AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ; ಪಂಜಾಬ್ ಮತ್ತು ರಾಜಸ್ಥಾನ ನಂತರ ಕೇರಳದ ಕಾಂಗ್ರೆಸ್​ನಲ್ಲಿಯೂ ಬಿಕ್ಕಟ್ಟು

Kerala: ಕೇರಳ ಘಟಕದ ಮುಖ್ಯಸ್ಥ ಮಲ್ಲಪ್ಪಳ್ಳಿ ರಾಮಚಂದ್ರನ್ ಮತ್ತು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾದ ನಂತರ ಇವರಿಬ್ಬರನ್ನೂ ಪಕ್ಷ ಪ್ರಸ್ತುತ ಸ್ಥಾನದಿಂದ ತೆಗೆದುಹಾಕಿತ್ತು

ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ; ಪಂಜಾಬ್ ಮತ್ತು ರಾಜಸ್ಥಾನ ನಂತರ ಕೇರಳದ ಕಾಂಗ್ರೆಸ್​ನಲ್ಲಿಯೂ ಬಿಕ್ಕಟ್ಟು
ವಿ.ಡಿ.ಸತೀಶನ್,ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 15, 2021 | 11:47 AM

Share

ದೆಹಲಿ: ಪಂಜಾಬ್ ಮತ್ತು ರಾಜಸ್ಥಾನ ಘಟಕಗಳಲ್ಲಿನ ಅಸಮಾಧಾನವನ್ನು ನಿಭಾಯಿಸಲು ಕಾಂಗ್ರೆಸ್  ನಾಯಕತ್ವ ನಿರತರಾಗಿರುವ ಹೊತ್ತಲ್ಲಿಯೇ ಕೇರಳ ಕಾಂಗ್ರೆಸ್  ಘಟಕದಲ್ಲಿ ಅಸಮಾಧಾನದ ಮಾತುಗಳು ಕೇಳಿ ಬಂದಿದೆ. ಕೇರಳದಲ್ಲಿ ಹಿರಿಯ ನಾಯಕರನ್ನು ಮೂಲೆ ಗುಂಪು ಮಾಡಿ ಕಡೆಗಣಿಸಲಾಗುತ್ತಿದೆ ಎಂದು ರಾಜಕೀಯ ಬೆಳವಣಿಗೆ ಬಗ್ಗೆ ಅರಿವು ಇರುವ ಜನರು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಕೇರಳ ಘಟಕದ ಮುಖ್ಯಸ್ಥ ಮಲ್ಲಪ್ಪಳ್ಳಿ ರಾಮಚಂದ್ರನ್ ಮತ್ತು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾದ ನಂತರ ಇವರಿಬ್ಬರನ್ನೂ ಪಕ್ಷ ಪ್ರಸ್ತುತ ಸ್ಥಾನದಿಂದ ತೆಗೆದುಹಾಕಿತ್ತು. ಇದರ ಬೆನ್ನಲ್ಲೇ ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗಿದೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ನೇತೃತ್ವದ ಎಡರಂಗ ಭರ್ಜರಿ ಗೆಲುವಿನೊಂದಿಗೆ ಕಳೆದ ತಿಂಗಳು ಕೇರಳದಲ್ಲಿ ಮತ್ತೆ ಅಧಿಕಾರಕ್ಕೇರಿತ್ತು.

ಚೆನ್ನಿತ್ತಲ ಶಿಬಿರದ ನಾಯಕರು ಅವರಿಗೆ “ಗೌರವಪೂರ್ಣ ನಿರ್ಗಮನ” ಸಿಕ್ಕಿಲ್ಲ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಅವಕಾಶವೂ ಸಿಕ್ಕಿಲ್ಲ ಎಂದು ಆರೋಪಿಸಿದರು. ಹೊಸ ರಾಜ್ಯ ಘಟಕದ ಮುಖ್ಯಸ್ಥ ಮತ್ತು ಪ್ರತಿಪಕ್ಷದ ನಾಯಕರ ಹೆಸರನ್ನು ಪ್ರಕಟಿಸುವ ಮೊದಲು ಅವರನ್ನು ಸಂಪರ್ಕಿಸಿಲ್ಲ ಎಂದು ಅವರು ಹೇಳುತ್ತಾರೆ.

ಚೆನ್ನಿತ್ತಲ ಅವರಿಗೆ ಗೌರವದ ನಿರ್ಗಮನ ನೀಡಬೇಕಿತ್ತು. ಅವರು ಅದಕ್ಕೆ ಅರ್ಹರು ಎಂದು ಚೆನ್ನಿತ್ತಲ ಅವರ ನಿಷ್ಠಾವಂತರು ಹೇಳುತ್ತಾರೆ “ಕಾಂಗ್ರೆಸ್ ಅಧ್ಯಕ್ಷರು ಅಥವಾ ರಾಹುಲ್ ಗಾಂಧಿ ಅವರು ಪರಿಸ್ಥಿತಿಯನ್ನು ವಿವರಿಸಲು ಸಭೆಗೆ ಕರೆಸಿಕೊಳ್ಳಬಹುದಿತ್ತು ಮತ್ತು ಹೊಸ ಮುಖಗಳನ್ನು ತರುವ ಅಗತ್ಯವಾದರೂ ಏನಿತ್ತು? ಇದರ ಬದಲಾಗಿ ಚೆನ್ನಿತ್ತಲ ಅಥವಾ ಮಾಜಿ ಸಿಎಂ (ಮುಖ್ಯಮಂತ್ರಿ) ಉಮ್ಮನ್ ಚಾಂಡಿ ಅವರನ್ನು ಸಂಪರ್ಕಿಸದೆ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಚೆನ್ನಿತ್ತಲ ಮುಂದುವರಿಯಬೇಕೆಂದು ಹೆಚ್ಚಿನ ಶಾಸಕರು ಬಯಸಿದ್ದರು ಎಂದು ನಾಯಕರೊಬ್ಬರು ಹೇಳಿದ್ದಾರೆ. ಆದರೆ ಇನ್ನೊಬ್ಬ ನಾಯಕ ಇದರ ವ್ಯತಿರಿಕ್ತವಾಗಿ ಹೇಳುತ್ತಾರೆ. “ಹೆಚ್ಚಿನ ಯುವ ಶಾಸಕರು (ಶಾಸಕಾಂಗ ಸಭೆಯ ಸದಸ್ಯರು) ಮತ್ತು ಪಕ್ಷದ ಸಂಸದರು (ಸಂಸತ್ತಿನ ಸದಸ್ಯರು) ಬದಲಾವಣೆಗಳನ್ನು ಸೂಚಿಸಿದರು. ಕಾಂಗ್ರೆಸ್ ರಾಜ್ಯದ ಉಸ್ತುವಾರಿ ತಾರಿಕ್ ಅನ್ವರ್ ಅವರು ಶಾಸಕರು, ಸಂಸದರು ಮತ್ತು ಸಂಘಟನೆಯ ಮುಖಂಡರೊಂದಿಗೆ ವ್ಯಾಪಕ ಚರ್ಚೆ ನಡೆಸಿದ್ದಾರೆ.

ವಿ.ಡಿ.ಸತೀಶನ್ ಹೊಸತಾಗಿ ವಿರೋಧ ಪಕ್ಷದ ನಾಯಕರಾಗಿದ್ದು ಕೆ. ಸುಧಾಕರನ್ ಅವರನ್ನು ಕೇರಳದ ಹೊಸ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ.

ಕಾಂಗ್ರೆಸ್‌ನಲ್ಲಿ ಕೇರಳ ವೀಕ್ಷಕರು 65 ರ ಹರೆಯದ ಚೆನ್ನಿತ್ತಲ ಅವರು ಪಕ್ಷಕ್ಕಾಗಿ ಮತ್ತಷ್ಟು ಕೆಲಸಗಳನ್ನು ಮಾಡಬಲ್ಲರು. ಆದರೆ ಅವರಂತಹ ಹಿರಿಯ ನಾಯಕನಿಗೆ ಹೇಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರಿಗೆ ತಿಳಿದಿರಲಿಲ್ಲ. ಪ್ರತಿಪಕ್ಷ ಯುಡಿಎಫ್ ಕನ್ವೀನರ್ ಹುದ್ದೆ ಪ್ರಸ್ತುತ ಖಾಲಿ ಇದೆ. ಆದರೆ ಮಾಜಿ ಮುಖ್ಯಮಂತ್ರಿ ಕೆ ಕರುಣಾಕರನ್ ಅವರ ಪುತ್ರ ಕೆ ಮುರಳೀಧರನ್ ಅವರು ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ.

ಕೇರಳದ ಬಿಕ್ಕಟ್ಟು ಪಂಜಾಬ್ ಅಥವಾ ರಾಜಸ್ಥಾನದಲ್ಲಿ ಇರುವಷ್ಟು ದೊಡ್ಡದಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಆದರೆ ಪ್ರಮುಖ ನಾಯಕರಾಗಿರುವ ಚೆನ್ನಿತ್ತಲ ಅವರನ್ನು ಸಮಾಧಾನಪಡಿಸದಿದ್ದರೆ ಕೇರಳ ಘಟಕದಲ್ಲಿನ ಗುಂಪುಗಾರಿಕೆ ಮತ್ತಷ್ಟು ಗಾಢವಾಗಬಹುದು ಎಂದು ಅವರು ಒಪ್ಪಿಕೊಳ್ಳುತ್ತಾರೆ. ಈ ವರ್ಷದ ಆರಂಭದಲ್ಲಿ ಕೇರಳದ ಕಾಂಗ್ರೆಸ್ ಮುಖಂಡ ಪಿ.ಸಿ.ಚಾಕೊ  ಗುಂಪುಗಾರಿಕೆ ಆರೋಪಿಸಿ ಪಕ್ಷವನ್ನು ತೊರೆದಿದ್ದರು.

ಇದನ್ನೂ ಓದಿ: ಕೇರಳ ಸರ್ಕಾರದ ಆಯುರ್ವೇದ ಕಂಪನಿಯಿಂದ ‘ಪಂಚಗವ್ಯ ಘೃತ’: ವೈರಲ್ ಪೋಸ್ಟ್​ ಹಿಂದಿರುವ ನಿಜ ಸಂಗತಿಯಿದು

Published On - 11:42 am, Tue, 15 June 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ