AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ನಾಯಿಮರಿಗೆ ಸೋನು ಎಂದು ಹೆಸರಿಟ್ಟ ಮಹಿಳೆಗೆ ಬೆಂಕಿ ಹಚ್ಚಿದ ಪಕ್ಕದಮನೆಯ ವ್ಯಕ್ತಿ; ಸಿಟ್ಟಿಗೆ ಕಾರಣವೇನು ಗೊತ್ತಾ?

ನೀತಾಬೆನ್​ ಪೊಲೀಸರಿಗೆ ದೂರು ನೀಡಿದ್ದಾರೆ. ಭಾರ್ವಾದ್​ ಮತ್ತು ಆತನ ಸಹಚರರು ಬಂದು ನನ್ನನ್ನು ಒಂದೇ ಸಮ ನಿಂದಿಸಿದರು. ಆದರೆ ನಾನು ಅವರಿಂದ ತಪ್ಪಿಸಿಕೊಳ್ಳಲು ಅಡುಗೆ ಮನೆಗೆ ಹೋದೆ. ಆದರೆ ಅವರು ನನ್ನನ್ನು ಬಿಡಲಿಲ್ಲ ಎಂದು ಹೇಳಿದ್ದಾರೆ.

Shocking News: ನಾಯಿಮರಿಗೆ ಸೋನು ಎಂದು ಹೆಸರಿಟ್ಟ ಮಹಿಳೆಗೆ ಬೆಂಕಿ ಹಚ್ಚಿದ ಪಕ್ಕದಮನೆಯ ವ್ಯಕ್ತಿ; ಸಿಟ್ಟಿಗೆ ಕಾರಣವೇನು ಗೊತ್ತಾ?
ಸಾಂಕೇತಿಕ ಚಿತ್ರ
TV9 Web
| Edited By: |

Updated on: Dec 22, 2021 | 9:39 AM

Share

ಒಂದು ಕ್ಷಣದ ಸಿಟ್ಟು ಎಂತೆಂತಾ ಅವಘಡಗಳಿಗೆ ಕಾರಣವಾಗುತ್ತದೆ ನೋಡಿ. ಇಲ್ಲೊಬ್ಬಾತ ವಿಚಿತ್ರ ಕಾರಣಕ್ಕೆ ತನ್ನ ಪಕ್ಕದ ಮನೆ ಯುವತಿಗೆ ಬೆಂಕಿಯಿಟ್ಟಿದ್ದಾನೆ. ಆಕೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದ ಹಾಗೆ ಘಟನೆ ನಡೆದದ್ದು ಗುಜರಾತ್​​ನ ಹಳ್ಳಿಯೊಂದರಲ್ಲಿ. ಇದೀಗ ಸುಟ್ಟ ಗಾಯಗಳಿಂದ ಬಳಲುತ್ತಿರುವ ಮಹಿಳೆ ಹೆಸರು ನೀತಾಬೆನ್​ ಸರ್ವಿಯಾ (35). ಆಕೆ ತನ್ನ ಮನೆಯ ಪುಟ್ಟ ನಾಯಿಮರಿಗೆ ಸೋನು ಎಂದು ಹೆಸರಿಟ್ಟಿದ್ದಕ್ಕೆ ಕೋಪಗೊಂಡ ನೆರೆಮನೆಯಾತ ಬೆಂಕಿ ಹಚ್ಚಿದ್ದಾನೆ. ಕಾರಣ, ಈ ಸೋನು ಎಂಬುದು ಆತ ಪತ್ನಿಯ ನಿಕ್​ ನೇಮ್​(ಪ್ರೀತಿಯಿಂದ ಕರೆಯುವ ಹೆಸರು) ಆಗಿತ್ತು. ಸದ್ಯ ಮಹಿಳೆ ಭಾವನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೀತಾಬೆನ್​​ಗೆ ಪತಿ ಮತ್ತು ಮೂವರು ಮಕ್ಕಳಿದ್ದಾರೆ. ಸೋಮವಾರ ಆಕೆಯ ಪತಿ ಇಬ್ಬರು ಮಕ್ಕಳೊಂದಿಗೆ ಹೊರಗೆ ಹೋಗಿದ್ದರು. ಆಕೆ ಸಣ್ಣ ಮಗುವಿನೊಟ್ಟಿಗೆ ಮನೆಯಲ್ಲೇ ಇದ್ದರು. ಮಧ್ಯಾಹ್ನದ ಹೊತ್ತಿಗೆ ನೆರೆಮನೆಯ ಸುರಾಭಾಯ್​ ಭಾರ್ವಾದ್​ ಮತ್ತು ಇತರ 5ಮಂದಿ ಆಕೆಯ ಮನೆಗೆ ನುಗ್ಗಿದ್ದಾರೆ. ನಿಮ್ಮ ಮನೆಯ ನಾಯಿ ಮರಿಗೆ ಯಾಕೆ ಸೋನು ಎಂದು ಹೆಸರಿಟ್ಟಿದ್ದೀರಿ ಎಂದು ಜಗಳ ತೆಗೆದಿದ್ದಾರೆ. ತುಂಬ ಹೊತ್ತು ನೀತಾಬೆನ್​ ಮತ್ತು ಬಂದಿದ್ದ ವ್ಯಕ್ತಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಕೊನೆಯಲ್ಲಿ ಸುರಾಭಾಯ್​ ಭಾರ್ವಾದ್ ಮತ್ತು ಆತನ ಸಹಚರರು ಆಕೆಗೆ ಬೆಂಕಿ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ನೀತಾಬೆನ್​ ಪೊಲೀಸರಿಗೆ ದೂರು ನೀಡಿದ್ದಾರೆ. ಭಾರ್ವಾದ್​ ಮತ್ತು ಆತನ ಸಹಚರರು ಬಂದು ನನ್ನನ್ನು ಒಂದೇ ಸಮ ನಿಂದಿಸಿದರು. ಆದರೆ ನಾನು ಅವರಿಂದ ತಪ್ಪಿಸಿಕೊಳ್ಳಲು ಅಡುಗೆ ಮನೆಗೆ ಹೋದೆ. ಆದರೆ ಮೂವರು ನನ್ನನ್ನು ಹಿಂಬಾಲಿಸಿದರು. ಅದರಲ್ಲಿ ಒಬ್ಬ ನನ್ನ ಮೇಲೆ ಸೀಮೆ ಎಣ್ಣೆ ಸುರಿದ. ಮತ್ತೊಬ್ಬಾತ ಬೆಂಕಿ ಕಡ್ಡಿ ಗೀರಿ ಎಸೆದ ಎಂದು ಹೇಳಿದ್ದಾಳೆ. ಅದಾದ ಬಳಿಕ ಉರಿ ತಾಳಲಾಗದೆ ಕೂಗಲು ಶುರು ಮಾಡಿದೆ. ಅಷ್ಟರಲ್ಲಿ ಅಕ್ಕಪಕ್ಕದ ಮನೆಯ ಕೆಲವರೂ ಅಲ್ಲಿಗೆ ಬಂದರು. ಅದೇ ಹೊತ್ತಿಗೆ ನನ್ನ ಪತಿಯೂ ಆಗಮಿಸಿದರು. ಪತಿ ತಾನು ಧರಿಸಿದ್ದ ಕೋಟ್​ ಬಿಚ್ಚಿ, ನನ್ನ ದೇಹಕ್ಕೆ ಹೊತ್ತಿದ್ದ ಬೆಂಕಿಯನ್ನು ನಂದಿಸಿದರು ಎಂದು ಮಹಿಳೆ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂದಹಾಗೆ ಈ ಎರಡೂ ಕುಟುಂಬಗಳ ನಡುವೆ ಹಿಂದೊಮ್ಮೆ ನೀರು ಪೂರೈಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಜಗಳವಾಗಿತ್ತು. ಆದರೆ ನಂತರ ಸಮಸ್ಯೆ ಪರಿಹಾರವಾಗಿತ್ತು.

ಇದನ್ನೂ ಓದಿ: ಮೊದಲ ಬಾರಿಗೆ ಕೋಕಾ ಕೋಲಾ ಕುಡಿದು ಗಾಬರಿಯಾದ ಮಗು; ವೀಡಿಯೋ ವೈರಲ್​

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ