AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

G20 summit: ಜಿ20 ಶೃಂಗಸಭೆಗೆ ಬಂದ ವಿದೇಶಿ ಅತಿಥಿಗಳಿಗೆ ವಿಶೇಷ ಸ್ಮರಣಿಕೆ, ಹಿತ್ತಾಳೆ ನಾಡಿನಿಂದ ದೆಹಲಿಗೆ ಬಂತು ಕಮಲ

ಜಿ20 ಶೃಂಗಸಭೆಗೆ ಬಂದ ಗಣ್ಯರಿಗೆ ಮೋದಿ ಅವರು ವಿಶೇಷ ಉಡುಗೊರೆ ನೀಡಲು ನಿರ್ಧಾರಿಸಿದ್ದಾರೆ. ಜಿ20ಗೆ ಬಂದ ಗಣ್ಯರಿಗೆ ಹಿತ್ತಾಳೆಯಿಂದ ತಯಾರಿಸಿದ ಉತ್ತರ ಪ್ರದೇಶ ಬುಂದೇಲ್‌ಖಂಡ್‌ನ ಮಹೋಬಾದ ಕಮಲ ಕಲಾಕೃತಿಯನ್ನು ನೀಡಲಿದ್ದಾರೆ.

G20 summit: ಜಿ20 ಶೃಂಗಸಭೆಗೆ ಬಂದ ವಿದೇಶಿ ಅತಿಥಿಗಳಿಗೆ ವಿಶೇಷ ಸ್ಮರಣಿಕೆ, ಹಿತ್ತಾಳೆ ನಾಡಿನಿಂದ ದೆಹಲಿಗೆ ಬಂತು ಕಮಲ
ಕಮಲ ಕಲಾಕೃತಿ
ಅಕ್ಷಯ್​ ಪಲ್ಲಮಜಲು​​
|

Updated on: Sep 09, 2023 | 2:03 PM

Share

ಕಾನ್ಪುರ, ಸೆ.9: ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ (G20 summit) ಬಂದಿರುವ ಅತಿಥಿಗಳಿಗೆ ವಿಶೇಷ ಸ್ಮರಣಿಕೆಯೊಂದು ತಯಾರಾಗಿದೆ, ಪ್ರಧಾನಿ ಮೋದಿ ಅವರು ಭಾರತಕ್ಕೆ ಯಾವುದೇ ದೇಶದ ಪ್ರಧಾನಿ, ಅಧ್ಯಕ್ಷ, ನಾಯಕರು ಯಾರೇ ಬಂದರು ಅವರಿಗೆ ದೇಶದ ಸಂಸ್ಕೃತಿಯನ್ನು ಸೂಚಿಸುವ ಸ್ಮರಣಿಕೆಗಳನ್ನೇ ನೀಡುತ್ತಾರೆ. ಈ ಬಾರಿಯ ಜಿ20 ಶೃಂಗಸಭೆಗೆ ಬಂದ ಗಣ್ಯರಿಗೆ ಮೋದಿ ಅವರು ವಿಶೇಷ ಉಡುಗೊರೆ ನೀಡಲು ನಿರ್ಧಾರಿಸಿದ್ದಾರೆ. ಜಿ20ಗೆ ಬಂದ ಗಣ್ಯರಿಗೆ ಹಿತ್ತಾಳೆಯಿಂದ ತಯಾರಿಸಿದ ಉತ್ತರ ಪ್ರದೇಶ ಬುಂದೇಲ್‌ಖಂಡ್‌ನ ಮಹೋಬಾದ ಕಮಲ ಕಲಾಕೃತಿಯನ್ನು ನೀಡಲಿದ್ದಾರೆ.

ಇನ್ನು ಈ ಕಲಾಕೃತಿಯನ್ನು ಉತ್ತರ ಪ್ರದೇಶ ಬುಂದೇಲ್‌ಖಂಡ್‌ನ ಮಹೋಬಾದ ಲೋಹದ ಕುಶಲಕರ್ಮಿ, ರಾಷ್ಟ್ರ ಪ್ರಶಸ್ತಿ ವಿಜೇತ ಮನಮೋಹನ್ ಸೈನಿ ರಚಿಸಿದ್ದಾರೆ. ಈ ಶೃಂಗಸಭೆಗೆ ಯುಪಿ ಕರಕುಶಲ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಎಂಟು ತಿಂಗಳ ಹಿಂದೆ 50 ಹಿತ್ತಾಳೆ ಕಮಲಗಳನ್ನು ಸಿದ್ಧಪಡಿಸುವಂತೆ ಹೇಳಿತ್ತು. ಈ ಬಗ್ಗೆ ಮಾತನಾಡಿದ ಮನಮೋಹನ್ ಸೈನಿ ಅವರು ಇಷ್ಟು ದೊಡ್ಡ ಕಾರ್ಯಕ್ಕೆ ನನ್ನ ಈ ಸೇವೆ ತುಂಬಾ ಧನ್ಯತಾ ಭಾವನೆಯನ್ನು ಉಂಟು ಮಾಡಿದೆ. ಇದು ನನಗೆ ಹೊಸ ಜೀವನವನ್ನು ನೀಡಿದೆ ಎಂದು ಹೇಳಿದ್ದಾರೆ.

ಈ ಕಮಲದ ಕಲಾಕೃತಿ 16 ದಳ ಹಾಗೂ ಐದು ಇಂಚು ಎತ್ತರವಾಗಿದೆ. ಇದರಲ್ಲಿ ಎಂಟು ದೊಡ್ಡ ದಳ ಮತ್ತು ಎಂಟು ಚಿಕ್ಕ ದಳಗಳನ್ನು ಹೊಂದಿದೆ. ಇದನ್ನು ಮುಚ್ಚಳು ಮತ್ತು ತೆರೆಯಲು ಆಗುವಂತೆ ವಿನ್ಯಾಸ ಮಾಡಲಾಗಿದೆ. (ಈ ಕಮಲವನ್ನು ಒಂದು ಬಾರಿ ಅರಳಿಸಲು ಮತ್ತು ಮೊಗ್ಗಿನ ಕಮಲದಂತೆ ಮಾಡಲು ಇದನ್ನು ವಿನ್ಯಾಸ ಮಾಡಲಾಗಿದೆ) ಇನ್ನು ಮಹೋಬಾವನ್ನು ಹಿತ್ತಾಳೆ ನಾಡು ಎಂದು ಕರೆಯುವ ಕಾರಣ ಈ ಸ್ಮರಣಿಕೆ ಇನ್ನು ವಿಶೇಷವಾಗಿದೆ.

ಇದನ್ನೂ ಓದಿ:ಆಕಾಶದಲ್ಲಿ ತೇಲಾಡಿದ ಜಿ20 ಶೃಂಗಸಭೆ ಧ್ವಜ, ಸಭೆಗೆ ಸ್ಕೈಡೈವಿಂಗ್ ಮೂಲಕ ಶುಭಕೋರಿದ ವ್ಯಕ್ತಿ

2016ರಲ್ಲಿ ಬಿಜೆಪಿ ಸಂಸದ ಕುನ್ವರ್ ಪುಷ್ಪೇಂದ್ರ ಚಾಂಡೆಲ್ ಅವರು ಪರಿವರ್ತನ್ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ಈ ಕಲಾಕೃತಿಯನ್ನು ನೀಡಿದರು. ಜತೆಗೆ ಈ ಕಲಾಕೃತಿ ಬಗ್ಗೆ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದರು. ಮನಮೋಹನ್ ಸೈನಿ ಅವರು ಈ ಕಲಾಕೃತಿಯನ್ನು ಅವರ ತಂದೆಯಿಂದ ಕಲಿತ್ತಿದ್ದರೆ ಎಂದು ಹೇಳಿದ್ದಾರೆ. ಇನ್ನು ನನ್ನ ಈ ಕೆಲಸಕ್ಕೆ ಕುಟುಂಬದವರು ತುಂಬಾ ಸಹಾಯ ಮಾಡುತ್ತಾರೆ. ನನ್ನ ಇಬ್ಬರು ಸಹೋದರರಾದ ಆಜಾದ್ ಸೋನಿ ಮತ್ತು ಶಿವಕುಮಾರ್ ಸೋನಿ ಅವರು ಕೂಡ ಇಂತಹ ಕಲಾಕೃತಿಯನ್ನು ತಯಾರಿಸುತ್ತಾರೆ. ಅವರ ಈ ಶ್ರಮಕ್ಕೆ ರಾಜ್ಯಪ್ರಶಸ್ತಿ ಕೂಡ ದೊರಕಿದೆ ಎಂದು ಹೇಳಿದ್ದಾರೆ.

ಈ ಕಮಲದ ಕಲಾಕೃತಿಗಳು ಈಗಾಗಲೇ ದೆಹಲಿಗೆ ತಲುಪಿದ್ದು, ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ ವಿದೇಶಿ ಗಣ್ಯರಿಗೆ ನೀಡಲು ಸಿದ್ದವಾಗಿದೆ. ಇಂದು ನಮ್ಮ ರಾಜ್ಯಕ್ಕೂ ಒಂದು ಹೆಮ್ಮೆಯ ವಿಚಾರ ಎಂದು ಬುಂದೇಲ್‌ಖಂಡ್‌ ಜಿಲ್ಲಾಧಿಕಾರಿ ಮೃದುಲ್ ಚೌಧರಿ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್