AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತರಕಾರಿ ಮಾರುತ್ತಿದ್ದ ಟೆಕ್ಕಿ ಯುವತಿಗೆ ಕರೆದು ಕೆಲಸ ಕೊಟ್ಟ ಸೋನು ಸೂದ್ The Real Hero

ಹೈದರಾಬಾದ್: ಬಹುಬಾಷಾ ನಟ ಸೋನು ಸೂದ್ ಮತ್ತೇ ಸುದ್ದಿಯಲ್ಲಿದ್ದಾರೆ . ಕೆಲದಿನಗಳ ಹಿಂದಷ್ಟೇ ಆಂಧ್ರದ ಬಡ ರೈತ ಮತ್ತು ಆತನ ಇಬ್ಬರು ಹೆಣ್ಣುಮಕ್ಕಳು ಹೊಲದಲ್ಲಿ ನೊಗ ಹೊತ್ತು ಉಳುಮೆ ಮಾಡುವುದನ್ನು ನೋಡಿ ಟ್ರ್ಯಾಕ್ಟರ್ ಕೊಡಿಸಿದ್ದ ಸೂದ್ ಈಗ ಮತ್ತೊಬ್ಬ ಯುವತಿಗೆ ಸಹಾಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹೌದು ಪ್ರತಿಭಾನ್ವಿತ ನಟ ಸೋನು ಸೂದ್, ಈಗ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡು ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹೈದರಾಬಾದ್ ಟೆಕ್ಕಿ ಯವತಿಯೊಬ್ಬಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಹೈದರಾಬಾದ್‌ನ ವರ್ಚೂಸ್ ಕಾರ್ಪೋರೇಶನ್ ಎಂಬ […]

ತರಕಾರಿ ಮಾರುತ್ತಿದ್ದ ಟೆಕ್ಕಿ ಯುವತಿಗೆ ಕರೆದು ಕೆಲಸ ಕೊಟ್ಟ ಸೋನು ಸೂದ್ The Real Hero
Follow us
Guru
| Updated By:

Updated on:Jul 30, 2020 | 4:02 PM

ಹೈದರಾಬಾದ್: ಬಹುಬಾಷಾ ನಟ ಸೋನು ಸೂದ್ ಮತ್ತೇ ಸುದ್ದಿಯಲ್ಲಿದ್ದಾರೆ . ಕೆಲದಿನಗಳ ಹಿಂದಷ್ಟೇ ಆಂಧ್ರದ ಬಡ ರೈತ ಮತ್ತು ಆತನ ಇಬ್ಬರು ಹೆಣ್ಣುಮಕ್ಕಳು ಹೊಲದಲ್ಲಿ ನೊಗ ಹೊತ್ತು ಉಳುಮೆ ಮಾಡುವುದನ್ನು ನೋಡಿ ಟ್ರ್ಯಾಕ್ಟರ್ ಕೊಡಿಸಿದ್ದ ಸೂದ್ ಈಗ ಮತ್ತೊಬ್ಬ ಯುವತಿಗೆ ಸಹಾಯ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಹೌದು ಪ್ರತಿಭಾನ್ವಿತ ನಟ ಸೋನು ಸೂದ್, ಈಗ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡು ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹೈದರಾಬಾದ್ ಟೆಕ್ಕಿ ಯವತಿಯೊಬ್ಬಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಹೈದರಾಬಾದ್‌ನ ವರ್ಚೂಸ್ ಕಾರ್ಪೋರೇಶನ್ ಎಂಬ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುದತ್ತಿದ್ದ ಶಾರದಾ ಎಂಬ ಯುವತಿಯನ್ನ ಆ ಕಂಪನಿ ಕೊರೊನಾ ಸಂಕಷ್ಟ ಆರಂಭವಾಗುತ್ತಿದ್ದಂತೆ ಕೆಲಸದಿಂದ ಬಿಡುಗಡೆ ಮಾಡಿತ್ತು.

ಹೈದರಾಬಾದ್‌ನಲ್ಲಿ ತರಕಾರಿ ಮಾರುತ್ತಿದ್ದ ಟೆಕ್ಕಿ

ಮೊದಲೇ ಬಡತನದಿಂದ ಕಷ್ಟಪಟ್ಟು ಎಂಜಿನಿಯರಿಂಗ್ ಓದಿದ್ದ ಈ ಸಾಫ್ಟವೇರ್ ಹುಡುಗಿ ಇದರಿಂದ ಆರಂಭದಲ್ಲಿ ಕಂಗಾಲಾಗಿದ್ದಳು., ಆದ್ರೆ ತಾನು ಹುಟ್ಟಿದಾಗಿನಿಂದ ಕುಟುಂಬ ನಡೆಸುತ್ತಿದ್ದ ತರಕಾರಿ ವ್ಯಾಪಾರ ಈಕೆಯ ಕೈ ಹಿಡಿದಿದೆ. ಹೊಟ್ಟೆಪಾಡಿಗೆ ಮತ್ತು ಕುಟುಂಬ ಸಲುಹಲು ಶಾರದಾ ಮತ್ತೇ ರಸ್ತೆ ಬದಿಯಲ್ಲಿ ತರಕಾರಿ ಮಾರಲು ಆರಂಭಿಸಿದ್ದಾಳೆ.

ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಕೆಲಸ ಕೊಟ್ಟ ಸೋನು

ಈ ವಿಷಯವನ್ನ ಯಾರೋ ಒಬ್ಬರು ಟ್ವೀಟ್ ಮೂಲಕ ನಟ ಸೋನು ಸೂದ್ ಗಮನಕ್ಕ ತಂದಿದ್ದಾರೆ. ತಕ್ಷಣವೇ ಪ್ರತಿಕ್ರಿಯಿಸಿರುವ ಸೋನು, ನಾನು ಈಕೆ ಕೆಲಸ ಕೊಡಿಸುತ್ತೇನೆಂದು ಅಭಯ ನೀಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಕಚೇರಿ ಸಿಬ್ಬಂದಿಯನ್ನ ಆಕೆಯಿದ್ದಲ್ಲಿಗೆ ಕಳಿಸಿ ಸಂದರ್ಶನ ಮಾಡಿ ಕೆಲಸವನ್ನೂ ನೀಡಿದ್ದಾರೆ. ನಂತರ ಈ ವಿಷಯವನ್ನ ಟ್ವೀಟ್ ಮಾಡಿದ್ದಾರೆ.

ಕೊರೊನಾ ಸಂಕಷ್ಟದಲ್ಲಿ ಬಡವರ ಪಾಲಿಗೆ ಸೂಪರ್‌ ಹೀರೋ

ಕೊರೊನಾ ಸಂಕಷ್ಟದಲ್ಲಿ ಸೋನು ಸೂದ್ರ ಈ ಸಹಾಯ ಹಸ್ತದ ಗುಣ ಕೋಟ್ಯಂತರ ಜನರ ಹೃದಯ ಗೆದ್ದಿದೆ. ಈಗಾಗಲೇ ದಿನಗೂಲಿ ವಲಸೆ ಕಾರ್ಮಿಕರಿಗೆ ಬಸ್ ಸೌಲಭ್ಯ, ರೈತನ ಮಕ್ಕಳಿಗೆ ಟ್ರ್ಯಾಕ್ಟರ್ ಕೊಡಿಸಿ ಸಹಾಯ ಮಾಡಿರುವ ಸೋನು ಸೂದ್ ಈಗ ಟೆಕ್ಕಿಗೆ ಕೆಲಸವನ್ನು ಕೊಟ್ಟಿದ್ದಾರೆ. ಇದೆಲ್ಲವನ್ನ ಗಮನಿಸಿದ್ರೆ ತೆರೆ ಮೇಲೆ ಖಳನಾಯಕ ಪಾತ್ರ ಮಾಡುವ ಸೋನು ನಿಜ ಜೀವನದಲ್ಲಿ ಮಾತ್ರ ಪಕ್ಕಾ ಹೀರೋ ಎನ್ನೋದನ್ನ ತೋರಿಸಿಕೊಟ್ಟಿದ್ದಾರೆ.

Published On - 7:11 pm, Tue, 28 July 20

ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಅಯೋಧ್ಯೆ ರಾಮ ಮಂದಿರದ ರಾಮ ದರ್ಬಾರ್​​ನಲ್ಲಿ ಪಾಲ್ಗೊಂಡ ಸಿಎಂ ಯೋಗಿ
ಅಯೋಧ್ಯೆ ರಾಮ ಮಂದಿರದ ರಾಮ ದರ್ಬಾರ್​​ನಲ್ಲಿ ಪಾಲ್ಗೊಂಡ ಸಿಎಂ ಯೋಗಿ
ಕುಮಾರಸ್ವಾಮಿ, ಬಿಜೆಪಿ ನಾಯಕರಿಂದ ಹೆಣಗಳ ಮೇಲೆ ರಾಜಕಾರಣ: ಶಿವಕುಮಾರ್
ಕುಮಾರಸ್ವಾಮಿ, ಬಿಜೆಪಿ ನಾಯಕರಿಂದ ಹೆಣಗಳ ಮೇಲೆ ರಾಜಕಾರಣ: ಶಿವಕುಮಾರ್
ಪೋಸ್ಟ್​ಮಾರ್ಟಂ ಬೇಡ, ದೇಹ ಕೊಡಿ ಎಂದು ಅತ್ತ ತಾಯಿ ನೆನೆದು ಡಿಕೆಶಿ ಕಣ್ಣೀರು
ಪೋಸ್ಟ್​ಮಾರ್ಟಂ ಬೇಡ, ದೇಹ ಕೊಡಿ ಎಂದು ಅತ್ತ ತಾಯಿ ನೆನೆದು ಡಿಕೆಶಿ ಕಣ್ಣೀರು
ಸತ್ಕಾರ ಸಮಾರಂಭವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸಿದ್ದು: ಶಿವಕುಮಾರ್
ಸತ್ಕಾರ ಸಮಾರಂಭವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸಿದ್ದು: ಶಿವಕುಮಾರ್
ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ
ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ