AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕಿತ್ಸೆಗೆ ಬಂದವನ ಲಿವರ್​ನಲ್ಲಿತ್ತು 20 ಸೆಂ.ಮೀ. ಚಾಕು! ಆಮೇಲೇನಾಯ್ತು?

ದೆಹಲಿ: ನಮ್ಮ ದೇಶದಲ್ಲಿ ಚಕಿತ ಮತ್ತು ಪವಾಡಗಳಿಗೇನು ಕಮ್ಮಿಯಿಲ್ಲ. ಇದೀಗ, ಚಿಕಿತ್ಸೆಗೆಂದು ದಾಖಲಾದ ರೋಗಿಯೊಬ್ಬನ ಯಕೃತ್ತದಲ್ಲಿ ಬರೋಬ್ಬರಿ 20 ಸೆಂಟಿಮೀಟರ್​ ಉದ್ದದ ಚಾಕು ಪತ್ತೆಯಾದಿಗೆ. ಅಂದ ಹಾಗೆ ಈ ಸ್ವಾರಸ್ಯಕರ ಸಂಗತಿ ರಾಜಧಾನಿ ದೆಹಲಿಯ ಪ್ರತಿಷ್ಠಿತ AIIMS ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಎರಡು ತಿಂಗಳ ಹಿಂದೆಯೇ ಚಾಕು ನುಂಗಿದ್ದ! ಕಳೆದ ಎರಡು ತಿಂಗಳ ಹಿಂದೆ ಈ ಚಾಕುವನ್ನು ನುಂಗಿದ್ದ ಈ 28 ವರ್ಷದ ಭೂಪ ಹಾಗೇ ಆರಾಮಾಗಿ ಜೀವನ ಸಾಗಿಸುತ್ತಿದ್ದನಂತೆ. ಆದರೆ, ಇತ್ತೀಚೆಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ […]

ಚಿಕಿತ್ಸೆಗೆ ಬಂದವನ ಲಿವರ್​ನಲ್ಲಿತ್ತು 20 ಸೆಂ.ಮೀ. ಚಾಕು! ಆಮೇಲೇನಾಯ್ತು?
KUSHAL V
| Edited By: |

Updated on:Jul 30, 2020 | 2:33 PM

Share

ದೆಹಲಿ: ನಮ್ಮ ದೇಶದಲ್ಲಿ ಚಕಿತ ಮತ್ತು ಪವಾಡಗಳಿಗೇನು ಕಮ್ಮಿಯಿಲ್ಲ. ಇದೀಗ, ಚಿಕಿತ್ಸೆಗೆಂದು ದಾಖಲಾದ ರೋಗಿಯೊಬ್ಬನ ಯಕೃತ್ತದಲ್ಲಿ ಬರೋಬ್ಬರಿ 20 ಸೆಂಟಿಮೀಟರ್​ ಉದ್ದದ ಚಾಕು ಪತ್ತೆಯಾದಿಗೆ. ಅಂದ ಹಾಗೆ ಈ ಸ್ವಾರಸ್ಯಕರ ಸಂಗತಿ ರಾಜಧಾನಿ ದೆಹಲಿಯ ಪ್ರತಿಷ್ಠಿತ AIIMS ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ಎರಡು ತಿಂಗಳ ಹಿಂದೆಯೇ ಚಾಕು ನುಂಗಿದ್ದ! ಕಳೆದ ಎರಡು ತಿಂಗಳ ಹಿಂದೆ ಈ ಚಾಕುವನ್ನು ನುಂಗಿದ್ದ ಈ 28 ವರ್ಷದ ಭೂಪ ಹಾಗೇ ಆರಾಮಾಗಿ ಜೀವನ ಸಾಗಿಸುತ್ತಿದ್ದನಂತೆ. ಆದರೆ, ಇತ್ತೀಚೆಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈತನ ಕುಟುಂಬದವರು ಆಸ್ಪತ್ರೆಗೆ ಕರೆತಂದಿದ್ದರು. ವೈದ್ಯರು X-ray ನಡೆಸಿದೆ ವೇಳೆ ಈತನ ಯಕೃತ್ತದಲ್ಲಿ ಚಾಕು ಇರೋದು ಗೊತ್ತಾಗಿದೆ.

ಆದರೆ, ಕೂಡಲೇ ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರಿಗೆ ಸಾಕಷ್ಟು ಸವಾಲುಗಳು ಎದುರಾದವು. ಚಾಕು ಯಕೃತ್ತದಲ್ಲಿದ್ದ ಪ್ರಮುಖ ರಕ್ತನಾಳದ ಬಳಿ ಸಿಲುಕಿಕೊಂಡಿದೆ. ಆಪರೇಷನ್​ ವೇಳೆ ಸ್ವಲ್ಪ ಯಾಮಾರಿದ್ರು ರೋಗಿಯ ಪ್ರಾಣಕ್ಕೆ ಕುತ್ತು. ಹಾಗಾಗಿ, ಆಸ್ಪತ್ರೆಯ ಶಸ್ತ್ರವೈದ್ಯರಾದ ಡಾ. NR ದಾಸ್​ ರೋಗಿಯ ದೇಹವನ್ನ ಶಸ್ತ್ರಚಿಕಿತ್ಸೆಗೆ ಸಧೃಡಪಡಿಸಲು ಪೂರಕ ಔಷಧಿ ನೀಡಲು ಮುಂದಾದರು.

ಬಳಿಕ ರೋಗಿಗೆ ಧೈರ್ಯತುಂಬಿದ ಡಾ. ದಾಸ್​ರ ತಂಡ ನಂತರ ಆತನ ಯಕೃತ್ತದಲ್ಲಿ ಸೇರಿಕೊಂಡಿದ್ದ ಕೀವು ಹೊರತೆಗೆದರು. ಇದೆಲ್ಲಾ ಆದ ಬಳಿಕ ಸತತ ಮೂರು ಗಂಟೆಗಳ ಅತ್ಯಂತ ಸೂಕ್ಷ್ಮವಾಗಿ ಶಸ್ತ್ರಚಿಕಿತ್ಸೆ ನಡೆಸಿ ಚಾಕುವನ್ನ ಯಶಸ್ವಿಯಾಗಿ ಹೊರತೆಗೆದರು.

ಚಾಕು ನುಂಗಿದ ಮಹಾಶಯನ ಆರೋಗ್ಯಸ್ಥಿತಿ ಸ್ಥಿರವಾಗಿದ್ದು ಚೇತರಿಕೆ ಕಾಣುತ್ತಿದ್ದಾನೆ. ಅಂದ ಹಾಗೆ, ಈ ಭೂಪ ಚಾಕು ಯಾಕೆ ನುಂಗಿದ ಅನ್ನೋ ಪ್ರಶ್ನೆ ಕಾಡುತ್ತಿರಬೇಕಲ್ವ? ಇದಕ್ಕೆ ಉತ್ತರ ಚಾಕು ನುಂಗಿದವನು ಮಾದಕ ವ್ಯಸನಿಯಂತೆ. ಒಮ್ಮೆ ಸೇವಿಸಲು ಗಾಂಜಾ ಸಿಗದೆ ಬೇಸರದಲ್ಲಿ ಕಣ್ಣಿಗೆ ಬಿದ್ದ ಚಾಕು ನುಂಗಿಬಿಟ್ಟನಂತೆ!

Published On - 3:35 pm, Tue, 28 July 20

Follow Us
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!