AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಶೀಲ್ಡ್​ ಲಸಿಕೆ ಪಡೆದ ವೃದ್ಧೆಗೆ ಮರಳಿ ಬಂತು ದೃಷ್ಟಿ; 9 ವರ್ಷ ಕಾಡಿದ ದೃಷ್ಟಿದೋಷ ನಿವಾರಣೆ ಆಯ್ತು ಎಂದ ಮಹಿಳೆ!

Covishield Vaccine: ಜೂನ್​ 26ನೇ ತಾರೀಖು ಮೊದಲ ಡೋಸ್​ ಕೊರೊನಾ ಲಸಿಕೆ ಪಡೆದಿದ್ದಾರೆ. ಅವರು ಕೊವಿಶೀಲ್ಡ್​ ಲಸಿಕೆ ಸ್ವೀಕರಿಸಿದ್ದು, ಇದೀಗ ದೃಷ್ಟಿಯಲ್ಲಿ ಮೊದಲಿಗಿಂತ ಶೇ.30ರಿಂದ ಶೇ.40ರಷ್ಟು ಭಾಗ ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಕೊವಿಶೀಲ್ಡ್​ ಲಸಿಕೆ ಪಡೆದ ವೃದ್ಧೆಗೆ ಮರಳಿ ಬಂತು ದೃಷ್ಟಿ; 9 ವರ್ಷ ಕಾಡಿದ ದೃಷ್ಟಿದೋಷ ನಿವಾರಣೆ ಆಯ್ತು ಎಂದ ಮಹಿಳೆ!
ಲಸಿಕೆ ಪಡೆದ ನಂತರ ದೃಷ್ಟಿದೋಷ ನಿವಾರಣೆಯಾಗಿದೆ ಎಂದ ಮಹಿಳೆ
TV9 Web
| Edited By: |

Updated on:Jul 08, 2021 | 9:01 AM

Share

ಮುಂಬೈ: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಭರದಿಂದ ಸಾಗಿದೆ. ಎರಡನೇ ಅಲೆಯಿಂದ ಹೈರಾಣಾಗಿರುವ ಆರೋಗ್ಯ ವ್ಯವಸ್ಥೆಯನ್ನು ಡೆಲ್ಟಾ ರೂಪಾಂತರಿ ಹಾಗೂ ಮೂರನೇ ಅಲೆಯ ಹೊಡೆತದಿಂದ ರಕ್ಷಿಸಲು ಲಸಿಕೆಯೊಂದೇ ಪರಿಣಾಮಕಾರಿ ಅಸ್ತ್ರ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಈಗಾಗಲೇ ಇರುವ ಕೊರೊನಾ ಲಸಿಕೆಗಳ ಜತೆಗೆ ಹೊಸ ಲಸಿಕೆಗಳಿಗೂ ಅನುಮತಿ ನೀಡಿ ವಿತರಣೆ ಮಾಡುವತ್ತ ಗಮನ ನೀಡಲಾಗುತ್ತಿದೆ. ಆದರೆ, ಎಷ್ಟೋ ಜನರು ಕೊರೊನಾ ಲಸಿಕೆ ಪಡೆದ ನಂತರ ಜ್ವರ ಬರುತ್ತದೆ, ಮೈಕೈ ನೋವು ಶುರುವಾಗುತ್ತದೆ ಎಂಬ ಭಯದ ಕಾರಣಕ್ಕೆ ಲಸಿಕೆ ಸ್ವೀಕರಿಸಲು ಇನ್ನೂ ಹಿಂದೇಟು ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಪರೂಪವೆಂಬ ಘಟನೆಯೊಂದು ನಡೆದಿದ್ದು ಲಸಿಕೆ ಪಡೆದ 70 ವರ್ಷದ ವೃದ್ಧೆಯೊಬ್ಬರು ತಮ್ಮನ್ನು ಕಾಡುತ್ತಿದ್ದ ದೃಷ್ಟಿದೋಷ ಬಹುಪಾಲು ನಿವಾರಣೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಈ ಅಚ್ಚರಿಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ವಾಸಿಂ ಜಿಲ್ಲೆಯ ಬೆಂದೆರ್​ವಾಡಿ ನಿವಾಸಿ ಮಥುರಾಬಾಯಿ ಬಿಡ್ವೆ ಎಂಬ 70 ವರ್ಷ ವಯಸ್ಸಿನ ವೃದ್ಧೆ ತಮಗೆ ಕೊರೊನಾ ಲಸಿಕೆ ಪಡೆದ ನಂತರ ದೃಷ್ಟಿ ಮರುಕಳಿಸಿದ್ದಾಗಿ ಹೇಳುತ್ತಿದ್ದಾರೆ. ಸುಮಾರು 9 ವರ್ಷಗಳ ಹಿಂದೆ ಕಣ್ಣಿನ ಪೊರೆ ಬೆಳೆದು ದೃಷ್ಟಿ ಕಳೆದುಕೊಂಡಿದ್ದ ಮಥುರಾಬಾಯಿ ಕಳೆದ ಜೂನ್​ 26ನೇ ತಾರೀಖು ಮೊದಲ ಡೋಸ್​ ಕೊರೊನಾ ಲಸಿಕೆ ಪಡೆದಿದ್ದಾರೆ. ಅವರು ಕೊವಿಶೀಲ್ಡ್​ ಲಸಿಕೆ ಸ್ವೀಕರಿಸಿದ್ದು, ಇದೀಗ ದೃಷ್ಟಿಯಲ್ಲಿ ಮೊದಲಿಗಿಂತ ಶೇ.30ರಿಂದ ಶೇ.40ರಷ್ಟು ಭಾಗ ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಮೂಲತಃ ಜಲ್ನಾ ಜಿಲ್ಲೆಯ ಪರ್ತೂರ್​ನವರಾಗಿರುವ ಅವರು ಕೆಲ ವರ್ಷಗಳಿಂದ ತಮ್ಮ ಸಂಬಂಧಿಗಳ ಮನೆಯಲ್ಲಿ ನೆಲೆಸಿದ್ದಾರೆ. ಜೂನ್​ 26ರಂದು ಕೊವಿಶೀಲ್ಡ್​ ಲಸಿಕೆ ಪಡೆದಿರುವ ಅವರಿಗೆ ಮರುದಿನವೇ ಒಂದು ಕಣ್ಣಿನ ದೃಷ್ಟಿ ಶೇ.30ರಿಂದ ಶೇ.40ರಷ್ಟು ವೃದ್ಧಿಸಿದೆಯಂತೆ. ಈ ಚಮತ್ಕಾರಕ್ಕೆ ಕಾರಣವೇನೆಂದು ಈ ತನಕ ತಿಳಿದುಬಂದಿಲ್ಲವಾದರೂ ಸದ್ಯ ಕೊರೊನಾ ಲಸಿಕೆಯಿಂದಾಗುವ ಅಡ್ಡಪರಿಣಾಮಗಳ ಬಗ್ಗೆಯೇ ಕೇಳಿಬರುತ್ತಿದ್ದ ಸುದ್ದಿಗಳ ನಡುವೆ ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಕೊರೊನಾ ಲಸಿಕೆ ಪಡೆದವರ ದೇಹದಲ್ಲಿ ಅಯಸ್ಕಾಂತೀಯ ಗುಣ ಅಭಿವೃದ್ಧಿಯಾಗಿದೆ, ವಿದ್ಯುತ್ ಉತ್ಪಾದನೆಯಾಗುತ್ತದೆ ಎಂಬೆಲ್ಲಾ ಸುದ್ದಿಗಳು ಹರಿದಾಡಿ ವೈರಲ್​ ಆಗಿದ್ದವು. ಆದರೆ, ಕೊರೊನಾ ಲಸಿಕೆಯಿಂದ ಆ ರೀತಿಯ ಬದಲಾವಣೆಗಳು ಆಗಲಾರದು, ಮೈಗೆ ಬಲ್ಬ್​ ತಾಗಿಸಿದರೆ ಬೆಳಕು ಬರುತ್ತದೆ ಎನ್ನುವುದರ ಹಿಂದಿನ ಅಸಲಿಯತ್ತೇ ಬೇರೆ ಇದೆ. ಅದಕ್ಕೂ ಲಸಿಕೆಗೂ ಸಂಬಂಧವಿಲ್ಲ ಎಂದು ತಜ್ಞರು ಹೇಳಿದ್ದರು.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆಯದವರ ದೇಹದಲ್ಲೇ ವೈರಾಣು ರೂಪಾಂತರ ಸಾಧ್ಯತೆ: ತಜ್ಞರ ಎಚ್ಚರಿಕೆ

ಕೊರೊನಾ ಲಸಿಕೆ ಪಡೆಯುವ ಮುನ್ನ ಗರ್ಭಿಣಿಯರು ಗಮನಿಸಲೇಬೇಕಾದ ಅಂಶಗಳು; ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಟ

Published On - 7:29 am, Thu, 8 July 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ