AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna

Rashmika Mandanna

ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟಿ. 1996ರ ಏಪ್ರಿಲ್ 5ರಂದು ಕರ್ನಾಟಕದ ವಿರಾಜಪೇಟೆಯಲ್ಲಿ ಜನಿಸಿದರು. 2016ರ ಕನ್ನಡ ಸಿನಿಮಾ ‘ಕಿರಿಕ್ ಪಾರ್ಟಿ’ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಈ ಸಿನಿಮಾ ವ್ಯಾಪಕ ಮನ್ನಣೆ ಮತ್ತು ಪುರಸ್ಕಾರಗಳನ್ನು ಪಡೆಯಿತು. ಅವರ ನಟನೆಯು ಇಷ್ಟ ಆಯಿತು. ಅವರು ಕರ್ನಾಟಕ ಕ್ರಶ್ ಆದರು. ‘ಗೀತ ಗೋವಿಂದಂ’, ‘ಪುಷ್ಪ’ ಸೇರಿ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅನಿಮಲ್’ ಚಿತ್ರದಿಂದ ಅವರಿಗೆ ಬಾಲಿವುಡ್ನಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಇದಲ್ಲದೆ ತಮಿಳು ಚಿತ್ರರಂಗದಲ್ಲೂ ಅವರಿಗೆ ಸಖತ್ ಬೇಡಿಕೆ ಇದೆ. ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಿದೆ. ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ಇಲ್ಲ.

ಇನ್ನೂ ಹೆಚ್ಚು ಓದಿ

ವಿಜಯ್-ರಶ್ಮಿಕಾ ಮದುವೆಗೆ ಬರೋ ಅತಿಥಿಗಳಿಗೆ ಇರಲಿದೆ ಕಠಿಣ ನಿಯಮ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ಉದಯಪುರದಲ್ಲಿ ಮದುವೆಯಾಗಲಿದ್ದಾರೆಂದು ವರದಿಯಾಗಿದೆ. ವೈರಲ್ ಆದ ಆಮಂತ್ರಣ ಪತ್ರದಲ್ಲಿ ಮಾರ್ಚ್ 4ಕ್ಕೆ ಹೈದರಾಬಾದ್‌ನಲ್ಲಿ ಆರತಕ್ಷತೆ ಇದೆ. ಈ ವಿವಾಹದಲ್ಲಿ ಅತಿಥಿಗಳಿಗೆ ಮೊಬೈಲ್ ನಿಷೇಧ, ಫೋಟೋ ಲೀಕ್ ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.

ವೈರಲ್ ಆಯ್ತು ವಿಜಯ್ ದೇವರಕೊಂಡ-ರಶ್ಮಿಕಾ ವೆಡ್ಡಿಂಗ್ ಕಾರ್ಡ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಸುದ್ದಿ ಅಧಿಕೃತವಾಗಿದೆ! ಅವರ ವಿವಾಹ ಆಮಂತ್ರಣ ಪತ್ರ ವೈರಲ್ ಆಗಿದ್ದು, ಫೆಬ್ರವರಿ 26 ರಂದು ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ. ಹೈದರಾಬಾದ್‌ನಲ್ಲಿ ಮಾರ್ಚ್ 4 ರಂದು ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಬಹಳ ಸಮಯದಿಂದ ಪ್ರೀತಿಸುತ್ತಿದ್ದ ಈ ಜೋಡಿಯ ಮದುವೆ ಬಗ್ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ.

ಮದುವೆಗೂ ಮುನ್ನ ಮ್ಯಾಚಿಂಗ್ ಡ್ರೆಸ್ ಹಾಕಿ ಮುಂಬೈನಿಂದ ಹಾರಿದ ವಿಜಯ್-ರಶ್ಮಿಕಾ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹದ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಫೆಬ್ರವರಿ 26ರಂದು ಜೈಪುರದಲ್ಲಿ ಇವರ ಮದುವೆ ನಡೆಯಲಿದೆ ಎನ್ನಲಾಗಿದೆ. ಈ ಜೋಡಿ ಮುಂಬೈನಿಂದ ಹೊರಟಿದ್ದು, ಮದುವೆಗೂ ಮುನ್ನ ಶಾಪಿಂಗ್‌ಗಾಗಿ ವಿದೇಶಕ್ಕೆ ಹಾರಿದರೇ ಎಂಬ ಕುತೂಹಲ ಮೂಡಿದೆ. 'ಗೀತಾ ಗೋವಿಂದ' ಸಿನಿಮಾದಿಂದ ಗೆಳೆತನ ಪ್ರೀತಿಗೆ ತಿರುಗಿ ಈಗ ಮದುವೆ ಸಿದ್ಧತೆ ಜೋರಾಗಿದೆ.

‘ಛಾವ’ ಸಿನಿಮಾಗೆ ಒಂದು ವರ್ಷ: ನೆನಪಿನ ಪುಟ ತೆರೆದ ರಶ್ಮಿಕಾ ಮಂದಣ್ಣ

ಬಾಕ್ಸ್ ಆಫೀಸ್​​ನಲ್ಲಿ ಧೂಳೆಬ್ಬಿಸಿದ ‘ಛಾವ’ ಸಿನಿಮಾ ತೆರೆಕಂಡು ಒಂದು ವರ್ಷ ಕಳೆದಿದೆ. ಈ ಚಿತ್ರದ ನೆನಪಿನಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಕಲಾವಿದರ ಪಾಲಿಗೆ ನಿಜಕ್ಕೂ ಇದು ವಿಶೇಷ ಸಿನಿಮಾ. ಅವರ ಅಭಿಮಾನಿಗಳಿಗೂ ಈ ಚಿತ್ರ ಅಚ್ಚುಮೆಚ್ಚು.

ರಶ್ಮಿಕಾ ಮದುವೆಗೆ ಒಟಿಟಿ ಡೀಲ್​ ಆಫರ್; ನಿರ್ಧಾರ ತಿಳಿಸಿದ ವಿಜಯ್

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ವದಂತಿಗಳು ಹರಿದಾಡುತ್ತಿದ್ದು, ಫೆಬ್ರವರಿ 26ರಂದು ಉದಯಪುರದಲ್ಲಿ ನಡೆಯಲಿದೆ ಎನ್ನಲಾಗಿದೆ. ಅವರ ವಿವಾಹದ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಪ್ರಮುಖ ಒಟಿಟಿ ಕಂಪನಿಯು 60 ಕೋಟಿ ಬೃಹತ್ ಆಫರ್ ನೀಡಿತ್ತು. ಆದರೆ, ದಂಪತಿಗಳು ಮದುವೆಯನ್ನು ಖಾಸಗಿ ವಿಷಯವಾಗಿರಿಸಲು ನಿರ್ಧರಿಸಿದ್ದಾರೆ.

ಮದುವೆಗೆ ಕೆಲವೇ ದಿನ ಬಾಕಿ ಇರುವಾಗಲೂ ಶೂಟಿಂಗ್ ನಿಲ್ಲಿಸಿಲ್ಲ ರಶ್ಮಿಕಾ ಮಂದಣ್ಣ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಬಹಳ ಅದ್ದೂರಿಯಾಗಿ ನಡೆಯಲಿದೆ. ಮದುವೆಗೆ ಕೆಲವೇ ದಿನಗಳು ಬಾಕಿ ಇವೆ. ಆದರೂ ಕೂಡ ರಶ್ಮಿಕಾ ಮಂದಣ್ಣ ಶೂಟಿಂಗ್ ಮಾಡುತ್ತಿದ್ದಾರೆ. ‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ಜೊತೆಗಿನ ಹೊಸ ಸಿನಿಮಾಗೆ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಅಬ್ಬಾ ಎಷ್ಟು ಅದ್ದೂರಿಯಾಗಿರುತ್ತೆ ನೋಡಿ ರಶ್ಮಿಕಾ ಮದುವೆ; ಸಿದ್ಧತೆಯ ವಿಡಿಯೋ ಲೀಕ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ರಹಸ್ಯ ವಿವಾಹ ಉದಯಪುರದಲ್ಲಿ ನಡೆಯಲಿದೆ. ಈ ಮದುವೆಯ ಸಿದ್ಧತೆಗಳ ವಿಡಿಯೋ ಲೀಕ್ ಆಗಿದ್ದು, ಅದ್ದೂರಿ ಸಿದ್ಧತೆಗಳು ಬಹಿರಂಗವಾಗಿವೆ. ಇವರಿಬ್ಬರ ಪ್ರೀತಿ 'ಗೀತ ಗೋವಿಂದಂ' ಸೆಟ್‌ನಲ್ಲಿ ಶುರುವಾಗಿತ್ತು. ಖಾಸಗಿಯಾಗಿ ನಡೆಯುತ್ತಿರುವ ಈ ವಿವಾಹದ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ರಶ್ಮಿಕಾ ಅವರ ಕನಸಿನ ಮದುವೆಗೆ ತೆರೆಮರೆಯಲ್ಲಿ ದೊಡ್ಡ ಸಿದ್ಧತೆ ನಡೆದಿದೆ.

‘ನಮ್ಮನ್ನು ಕರೆಯಲ್ವಾ’; ಮದುವೆ ಆಮಂತ್ರಣ ಕೇಳಿದ್ದಕ್ಕೆ ರಶ್ಮಿಕಾ ಹೇಳಿದ್ದೇನು?

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಅವರ ನಿಶ್ಚಿತಾರ್ಥ ಕಳೆದ ವರ್ಷ ನಡೆದಿದೆ ಎನ್ನಲಾಗುತ್ತಿದೆ. ಆದರೆ, ನಟಿಯ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಈ ವಿಷಯದಲ್ಲಿ ಅವರು ತುಂಬಾನೇ ಗುಟ್ಟು ಮಾಡುತ್ತಾ ಬರುತ್ತಿದ್ದಾರೆ. ಈಗ ಮದುವೆ ವಿಷಯದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ನೇರವಾಗಿ ಪ್ರಶ್ನೆ ಎದುರಾಗಿದೆ.

ಮದುವೆಗೂ ಮುನ್ನ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

ಸ್ಟಾರ್ ಕಪಲ್ ಆದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆಗೆ ದಿನಗಣನೆ ಶುರುವಾಗಿದೆ. ಅದರ ನಡುವೆಯೇ ಅವರೊಂದು ಗುಡ್ ನ್ಯೂಸ್ ನೀಡಿದ್ದಾರೆ. ಒಬ್ಬರೂ ಜೊತೆಯಾಗಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಬಳಿಕ ಅವರು ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ.

ಸ್ಪಷ್ಟ ತೆಲುಗಿನಲ್ಲಿ ಮಾತನಾಡಿದ ಜಪಾನ್ ವ್ಯಕ್ತಿ; ಶಾಕ್ ಆದ ಅಲ್ಲು-ರಶ್ಮಿಕಾ

ಪುಷ್ಪ 2 ಪ್ರಚಾರಕ್ಕಾಗಿ ಜಪಾನ್‌ಗೆ ತೆರಳಿದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಅಲ್ಲಿನ ಅಭಿಮಾನಿಯೊಬ್ಬರು ಅಚ್ಚರಿ ಮೂಡಿಸಿದರು. ಓರ್ವ ಜಪಾನಿ ನಿರರ್ಗಳವಾಗಿ ತೆಲುಗು ಮಾತನಾಡಿದಾಗ ಇಬ್ಬರೂ ದಿಗ್ಭ್ರಮೆಗೊಂಡರು. ವಿದೇಶಿಯೊಬ್ಬರು ತನ್ನ ಮಾತೃಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದನ್ನು ನೋಡಿ ಅಲ್ಲು ಅರ್ಜುನ್ ಸಂತೋಷಪಟ್ಟರು.

ಹೇಳಿದ್ದೇ ಒಂದು, ಅಲ್ಲಿ ಮಾಡಿದ ಕಥೆಯೇ ಇನ್ನೊಂದು; ಫ್ಲಾಪ್ ಚಿತ್ರದ ಬಗ್ಗೆ ರಶ್ಮಿಕಾ ಮಾತು

ನಟಿ ರಶ್ಮಿಕಾ ಮಂದಣ್ಣ ಫ್ಲಾಪ್ ಆದ 'ಸಿಕಂದರ್' ಚಿತ್ರದ ಬಗ್ಗೆ ಮೌನ ಮುರಿದಿದ್ದಾರೆ. ನಿರ್ದೇಶಕ ಎಆರ್ ಮುರುಗದಾಸ್ ಹೇಳಿದ ಕಥೆಗೂ, ತೆರೆಗೆ ಬಂದ ಚಿತ್ರಕ್ಕೂ ಸಂಪೂರ್ಣ ವ್ಯತ್ಯಾಸವಿತ್ತು ಎಂದು ರಶ್ಮಿಕಾ ಹೇಳಿದ್ದಾರೆ. ಸಲ್ಮಾನ್ ಖಾನ್ ಸೆಟ್‌ಗೆ ತಡವಾಗಿ ಬರುತ್ತಿದ್ದರು ಎಂಬ ಆರೋಪ, ಚಿತ್ರದ ಕಳಪೆ ಪ್ರದರ್ಶನಕ್ಕೆ ಕಾರಣಗಳಾದವು. ರಶ್ಮಿಕಾ ಮತ್ತು ಸಲ್ಮಾನ್ ನಡುವೆ ಕೆಮಿಸ್ಟ್ರಿ ಇರಲಿಲ್ಲ ಎಂಬುದು ಕೂಡ ಚರ್ಚೆಯಾಗಿದೆ.

ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ಆಗಿದ್ದಾರೆ. ದೇಶಾದ್ಯಂತ ಹೆಸರು ಹೊಂದಿರುವ ಅವರು ಕೊಡಗಿನ ಮೂಲಕವೇ ತೆರಿಗೆ ಪಾವತಿಸುತ್ತಿದ್ದಾರೆ. ‘ರಶ್ಮಿಕಾ ಮಂದಣ್ಣ ಎಲ್ಎಲ್​ಪಿ’ ಹೆಸರಿನಲ್ಲಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಈವರೆಗೆ 4.69 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾರೆ.

  • Gopal AS
  • Updated on: Jan 6, 2026
  • 7:28 pm
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ
ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ
ಇದೆಂತಹ ಅವಮಾನ... ಪಾಕಿಸ್ತಾನ್ ತಂಡಕ್ಕೆ 'ಬಾಬರ್' ಭಯ
ಇದೆಂತಹ ಅವಮಾನ... ಪಾಕಿಸ್ತಾನ್ ತಂಡಕ್ಕೆ 'ಬಾಬರ್' ಭಯ
ಯೋಗಿ, ದಿಗಂತ್, ಸತೀಶ್: ವೇದಿಕೆ ಮೇಲೆ ಮೂವರು ಗೆಳೆಯರ ಮಾತುಗಳು
ಯೋಗಿ, ದಿಗಂತ್, ಸತೀಶ್: ವೇದಿಕೆ ಮೇಲೆ ಮೂವರು ಗೆಳೆಯರ ಮಾತುಗಳು
ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026': ಮೋದಿ ಭಾಷಣ ಕನ್ನಡದಲ್ಲಿ ಕೇಳಿ
ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026': ಮೋದಿ ಭಾಷಣ ಕನ್ನಡದಲ್ಲಿ ಕೇಳಿ
ಮೊದಲ ಬಾರಿಗೆ ಮಗಳ ಪರಿಚಯಿಸಿದ ನೀನಾಸಂ ಸತೀಶ್
ಮೊದಲ ಬಾರಿಗೆ ಮಗಳ ಪರಿಚಯಿಸಿದ ನೀನಾಸಂ ಸತೀಶ್
ಎಐನಿಂದಾಗುವ ಅಪಾಯಗಳ ತಗ್ಗಿಸುವ ಉಪಾಯ ಕಂಡುಕೊಳ್ಳಬೇಕು: ಅಶ್ವಿನಿ ವೈಷ್ಣವ್
ಎಐನಿಂದಾಗುವ ಅಪಾಯಗಳ ತಗ್ಗಿಸುವ ಉಪಾಯ ಕಂಡುಕೊಳ್ಳಬೇಕು: ಅಶ್ವಿನಿ ವೈಷ್ಣವ್
ಎಐ ಇಂಪ್ಯಾಕ್ಟ್​ ಶೃಂಗಸಭೆ: ವಿಶ್ವನಾಯಕರೊಂದಿಗೆ ಪ್ರಧಾನಿ ಮೋದಿ ಮಾತುಕತೆ
ಎಐ ಇಂಪ್ಯಾಕ್ಟ್​ ಶೃಂಗಸಭೆ: ವಿಶ್ವನಾಯಕರೊಂದಿಗೆ ಪ್ರಧಾನಿ ಮೋದಿ ಮಾತುಕತೆ
ಬೆಂಗಳೂರಿನಲ್ಲಿ ಕಸದ ಸಮಸ್ಯೆ: ನಿಂತಲ್ಲೇ ನಿಂತ ತ್ಯಾಜ್ಯ ಸಂಗ್ರಹಣೆ ವಾಹನಗಳು
ಬೆಂಗಳೂರಿನಲ್ಲಿ ಕಸದ ಸಮಸ್ಯೆ: ನಿಂತಲ್ಲೇ ನಿಂತ ತ್ಯಾಜ್ಯ ಸಂಗ್ರಹಣೆ ವಾಹನಗಳು