AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕಿತ್ಸೆಗೆ ಬಂದವನ ಲಿವರ್​ನಲ್ಲಿತ್ತು 20 ಸೆಂ.ಮೀ. ಚಾಕು! ಆಮೇಲೇನಾಯ್ತು?

ದೆಹಲಿ: ನಮ್ಮ ದೇಶದಲ್ಲಿ ಚಕಿತ ಮತ್ತು ಪವಾಡಗಳಿಗೇನು ಕಮ್ಮಿಯಿಲ್ಲ. ಇದೀಗ, ಚಿಕಿತ್ಸೆಗೆಂದು ದಾಖಲಾದ ರೋಗಿಯೊಬ್ಬನ ಯಕೃತ್ತದಲ್ಲಿ ಬರೋಬ್ಬರಿ 20 ಸೆಂಟಿಮೀಟರ್​ ಉದ್ದದ ಚಾಕು ಪತ್ತೆಯಾದಿಗೆ. ಅಂದ ಹಾಗೆ ಈ ಸ್ವಾರಸ್ಯಕರ ಸಂಗತಿ ರಾಜಧಾನಿ ದೆಹಲಿಯ ಪ್ರತಿಷ್ಠಿತ AIIMS ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಎರಡು ತಿಂಗಳ ಹಿಂದೆಯೇ ಚಾಕು ನುಂಗಿದ್ದ! ಕಳೆದ ಎರಡು ತಿಂಗಳ ಹಿಂದೆ ಈ ಚಾಕುವನ್ನು ನುಂಗಿದ್ದ ಈ 28 ವರ್ಷದ ಭೂಪ ಹಾಗೇ ಆರಾಮಾಗಿ ಜೀವನ ಸಾಗಿಸುತ್ತಿದ್ದನಂತೆ. ಆದರೆ, ಇತ್ತೀಚೆಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ […]

ಚಿಕಿತ್ಸೆಗೆ ಬಂದವನ ಲಿವರ್​ನಲ್ಲಿತ್ತು 20 ಸೆಂ.ಮೀ. ಚಾಕು! ಆಮೇಲೇನಾಯ್ತು?
KUSHAL V
| Edited By: |

Updated on:Jul 30, 2020 | 2:33 PM

Share

ದೆಹಲಿ: ನಮ್ಮ ದೇಶದಲ್ಲಿ ಚಕಿತ ಮತ್ತು ಪವಾಡಗಳಿಗೇನು ಕಮ್ಮಿಯಿಲ್ಲ. ಇದೀಗ, ಚಿಕಿತ್ಸೆಗೆಂದು ದಾಖಲಾದ ರೋಗಿಯೊಬ್ಬನ ಯಕೃತ್ತದಲ್ಲಿ ಬರೋಬ್ಬರಿ 20 ಸೆಂಟಿಮೀಟರ್​ ಉದ್ದದ ಚಾಕು ಪತ್ತೆಯಾದಿಗೆ. ಅಂದ ಹಾಗೆ ಈ ಸ್ವಾರಸ್ಯಕರ ಸಂಗತಿ ರಾಜಧಾನಿ ದೆಹಲಿಯ ಪ್ರತಿಷ್ಠಿತ AIIMS ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ಎರಡು ತಿಂಗಳ ಹಿಂದೆಯೇ ಚಾಕು ನುಂಗಿದ್ದ! ಕಳೆದ ಎರಡು ತಿಂಗಳ ಹಿಂದೆ ಈ ಚಾಕುವನ್ನು ನುಂಗಿದ್ದ ಈ 28 ವರ್ಷದ ಭೂಪ ಹಾಗೇ ಆರಾಮಾಗಿ ಜೀವನ ಸಾಗಿಸುತ್ತಿದ್ದನಂತೆ. ಆದರೆ, ಇತ್ತೀಚೆಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈತನ ಕುಟುಂಬದವರು ಆಸ್ಪತ್ರೆಗೆ ಕರೆತಂದಿದ್ದರು. ವೈದ್ಯರು X-ray ನಡೆಸಿದೆ ವೇಳೆ ಈತನ ಯಕೃತ್ತದಲ್ಲಿ ಚಾಕು ಇರೋದು ಗೊತ್ತಾಗಿದೆ.

ಆದರೆ, ಕೂಡಲೇ ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರಿಗೆ ಸಾಕಷ್ಟು ಸವಾಲುಗಳು ಎದುರಾದವು. ಚಾಕು ಯಕೃತ್ತದಲ್ಲಿದ್ದ ಪ್ರಮುಖ ರಕ್ತನಾಳದ ಬಳಿ ಸಿಲುಕಿಕೊಂಡಿದೆ. ಆಪರೇಷನ್​ ವೇಳೆ ಸ್ವಲ್ಪ ಯಾಮಾರಿದ್ರು ರೋಗಿಯ ಪ್ರಾಣಕ್ಕೆ ಕುತ್ತು. ಹಾಗಾಗಿ, ಆಸ್ಪತ್ರೆಯ ಶಸ್ತ್ರವೈದ್ಯರಾದ ಡಾ. NR ದಾಸ್​ ರೋಗಿಯ ದೇಹವನ್ನ ಶಸ್ತ್ರಚಿಕಿತ್ಸೆಗೆ ಸಧೃಡಪಡಿಸಲು ಪೂರಕ ಔಷಧಿ ನೀಡಲು ಮುಂದಾದರು.

ಬಳಿಕ ರೋಗಿಗೆ ಧೈರ್ಯತುಂಬಿದ ಡಾ. ದಾಸ್​ರ ತಂಡ ನಂತರ ಆತನ ಯಕೃತ್ತದಲ್ಲಿ ಸೇರಿಕೊಂಡಿದ್ದ ಕೀವು ಹೊರತೆಗೆದರು. ಇದೆಲ್ಲಾ ಆದ ಬಳಿಕ ಸತತ ಮೂರು ಗಂಟೆಗಳ ಅತ್ಯಂತ ಸೂಕ್ಷ್ಮವಾಗಿ ಶಸ್ತ್ರಚಿಕಿತ್ಸೆ ನಡೆಸಿ ಚಾಕುವನ್ನ ಯಶಸ್ವಿಯಾಗಿ ಹೊರತೆಗೆದರು.

ಚಾಕು ನುಂಗಿದ ಮಹಾಶಯನ ಆರೋಗ್ಯಸ್ಥಿತಿ ಸ್ಥಿರವಾಗಿದ್ದು ಚೇತರಿಕೆ ಕಾಣುತ್ತಿದ್ದಾನೆ. ಅಂದ ಹಾಗೆ, ಈ ಭೂಪ ಚಾಕು ಯಾಕೆ ನುಂಗಿದ ಅನ್ನೋ ಪ್ರಶ್ನೆ ಕಾಡುತ್ತಿರಬೇಕಲ್ವ? ಇದಕ್ಕೆ ಉತ್ತರ ಚಾಕು ನುಂಗಿದವನು ಮಾದಕ ವ್ಯಸನಿಯಂತೆ. ಒಮ್ಮೆ ಸೇವಿಸಲು ಗಾಂಜಾ ಸಿಗದೆ ಬೇಸರದಲ್ಲಿ ಕಣ್ಣಿಗೆ ಬಿದ್ದ ಚಾಕು ನುಂಗಿಬಿಟ್ಟನಂತೆ!

Published On - 3:35 pm, Tue, 28 July 20

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?