ಇವಿಎಂ ಮಂದಿರ ನಿರ್ಮಾಣ ಮಾಡ್ಬೇಕು, ಒಂದು ಕಡೆ ಮೋದಿ, ಮತ್ತೊಂದು ಕಡೆ ಅಮಿತ್ ಶಾ ಮೂರ್ತಿ ಇರ್ಬೇಕು: ಸಂಜಯ್ ರಾವತ್

ಮಹಾರಾಷ್ಟ್ರದಲ್ಲಿ ಇವಿಎಂ ಬಗ್ಗೆ ನಿರಂತರ ರಾಜಕೀಯ ಗದ್ದಲ ನಡೆಯುತ್ತಿದೆ. ಇಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭಾರಿ ಬಹುಮತ ಪಡೆದಿತ್ತು. ಮೈತ್ರಿಕೂಟ 234 ಸ್ಥಾನಗಳಲ್ಲಿ ಮುಂದಿದೆ. ಆದರೆ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಕೆಟ್ಟ ಸೋಲನ್ನು ಎದುರಿಸಬೇಕಾಯಿತು. ಅಸಮಾಧಾನಗೊಂಡ ಪ್ರತಿಪಕ್ಷಗಳು ಎಂವಿಎ ಸೋಲಿಗೆ ಇವಿಎಂಗಳನ್ನು ನಿರಂತರವಾಗಿ ದೂಷಿಸುತ್ತಿವೆ.

ಇವಿಎಂ ಮಂದಿರ ನಿರ್ಮಾಣ ಮಾಡ್ಬೇಕು, ಒಂದು ಕಡೆ ಮೋದಿ, ಮತ್ತೊಂದು ಕಡೆ ಅಮಿತ್ ಶಾ ಮೂರ್ತಿ ಇರ್ಬೇಕು: ಸಂಜಯ್ ರಾವತ್
ಸಂಜಯ್ ರಾವತ್
Image Credit source: Mint

Updated on: Nov 29, 2024 | 11:44 AM

ಮಹಾರಾಷ್ಟ್ರದಲ್ಲಿ ಇವಿಎಂ ಬಗ್ಗೆ ನಿರಂತರ ರಾಜಕೀಯ ಗದ್ದಲ ನಡೆಯುತ್ತಿದೆ. ಇಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭಾರಿ ಬಹುಮತ ಪಡೆದಿತ್ತು. ಮೈತ್ರಿಕೂಟ 234 ಸ್ಥಾನಗಳಲ್ಲಿ ಮುಂದಿದೆ.
ಆದರೆ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಕೆಟ್ಟ ಸೋಲನ್ನು ಎದುರಿಸಬೇಕಾಯಿತು. ಅಸಮಾಧಾನಗೊಂಡ ಪ್ರತಿಪಕ್ಷಗಳು ಎಂವಿಎ ಸೋಲಿಗೆ ಇವಿಎಂಗಳನ್ನು ನಿರಂತರವಾಗಿ ದೂಷಿಸುತ್ತಿವೆ.

ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ನಾಯಕ ಸಂಜಯ್ ರಾವತ್ ಮಹಾಯುತಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮೂರು ವಿಗ್ರಹಗಳಿರುವ ಇವಿಎಂ ಮಂದಿರ ನಿರ್ಮಾಣವಾಗಬೇಕು ಎಂದರು.

ಮುಂದೆ ಮಾತನಾಡಿದ ಅವರು, ‘ಇವಿಎಂಗಳ ಮಂದಿರ ನಿರ್ಮಾಣವಾಗಬೇಕು. ಅದರಲ್ಲಿ ಮೂರು ವಿಗ್ರಹಗಳಿರಬೇಕು. ಒಂದು ಕಡೆ ಪ್ರಧಾನಿ ಮತ್ತು ಇನ್ನೊಂದು ಕಡೆ ಅಮಿತ್ ಶಾ ಮತ್ತು ನಡುವೆ ಇವಿಎಂ ಎಂದಿದ್ದಾರೆ. ಈ ಬಾರಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ 78 ಶಾಸಕರ ಮುಖಗಳು ಮೊದಲ ಬಾರಿಗೆ ಕಾಣಿಸಿಕೊಳ್ಳಲಿವೆ. ಇಲ್ಲಿಯವರೆಗೂ ಸಾಮಾನ್ಯ ನಾಯಕರಂತೆ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನೆತ್ತಿಕೊಂಡು ಬಂದಿದ್ದ ಈ ಶಾಸಕರು ಈಗ ರಾಜ್ಯ ಸರ್ಕಾರದ ಮುಂದೆ ಧ್ವನಿ ಎತ್ತಲಿದ್ದಾರೆ.

88 ಸದಸ್ಯ ಬಲದ ವಿಧಾನಸಭೆಯಲ್ಲಿ ಶೇ.27 ರಷ್ಟು ಶಾಸಕರು ಚುನಾವಣೆಯಲ್ಲಿ ಗೆದ್ದ ನಂತರ ಮೊದಲ ಬಾರಿಗೆ ವಿಧಾನಸಭೆಗೆ ಬಂದಿದ್ದಾರೆ. ಬಿಜೆಪಿಯಿಂದ 33, ಶಿವಸೇನಾ ಶಿಂಧೆಯಿಂದ 14 ಮತ್ತು ಎನ್‌ಸಿಪಿ ಅಜಿತ್‌ನಿಂದ 8 ಶಾಸಕರಿದ್ದಾರೆ. ಪ್ರತಿಪಕ್ಷ ಮಹಾವಿಕಾಸ್ ಅಘಾಡಿಯಲ್ಲಿ ಶಿವಸೇನಾ ಉದ್ಧವ್‌ನ 10, ಕಾಂಗ್ರೆಸ್‌ನ ಆರು ಮತ್ತು ಎನ್‌ಸಿಪಿ ಶರದ್‌ನ ನಾಲ್ವರು ಶಾಸಕರು ಇದ್ದಾರೆ.

ಮತ್ತಷ್ಟು ಓದಿ:  ಮಹಾರಾಷ್ಟ್ರದ ಸಿಎಂ ರೇಸ್​ನಿಂದ ಹಿಂದೆ ಸರಿದ ಏಕನಾಥ್ ಶಿಂಧೆ; ದೇವೇಂದ್ರ ಫಡ್ನವಿಸ್ ಹಾದಿ ಸುಗಮ

ಇದಲ್ಲದೇ ಇತರೆ ಸಣ್ಣ ಪಕ್ಷಗಳ ಇಬ್ಬರು ಅಭ್ಯರ್ಥಿಗಳು ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿ ಚೊಚ್ಚಲ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ವಿಧಾನಸಭೆಯಲ್ಲಿ ನೆಲೆ ಸ್ಥಾಪಿಸಿದ್ದಾರೆ. ಮಾಜಿ ಸಿಎಂ ಅಶೋಕ್ ಚವಾಣ್ ಅವರ ಪುತ್ರಿ ಜಯ ಚವಾಣ್ ಅವರು ಭೋಕರ್ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭೆಗೆ ಬಂದಿದ್ದಾರೆ.

ಆದರೆ ಎನ್‌ಸಿಪಿಯ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಬಬನ್‌ರಾವ್ ಪಚ್‌ಪುಟೆ ಅವರ ಪುತ್ರ ವಿಕ್ರಮ್ ಕೂಡ ಶ್ರೀಗೊಂಡದಿಂದ ಗೆಲುವು ದಾಖಲಿಸುವ ಮೂಲಕ ವಿಧಾನಸಭೆಯ ಹೊಸ್ತಿಲನ್ನು ಪ್ರವೇಶಿಸಿದ್ದಾರೆ. ಇದಲ್ಲದೆ, ಬಿಜೆಪಿಯ ಅತುಲ್ ಭೋಸಲೆ ಅವರು ಕರಾಡ್ ದಕ್ಷಿಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಅವರನ್ನು ಸೋಲಿಸಿ ವಿಧಾನಸಭೆಗೆ ತಲುಪುತ್ತಿದ್ದಾರೆ. ಭೋಸಲೆ ಅವರು ಕಾಂಗ್ರೆಸ್ ನಾಯಕ ದಿಲೀಪ್ ದೇಶಮುಖ್ ಅವರ ಅಳಿಯ.

ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್‌ ಅವರ ಆಪ್ತ ಸಹಾಯಕ ಸುಮಿತ್‌ ವಾಂಖೆಡೆ ಅವರು ಕೂಡ ಆರ್ವಿ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದಾರೆ .

ಇದಲ್ಲದೆ, ಶಿವಸೇನೆಯ ಮಾಜಿ ಶಾಸಕ ಅನಿಲ್ ಬಾಬರ್ ಅವರ ಪುತ್ರ ಸುಹಾಸ್, ಔರಂಗಾಬಾದ್ ಸಂಸದ ಸಂದೀಪನ್ ಬುಮ್ರೆ ಅವರ ಪುತ್ರ ವಿಲಾಸ್, ಮಾಜಿ ಶಾಸಕ ಚಿಮನರಾವ್ ಪಾಟೀಲ್ ಅವರ ಪುತ್ರ ಅಮೋಲ್ ಸಹ ಮೊದಲ ಬಾರಿಗೆ ವಿಧಾನಸಭೆಯಲ್ಲಿ ತಮ್ಮ ಅಸ್ತಿತ್ವವನ್ನು ದಾಖಲಿಸಲಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us