದ ಎಚ್ಚರಿಕೆ

Published On - 3:45 pm, Mon, 18 October 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ