AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Remdesivir injection: ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಸಿದ 7 ಫಾರ್ಮಾ ಕಂಪೆನಿಗಳು; ಯಾವ ಕಂಪೆನಿಯಿಂದ ಎಷ್ಟು ಬೆಲೆ ನಿಗದಿ?

ಕೊರೊನಾ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು 7 ಫಾರ್ಮಾಸ್ಯುಟಿಕಲ್ ಕಂಪೆನಿಗಳು ಕಡಿಮೆ ಮಾಡಿವೆ. ಯಾವ ಕಂಪೆನಿ ಎಷ್ಟು ಬೆಲೆ ಇಳಿಸಿವೆ ಎಂಬ ಮಾಹಿತಿ ಇಲ್ಲಿದೆ.

Remdesivir injection: ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಸಿದ 7 ಫಾರ್ಮಾ ಕಂಪೆನಿಗಳು; ಯಾವ ಕಂಪೆನಿಯಿಂದ ಎಷ್ಟು ಬೆಲೆ ನಿಗದಿ?
ರೆಮ್​ಡೆಸಿವಿರ್ ಇಂಜೆಕ್ಷನ್ (ಪ್ರಾತಿನಿಧಿಕ ಚಿತ್ರ)
Follow us
Srinivas Mata
|

Updated on: Apr 17, 2021 | 8:14 PM

ನವದೆಹಲಿ: ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಏಳು ಫಾರ್ಮಾಸ್ಯುಟಿಕಲ್ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೊರೊನಾ ರೋಗಿಗಳ ಚಿಕಿತ್ಸೆಗೆ ಈ ರೆಮ್​ಡಿಸಿವಿರ್ ನೀಡಲಾಗುತ್ತದೆ. ಹಾಗಿದ್ದರೆ ಯಾವ ಫಾರ್ಮಾಸ್ಯುಟಿಕಲ್ ಕಂಪೆನಿಯ ಇಂಜೆಕ್ಷನ್ ಎಷ್ಟಕ್ಕೆ ಇಳಿಕೆಯಾಯಿತು ಎಂಬ ವಿವರ ಹೀಗಿದೆ: ಕ್ಯಾಡಿಲಾ ಹೆಲ್ತ್‌ಕೇರ್- 2,800 ರೂ.ನಿಂದ ರೂ. 899ಕ್ಕೆ ಇಳಿಕೆ, ಬಯೋಕಾನ್- 3,950ರೂ.ನಿಂದ 2,450ರೂ.ಗೆ, ಡಾಕ್ಟರ್ ರೆಡ್ಡೀಸ್ ಲ್ಯಾಬ್- ರೂ. 5,400ನಿಂದ ರೂ. 2,700ಕ್ಕೆ, ಸಿಪ್ಲಾ- 4 ಸಾವಿರ ರೂ.ನಿಂದ 3,000 ರೂ.ಗೆ, ಮೈಲಾನ್ ಫಾರ್ಮಸಿ-4,800ರೂ.ನಿಂದ 3,400ರೂ.ಗೆ, ಜ್ಯುಬಿಲೆಂಟ್ ಜೆನೆರಿಕ್ಸ್- 4,700ರೂ. ನಿಂದ 3,400ರೂ.ಗೆ, ಹೆಟೆರೋ ಹೆಲ್ತ್‌ಕೇರ್- ರೂ. 5,400ರಿಂದ ರೂ. 3,490ಕ್ಕೆ ಇಳಿಕೆ ಆಗಿದೆ.

ಈ ಏಳು ಉತ್ಪಾದಕರನ್ನು ಹೊರತುಪಡಿಸಿ, ಭಾರತದ ಅತಿ ದೊಡ್ಡ ಔಷಧ ತಯಾರಕ ಸನ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯು ಸಿನ್​ಜೀನ್ ಜತೆಗೂಡಿ ರೆಮ್​ಡಿಸಿವಿರ್ ಉತ್ಪಾದನೆ ಮಾಡುತ್ತದೆ. ಸನ್ ಫಾರ್ಮಾದಿಂದ ಔಷಧ ಉತ್ಪಾದನೆಯ ಪ್ರಮಾಣ ಹೆಚ್ಚಿಸುತ್ತಿದೆ. ಸಿನ್​ಜೀನ್ ಬ್ರ್ಯಾಂಡ್ ಅಡಿಯಲ್ಲಿ ರೆಮ್​ವಿನ್ ಮಾರಾಟ ಮಾಡುತ್ತಿದೆ. ಅಂದ ಹಾಗೆ ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಈ ಇಂಜೆಕ್ಷನ್ ಬೆಲೆಯಲ್ಲಿ ಇಳಿಕೆ ಆಗಿದೆ. ವಿದೇಶಗಳಿಗೆ ರೆಮ್​ಡಿಸಿವಿರ್ ಇಂಜೆಕ್ಷನ್ ರಫ್ತು ನಿಷೇಧ ಮಾಡಲಾಗಿದ್ದು, ಇಂಜೆಕ್ಷನ್ ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಡಿ.ವಿ. ಸದಾನಂದ ಗೌಡ ಅವರ ಮೇಲೆ ಕೇಂದ್ರ ಔಷಧ ಇಲಾಖೆ ಜವಾಬ್ದಾರಿ ಇದೆ.

ಕೋವಿಡ್- 19 ಎರಡನೇ ಅಲೆಯಲ್ಲಿ ಭಾರತದ ಹಲವು ಭಾಗಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಆಸ್ಪತ್ರೆಗಳಲ್ಲಿ ಬೆಡ್​ಗಳಿಗೆ ಕೊರತೆ ಎದುರಾಗಿದೆ. ಇಂಥ ಸನ್ನಿವೇಶದಲ್ಲಿ ಇಂಜೆಕ್ಷನ್ ಉತ್ಪಾದನೆಯನ್ನು ಹೆಚ್ಚು ಮಾಡಿ, ಬೆಲೆ ಇಳಿಕೆಗೆ ಮುಂದಾಗಲಾಗಿದೆ. ಶುಕ್ರವಾರದಂದು ಭಾರತದಲ್ಲಿ 2,34,000 ಹೊಸ ಪ್ರಕರಣಗಳು ವರದಿ ಆಗಿವೆ. ಆ ಪೈಕಿ ಮಹಾರಾಷ್ಟ್ರವೊಂದರಲ್ಲೇ 64,000ದಷ್ಟು ಕೊರೊನಾ ಸೋಂಕಿತರು ಸೇರ್ಪಡೆ ಆಗಿದ್ದಾರೆ. ಉತ್ತರಪ್ರದೇಶದಲ್ಲಿ 27,000ಕ್ಕೂ ಹೆಚ್ಚು ಮತ್ತು ದೆಹಲಿಯಲ್ಲಿ 19,000ಕ್ಕೂ ಹೆಚ್ಚು ಪ್ರಕರಣಗಳು ಬಂದಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ರೆಮ್​ಡಿಸಿವಿರ್ ಔಷಧ ಕೊರತೆ ಇಲ್ಲ: ಹೈಕೋರ್ಟ್​ಗೆ ರಾಜ್ಯ ಸರ್ಕಾರ ಮಾಹಿತಿ

(Remdesivir injection price decreased by 7 pharmaceutical companies in India)

ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್