AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

17 ಬಾಲಕಿಯರಿಗೆ ಮಾದಕ ದ್ರವ್ಯ ಕೊಟ್ಟು ಕಿರುಕುಳ; ಮಾಡಿದ್ದ ಕಿಚಡಿ ಎಸೆದ ಶಾಲಾ ವ್ಯವಸ್ಥಾಪಕರು, ತನಿಖೆಗೆ ಆದೇಶಿಸಿದ ಬಿಜೆಪಿ ಶಾಸಕ

ಈ ಘಟನೆ ನಡೆದು 17 ದಿನಗಳೇ ಕಳೆದು ಹೋಗಿವೆ. ಇದು ಸ್ಥಳೀಯ ಬಿಜೆಪಿ ಶಾಸಕ ಪ್ರಮೋದ್​ ಉಟ್ವಾಲ್​​ರ ಗಮನಕ್ಕೆ ಬಂದು, ಅವರು ತನಿಖೆಗೆ ಆದೇಶ ನೀಡಿದ್ದರಿಂದ ಇದೀಗ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ.

17 ಬಾಲಕಿಯರಿಗೆ ಮಾದಕ ದ್ರವ್ಯ ಕೊಟ್ಟು ಕಿರುಕುಳ; ಮಾಡಿದ್ದ ಕಿಚಡಿ ಎಸೆದ ಶಾಲಾ ವ್ಯವಸ್ಥಾಪಕರು, ತನಿಖೆಗೆ ಆದೇಶಿಸಿದ ಬಿಜೆಪಿ ಶಾಸಕ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Dec 07, 2021 | 12:59 PM

Share

ಪ್ರಾಯೋಗಿಕ ಪರೀಕ್ಷೆ (Practical Exams)ನಡೆಸುವ ನೆಪದಲ್ಲಿ 10ನೇ ತರಗತಿಯ 17 ಬಾಲಕಿಯರಿಗೆ ಮಾದಕ ದ್ರವ್ಯ ನೀಡಿ, ಕಿರುಕುಳ ನೀಡಿದ ಆರೋಪದಡಿ ಉತ್ತರಪ್ರದೇಶದ ಮುಜಾಫರ್​​ನಗರದಲ್ಲಿರುವ ಎರಡು ಶಾಲೆಗಳ ವ್ಯವಸ್ಥಾಪಕರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಈ ಎರಡು ಶಾಲೆಗಳ ವ್ಯವಸ್ಥಾಪಕರು ಪುರ್ಕಾಜಿ ಪಟ್ಟಣದವರಾಗಿದ್ದು, ಭೋಪಾದ 17 ಬಾಲಕಿಯರಿಗೆ ಜಿಜಿಎಸ್​ ಅಂತಾರಾಷ್ಟ್ರೀಯ ಶಾಲೆಯಲ್ಲಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. 

ಬಾಲಕಿಯರೊಟ್ಟಿಗೆ ಮಹಿಳಾ ಶಿಕ್ಷಕಿಯರು ಇರಲಿಲ್ಲ. ಈ ವೇಳೆ ವ್ಯವಸ್ಥಾಪಕರಿಬ್ಬರು ಸೇರಿ ವಿದ್ಯಾರ್ಥಿನಿಯರಿಗೆ ಅಮಲೇರುವ ಆಹಾರ ಕೊಟ್ಟಿದ್ದಾರೆ. ನಂತರ ಕಿರುಕುಳ ನೀಡಿದ್ದಾರೆ ಎಂದು ಬಾಲಕಿಯರ ಕುಟುಂಬದವರೂ ಆರೋಪಿಸಿದ್ದಾರೆ. ಪೊಲೀಸರ ಗಮನಕ್ಕೆ ಈ ವಿಚಾರ ಬಂದರೂ ಕೂಡ ಅವರು ಶಾಲಾ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಅದರ ಬದಲು ಶಾಲಾ ವ್ಯವಸ್ಥಾಪಕರ ವಿರುದ್ಧ ರೂಮರ್ಸ್​ ಹಬ್ಬಿಸಿದ ಮತ್ತು ಬ್ಲ್ಯಾಕ್​ಮೇಲ್​ ಮಾಡಿದ ಆರೋಪದಡಿ ಸ್ಥಳೀಯ ಪತ್ರಕರ್ತನೊಬ್ಬನ ವಿರುದ್ಧವೇ ಕೇಸ್​ ದಾಖಲಿಸಲು ಮುಂದಾದರು ಎಂದು ವಿದ್ಯಾರ್ಥಿನಿಯರ ಪಾಲಕರು ಆರೋಪಿಸಿದ್ದಾರೆ.

ಅಂದಹಾಗೆ ಈ ಘಟನೆ ನಡೆದು 17 ದಿನಗಳೇ ಕಳೆದು ಹೋಗಿವೆ. ಇದು ಸ್ಥಳೀಯ ಬಿಜೆಪಿ ಶಾಸಕ ಪ್ರಮೋದ್​ ಉಟ್ವಾಲ್​​ರ ಗಮನಕ್ಕೆ ಬಂದು, ಅವರು ತನಿಖೆಗೆ ಆದೇಶ ನೀಡಿದ್ದರಿಂದ ಇದೀಗ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ. ಯಾರಿಗಾದರೂ ಹೇಳಿದರೆ ಪರೀಕ್ಷೆಯಲ್ಲಿ ಫೇಲ್​ ಮಾಡುವ ಮತ್ತು ಅವರ ಕುಟುಂಬದವರನ್ನು ಕೊಲ್ಲುವ ಬೆದರಿಕೆಯನ್ನು ವಿದ್ಯಾರ್ಥಿನಿಯರಿಗೆ ಹಾಕಲಾಗಿತ್ತು. ಹೀಗಾಗಿ ಹೆದರಿದ್ದ ವಿದ್ಯಾರ್ಥಿನಿಯರು ಕೆಲವು ದಿನ ಶಾಲೆಗೇ ಹೋಗಲಿಲ್ಲ. ಆಮೇಲೆ ಕುಟುಂಬದವರ ಬಳಿ ನಡೆದ ವಿಷಯವನ್ನು ತಿಳಿಸಿದ್ದಾರೆ. ಹಾಗೇ, ಅಂದು ರಾತ್ರಿ ಊಟಕ್ಕೆ ಕಿಚಡಿ ಮಾಡಲಾಗಿತ್ತು. ಆದರೆ ವ್ಯವಸ್ಥಾಪಕರು ಅದನ್ನು ಬೀಸಾಡಿ, ಬೇರೆ ಆಹಾರ ತಯಾರಿಸಿದರು. ಅದರಲ್ಲಿ ಮಾದಕ ದ್ರವ್ಯ ಇತ್ತು ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.

ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿ ಹೋಗುತ್ತೇನೆ ಎಂದು ಭಾವಿಸಿದ್ದೆ: ಮನದ ಮಾತು ಹಂಚಿಕೊಂಡ ನಟಿ ಸಮಂತಾ ರುತ್ ಪ್ರಭು

Published On - 12:58 pm, Tue, 7 December 21

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ