AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕರ್ ಮಹಾದೇವನ್, ರಾಘವೇಂದ್ರ ರಾಥೋಡ್​​ಗೆ 21ನೇ ಶತಮಾನದ ಐಕಾನ್ ಅವಾರ್ಡ್

ಬಾಲಿವುಡ್ ಗಾಯಕ ಶಂಕರ್ ಮಹಾದೇವನ್ ಮತ್ತು ಫ್ಯಾಷನ್ ಡಿಸೈನರ್ ರಾಘವೇಂದ್ರ ರಾಥೋಡ್ ಅವರು 21 ನೇ ಶತಮಾನದ ಐಕಾನ್ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಂಕರ್ ಮಹಾದೇವನ್, ರಾಘವೇಂದ್ರ ರಾಥೋಡ್​​ಗೆ 21ನೇ ಶತಮಾನದ ಐಕಾನ್ ಅವಾರ್ಡ್
ಶಂಕರ್ ಮಹಾದೇವನ್
guruganesh bhat
| Updated By: ಡಾ. ಭಾಸ್ಕರ ಹೆಗಡೆ|

Updated on:Dec 19, 2020 | 6:45 PM

Share

ಲಂಡನ್ (ಪಿಟಿಐ): ಬಾಲಿವುಡ್ ಗಾಯಕ ಶಂಕರ್ ಮಹಾದೇವನ್ ಮತ್ತು ಫ್ಯಾಷನ್ ಡಿಸೈನರ್ ರಾಘವೇಂದ್ರ ರಾಥೋಡ್ ಅವರು 21 ನೇ ಶತಮಾನದ ಐಕಾನ್ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ಒಟ್ಟು ಹದಿನೈದು ಜನರಿಗೆ ಈ ಪ್ರಶಸ್ತಿ ಲಭಿಸಿದೆ.  ‘ಕೊರೋನಾ ಸಮಯದಲ್ಲಿ ಈ ಪ್ರಶಸ್ತಿ ಸಂದಿರುವುದು ನನಗೆ ಬಹಳೇ ವಿಶೇಷ. ಈ ಮೂಲಕ ನಮ್ಮ ಸ್ಫೂರ್ತಿಯನ್ನು ಸ್ಥಿರವಾಗಿ ಕಾಪಾಡಿಕೊಳ್ಳಲು ಇದು ಕಾರಣವಾಗಿದೆ ಎಂದೇ ಭಾವಿಸುತ್ತೇನೆ.’ ಎಂದು ಶಂಕರ್ ಮಹಾದೇವನ್ ಹೇಳಿದ್ದಾರೆ.

ರಾಘವೇಂದ್ರ ರಾಥೋಡ್

ಫ್ಯಾಷನ್ ಡಿಸೈನರ್ ರಾಘವೇಂದ್ರ ರಾಥೋಡ್, ‘ಕಲೆ ಮತ್ತು ಫ್ಯಾಷನ್ ಉದ್ಯಮಕ್ಕೆ ಈ ಪ್ರಶಸ್ತಿಯಿಂದ ಮಾನ್ಯತೆ ಒದಗಿದಂತಾಗಿದೆ. ಇದರಿಂದ ನನ್ನಲ್ಲಿ ಚೈತನ್ಯ ಹೆಚ್ಚಿದೆ.’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಡಾಬರ್ ಇಂಡಿಯಾ ಲಿಮಿಟೆಡ್‌ನ ಉಪಾಧ್ಯಕ್ಷ ಮೋಹಿತ್ ಬರ್ಮನ್‌ ಅವರಿಗೆ ಡೆಡಿಕೇಟೆಡ್ ಸ್ಟಾಲ್ವರ್ಟ್ ಪ್ರಶಸ್ತಿ ಮತ್ತು ಜಮೈಕಾದ ಕ್ರಿಕೆಟಿಗ ಕ್ರಿಸ್ ಗೇಲ್ ಮತ್ತು ಅರ್ಜೆಂಟೀನಾದ ಪೋಲೊ ಆಟಗಾರ ಅಡಾಲ್ಫೊ ಕ್ಯಾಂಬಿಯಾಸೊ ಅವರಿಗೆ ಸ್ಪರ್ಧಾತ್ಮಕ ಕ್ರೀಡಾ ಪ್ರಶಸ್ತಿಗಳು ಸಂದಿವೆ.  ‘ನನ್ನ ವೃತ್ತಿಪಯಣದ ಯಶಸ್ಸಿಗೆ ತಿರುವು ಕೊಟ್ಟ ಈ ಪ್ರಶಸ್ತಿಯಿಂದ ರೋಮಾಂಚಿತಗೊಂಡಿದ್ದೇನೆ.’ ಎಂದು ಸ್ಕ್ವೇರ್ಡ್ ವಾಟರ್​ಮಿಲನ್ ಲಿಮಿಟೆಡ್ ಸ್ಥಾಪಕ ತರುಣ್ ಘುಲಾಟಿ ಹೇಳಿದ್ದಾರೆ.

Published On - 6:45 pm, Sat, 19 December 20

ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ