AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Scorpion bite: ಶಾಲಾ ಬ್ಯಾಗಿನಲ್ಲಿ ಪುಸ್ತಕಗಳ ಮಧ್ಯೆಯಿದ್ದ ಚೇಳು ಕುಟುಕಿ ವಿದ್ಯಾರ್ಥಿ ಸಾವು

ಪುಸ್ತಕಗಳಿದ್ದ ಬ್ಯಾಗಿನೊಳಕ್ಕೆ ಕೈಹಾಕಿದ್ದಾನೆ. ಅಷ್ಟೇ... ಚೇಳೊಂದು ಯಾವುದೋ ಮಾಯದಲ್ಲಿ ಅಮಾಯಕ ರವಿ ಕೈಗೆ ಕುಟುಕಿದೆ (Scorpion Sting). ತಕ್ಷಣ ಅವ ಭಯದಿಂದ ಚೀರಾಡಿದ್ದಾನೆ. ಸಹ ವಿದ್ಯಾರ್ಥಿಗಳು ಭಯಭೀತರಾದರು... ಈ ಘಟನೆಯಿಂದ ತತ್ತರಗೊಂಡ ಶಿಕ್ಷಕರು, ಶಾಲೆಯ ಮುಖ್ಯೋಪಾಧ್ಯಾಯರು ತೋಟ ರಾಮಕೃಷ್ಣ ಅವರುಗಳು ತಕ್ಷಣ ರವಿಕಿರಣವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ, ಇತ್ತ ಚೇಳನ್ನು ಕೊಂದಿದ್ದಾರೆ.

Scorpion bite: ಶಾಲಾ ಬ್ಯಾಗಿನಲ್ಲಿ ಪುಸ್ತಕಗಳ ಮಧ್ಯೆಯಿದ್ದ ಚೇಳು ಕುಟುಕಿ ವಿದ್ಯಾರ್ಥಿ ಸಾವು
ಚೇಳು ಕುಟುಕಿ ವಿದ್ಯಾರ್ಥಿ ಸಾವು
ಸಾಧು ಶ್ರೀನಾಥ್​
|

Updated on:Oct 06, 2023 | 2:16 PM

Share

ಚೇಳುಗಳ ಬಗ್ಗೆ ಸದಾ ಜಾಗ್ರತೆಯಿಂದ ಇರಬೇಕು. ಅವುಗಳ ಬಗ್ಗೆ ಯಾಮಾರಿದರೆ ಕಷ್ಟಕಷ್ಟ. ಕೆಲವು ಚೇಳುಗಳಂತೂ ತುಂಬಾ ವಿಷಪೂರಿತ. ಹಾವು ಕಚ್ಚಿದಂತೆ ಚೇಳು ಕಚ್ಚುವುದೂ (Scorpion bite) ಅಪಾಯಕಾರಿ. ಅವು ಕುಟುಕಿದ ತಕ್ಷಣ.. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಇಲ್ಲವೇ ಪ್ರಾಣಕ್ಕೆ ಸಂಚಕಾರ. ನಾಟಿ ವೈದ್ಯ ಅದೂ ಇದೂ ಅಂತಾ ನಿರ್ಲಕ್ಷ್ಯ ಮಾಡಿದರೆ.. ಅದರ ಫಲ ಅನುಭವಿಸಬೇಕಾಗುತ್ತೆ.

ಅದು ಪ್ರಕಾಶಂ ಜಿಲ್ಲೆಯಲ್ಲಿರುವ (Prakasam District) ರಾಯವರಂ ಜಿಲ್ಲಾ ಪರಿಷತ್ ಹೈಸ್ಕೂಲ್. ಸಮಯ ಸಾಯಂಕಾಲ 4 ಗಂಟೆ… ಕ್ಲಾಸುಗಳು ಮುಗಿದಿವೆ… ಎಲ್ಲೆಡೆ ಪ್ರಶಾಂತತೆ ನೆಲೆಸಿದ್ದ ಸಮಯ ಅದು. ಶಾಲೆ ಮುಗಿಯಿತೆಂದು ಪುಸ್ತಕಗಳಿದ್ದ ಬ್ಯಾಗನ್ನು ಸರಿಪಡಿಸಿಕೊಂಡು ಅದನ್ನು ಭುಜಕ್ಕೆ ನೇತುಹಾಕಿಕೊಂಡು ಇನ್ನೇನು ಭರ್​​ ಅಂತಾ ಮನೆಯ ಕಡೆಗೆ ಹೋಗಬೇಕು. ಆದರೆ ಅಷ್ಟರಲ್ಲೇ ಸರಿಯಾಗಿ 9ನೇ ತರಗತಿಯ ವಿದ್ಯಾರ್ಧಿ ರವಿಕಿರಣನಿಗೆ ಮರಣಶಾಸನ ಎದುರಾಗಿದೆ.

ಪುಸ್ತಕಗಳಿದ್ದ ಬ್ಯಾಗಿನೊಳಕ್ಕೆ ಕೈಹಾಕಿದ್ದಾನೆ. ಅಷ್ಟೇ… ಚೇಳೊಂದು ಯಾವುದೋ ಮಾಯದಲ್ಲಿ ಅಮಾಯಕ ರವಿ ಕೈಗೆ ಕುಟುಕಿದೆ (Scorpion Sting). ತಕ್ಷಣ ಅವ ಭಯದಿಂದ ಚೀರಾಡಿದ್ದಾನೆ. ಸಹ ವಿದ್ಯಾರ್ಥಿಗಳು ಭಯಭೀತರಾದರು… ಈ ಘಟನೆಯಿಂದ ತತ್ತರಗೊಂಡ ಶಿಕ್ಷಕರು, ಶಾಲೆಯ ಮುಖ್ಯೋಪಾಧ್ಯಾಯರು ತೋಟ ರಾಮಕೃಷ್ಣ ಅವರುಗಳು ತಕ್ಷಣ ರವಿಕಿರಣವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ, ಇತ್ತ ಚೇಳನ್ನು ಕೊಂದಿದ್ದಾರೆ.

Also read: ಕ್ರೂರ-ಅತಿ ದಾರುಣ: ಹತ್ತಾರು ಕೋತಿಗಳಿಗೆ ವಿಷವಿಕ್ಕಿ ಕೊಂದ ಮನುಷ್ಯರು! ಗ್ರಾನೈಟ್ ಬಿಸಿನೆಸ್​ ಕಾರಣವಾಯ್ತಾ?

ಆದರೆ ರವಿಕಿರಣನ ಪರಿಸ್ಥಿತಿ ವಿಷಮಿಸಿದೆ. ಅಕ್ಷರಶಃ ಚೇಳಿನ ವಿಷ ಅವನ ಮೈಯೊಳಗೆ ಇಳಿಯುತ್ತಾ ಸಾಗಿದೆ. ಆದರೂ ಗುಂಟೂರು ಜಿಜಿಎಚ್‌ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿಕಿರಣ ಗುರುವಾರ ಅಸುನೀಗಿದ್ದಾನೆ. ಘಟನೆಯಿಂದ ತತ್ತರಗೊಂಡ ರವಿಕಿರಣನ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.

ಪ್ರಕಾಶಂ ಜಿಲ್ಲೆ ಮಾರ್ಕಾಪುರಂ ಮಂಡಲ ರಾಯವರಂ ಜಿ.ಪಂ. ಹೈಸ್ಕೂಲ್‌ನಲ್ಲಿ ಚೇಳು ಕುಟುಕಿ ವಿದ್ಯಾರ್ಥಿ ರವಿಕಿರಣ (14) ಸಾವನ್ನಪ್ಪಿದ ಘಟನೆ ನಡೆದಿದೆ. ಮಾರ್ಕಾಪುರದ ನಾಯ್ಡುಪಲ್ಲಿಯಲ್ಲಿ ದಲಿತ ಕಾಲೋನಿ ನಿವಾಸಿ. ವಿದ್ಯಾರ್ಥಿ ಪೋಷಕರು ರಾಮಕೋಟೇಶ್ವರ ರಾವ್​​, ಕೊಂಡಮ್ಮ ದಂಪತಿಯ ಮೂವರು ಮಕ್ಕಳ ಪೈಕಿ ರವಿಕಿರಣ ಕೊನೆಯ ಮಗ. ಕೋಟೆೇಶ್ವರರಾವ್​ ಶಿಕ್ಷಕರಾಗಿ ಜೀವನ ಸಾಗಿಸುತ್ತಿದ್ದಾರೆ. ಮಾರ್ಕಾಪುರದ ರೂರಲ್ ಎಸ್ಸೈ ವೆಂಕಟೇಶ್ ನಾಯ್ಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Fri, 6 October 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ