AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೂರ-ಅತಿ ದಾರುಣ: ಹತ್ತಾರು ಕೋತಿಗಳಿಗೆ ವಿಷವಿಕ್ಕಿ ಕೊಂದ ಮನುಷ್ಯರು! ಗ್ರಾನೈಟ್ ಬಿಸಿನೆಸ್​ ಕಾರಣವಾಯ್ತಾ?

ಪಾಪ.. ಅವು ಮೂಕ ಜೀವಿಗಳು, ನಮ್ಮ ಪೂರ್ವಜರು ಬೇರೆ. ಆದರೆ ಅಅದ್ಯಾವುದನ್ನೂ ಲೆಕ್ಕಸದೆ, ಪರಿಗಣಿಸದೆ ಅವುಗಳಿಂದ ಸಣ್ಣಪುಟ್ಟ ತೊಂದರೆಗಳಾಗುತ್ತಿವೆ ಎಂದು ಬಾಧಿತ ಮನುಜರು ವಿಷವಿಕ್ಕಿ ಕೊಲ್ಲಿಸಿದ್ದಾರೆ. ಆಂಜನೆಯ ಎಂದು ಪೂಜಸಲ್ಪಡುವ ವಾನರರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಮಾಹಿತಿ ಪಡೆದ ಇಲಾಖೆಯ ಅಧಿಕಾರಿಗಳು.. ಈ ಘಟನೆಯ ವಿಚಾರಣೆ ನಡೆದಿದೆ.

ಕ್ರೂರ-ಅತಿ ದಾರುಣ: ಹತ್ತಾರು ಕೋತಿಗಳಿಗೆ ವಿಷವಿಕ್ಕಿ ಕೊಂದ ಮನುಷ್ಯರು! ಗ್ರಾನೈಟ್ ಬಿಸಿನೆಸ್​ ಕಾರಣವಾಯ್ತಾ?
ಕ್ರೂರ, ಅತಿ ದಾರಣ: ಹತ್ತಾರು ಕೋತಿಗಳಿಗೆ ವಿಷವಿಕ್ಕಿ ಕೊಂದ ಮನುಷ್ಯರು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 06, 2023 | 10:52 AM

Share

ಪೆದ್ದಪಲ್ಲಿ (ತೆಲಂಗಾಣ) ಅಕ್ಟೋಬರ್​ 6: ಗ್ರಾನೈಟ್ ವ್ಯಾಪಾರ ವಿಜೃಂಭಿಸುತ್ತಿರುವುದರಿಂದ ದಿನಬೆಳಗಾಗುವಷ್ಟರಲ್ಲಿ ದೊಡ್ಡ ದೊಡ್ಡ ಬೆಟ್ಟಗಳೆ ಕರಗಿ ಮಾಯವಾಗುತ್ತಿವೆ. ಇದರಿಂದ ಆ ಬೆಟ್ಟ ಗುಡ್ಡಗಳಲ್ಲಿ ವಾಸಿಸುವ ಮನುಷ್ಯನ ಪೂರ್ವಜರಿಗೆ ಸಂಚಕಾರ ಬಂದಿದೆ. ವಾನರರು ಹೊಟ್ಟೆಪಾಡಿಗಾಗಿ ಗ್ರಾಮಗಳತ್ತ ವಲಸೆ ಬರುತ್ತಿವೆ. ಈ ಮಧ್ಯೆ ಕೆಲ ಮೂಢರು ಕೋತಿಗಳಿಗೆ ವಿಷವಿಕ್ಕಿ ಸಾಯಿಸುವ (Death) ದುಸ್ಸಾಹಸವನ್ನೂ ಮಾಡುತ್ತಿದ್ದಾರೆ. ಅದೂ ಒಂದಲ್ಲ ಎರಡಲ್ಲ ಹತ್ತಾರು ಕೋತಿಗಳನ್ನು (Homo sapien, monkey) ಸಾಯಿಸಿಬಿಟ್ಟಿದ್ದಾರೆ. ಅದನ್ನು ನೋಡಿ ಸ್ಥಳೀಯರು ಶಾಕ್ ಆಗಿದ್ದಾರೆ. ತಕ್ಷಣ ಸ್ಥಾನಿಉಕ ಸರಪಂಚ್ ಶ್ರಾವಣ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸಂಬಂಧಿತ ಫಾರೆಸ್ಟ್ ಅಧಿಕಾರಿಗಳಿಗೆ ತಿಳಿಸಿದ್ದು, ಮುಂದಿನ ಕಾರ್ಯಾಚರನೆ ನಡೆದಿದೆ.

ಪಾಪ.. ಅವು ಮೂಕ ಜೀವಿಗಳು, ನಮ್ಮ ಪೂರ್ವಜರು ಬೇರೆ. ಆದರೆ ಅಅದ್ಯಾವುದನ್ನೂ ಲೆಕ್ಕಸದೆ, ಪರಿಗಣಿಸದೆ ಅವುಗಳಿಂದ ಸಣ್ಣಪುಟ್ಟ ತೊಂದರೆಗಳಾಗುತ್ತಿವೆ ಎಂದು ಬಾಧಿತ ಮನುಜರು ವಿಷವಿಕ್ಕಿ ಕೊಲ್ಲಿಸಿದ್ದಾರೆ. ಆಂಜನೇಯ ಎಂದು ಪೂಜಿಸಲ್ಪಡುವ ವಾನರರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಮಾಹಿತಿ ಪಡೆದ ಇಲಾಖೆಯ ಅಧಿಕಾರಿಗಳು.. ಈ ಘಟನೆಯ ವಿಚಾರಣೆ ನಡೆದಿದೆ.

ಈ ದಾರುಣ ಘಟನೆ ಪೆದ್ದಪಲ್ಲಿ (Peddapalli) ಜಿಲ್ಲೆ ಸುಲ್ತಾನಾಬಾದ್ ಮಂಡಲದಲ್ಲಿ (Telangana, Sultanabad) ನಡೆದಿದೆ. ದೊಡ್ಡಪಲ್ಲಿ ಜಿಲ್ಲೆ ಸುಲ್ತಾನಾಬಾದ್ ಮಂಡಲ ದುಬ್ಬಪಳ್ಳಿ ಗ್ರಾಮ ಸಮೀಪವಿರುವ ಸ್ಮಶಾನದ ಬಳಿ ಈ ದಾರುಣ ನಡೆದಿದೆ. ಮೃತ ಕೋತಿಗಳನ್ನು ಸ್ಮಶಾನದ ಸಮೀಪ ಬಿಸಾಕಿ ಹೋಗಿದ್ದಾರೆ. ಹೀಗೆ ಒಟ್ಟು 35 ಕೋತಿಗಳ ಮೃತದೇಹಗಳು ಪತ್ತೆಯಾಗಿವೆ.

ಅಲ್ಲಿಗೆ ಯೋಜನೆ ಪ್ರಕಾರವೇ ಹೀಗೆ ಕೋತಿಗಳ ಮಾರಣಹೋಮ ನಡೆದಿದೆ ಎಂದು ತಿಳಿದುಬಂದಿದೆ. ಈ ವಾನರರು ಹೊಟ್ಟೆ ತುಂಬಿಕೊಳ್ಳಲು ಸುತ್ತಮುತ್ತಲ ಗ್ರಾಮಗಳಿಗೆ ವಲಸೆ ಬರುತ್ತಿದ್ದವಂತೆ. ಗ್ರಾನೈಟ್​​ ಬ್ಯುಸಿನೆಸ್​ ಕಾ್ರಣ ಬೆಟ್ಟಗಳು ಕರುಗುತ್ತಿವೆ. ಮೂಕ ಪ್ರಾಣಿಗಳಿಗೆ ಆಹಾರ-ಆಶ್ರಯ ದುರ್ಲಭವಾಗುತ್ತಿದೆ. ಇದೀಗ ಸತ್ತ ಕೋತಿಗಳನ್ನು ನೋಡಿ ಸ್ಥಳೀಯರು ಆಂದೋಲನ ವ್ಯಕ್ತಪಡಿಸಿದ್ದಾರೆ.

ಫಾರೆಸ್ಟ್ ಅಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿ ತಂಡ ತಕ್ಷಣವೇ ಇಲ್ಲಿಗೆ ಬಂದು ಸ್ಥಳ ಪರೀಕ್ಷೆ- ಶವಪರೀಕ್ಷೆ ಮಾಡಿದ್ದಾರೆ. ವಿಷ ಹಾಕಿ ಕೊಲೆಗೈದ ವ್ಯಕ್ತಿಗಳು ಯಾರು ಎಂದು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಹಿಡಿಯುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸತ್ತ ಕೋತಿಗಳ ಸಾಮೂಹಿಕ ಅಂತ್ಯಕ್ರಿಯೆಯನ್ನು ಸಮೀಪದಲ್ಲೇ ನಡೆಸಿದ್ದು ಭಾರೀ ಪ್ರಮಾಣದಲ್ಲಿ ಸ್ಥಳೀಯರು ಸೇರಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:52 am, Fri, 6 October 23

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ