AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯೋಗಾಭ್ಯಾಸ ಮಾಡುವಾಗ ‘ಅಲ್ಲಾ’ ಎಂದು ಪಠಣ ಮಾಡಿದರೆ ಅದರ ಮಹತ್ವ ಕಡಿಮೆಯಾಗುವುದಿಲ್ಲ’-ವಿವಾದ ಸೃಷ್ಟಿಸಿದ ಅಭಿಷೇಕ್ ಮನು ಸಿಂಘ್ವಿ

international yoga day 2021: ಶತಮಾನಗಳಿಂದಲೂ ಯೋಗಾಭ್ಯಾಸ ಮಾಡುವಾಗ ಓಂ ಎಂದು ದೀರ್ಘಸ್ವರ ಉಚ್ಚಾರ ಮಾಡಲಾಗುತ್ತದೆ. ಅದನ್ನೇ ಈಗ ಅಭಿಷೇಕ್​ ಮನು ಸಿಂಘ್ವಿ ಪ್ರಶ್ನಿಸಿದ್ದಾರೆ. ಇವರ ಟ್ವೀಟ್​ಗೆ ಯೋಗ ಗುರು ಬಾಬಾ ರಾಮ್​ ದೇವ್​ ಕೂಡಲೇ ಪ್ರತಿಕ್ರಿಯೆ ನೀಡಿದ್ದಾರೆ. ಓಂ ಶಬ್ದ ಪಠಣ ಯಾವುದೇ ಧರ್ಮ, ಜಾತಿಯ ಪ್ರತಿಬಿಂಬಕವಲ್ಲ ಎಂದಿದ್ದಾರೆ.

‘ಯೋಗಾಭ್ಯಾಸ ಮಾಡುವಾಗ ‘ಅಲ್ಲಾ’ ಎಂದು ಪಠಣ ಮಾಡಿದರೆ ಅದರ ಮಹತ್ವ ಕಡಿಮೆಯಾಗುವುದಿಲ್ಲ’-ವಿವಾದ ಸೃಷ್ಟಿಸಿದ ಅಭಿಷೇಕ್ ಮನು ಸಿಂಘ್ವಿ
ಅಭಿಷೇಕ್ ಮನು ಸಿಂಘ್ವಿ
TV9 Web
| Edited By: |

Updated on: Jun 21, 2021 | 4:55 PM

Share

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಕಾಂಗ್ರೆಸ್ ನಾಯಕ ಅಭಿಷೇಕ್​ ಮನು ಸಿಂಘ್ವಿ ತಮ್ಮದೊಂದು ಅಭಿಪ್ರಾಯ ವ್ಯಕ್ತಪಡಿಸಿ, ಸಿಕ್ಕಾಪಟೆ ಟೀಕೆಗೆ ಗುರಿಯಾಗಿದ್ದಾರೆ. ಯೋಗವನ್ನು ಮಾಡುವಾಗ ಓಂ ಎಂದು ಉಚ್ಛರಿಸುವ ಬಗ್ಗೆ ಮಾತನಾಡಿದ ಅಭಿಷೇಕ್​ ಮನು ಸಿಂಘ್ವಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿದ ಅವರು, ‘ಓಂ’ ಶಬ್ದ ಉಚ್ಚರಿಸುವ ಮೂಲಕ ಯೋಗಾಭ್ಯಾಸ ಮಾಡಿದರೆ ಯೋಗದ ಮಹತ್ವ ಹೆಚ್ಚಾಗುವುದಿಲ್ಲ..‘ಅಲ್ಲಾ’ ಎಂದು ಉಚ್ಚರಿಸುತ್ತ ಯೋಗ ಮಾಡಿದಾಕ್ಷಣ ಅದರ ಶಕ್ತಿ ಏನೂ ಕಡಿಮೆಯಾಗುವುದಿಲ್ಲ ಎಂದು ಹೇಳಿದ್ದೇ ಈ ವಿವಾದಕ್ಕೆ ಕಾರಣ.

ಶತಮಾನಗಳಿಂದಲೂ ಯೋಗಾಭ್ಯಾಸ ಮಾಡುವಾಗ ಓಂ ಎಂದು ದೀರ್ಘಸ್ವರ ಉಚ್ಚಾರ ಮಾಡಲಾಗುತ್ತದೆ. ಅದನ್ನೇ ಈಗ ಅಭಿಷೇಕ್​ ಮನು ಸಿಂಘ್ವಿ ಪ್ರಶ್ನಿಸಿದ್ದಾರೆ. ಇವರ ಟ್ವೀಟ್​ಗೆ ಯೋಗ ಗುರು ಬಾಬಾ ರಾಮ್​ ದೇವ್​ ಕೂಡಲೇ ಪ್ರತಿಕ್ರಿಯೆ ನೀಡಿದ್ದಾರೆ. ಓಂ ಶಬ್ದ ಪಠಣ ಯಾವುದೇ ಧರ್ಮ, ಜಾತಿಯ ಪ್ರತಿಬಿಂಬಕವಲ್ಲ. ಎಲ್ಲ ಧರ್ಮ, ಜಾತಿ-ಮತದವರಿಗೂ ದೇವರು ಒಬ್ಬನೇ. ಅಲ್ಲಾ..ಈಶ್ವರ, ಪರಮಾತ್ಮ ಎಲ್ಲರೂ ಒಂದೇ. ದೇವರನ್ನು ನಂಬುವವರಿಗೆ ಓಂ ಶಬ್ದ ಯಾವ ಕಾರಣಕ್ಕೂ ನಿಷೇಧವಲ್ಲ. ಅವರು ಯಾವುದೇ ಧರ್ಮಕ್ಕೆ ಸೇರಿರಲಿ ಧೈರ್ಯವಾಗಿ ಓಂ ಪಠಣ ಮಾಡುತ್ತಾರೆ ಎಂದಿದ್ದಾರೆ.

ಸಿಂಘ್ವಿಯಿಂದ ಮತ್ತೊಂದು ಟ್ವೀಟ್ ತಮ್ಮ ಟ್ವೀಟ್​ ವಿವಾದ ಸೃಷ್ಟಿಸುತ್ತಿದ್ದಂತೆ  ಅಭಿಷೇಕ್​ ಮನು ಸಿಂಘ್ವಿ ಮತ್ತೊಂದು ಟ್ವೀಟ್​ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಶ್ರೀರಾಮನ ಹೆಸರಲ್ಲಿ ಕೋಟ್ಯಂತರ ಭಕ್ತರನ್ನು ಲೂಟಿ ಮಾಡುತ್ತಿರುವವರು ಇದೀಗ ನನ್ನ ನಂಬಿಕೆಯನ್ನು ಪ್ರಶ್ನಿಸುವ ಮೂಲಕ ತಮ್ಮ ಪಾಪವನ್ನು ಅಳಿಸಿಕೊಳ್ಳಲು ನೋಡುತ್ತಿದ್ದಾರೆ. ಭಾರತದಲ್ಲಿ ಅನಾದಿ ಕಾಲದಿಂದಲೂ ಯೋಗ ಆಚರಣೆಯಲ್ಲಿದೆ..ಇದು ನಮ್ಮ ಪರಂಪರೆ ಎಂಬುದು ನನಗೆ ಗೊತ್ತಿದೆ. ನನ್ನ ನಂಬಿಕೆಯ ಬಗ್ಗೆ ಯಾವುದೇ ಸೋ ಕಾಲ್ಡ್​​  ರಾಷ್ಟ್ರೀಯವಾದಿಗಳಿಂದ ಪ್ರಮಾಣ ಪತ್ರ ಬೇಕಾಗಿಲ್ಲ. ತಪ್ಪು ಮಾಹಿತಿಯನ್ನು ಹರಡಬೇಡಿ ಎಂದು ಹೇಳಿದ್ದಾರೆ.

ಈ ವರ್ಷ ನಡೆಯುತ್ತಿರುವುದು ಏಳನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಜಗತ್ತಿನ ಹಲವು ದೇಶಗಳಲ್ಲಿ ಅನೇಕರು ಇಂದು ಯೋಗಾಭ್ಯಾಸವನ್ನು ಒಂದು ಹಬ್ಬದಂತೆ ಆಚರಿಸಿದ್ದಾರೆ. ಸೂರ್ಯನಮಸ್ಕಾರ, ಪ್ರಾಣಾಯಾಮಗಳನ್ನು ಮಾಡಿದ್ದಾರೆ. ಹೀಗೆ ಯೋಗ ಮಾಡುವಾಗ ಸರ್ವೇ ಸಾಮಾನ್ಯವಾಗಿ ಓಂ ಎಂದೇ ಹೇಳಲಾಗುತ್ತದೆ. ಅಷ್ಟಕ್ಕೂ ಈ ಯೋಗ ಎಂಬುದು ಭಾರತ ಜಗತ್ತಿಗೆ ನೀಡಿದ ಅತ್ಯದ್ಭುತ ಕೊಡುಗೇ ಎಂದೇ ಹೇಳಲಾಗುತ್ತದೆ. ಆದರೆ ಅದರಲ್ಲಿ ಓಂ ಶಬ್ದ ಉಚ್ಚರಿಸುವ ಬಗ್ಗೆ ಮಾತನಾಡಿದ ಅಭಿಷೇಕ್​ ಮನು ಸಿಂಘ್ವಿ ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ, ಮಗ ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ; ಇದನ್ನು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ: ಸಿದ್ದರಾಮಯ್ಯ

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!