AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ-ಅಮ್ಮನ ಬಲವಂತಕ್ಕೆ ನೊಂದು ಕಾಲೇಜಿನ ಹಾಸ್ಟೆಲ್​ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುತ್ರಿ; ಅಂಥದ್ದೇನು ಹೇಳಿದರು ಪಾಲಕರು?

ಈ ಹುಡುಗಿಗೆ ತನ್ನ ಅಪ್ಪ-ಅಮ್ಮನ ಮೇಲೆ ಕೋಪ ಕೂಡ ಬಂದಿತ್ತು. ಬಸ್​​ನಲ್ಲಿ ಬರುತ್ತಿದ್ದಾಗಲೇ ಅವಳು ತನ್ನ ಮೊಬೈಲ್​​ನ್ನು ಎಸೆದಿದ್ದಳು. ಮರುದಿನವೇ ಪಾಲಕರು ಹೊಸ ಮೊಬೈಲ್​ ತಂದು ಕೊಟ್ಟಿದ್ದರು. 

ಅಪ್ಪ-ಅಮ್ಮನ ಬಲವಂತಕ್ಕೆ ನೊಂದು ಕಾಲೇಜಿನ ಹಾಸ್ಟೆಲ್​ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುತ್ರಿ; ಅಂಥದ್ದೇನು ಹೇಳಿದರು ಪಾಲಕರು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Feb 17, 2022 | 11:43 AM

ಆಂಧ್ರಪ್ರದೇಶದ ವಿಜಯನಗರಂನ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್​ ನಾಲೇಡ್ಜ್​ ಟೆಕ್ನಾಲಜೀಸ್​ (ಐಐಐಟಿ-ಶ್ರೀಕಾಕುಲಂ)ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 16ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಕಾಲೇಜಿನ ಹಾಸ್ಟೆಲ್​ ಕೋಣೆಯಲ್ಲೇ ಫೆ.16ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಹಪಾಠಿಗಳು ಬುಧವಾರ ಬಂದು ಬಾಗಿಲು ಬಡಿದರೂ ಯುವತಿ ಬಾಗಿಲು ತೆರೆಯಲಿಲ್ಲ. ಅನುಮಾನ ಬಂದು ಕಾಲೇಜಿನ ಸಿಬ್ಬಂದಿಗೆ ತಿಳಿಸಲಾಯಿತು. ಅವರೆಲ್ಲ ಬಂದು ಬಾಗಿಲು ಒಡೆದು ನೋಡಿದರೆ, ವಿದ್ಯಾರ್ಥಿನಿ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಳು.

ಮೃತ ಹುಡುಗಿಯ ಹೆಸರು ಕೊಂಡಪಲ್ಲಿ ಮನೀಶಾ ಅಂಜು. ಈಕೆ ವಿಜಯನಗರಂನ ನೆಲ್ಲಿಮಾರ್ಲ ನಿವಾಸಿ. ಐಐಐಟಿ-ಶ್ರೀಕಾಕುಲಂನಲ್ಲಿ ಮೊದಲ ವರ್ಷದ ಪಿಯುಸಿ ಓದುತ್ತಿದ್ದಳು. ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಪಾಲಕರು ಮಾಡಿದ ಒತ್ತಾಯ ಎಂದು ಹೇಳಲಾಗಿದೆ.  ಪ್ರಸಕ್ತ ಶೈಕ್ಷಣಿಕ ವರ್ಷ ಶುರುವಾದಾಗಿನಿಂದ ಇಲ್ಲಿಯವರೆಗೂ ಆಕೆ ಮನೆಯಲ್ಲೇ ಮನೆಯಲ್ಲೇ ಇದ್ದುಕೊಂಡು ಆನ್​ಲೈನ್ ಕ್ಲಾಸ್​ ಮೂಲಕ ಶಿಕ್ಷಣ ಪಡೆಯುತ್ತಿದ್ದಳು. ಆದರೆ ಇದೀಗ ಕಾಲೇಜುಗಳೆಲ್ಲ ಶುರುವಾದ ಹಿನ್ನೆಲೆಯಲ್ಲಿ ಪಾಲಕರು, ನೀನು ಕಾಲೇಜಿಗೇ ಹೋಗಿ, ಆಫ್​ಲೈನ್​ ಕ್ಲಾಸ್​ಗೆ ಹಾಜರಾಗು ಎಂದು ಹೇಳಿದ್ದಾರೆ. ಅವಳಿಗೆ ಇಷ್ಟವಿಲ್ಲದೆ ಇದ್ದರೂ, ಬಲವಂತವಾಗಿ ಕರೆತಂದು ಹಾಸ್ಟೆಲ್​​ನಲ್ಲಿ ಬಿಟ್ಟಿದ್ದಾರೆ. ಇದೇ ಕಾರಣಕ್ಕೆ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಕೊವಿಡ್​ 19 ಜಾಸ್ತಿ ಇದ್ದಾಗ ಈ ಕಾಲೇಜು ಆನ್​ಲೈನ್​ ಕ್ಲಾಸ್ ಪ್ರಾರಂಭ ಮಾಡಿತ್ತು. ಇದೀಗ ಕೊರೊನಾ ಕಡಿಮೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಫ್​ಲೈನ್​ ಕ್ಲಾಸ್​ಗೆಂದು ಕಾಲೇಜಿಗೆ ಬೇಕಾದರೂ ಬರಬಹುದು. ಹಾಗೊಮ್ಮೆ ಇಲ್ಲಿ ಬರಲು ತೊಂದರೆಯಿದ್ದವರು, ಇಷ್ಟವಿಲ್ಲದೆ ಇದ್ದವರು ಮನೆಯಲ್ಲೇ ಇದ್ದು, ಪ್ರತಿದಿನ ಆನ್​ಲೈನ್​ ಕ್ಲಾಸ್​ ಅಟೆಂಡ್ ಆಗಬೇಕು ಎಂದು ಕಾಲೇಜು ಹೇಳಿತ್ತು. ಹುಡುಗಿಗೆ ಮನೆಯಲ್ಲೇ ಇದ್ದು ಆನ್​ಲೈನ್​ ಕ್ಲಾಸ್​ ತೆಗೆದುಕೊಳ್ಳುವ ಆಸೆ. ಆದರೆ ಪಾಲಕರಿಗೆ ಆಕೆ ಕಾಲೇಜಿಗೆ ಹೋಗಲಿ ಎಂಬ ಬಯಕೆ. ಅವರೇ ಬಲವಂತವಾಗಿ ಹಾಸ್ಟೆಲ್​​ಗೆ ಕರೆತಂದು ಬಿಟ್ಟಿದ್ದರು. ಇದರಿಂದಾಗಿ ಹುಡುಗಿಗೆ ಕೋಪ ಕೂಡ ಬಂದಿತ್ತು. ಬಸ್​​ನಲ್ಲಿ ಬರುತ್ತಿದ್ದಾಗಲೇ ಅವಳು ತನ್ನ ಮೊಬೈಲ್​​ನ್ನು ಎಸೆದಿದ್ದಳು. ಮರುದಿನವೇ ಪಾಲಕರು ಹೊಸ ಮೊಬೈಲ್​ ತಂದು ಕೊಟ್ಟಿದ್ದರು.  ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಸಿಎಂ ಕೆ ಚಂದ್ರಶೇಖರರಾವ್ 68ನೆ ಹುಟ್ಟುಹಬ್ಬ: ಕೋಳಿ ವಿತರಣೆ ಮಾಡಿದ ಕರೀಂನಗರ ಮೇಯರ್​!

Published On - 9:51 am, Thu, 17 February 22

ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್