AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ-ಅಮ್ಮನ ಬಲವಂತಕ್ಕೆ ನೊಂದು ಕಾಲೇಜಿನ ಹಾಸ್ಟೆಲ್​ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುತ್ರಿ; ಅಂಥದ್ದೇನು ಹೇಳಿದರು ಪಾಲಕರು?

ಈ ಹುಡುಗಿಗೆ ತನ್ನ ಅಪ್ಪ-ಅಮ್ಮನ ಮೇಲೆ ಕೋಪ ಕೂಡ ಬಂದಿತ್ತು. ಬಸ್​​ನಲ್ಲಿ ಬರುತ್ತಿದ್ದಾಗಲೇ ಅವಳು ತನ್ನ ಮೊಬೈಲ್​​ನ್ನು ಎಸೆದಿದ್ದಳು. ಮರುದಿನವೇ ಪಾಲಕರು ಹೊಸ ಮೊಬೈಲ್​ ತಂದು ಕೊಟ್ಟಿದ್ದರು. 

ಅಪ್ಪ-ಅಮ್ಮನ ಬಲವಂತಕ್ಕೆ ನೊಂದು ಕಾಲೇಜಿನ ಹಾಸ್ಟೆಲ್​ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುತ್ರಿ; ಅಂಥದ್ದೇನು ಹೇಳಿದರು ಪಾಲಕರು?
ಪ್ರಾತಿನಿಧಿಕ ಚಿತ್ರ
TV9 Web
| Updated By: Lakshmi Hegde|

Updated on:Feb 17, 2022 | 11:43 AM

Share

ಆಂಧ್ರಪ್ರದೇಶದ ವಿಜಯನಗರಂನ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್​ ನಾಲೇಡ್ಜ್​ ಟೆಕ್ನಾಲಜೀಸ್​ (ಐಐಐಟಿ-ಶ್ರೀಕಾಕುಲಂ)ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 16ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಕಾಲೇಜಿನ ಹಾಸ್ಟೆಲ್​ ಕೋಣೆಯಲ್ಲೇ ಫೆ.16ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಹಪಾಠಿಗಳು ಬುಧವಾರ ಬಂದು ಬಾಗಿಲು ಬಡಿದರೂ ಯುವತಿ ಬಾಗಿಲು ತೆರೆಯಲಿಲ್ಲ. ಅನುಮಾನ ಬಂದು ಕಾಲೇಜಿನ ಸಿಬ್ಬಂದಿಗೆ ತಿಳಿಸಲಾಯಿತು. ಅವರೆಲ್ಲ ಬಂದು ಬಾಗಿಲು ಒಡೆದು ನೋಡಿದರೆ, ವಿದ್ಯಾರ್ಥಿನಿ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಳು.

ಮೃತ ಹುಡುಗಿಯ ಹೆಸರು ಕೊಂಡಪಲ್ಲಿ ಮನೀಶಾ ಅಂಜು. ಈಕೆ ವಿಜಯನಗರಂನ ನೆಲ್ಲಿಮಾರ್ಲ ನಿವಾಸಿ. ಐಐಐಟಿ-ಶ್ರೀಕಾಕುಲಂನಲ್ಲಿ ಮೊದಲ ವರ್ಷದ ಪಿಯುಸಿ ಓದುತ್ತಿದ್ದಳು. ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಪಾಲಕರು ಮಾಡಿದ ಒತ್ತಾಯ ಎಂದು ಹೇಳಲಾಗಿದೆ.  ಪ್ರಸಕ್ತ ಶೈಕ್ಷಣಿಕ ವರ್ಷ ಶುರುವಾದಾಗಿನಿಂದ ಇಲ್ಲಿಯವರೆಗೂ ಆಕೆ ಮನೆಯಲ್ಲೇ ಮನೆಯಲ್ಲೇ ಇದ್ದುಕೊಂಡು ಆನ್​ಲೈನ್ ಕ್ಲಾಸ್​ ಮೂಲಕ ಶಿಕ್ಷಣ ಪಡೆಯುತ್ತಿದ್ದಳು. ಆದರೆ ಇದೀಗ ಕಾಲೇಜುಗಳೆಲ್ಲ ಶುರುವಾದ ಹಿನ್ನೆಲೆಯಲ್ಲಿ ಪಾಲಕರು, ನೀನು ಕಾಲೇಜಿಗೇ ಹೋಗಿ, ಆಫ್​ಲೈನ್​ ಕ್ಲಾಸ್​ಗೆ ಹಾಜರಾಗು ಎಂದು ಹೇಳಿದ್ದಾರೆ. ಅವಳಿಗೆ ಇಷ್ಟವಿಲ್ಲದೆ ಇದ್ದರೂ, ಬಲವಂತವಾಗಿ ಕರೆತಂದು ಹಾಸ್ಟೆಲ್​​ನಲ್ಲಿ ಬಿಟ್ಟಿದ್ದಾರೆ. ಇದೇ ಕಾರಣಕ್ಕೆ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಕೊವಿಡ್​ 19 ಜಾಸ್ತಿ ಇದ್ದಾಗ ಈ ಕಾಲೇಜು ಆನ್​ಲೈನ್​ ಕ್ಲಾಸ್ ಪ್ರಾರಂಭ ಮಾಡಿತ್ತು. ಇದೀಗ ಕೊರೊನಾ ಕಡಿಮೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಫ್​ಲೈನ್​ ಕ್ಲಾಸ್​ಗೆಂದು ಕಾಲೇಜಿಗೆ ಬೇಕಾದರೂ ಬರಬಹುದು. ಹಾಗೊಮ್ಮೆ ಇಲ್ಲಿ ಬರಲು ತೊಂದರೆಯಿದ್ದವರು, ಇಷ್ಟವಿಲ್ಲದೆ ಇದ್ದವರು ಮನೆಯಲ್ಲೇ ಇದ್ದು, ಪ್ರತಿದಿನ ಆನ್​ಲೈನ್​ ಕ್ಲಾಸ್​ ಅಟೆಂಡ್ ಆಗಬೇಕು ಎಂದು ಕಾಲೇಜು ಹೇಳಿತ್ತು. ಹುಡುಗಿಗೆ ಮನೆಯಲ್ಲೇ ಇದ್ದು ಆನ್​ಲೈನ್​ ಕ್ಲಾಸ್​ ತೆಗೆದುಕೊಳ್ಳುವ ಆಸೆ. ಆದರೆ ಪಾಲಕರಿಗೆ ಆಕೆ ಕಾಲೇಜಿಗೆ ಹೋಗಲಿ ಎಂಬ ಬಯಕೆ. ಅವರೇ ಬಲವಂತವಾಗಿ ಹಾಸ್ಟೆಲ್​​ಗೆ ಕರೆತಂದು ಬಿಟ್ಟಿದ್ದರು. ಇದರಿಂದಾಗಿ ಹುಡುಗಿಗೆ ಕೋಪ ಕೂಡ ಬಂದಿತ್ತು. ಬಸ್​​ನಲ್ಲಿ ಬರುತ್ತಿದ್ದಾಗಲೇ ಅವಳು ತನ್ನ ಮೊಬೈಲ್​​ನ್ನು ಎಸೆದಿದ್ದಳು. ಮರುದಿನವೇ ಪಾಲಕರು ಹೊಸ ಮೊಬೈಲ್​ ತಂದು ಕೊಟ್ಟಿದ್ದರು.  ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಸಿಎಂ ಕೆ ಚಂದ್ರಶೇಖರರಾವ್ 68ನೆ ಹುಟ್ಟುಹಬ್ಬ: ಕೋಳಿ ವಿತರಣೆ ಮಾಡಿದ ಕರೀಂನಗರ ಮೇಯರ್​!

Published On - 9:51 am, Thu, 17 February 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್