AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna

Rashmika Mandanna

ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟಿ. 1996ರ ಏಪ್ರಿಲ್ 5ರಂದು ಕರ್ನಾಟಕದ ವಿರಾಜಪೇಟೆಯಲ್ಲಿ ಜನಿಸಿದರು. 2016ರ ಕನ್ನಡ ಸಿನಿಮಾ ‘ಕಿರಿಕ್ ಪಾರ್ಟಿ’ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಈ ಸಿನಿಮಾ ವ್ಯಾಪಕ ಮನ್ನಣೆ ಮತ್ತು ಪುರಸ್ಕಾರಗಳನ್ನು ಪಡೆಯಿತು. ಅವರ ನಟನೆಯು ಇಷ್ಟ ಆಯಿತು. ಅವರು ಕರ್ನಾಟಕ ಕ್ರಶ್ ಆದರು. ‘ಗೀತ ಗೋವಿಂದಂ’, ‘ಪುಷ್ಪ’ ಸೇರಿ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅನಿಮಲ್’ ಚಿತ್ರದಿಂದ ಅವರಿಗೆ ಬಾಲಿವುಡ್ನಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಇದಲ್ಲದೆ ತಮಿಳು ಚಿತ್ರರಂಗದಲ್ಲೂ ಅವರಿಗೆ ಸಖತ್ ಬೇಡಿಕೆ ಇದೆ. ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಿದೆ. ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ಇಲ್ಲ.

ಇನ್ನೂ ಹೆಚ್ಚು ಓದಿ

ದೇವರ ಚಿತ್ರವನ್ನು ಕಾಲಿಗೆ ತಾಗಿಸಿಕೊಂಡು ಓಡಾಡಿದ ರಶ್ಮಿಕಾ ಮಂದಣ್ಣ: ನೆಟ್ಟಿಗರ ಆಕ್ರೋಶ

ನಟಿ ರಶ್ಮಿಕಾ ಮಂದಣ್ಣ ಅವರು ಲಕ್ಷ್ಮಿ ದೇವಿಗೆ ಅವಮಾನ ಮಾಡಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ಮೆಹಂದಿ ಶಾಸ್ತ್ರದಲ್ಲಿ ರಶ್ಮಿಕಾ ಅವರು ಧರಿಸಿದ ಸೀರೆಯ ಬಗ್ಗೆ ನೆಟ್ಟಿಗರು ತಕರಾರು ತೆಗೆಯುತ್ತಿದ್ದಾರೆ. ಆದರೆ ಅಭಿಮಾನಿಗಳು ರಶ್ಮಿಕಾ ಮಂದಣ್ಣ ಅವರ ಬೆಂಬಲಕ್ಕೆ ನಿಂತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಅಕ್ಕ-ತಂಗಿ ಅಂದು, ಇಂದು; ರಶ್ಮಿಕಾ-ಶಿಮನ್ ಕ್ಯೂಟ್ ಫೋಟೋ ವೈರಲ್

ರಶ್ಮಿಕಾ ಮಂದಣ್ಣ ಅವರ ವೈರಲ್ ಮದುವೆ ಫೋಟೋಗಳು ಮತ್ತು ಸಹೋದರಿ ಶಿಮನ್ ಜೊತೆಗಿನ ಚಿತ್ರಗಳು ಗಮನ ಸೆಳೆದಿವೆ. ಉದಯಪುರದಲ್ಲಿ ನಡೆದ ಅದ್ದೂರಿ ವಿವಾಹ ಕಾರ್ಯಕ್ರಮದಲ್ಲಿ ಶಿಮನ್ ಕುಣಿದು ಕುಪ್ಪಳಿಸಿದ್ದಾಳೆ. 16 ವರ್ಷಗಳ ವಯಸ್ಸಿನ ಅಂತರದಿಂದಾಗಿ, ಶಿಮನ್ ರಶ್ಮಿಕಾಗೆ ಮಗಳಂತೆ ಭಾಸವಾಗುತ್ತಾಳಂತೆ. ಇಬ್ಬರ ಹಿಂದಿನ ಹಾಗೂ ಇತ್ತೀಚಿನ ಕೊಲ್ಯಾಜ್ ಫೋಟೋಗಳು ಅಭಿಮಾನಿಗಳನ್ನು ಖುಷಿಪಡಿಸಿವೆ.

ವಿಜಯ್-ರಶ್ಮಿಕಾ ಮಾನ್ಯವರ್ ‘ಮೇಡ್ ಫಾರ್ ಈಚ್ ಒದರ್ ’ ಕ್ಯಾಂಪೇನ್; 300 ಮಿಲಿಯನ್ ವೀಕ್ಷಣೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಂಪತಿ ಮಾನ್ಯವರ್ ಮೋಹೆ ಜೊತೆ 'ಮೇಡ್ ಫಾರ್ ಈಚ್ ಅದರ್' ಹೆಸರಿನ ಹೊಸ ಜಾಹೀರಾತು ಅಭಿಯಾನ ಪ್ರಾರಂಭಿಸಿದ್ದಾರೆ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 72 ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆ ದಾಟಿ, ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟು 300 ಮಿಲಿಯನ್ ವೀಕ್ಷಣೆ ಪಡೆದಿದೆ. ಭಾರಿ ಎಂಗೇಜ್‌ಮೆಂಟ್ ಗಳಿಸಿರುವ ಈ ಅಭಿಯಾನ ಡಿಜಿಟಲ್ ನಂತರ ಶೀಘ್ರದಲ್ಲೇ ಸಿನಿಮಾ ಥಿಯೇಟರ್‌ಗಳಿಗೂ ಲಗ್ಗೆ ಇಡಲಿದೆ.

‘ನಿಮ್ಮನ್ನು ಸ್ವತಂತ್ರ್ಯಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ’; ರಶ್ಮಿಕಾ ಭಾವುಕ ಪೋಸ್ಟ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ವಿವಾಹದ ಬಳಿಕ ನಟನೆಯಿಂದ ವಿರಾಮ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ, ರಶ್ಮಿಕಾ "ನಿಮ್ಮನ್ನು ಸ್ವತಂತ್ರಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ" ಎಂಬ ಭಾವುಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಅವರ ಬಗ್ಗೆ ಬರೆದ ಟ್ವೀಟ್‌ನಿಂದ ಪ್ರೇರಿತರಾದ ರಶ್ಮಿಕಾ, ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.

ಮದುವೆಗೆ ಕರೆದಿಲ್ಲ ಅಂತ ಕೋಪ ಮಾಡಿಕೊಂಡ ರಶ್ಮಿಕಾ, ವಿಜಯ್ ಅಭಿಮಾನಿ

ತನ್ನನ್ನು ಮದುವೆಗೆ ಕರೆದಿಲ್ಲ ಅಂತ ಪುಟ್ಟ ಬಾಲಕಿಯೊಬ್ಬಳು ಕೋಪದಿಂದ ವಿಡಿಯೋ ಮಾಡಿದ್ದಾಳೆ. ಆ ವಿಡಿಯೋ ಬಹಳ ವೈರಲ್ ಆಗಿದ್ದು, ಸ್ವತಃ ವಿಜಯ್ ದೇವರಕೊಂಡ ಅವರು ಕಮೆಂಟ್ ಮಾಡಿದ್ದಾರೆ. ಆ ಬಾಲಕಿಯನ್ನು ಮನೆಗೆ ಆಹ್ವಾನಿಸಿದ್ದಾರೆ. ರಶ್ಮಿಕಾ ಮಂದಣ್ಣ ಕೂಡ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ವಿವಾಹದ ಬೆನ್ನಲ್ಲೇ ರಶ್ಮಿಕಾ ಮಂದಣ್ಣಗೆ ಸಿಕ್ತು ಸಿಹಿ ಸುದ್ದಿ; ಸಿಕ್ತು ಅವಾರ್ಡ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಾದ ಕೆಲವೇ ದಿನಗಳಲ್ಲಿ ರಶ್ಮಿಕಾಗೆ 'ಗದ್ದರ್ ಫಿಲ್ಮ್ ಅವಾರ್ಡ್ 2025' ಪ್ರಶಸ್ತಿ ಲಭಿಸಿದೆ. 'ಗರ್ಲ್​​ಫ್ರೆಂಡ್' ಚಿತ್ರದ ಅತ್ಯುತ್ತಮ ನಟನೆಗಾಗಿ ತೆಲಂಗಾಣ ಸರ್ಕಾರ ನೀಡಿದ ಈ ರಾಜ್ಯ ಪ್ರಶಸ್ತಿಯು ಅಭಿಮಾನಿಗಳಲ್ಲಿ ಸಂತಸ ತಂದಿದೆ. ನವೆಂಬರ್ 7ರಂದು ಬಿಡುಗಡೆಯಾದ 'ಗರ್ಲ್​​ಫ್ರೆಂಡ್' ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ 29 ಕೋಟಿ ಗಳಿಸಿತ್ತು.

ವಿಜಯ್-ರಶ್ಮಿಕಾ ಒಂದಾಗಲು ಕಾರಣವಾಯ್ತು ಕನ್ನಡದ ಆ ನಟಿ ತೆಗೆದುಕೊಂಡ ನಿರ್ಧಾರ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹವಾಗಿದ್ದು, ಇವರ ಪ್ರೀತಿಗೆ ಕನ್ನಡದ ನಟಿಯೊಬ್ಬರು ನಿಮಿತ್ತರಾಗಿದ್ದಾರೆ. 'ಗೀತ ಗೋವಿಂದಂ' ಸಿನಿಮಾ ರಶ್ಮಿಕಾ-ವಿಜಯ್ ಕೆಮಿಸ್ಟ್ರಿಗೆ ಕಾರಣವಾಯಿತು. ಆದರೆ, ಈ ಚಿತ್ರದ ಆಫರ್ ಮೊದಲು ಕನ್ನಡ ನಟಿಗೆ ಹೋಗಿತ್ತು. ಅವರು ನಿರಾಕರಿಸಿದ ಕಾರಣ ರಶ್ಮಿಕಾಗೆ ಸಿಕ್ಕಿ, ಇಂದು ಇವರಿಬ್ಬರು ಒಂದಾಗಲು ಕಾರಣವಾಗಿದೆ.

ಬೇಸರದಲ್ಲಿರೋ ಫೋಟೋ ಪೋಸ್ಟ್ ಮಾಡಿದ ರಕ್ಷಿತ್ ಶೆಟ್ಟಿ; ಅದೇ ಕಾರಣವಾ?

ರಕ್ಷಿತ್ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ, 'ರಿಚರ್ಡ್ ಆ್ಯಂಟನಿ' ಅಪ್‌ಡೇಟ್ ನೀಡದೆ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದರು. ಈ ಮಧ್ಯೆ, ಅವರು '777 ಚಾರ್ಲಿ' ಸಿನಿಮಾದ ದುಃಖದ ದೃಶ್ಯದ ಫೋಟೋ ಪೋಸ್ಟ್ ಮಾಡಿರುವುದು ಹಲವು ಚರ್ಚೆಗಳಿಗೆ ಎಡೆಮಾಡಿದೆ. ರಶ್ಮಿಕಾ ಮಂದಣ್ಣ ಜೊತೆಗಿನ ಹಿಂದಿನ ವಿಷಯವೂ ಮತ್ತೆ ಮುನ್ನೆಲೆಗೆ ಬಂದಿದೆ.

ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು?

ಕಳೆದ ವಾರದಿಂದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ವಿವಾಹದ ಸುದ್ದಿ ಟ್ರೆಂಡಿಂಗ್‌ನಲ್ಲಿದೆ. 'ವಿರೋಶ್' ಹೆಸರಿನಲ್ಲಿ ಚರ್ಚೆಯಾಗುತ್ತಿರುವ ಈ ಮದುವೆ, ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದಿದೆ . ವಿಜಯ್ ತವರಿನಲ್ಲಿ ಸತ್ಯನಾರಾಯಣ ಪೂಜೆ ನಡೆದಿದೆ. ಗ್ರಾಮಸ್ಥರಿಗೆ ಮತ್ತು ಅಭಿಮಾನಿಗಳಿಗೆ ಔತಣಕೂಟ ಸೇರಿದಂತೆ, ಸಾಕಷ್ಟು ಖರ್ಚಾಗಿದೆ.

ರಶ್ಮಿಕಾ-ವಿಜಯ್ ಆರತಕ್ಷತೆಯಲ್ಲಿ ಭಾಗಿಯಾದ ಕನ್ನಡದ ಸೆಲೆಬ್ರಿಟಿಗಳು

Rashmika And Vijay Reception: ರಶ್ಮಿಕಾ ಮಂದಣ್ಣ ಅವರು ಕೊಡಗಿನವರು. ಅವರು ಮೊದಲು ಕೆಲಸ ಮಾಡಿದ್ದು ಕನ್ನದಲ್ಲಿ. ಹೀಗಾಗಿ, ಕರ್ನಾಟಕದ ಅನೇಕ ಸೆಲೆಬ್ರಿಟಿಗಳ ಪರಿಚಯ ಅವರಿಗೆ ಇದೆ. ಕರ್ನಾಟಕದಲ್ಲಿ ಆಪ್ತರು ಎನಿಸಿಕೊಂಡವರನ್ನು ರಶ್ಮಿಕಾ ಮಂದಣ್ಣ ಅವರು ಮದುವೆ ಆರತಕ್ಷತೆಗೆ ಆಹ್ವಾನಿಸಿದ್ದರು. ಆ ಸಂದರ್ಭದ ಫೋಟೋಗಳು ಇಲ್ಲಿವೆ.

ವಿರೋಶ್ ರಿಸೆಪ್ಶನ್: ಮಹೇಶ್ ಬಾಬು ಮಗಳ ಕಂಡಾಗ ರಶ್ಮಿಕಾಗೆ ಬಂತು ಹಳೆಯ ನೆನಪು

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ರಿಸೆಪ್ಶನ್ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. ರಶ್ಮಿಕಾ ಮಂದಣ್ಣ ಅವರು ರಿಸೆಪ್ಶನ್​​ ಅಲ್ಲಿ ಸೀರೆ ಉಂಟು ಮಿಂಚಿದ್ದಾರೆ. ಅವರ ವಿವಾಹ ಸಮಾರಂಭದ ಕೊನೆಯ ಕಾರ್ಯಕ್ರಮ ಈ ರಿಸೆಪ್ಶನ್. ಅವುಗಳ ಸುಂದರ ಫೋಟೋಗಳು ಇಲ್ಲಿವೆ.

ಹೇಗಿದ್ದಾರೆ ನೋಡಿ ರಶ್ಮಿಕಾ ತಂದೆ-ತಾಯಿ, ತಂಗಿ; ರಿಸೆಪ್ಶನ್​ ಅಲ್ಲಿ ಗಮನ ಸೆಳೆದ ಫ್ಯಾಮಿಲಿ ಫೋಟೋ

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಫೆಬ್ರವರಿ 26ರಂದು ವಿವಾಹ ಆದರು. ಆ ಬಳಿಕ ದಂಪತಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿ ಆದರು. ಅಭಿಮಾನಿಗಳಿಗೆ ಊಟ ಕೂಡ ಹಾಕಿಸಿದರು. ಈಗ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅವರ ರಿಸೆಪ್ಶನ್ ಫೋಟೋ ಗಮನ ಸೆಳೆದಿದೆ. ಇದರಲ್ಲಿ ಫ್ಯಾಮಿಲಿ ಫೋಟೋ ವಿಶೇಷ ಎನಿಸಿಕೊಂಡಿದೆ.

ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ಕಾರು ಓಡಿಸುವಾಗ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್
ಕಾರು ಓಡಿಸುವಾಗ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್
ನಿಮ್ಮ 10 ಕೋಟಿ ರೂ. ಎಲ್ಲಿ ಸಾಕಾಗುತ್ತದೆ
ನಿಮ್ಮ 10 ಕೋಟಿ ರೂ. ಎಲ್ಲಿ ಸಾಕಾಗುತ್ತದೆ
ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ
ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ