AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮುದ್ರ ತೀರದಲ್ಲಿ ರಶ್ಮಿಕಾ-ಆನಂದ್ ದೇವರಕೊಂಡ ಆಹ್ವಾನಿಸಿದ್ದು ಯಾರನ್ನ? ಫನ್ ಫೋಟೋ ವೈರಲ್

ಸಮುದ್ರ ತೀರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಆನಂದ್ ದೇವರಕೊಂಡ ಅವರ ತಮಾಷೆಯ ಫೋಟೋ ವೈರಲ್ ಆಗಿದೆ. ವಿಜಯ್ ದೇವರಕೊಂಡ ಕ್ಲಿಕ್ಕಿಸಿದ ಈ ಚಿತ್ರದಲ್ಲಿ ರಶ್ಮಿಕಾ-ಆನಂದ್ ಸಿಳ್ಳೆ ಹೊಡೆಯುತ್ತಾ ನಿಂತಿದ್ದಾರೆ. "ಮೀನುಗಳನ್ನು ಕರೆಯುವಂತೆ ಕಾಣುತ್ತಿದೆ" ಎಂದು ವಿಜಯ್ ತಮಾಷೆ ಮಾಡಿದ್ದರು. ಆನಂದ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಶ್ಮಿಕಾ ಈ ಫೋಟೋ ಹಂಚಿಕೊಂಡು ಶುಭಕೋರಿದ್ದಾರೆ.

ಸಮುದ್ರ ತೀರದಲ್ಲಿ ರಶ್ಮಿಕಾ-ಆನಂದ್ ದೇವರಕೊಂಡ ಆಹ್ವಾನಿಸಿದ್ದು ಯಾರನ್ನ? ಫನ್ ಫೋಟೋ ವೈರಲ್
ರಶ್ಮಿಕಾ-ಆನಂದ್
ರಾಜೇಶ್ ದುಗ್ಗುಮನೆ
|

Updated on: Mar 16, 2026 | 7:02 AM

Share

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (Vijay Devarakonda) ವಿವಾಹ ಆಗಿ ಹಾಯಾಗಿದ್ದಾರೆ. ಇವರು ಮದುವೆಗೂ ಮೊದಲು ಅನೇಕ ಕಡೆಗಳಲ್ಲಿ ಸುತ್ತಾಟ ನಡೆಸಿದ್ದರು. ವಿಶೇಷ ಎಂದರೆ ಈ ರೀತಿ ಸುತ್ತಾಟ ನಡೆಸುವಾಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಜೊತೆ ಆನಂದ್ ದೇವರಕೊಂಡ ಕೂಡ ಇರುತ್ತಿದ್ದರು. ರಶ್ಮಿಕಾ ಹಾಗೂ ಆನಂದ್​ದು ಅತ್ತಿಗೆ-ಬಾವ ಸಂಬಂಧ. ಇವರ ಸಂಬಂಧ ಕ್ರೇಜಿ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ವಿಜಯ್, ರಶ್ಮಿಕಾ ಹಾಗೂ ಆನಂದ್ ಈ ಮೊದಲು ಅನೇಕ ಕಡೆಗಳಲ್ಲಿ ಸುತ್ತಾಟ ನಡೆಸಲು ತೆರಳಿದ್ದು ಇದೆ. ಈ ವೇಳೆ ವಿಜಯ್ ದೇವರಕೊಂಡ ಅವರು ಒಂದು ಫನ್​ ಫೋಟೋನ ಕ್ಲಿಕ್ ಮಾಡಿದ್ದರು. ಈ ಫೋಟೋದಲ್ಲಿ ರಶ್ಮಿಕಾ ಹಾಗೂ ಆನಂದ್ ಸಮುದ್ರ ನೋಡುತ್ತಾ ನಿಂತಿದ್ದಾರೆ. ಅಲ್ಲದೆ, ಸಿಳ್ಳೆ ಹೊಡೆಯುತ್ತಾ ಇದ್ದಾರೆ. ಈ ಪೋಸ್ ನೋಡಿ ವಿಜಯ್ ದೇವರಕೊಂಡ ಅವರು ಒಂದು ಫನ್​ ಕಮೆಂಟ್​​ನ ಪಾಸ್ ಮಾಡಿದ್ದರಂತೆ. ಜೀವನದಲ್ಲಿ ಯಾವಾಗಲೂ ಇಷ್ಟೇ ಕ್ರೇಜಿ ಆಗಿರಬೇಕು ಎಂದು ರಶ್ಮಿಕಾ ಹೇಳಿದ್ದಾರೆ.

‘ಮೀನನ್ನು ಕರೆಯುವಂತೆ ಕಾಣಿಸುತ್ತಿದೆ ಎಂದು ವಿಜಯ್ ದೇವರಕೊಂಡ ಅವರು ಹೇಳಿದ್ದರು’ ಎಂದು ವಿಜಯ್ ದೇವರಕೊಂಡ ಫನ್ ಕಮೆಂಟ್ ಮಾಡಿದ್ದರಂತೆ. ಈ ಫೋಟೋನ ಹಂಚಿಕೊಂಡು, ಆನಂದ್​​ಗೆ ರಶ್ಮಿಕಾ ಬರ್ತ್​​ಡೇ ವಿಶ್ ಮಾಡಿದ್ದಾರೆ. ‘ಆನಂದಾ… ಹ್ಯಾಪಿ ಹ್ಯಾಪಿ ಹ್ಯಾಪಿಯೆಸ್ಟ್ ಬರ್ತ್​​ಡೇ. ನೀನು ಶೂಟಿಂಗ್ ಕಾರಣಕ್ಕೆ ಹೊರಕ್ಕೆ ಇರುವುದರಿಂದ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ರಶ್ಮಿಕಾ ಹೇಳಿದ್ದಾರೆ.

ಇದನ್ನೂ ಓದಿ: ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು?

ವಿಜಯ್ ದೇವರಕೊಂಡ ಸಹೋದರ ಆನಂದ್ ಅವರು ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ವಿಜಯ್ ಹೀರೋ ಆಗಿ ಮಿಂಚಿದ ಬಳಿಕ ಆನಂದ್ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆನಂದ್ ನಟನೆಯ ಸ್ಯಾಡ್ ಎಂಡಿಂಗ್ ಇರೋ ‘ಬೇಬಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಬಳಿಕ ಆನಂದ್ ಜನಪ್ರಿಯತೆ ಹೆಚ್ಚಿತು. ಅವರು ಸದ್ಯ ಆಯ್ದ ಕೆಲವು ಪ್ರಾಜೆಕ್ಟ್​​ಗಳನ್ನು ಒಪ್ಪಿ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ
ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ
ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ
ಕೊಪ್ಪಳದಲ್ಲಿ ನಿಲ್ಲದ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆ
ಕೊಪ್ಪಳದಲ್ಲಿ ನಿಲ್ಲದ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆ
ಬೆಳ್ಳಂಬೆಳಗ್ಗೆ ಸಫಾರಿ ತೆರಳಿದವರಿಗೆ ದರ್ಶನ ಕೊಟ್ಟ ಅಪರೂಪದ ಕರಿಚಿರತೆ!
ಬೆಳ್ಳಂಬೆಳಗ್ಗೆ ಸಫಾರಿ ತೆರಳಿದವರಿಗೆ ದರ್ಶನ ಕೊಟ್ಟ ಅಪರೂಪದ ಕರಿಚಿರತೆ!
ಡೋಲು ಬಾರಿಸುತ್ತಾ ಭರ್ಜರಿ ಡ್ಯಾನ್ಸ್ ಮಾಡಿದ ಶಾಸಕ ಶಿವಲಿಂಗೇಗೌಡ
ಡೋಲು ಬಾರಿಸುತ್ತಾ ಭರ್ಜರಿ ಡ್ಯಾನ್ಸ್ ಮಾಡಿದ ಶಾಸಕ ಶಿವಲಿಂಗೇಗೌಡ
ರೈಲಿನಿಂದ ಮಗು ಬಿದ್ದೇಬಿಡ್ತು, ಚೈನ್ ಎಳೆದರೂ ನಿಲ್ಲದ ರೈಲು
ರೈಲಿನಿಂದ ಮಗು ಬಿದ್ದೇಬಿಡ್ತು, ಚೈನ್ ಎಳೆದರೂ ನಿಲ್ಲದ ರೈಲು
ಇಂದು ಈ ರಾಶಿಯವರು ದುಂದು ವೆಚ್ಚ ಮಾಡಬೇಡಿ
ಇಂದು ಈ ರಾಶಿಯವರು ದುಂದು ವೆಚ್ಚ ಮಾಡಬೇಡಿ