AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ್ಣುಗಳ ರಾಜನ ಸಾಗಣೆಗೆ ವಿಶೇಷ ರೈಲು; 200 ಟನ್​ ಮಾವಿನ ಹಣ್ಣುಗಳನ್ನು ಆಂಧ್ರದಿಂದ ದೆಹಲಿಗೆ ಸಾಗಿಸಿದ ಮೊದಲ ಟ್ರೇನ್​

ಹೀಗೆ ಹಣ್ಣುಗಳ ಸಾಗಣೆ ಸೇವೆಯನ್ನು ಮೊದಲು ಪ್ರಾರಂಭಿಸಿದ್ದು, ಪೂರ್ವ ಕರಾವಳಿ ರೈಲ್ವೆಯ ವಾಲ್ಟೇರ್ ವಿಭಾಗ. ಅಗತ್ಯ ಸೇವೆಗಳ ನಿರಂತರ ಪೂರೈಕೆ ಮಾಡುವ ಉದ್ದೇಶದಿಂದ ಈ ಸೇವೆ ಶುರುವಾಗಿದೆ.

ಹಣ್ಣುಗಳ ರಾಜನ ಸಾಗಣೆಗೆ ವಿಶೇಷ ರೈಲು; 200 ಟನ್​ ಮಾವಿನ ಹಣ್ಣುಗಳನ್ನು ಆಂಧ್ರದಿಂದ ದೆಹಲಿಗೆ ಸಾಗಿಸಿದ ಮೊದಲ ಟ್ರೇನ್​
ಇಂದು ಸಾಗಿಸಲಾದ ಮಾವಿನ ಹಣ್ಣು
Lakshmi Hegde
|

Updated on: Apr 17, 2021 | 5:13 PM

Share

ಹೆಚ್ಚುತ್ತಿರುವ ಕೊರೊನಾ ವೈರಸ್​ ಆತಂಕದ ನಡುವೆಯೂ ಈ ಸೀಸನ್​​ನ ಮೊದಲ ಮ್ಯಾಂಗೋ ವಿಶೇಷ ರೈಲು ಇಂದು ಆಂಧ್ರಪ್ರದೇಶದ ವಿಜಯನಗರಂನಿಂದ ದೆಹಲಿಯ ಆದರ್ಶನಗರ ರೈಲ್ವೆ ಸ್ಟೇಶನ್​ ತಲುಪಿದೆ. ಈ ರೈಲಿನಲ್ಲಿ ಒಟ್ಟು 200 ಟನ್​ ಹಣ್ಣುಗಳ, 11, 600 ಬಾಕ್ಸ್​ಗಳನ್ನು ತರಲಾಗಿದೆ. ಆಂಧ್ರಪ್ರದೇಶದ ಉತ್ತರದಲ್ಲಿರುವ ವಿಜಯನಗರಂ ಮಾವಿನ ಹಣ್ಣು ಸಾಗಣೆಯ ಪ್ರಮುಖ ಕೇಂದ್ರವಾಗಿದೆ.

ಆಂಧ್ರಪ್ರದೇಶದಿಂದ ಮಾವಿನ ಹಣ್ಣು ಸಾಗಣೆಯ ಬಗ್ಗೆ ಮಾತನಾಡಿದ ದೆಹಲಿ ಆಝಾದ್​​ಪುರ ಮಂಡಿಯ ತೇಜಿಂದರ್​ ಸಿಂಗ್​, ಬರೀ ಮಾವಿನಹಣ್ಣಷ್ಟೇ ಅಲ್ಲ, ಹೀಗೆ ರೈಲಿನ ಮೂಲಕ ಚಿಕ್ಕು, ಬಾಳೆಹಣ್ಣು, ಕಿತ್ತಳೆ ಹಣ್ಣುಗಳನ್ನೂ ಸಾಗಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ವಾಸ್ತವದಲ್ಲಿ ಮೊದಲು ಶುರುವಾಗಿದ್ದು ಕಿತ್ತಳೆ ಹಣ್ಣುಗಳ ಸಾಗಣೆ. ನಂತರ ಬಾಳೆಹಣ್ಣು, ಮಾವಿನ ಹಣ್ಣುಗಳ ಟ್ರಾನ್ಸ್​ಪೋರ್ಟ್​ಗೂ ಅದನ್ನು ವಿಸ್ತರಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಹೀಗೆ ಹಣ್ಣುಗಳ ಸಾಗಣೆ ಸೇವೆಯನ್ನು ಮೊದಲು ಪ್ರಾರಂಭಿಸಿದ್ದು, ಪೂರ್ವ ಕರಾವಳಿ ರೈಲ್ವೆಯ ವಾಲ್ಟೇರ್ ವಿಭಾಗ. ಅಗತ್ಯ ಸೇವೆಗಳ ನಿರಂತರ ಪೂರೈಕೆ ಮಾಡುವ ಉದ್ದೇಶದಿಂದ ಈ ಸೇವೆ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎ.ಕೆ.ತ್ರಿಪಾಠಿ, ಮಾವು ಸೇರಿ ಇತರ ಹಣ್ಣು ವ್ಯಾಪಾರಿಗಳ ಅಗತ್ಯತೆಯನ್ನು ಪರಿಗಣಿಸಿ, ವಾಲ್ಟೇರ್​ ವಿಭಾಗೀಯ ರೈಲ್ವೆ ವಿಶೇಷ ಪಾರ್ಸೆಲ್​ ರೈಲುಗಳ ಸಂಚಾರ ಮಾಡಿಸುತ್ತಿದೆ. ಕೊವಿಡ್​ 19 ಸಂದರ್ಭದ ಹೊರತಾಗಿಯೂ, ಈ ರೈಲು ಅಗತ್ಯ ವಸ್ತುಗಳ ನಿರಂತರವಾಗಿ ಪೂರೈಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು 4350 ಟನ್​ ಮಾವಿನ ಹಣ್ಣುಗಳ ಸಾಗಣೆಗಾಗಿ 20 ವಿಶೇಷ ರೈಲುಗಳು ಸಂಚಾರ ಮಾಡಿದ್ದವು. ಪ್ರಸಕ್ತ ವರ್ಷದ ಮೊದಲ ರೈಲು ಇಂದು ದೆಹಲಿಗೆ ತೆರಳಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಟ್ರೇನ್​ಗಳನ್ನು ಇದಕ್ಕೆ ಬಳಸಲಾಗುತ್ತದೆ.

ಇದನ್ನೂ ಓದಿ:  Explainer: ಭಾರತದಲ್ಲಿ ಕೊವಿಡ್​ ಲಸಿಕೆ ಕೊರತೆ: ನಮ್ಮ ಸರ್ಕಾರ ಎಡವಿದ್ದು ಎಲ್ಲಿ? ಏನು ಪರಿಹಾರ?

Immunity Boosters: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಾವೆಲ್ಲಾ ಜ್ಯೂಸ್ ಕುಡಿಯಬೇಕು?

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!