AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ರಾಜ್ಯಗಳು 27 ಪತ್ನಿಯರು; ಒಡಿಶಾ ವ್ಯಕ್ತಿಯ ವಂಚನೆ ಜಾಲ ಬಹುದೊಡ್ಡದು, ಮೋಸಹೋದವರೆಲ್ಲ ವಕೀಲರು, ವೈದ್ಯರು, ಶಿಕ್ಷಕಿಯರು !

ಮ್ಯಾಟ್ರಿಮೋನಿ ಸೈಟ್​​ನಲ್ಲಿ ತಾನೊಬ್ಬ ವೈದ್ಯ, ಲಾಯರ್​ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ ಈತ ನಂಬಿಸಿ, ಮೋಸ ಮಾಡುತ್ತಿದ್ದುದೂ ಕೂಡ ಅಂಥ ಉನ್ನತ ಸ್ಥಾನದಲ್ಲಿರುವ ವಿಚ್ಛೇದಿತ, ಅವಿವಾಹಿತ ಮಧ್ಯವಯಸ್ಕ ಮಹಿಳೆಯರಿಗೆ.

10 ರಾಜ್ಯಗಳು 27 ಪತ್ನಿಯರು; ಒಡಿಶಾ ವ್ಯಕ್ತಿಯ ವಂಚನೆ ಜಾಲ ಬಹುದೊಡ್ಡದು, ಮೋಸಹೋದವರೆಲ್ಲ ವಕೀಲರು, ವೈದ್ಯರು, ಶಿಕ್ಷಕಿಯರು !
ಮೋಸ ಮಾಡಿದ ವ್ಯಕ್ತಿ
TV9 Web
| Updated By: Lakshmi Hegde|

Updated on:Feb 22, 2022 | 6:28 PM

Share

ಫೆಬ್ರವರಿ 13ರಂದು 66ವರ್ಷದ ವ್ಯಕ್ತಿಯೊಬ್ಬ ಭುವನೇಶ್ವರ್​ದಲ್ಲಿ ಕಾರಿನಲ್ಲಿ ತೆರಳುತ್ತಿದ್ದ. ಏಕಾಏಕಿ ಅವರ ಕಾರನ್ನು ಒಡಿಶಾ ಪೊಲೀಸರ (Odisha Police) ವಿಶೇಷ ತಂಡವೊಂದು ಅಡ್ಡಗಟ್ಟಿತು. ಅಂದಹಾಗೇ, ಈ ವ್ಯಕ್ತಿಯನ್ನು ಪೊಲೀಸರು ಕಳೆದ 8 ತಿಂಗಳುಗಳಿಂದಲೂ ಹಿಂಬಾಲಿಸುತ್ತ, ಗಮನಿಸುತ್ತಿದ್ದರು. ಆತನ ಆನ್​ಲೈನ್​ ವ್ಯವಹಾರಗಳ ಮೇಲೆ ನಿಗಾ ಇಟ್ಟಿದ್ದರು. ಆತನ ವಾಹನ ಎಲ್ಲಿ ಹೋಗುತ್ತದೆ, ಏನು ಮಾಡುತ್ತದೆ ಎಂಬೆಲ್ಲದರ ಬಗ್ಗೆಯೂ ವಿಶೇಷ ಹೋಂವರ್ಕ್​ ಮಾಡುತ್ತಲೇ ಇದ್ದರು.

ಈ ವ್ಯಕ್ತಿಯ ಹೆಸರು ಬಿಭು ಪ್ರಕಾಶ್ ಸ್ವೈನ್. ಬಾಡಿಗೆ ಕಾರಿನಲ್ಲಿ ಹೋಗುತ್ತಿದ್ದ ಇವನನ್ನು ಪೊಲೀಸರು ಅಡ್ಡಗಟ್ಟಿದ ಕೂಡಲೇ, ಪೇಲವವಾಗಿ ನಗುತ್ತ ಕೆಳಗೆ ಇಳಿದಿದ್ದ. ಅಲ್ಲಿಂದ ಆತನನ್ನು ಬಂಧಿಸಿ ಕರೆದುಕೊಂಡು ಹೋದ ಪೊಲೀಸರು ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ. ಅಂದಹಾಗೆ ನಾವಿಲ್ಲಿ ಹೇಳುತ್ತಿರುವುದು ಇನ್ಯಾರ ಬಗ್ಗೆಯೂ ಅಲ್ಲ, ಏಳು ರಾಜ್ಯಗಳಿಂದ 14 ಮಹಿಳೆಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಗ್ಗೆ. ಕಳೆದ ವಾರ ಸುದ್ದಿ ಮಾಡಿದ್ದ ಈ ವ್ಯಕ್ತಿಯ ಬಗ್ಗೆ ಹೊಸದೊಂದು ಅಪ್​ಡೇಟ್​ ಸಿಕ್ಕಿದೆ. ಬಿಭು ಪ್ರಕಾಶ್​ ಮದುವೆಯಾಗಿದ್ದು 14 ಮಹಿಳೆಯರನ್ನಲ್ಲ, 27 ಮಹಿಳೆಯರನ್ನು ಎಂದು ಗೊತ್ತಾಗಿದೆ.

ಮ್ಯಾಟ್ರಿಮೋನಿ ಸೈಟ್​​ನಲ್ಲಿ ತಾನೊಬ್ಬ ವೈದ್ಯ, ಲಾಯರ್​ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ ಈತ ನಂಬಿಸಿ, ಮೋಸ ಮಾಡುತ್ತಿದ್ದುದೂ ಕೂಡ ಅಂಥ ಉನ್ನತ ಸ್ಥಾನದಲ್ಲಿರುವ ವಿಚ್ಛೇದಿತ, ಅವಿವಾಹಿತ ಮಧ್ಯವಯಸ್ಕ ಮಹಿಳೆಯರಿಗೆ. ಅವರನ್ನು ಪರಿಚಯ ಮಾಡಿಕೊಳ್ಳುವುದು, ಮದುವೆಯಾಗುವುದು ನಂತರ ಅವರಲ್ಲಿದ್ದ ಹಣ , ಒಡವೆ ದೋಚಿ ಪರಾರಿಯಾಗುವುದು ಇವನ ಕೆಲಸವಾಗಿತ್ತು. 14ನೇ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ತನಿಖೆಯಲ್ಲಿ  ಈತ ಮದುವೆಯಾಗಿದ್ದು 10 ರಾಜ್ಯಗಳ 27 ಮಹಿಳೆಯರನ್ನು ಎಂಬುದು ಸ್ಪಷ್ಟವಾಗಿದೆ.  ಅದರೊಂದಿಗೆ ಕೇರಳದಲ್ಲಿ 2006ರಲ್ಲಿ 128 ನಕಲಿ ಕ್ರೆಡಿಟ್​ ಕಾರ್ಡ್​ಗಳ ಮೂಲಕ 13 ಬ್ಯಾಂಕ್​ಗಳಿಗೆ ಸುಮಾರು 1 ಕೋಟಿ ರೂಪಾಯಿ ವಂಚಿಸಿದ್ದಾನೆ. ಅಷ್ಟೇ ಅಲ್ಲ, ಹೈದರಾಬಾದ್​​ನಲ್ಲಿ ಅನೇಕರಿಗೆ ಅವರ ಮಕ್ಕಳಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ 2 ಕೋಟಿ ರೂ.ಗೂ ಹೆಚ್ಚು ಹಣ ವಂಚನೆ ಮಾಡಿದ್ದಾನೆ ಎಂಬ ಸತ್ಯ ಬಯಲಿಗೆ ಬಂದಿದೆ.

ಇಂಡೋ-ಟಿಬೆಟಿಯನ್​ ಗಡಿ ಪೊಲೀಸ್​​ ಕಮಾಂಡಂಟ್​ ಆಗಿದ್ದವರೂ ಕೂಡ ಈತನ ಬಲೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಛತ್ತೀಸ್​ಗಢ್​ನ ಚಾರ್ಟರ್ಡ್​ ಅಕೌಂಟೆಂಟ್​, ದೆಹಲಿಯ ಶಿಕ್ಷಕಿಯರು, ಅಸ್ಸಾಂನ ವೈದ್ಯೆ, ಸುಪ್ರೀಂಕೋರ್ಟ್​ ಮತ್ತು ದೆಹಲಿ ಹೈಕೋರ್ಟ್​​ನ ಇಬ್ಬರು ವಕೀಲೆಯರು, ಇಂಧೋರ್​​ನ ಸರ್ಕಾರಿ ಉದ್ಯೋಗಿ, ಕೇರಳಾ ಆಡಳಿತಾತ್ಮಕ ಸೇವಾಧಿಕಾರಿ..ಹೀಗೆ ಇಂಥ ಉನ್ನತ ಹುದ್ದೆಯಲ್ಲಿ ಇದ್ದವರೇ ಬಿಭು ಪ್ರಕಾಶ್​ ಬಲೆಗೆ ಬಿದ್ದಿದ್ದಾರೆ.  ಈತ ಬಂಧಿತನಾಗುತ್ತಿದ್ದಂತೆ ಒಬ್ಬೊಬ್ಬರೇ ತಮ್ಮ ಕತೆ ಹೇಳಿಕೊಳ್ಳುತ್ತಿದ್ದಾರೆ. ಮಹಿಳೆಯರ ಅಸಹಾಯಕತೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತೀದ್ದ ವ್ಯಕ್ತಿಯೀಗ ಪೊಲೀಸ್​ ಕಸ್ಟಡಿಯಲ್ಲಿದ್ದಾನೆ. ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:  ಅಷ್ಟು ಸುಲಭವಾಗಿ ಬಿಡುವುದಿಲ್ಲ, ಕಠಿಣ ಕ್ರಮ ಕೈಗೊಳ್ಳುತ್ತೇವೆ! ಪತ್ರಕರ್ತರ ವಿರುದ್ಧದ ಸಾಹ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ

Published On - 6:28 pm, Tue, 22 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ