AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ರಾಜ್ಯಗಳು 27 ಪತ್ನಿಯರು; ಒಡಿಶಾ ವ್ಯಕ್ತಿಯ ವಂಚನೆ ಜಾಲ ಬಹುದೊಡ್ಡದು, ಮೋಸಹೋದವರೆಲ್ಲ ವಕೀಲರು, ವೈದ್ಯರು, ಶಿಕ್ಷಕಿಯರು !

ಮ್ಯಾಟ್ರಿಮೋನಿ ಸೈಟ್​​ನಲ್ಲಿ ತಾನೊಬ್ಬ ವೈದ್ಯ, ಲಾಯರ್​ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ ಈತ ನಂಬಿಸಿ, ಮೋಸ ಮಾಡುತ್ತಿದ್ದುದೂ ಕೂಡ ಅಂಥ ಉನ್ನತ ಸ್ಥಾನದಲ್ಲಿರುವ ವಿಚ್ಛೇದಿತ, ಅವಿವಾಹಿತ ಮಧ್ಯವಯಸ್ಕ ಮಹಿಳೆಯರಿಗೆ.

10 ರಾಜ್ಯಗಳು 27 ಪತ್ನಿಯರು; ಒಡಿಶಾ ವ್ಯಕ್ತಿಯ ವಂಚನೆ ಜಾಲ ಬಹುದೊಡ್ಡದು, ಮೋಸಹೋದವರೆಲ್ಲ ವಕೀಲರು, ವೈದ್ಯರು, ಶಿಕ್ಷಕಿಯರು !
ಮೋಸ ಮಾಡಿದ ವ್ಯಕ್ತಿ
Follow us
TV9 Web
| Updated By: Lakshmi Hegde

Updated on:Feb 22, 2022 | 6:28 PM

ಫೆಬ್ರವರಿ 13ರಂದು 66ವರ್ಷದ ವ್ಯಕ್ತಿಯೊಬ್ಬ ಭುವನೇಶ್ವರ್​ದಲ್ಲಿ ಕಾರಿನಲ್ಲಿ ತೆರಳುತ್ತಿದ್ದ. ಏಕಾಏಕಿ ಅವರ ಕಾರನ್ನು ಒಡಿಶಾ ಪೊಲೀಸರ (Odisha Police) ವಿಶೇಷ ತಂಡವೊಂದು ಅಡ್ಡಗಟ್ಟಿತು. ಅಂದಹಾಗೇ, ಈ ವ್ಯಕ್ತಿಯನ್ನು ಪೊಲೀಸರು ಕಳೆದ 8 ತಿಂಗಳುಗಳಿಂದಲೂ ಹಿಂಬಾಲಿಸುತ್ತ, ಗಮನಿಸುತ್ತಿದ್ದರು. ಆತನ ಆನ್​ಲೈನ್​ ವ್ಯವಹಾರಗಳ ಮೇಲೆ ನಿಗಾ ಇಟ್ಟಿದ್ದರು. ಆತನ ವಾಹನ ಎಲ್ಲಿ ಹೋಗುತ್ತದೆ, ಏನು ಮಾಡುತ್ತದೆ ಎಂಬೆಲ್ಲದರ ಬಗ್ಗೆಯೂ ವಿಶೇಷ ಹೋಂವರ್ಕ್​ ಮಾಡುತ್ತಲೇ ಇದ್ದರು.

ಈ ವ್ಯಕ್ತಿಯ ಹೆಸರು ಬಿಭು ಪ್ರಕಾಶ್ ಸ್ವೈನ್. ಬಾಡಿಗೆ ಕಾರಿನಲ್ಲಿ ಹೋಗುತ್ತಿದ್ದ ಇವನನ್ನು ಪೊಲೀಸರು ಅಡ್ಡಗಟ್ಟಿದ ಕೂಡಲೇ, ಪೇಲವವಾಗಿ ನಗುತ್ತ ಕೆಳಗೆ ಇಳಿದಿದ್ದ. ಅಲ್ಲಿಂದ ಆತನನ್ನು ಬಂಧಿಸಿ ಕರೆದುಕೊಂಡು ಹೋದ ಪೊಲೀಸರು ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ. ಅಂದಹಾಗೆ ನಾವಿಲ್ಲಿ ಹೇಳುತ್ತಿರುವುದು ಇನ್ಯಾರ ಬಗ್ಗೆಯೂ ಅಲ್ಲ, ಏಳು ರಾಜ್ಯಗಳಿಂದ 14 ಮಹಿಳೆಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಗ್ಗೆ. ಕಳೆದ ವಾರ ಸುದ್ದಿ ಮಾಡಿದ್ದ ಈ ವ್ಯಕ್ತಿಯ ಬಗ್ಗೆ ಹೊಸದೊಂದು ಅಪ್​ಡೇಟ್​ ಸಿಕ್ಕಿದೆ. ಬಿಭು ಪ್ರಕಾಶ್​ ಮದುವೆಯಾಗಿದ್ದು 14 ಮಹಿಳೆಯರನ್ನಲ್ಲ, 27 ಮಹಿಳೆಯರನ್ನು ಎಂದು ಗೊತ್ತಾಗಿದೆ.

ಮ್ಯಾಟ್ರಿಮೋನಿ ಸೈಟ್​​ನಲ್ಲಿ ತಾನೊಬ್ಬ ವೈದ್ಯ, ಲಾಯರ್​ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ ಈತ ನಂಬಿಸಿ, ಮೋಸ ಮಾಡುತ್ತಿದ್ದುದೂ ಕೂಡ ಅಂಥ ಉನ್ನತ ಸ್ಥಾನದಲ್ಲಿರುವ ವಿಚ್ಛೇದಿತ, ಅವಿವಾಹಿತ ಮಧ್ಯವಯಸ್ಕ ಮಹಿಳೆಯರಿಗೆ. ಅವರನ್ನು ಪರಿಚಯ ಮಾಡಿಕೊಳ್ಳುವುದು, ಮದುವೆಯಾಗುವುದು ನಂತರ ಅವರಲ್ಲಿದ್ದ ಹಣ , ಒಡವೆ ದೋಚಿ ಪರಾರಿಯಾಗುವುದು ಇವನ ಕೆಲಸವಾಗಿತ್ತು. 14ನೇ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ತನಿಖೆಯಲ್ಲಿ  ಈತ ಮದುವೆಯಾಗಿದ್ದು 10 ರಾಜ್ಯಗಳ 27 ಮಹಿಳೆಯರನ್ನು ಎಂಬುದು ಸ್ಪಷ್ಟವಾಗಿದೆ.  ಅದರೊಂದಿಗೆ ಕೇರಳದಲ್ಲಿ 2006ರಲ್ಲಿ 128 ನಕಲಿ ಕ್ರೆಡಿಟ್​ ಕಾರ್ಡ್​ಗಳ ಮೂಲಕ 13 ಬ್ಯಾಂಕ್​ಗಳಿಗೆ ಸುಮಾರು 1 ಕೋಟಿ ರೂಪಾಯಿ ವಂಚಿಸಿದ್ದಾನೆ. ಅಷ್ಟೇ ಅಲ್ಲ, ಹೈದರಾಬಾದ್​​ನಲ್ಲಿ ಅನೇಕರಿಗೆ ಅವರ ಮಕ್ಕಳಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ 2 ಕೋಟಿ ರೂ.ಗೂ ಹೆಚ್ಚು ಹಣ ವಂಚನೆ ಮಾಡಿದ್ದಾನೆ ಎಂಬ ಸತ್ಯ ಬಯಲಿಗೆ ಬಂದಿದೆ.

ಇಂಡೋ-ಟಿಬೆಟಿಯನ್​ ಗಡಿ ಪೊಲೀಸ್​​ ಕಮಾಂಡಂಟ್​ ಆಗಿದ್ದವರೂ ಕೂಡ ಈತನ ಬಲೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಛತ್ತೀಸ್​ಗಢ್​ನ ಚಾರ್ಟರ್ಡ್​ ಅಕೌಂಟೆಂಟ್​, ದೆಹಲಿಯ ಶಿಕ್ಷಕಿಯರು, ಅಸ್ಸಾಂನ ವೈದ್ಯೆ, ಸುಪ್ರೀಂಕೋರ್ಟ್​ ಮತ್ತು ದೆಹಲಿ ಹೈಕೋರ್ಟ್​​ನ ಇಬ್ಬರು ವಕೀಲೆಯರು, ಇಂಧೋರ್​​ನ ಸರ್ಕಾರಿ ಉದ್ಯೋಗಿ, ಕೇರಳಾ ಆಡಳಿತಾತ್ಮಕ ಸೇವಾಧಿಕಾರಿ..ಹೀಗೆ ಇಂಥ ಉನ್ನತ ಹುದ್ದೆಯಲ್ಲಿ ಇದ್ದವರೇ ಬಿಭು ಪ್ರಕಾಶ್​ ಬಲೆಗೆ ಬಿದ್ದಿದ್ದಾರೆ.  ಈತ ಬಂಧಿತನಾಗುತ್ತಿದ್ದಂತೆ ಒಬ್ಬೊಬ್ಬರೇ ತಮ್ಮ ಕತೆ ಹೇಳಿಕೊಳ್ಳುತ್ತಿದ್ದಾರೆ. ಮಹಿಳೆಯರ ಅಸಹಾಯಕತೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತೀದ್ದ ವ್ಯಕ್ತಿಯೀಗ ಪೊಲೀಸ್​ ಕಸ್ಟಡಿಯಲ್ಲಿದ್ದಾನೆ. ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:  ಅಷ್ಟು ಸುಲಭವಾಗಿ ಬಿಡುವುದಿಲ್ಲ, ಕಠಿಣ ಕ್ರಮ ಕೈಗೊಳ್ಳುತ್ತೇವೆ! ಪತ್ರಕರ್ತರ ವಿರುದ್ಧದ ಸಾಹ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ

Published On - 6:28 pm, Tue, 22 February 22

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!