ಈ ಬಾರಿ ವಿದ್ಯುತ್ ಅವಘಡ: ಸುಟ್ಟು ಕರಕಲಾದ 8 ಕೃಷಿ ಕಾರ್ಮಿಕರು

ಸಾಧು ಶ್ರೀನಾಥ್​

|

Updated on:May 15, 2020 | 11:12 AM

ಹೈದರಾಬಾದ್: ಕಾರ್ಮಿಕರ ವಿಷಯದಲ್ಲಿ ಈ ಬಾರಿ ಆಂಧಪ್ರದೇಶದಿಂದ ಭಾರಿ ದಾರುಣ ಘಟನೆಯೊಂದು ವರದಿಯಾಗಿದೆ. ಮೆಣಿಸಿನ ಕಾಯಿ ತುಂಬಿಕೊಂಡು ಕಾರ್ಮಿಕರೊಂದಿಗೆ ತೆರಳುತ್ತಿದ್ದ ಟ್ರಾಕ್ಟರ್​ಗೆ ವಿದ್ಯುತ್ ತಂತಿ ತಗುಲಿದೆ. ಆ ವೇಳೆ ವಿದ್ಯುತ್ ಹರಿದು 8 ಜನ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಹಲವರಿಗೆ ಸುಟ್ಟ ಗಾಯಗಳಾಗಿವೆ. ಟ್ರಾಕ್ಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದದ್ದರಿಂದ ಘಟನೆ ಸಂಭವಿಸಿದೆ. ಪ್ರಕಾಶಂ ಜಿಲ್ಲೆಯ ನಾಗಲುಪ್ಪಲಪಾಡು ಮಂಡಲಂ ಮಾಚವರಂನಲ್ಲಿ ಈ ದುರ್ಘಟನೆ ನಡೆದಿದೆ. ಮೃತರ ಪೈಕಿ ಐವರು ಮಹಿಳಾ ಕಾರ್ಮಿಕರಿದ್ದರೆ, ಮೂವರು ಪುರುಷ ಕಾರ್ಮಿಕರು. ದುರಂತದ […]

ಈ ಬಾರಿ ವಿದ್ಯುತ್ ಅವಘಡ: ಸುಟ್ಟು ಕರಕಲಾದ 8 ಕೃಷಿ ಕಾರ್ಮಿಕರು

ಹೈದರಾಬಾದ್: ಕಾರ್ಮಿಕರ ವಿಷಯದಲ್ಲಿ ಈ ಬಾರಿ ಆಂಧಪ್ರದೇಶದಿಂದ ಭಾರಿ ದಾರುಣ ಘಟನೆಯೊಂದು ವರದಿಯಾಗಿದೆ. ಮೆಣಿಸಿನ ಕಾಯಿ ತುಂಬಿಕೊಂಡು ಕಾರ್ಮಿಕರೊಂದಿಗೆ ತೆರಳುತ್ತಿದ್ದ ಟ್ರಾಕ್ಟರ್​ಗೆ ವಿದ್ಯುತ್ ತಂತಿ ತಗುಲಿದೆ. ಆ ವೇಳೆ ವಿದ್ಯುತ್ ಹರಿದು 8 ಜನ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಹಲವರಿಗೆ ಸುಟ್ಟ ಗಾಯಗಳಾಗಿವೆ. ಟ್ರಾಕ್ಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದದ್ದರಿಂದ ಘಟನೆ ಸಂಭವಿಸಿದೆ. ಪ್ರಕಾಶಂ ಜಿಲ್ಲೆಯ ನಾಗಲುಪ್ಪಲಪಾಡು ಮಂಡಲಂ ಮಾಚವರಂನಲ್ಲಿ ಈ ದುರ್ಘಟನೆ ನಡೆದಿದೆ.

ಮೃತರ ಪೈಕಿ ಐವರು ಮಹಿಳಾ ಕಾರ್ಮಿಕರಿದ್ದರೆ, ಮೂವರು ಪುರುಷ ಕಾರ್ಮಿಕರು. ದುರಂತದ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ದುರ್ಘಟನೆಯಲ್ಲಿ ಗಾಯಗೊಂಡವರಿಗೆ ಸ್ಥಳೀಯವಾಗಿ ಕೂಡಲೇ ಚಿಕಿತ್ಸೆ ನೀಡಲು ಅದೇಶಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada