AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಪುರದಲ್ಲಿ ಪೆಟ್ಟಿಗೆಯಿಂದ ಹೊರಬಂದ 2,400 ವರ್ಷ ಹರೆಯದ Tutu Mummy

ಜೈಪುರ: ದೇಶಾದ್ಯಂತ ಮಳೆರಾಯನ ಆರ್ಭಟ ತಾರಕಕ್ಕೇರಿದ್ದು ಹಲವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಮಳೆ ತಂದೊಡ್ಡಿರುವ ನೆರೆಯಿಂದ ನೂರಾರು ಮಂದಿ ತಮ್ಮ ತಮ್ಮ ಮನೆ, ಗುಡಿಸಲುಗಳನ್ನ ತೊರೆಯುವಂಥ ಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿ ಕೇವಲ ಬದುಕಿರುವವರಿಗೆ ಮಾತ್ರವಲ್ಲದೇ 2,400 ವರ್ಷಗಳ ಹಿಂದೆ ಅಸುನೀಗಿದ್ದ ಈಜಿಪ್ಟ್​ ದೇಶದಿಂದ ರಾಜಸ್ಥಾನಕ್ಕೆ ತಂದಿದ್ದ ಪುರಾತನ ಮಮ್ಮಿಗೂ ಸಹ ಎದುರಾಗಿದೆ. ಹೌದು, ಈಜಿಪ್ಟ್​ನ ಪರ್ಸಿಪೋಲಿಸ್​ ಪ್ರಾಂತ್ಯದಲ್ಲಿ ಪತ್ತೆಯಾಗಿದ್ದ ಈ 2,400 ವರ್ಷಗಳ ಪುರಾತನ ಮಮ್ಮಿಯನ್ನ 130 ವರ್ಷಗಳ ಹಿಂದೆ ರಾಜಸ್ಥಾನದ ಜೈಪುರದಲ್ಲಿರುವ ಆಲ್ಬರ್ಟ್ ಹಾಲ್​ […]

ಜೈಪುರದಲ್ಲಿ ಪೆಟ್ಟಿಗೆಯಿಂದ ಹೊರಬಂದ 2,400 ವರ್ಷ ಹರೆಯದ Tutu Mummy
KUSHAL V
| Updated By: ಸಾಧು ಶ್ರೀನಾಥ್​|

Updated on:Aug 19, 2020 | 1:45 PM

Share

ಜೈಪುರ: ದೇಶಾದ್ಯಂತ ಮಳೆರಾಯನ ಆರ್ಭಟ ತಾರಕಕ್ಕೇರಿದ್ದು ಹಲವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಮಳೆ ತಂದೊಡ್ಡಿರುವ ನೆರೆಯಿಂದ ನೂರಾರು ಮಂದಿ ತಮ್ಮ ತಮ್ಮ ಮನೆ, ಗುಡಿಸಲುಗಳನ್ನ ತೊರೆಯುವಂಥ ಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿ ಕೇವಲ ಬದುಕಿರುವವರಿಗೆ ಮಾತ್ರವಲ್ಲದೇ 2,400 ವರ್ಷಗಳ ಹಿಂದೆ ಅಸುನೀಗಿದ್ದ ಈಜಿಪ್ಟ್​ ದೇಶದಿಂದ ರಾಜಸ್ಥಾನಕ್ಕೆ ತಂದಿದ್ದ ಪುರಾತನ ಮಮ್ಮಿಗೂ ಸಹ ಎದುರಾಗಿದೆ.

ಹೌದು, ಈಜಿಪ್ಟ್​ನ ಪರ್ಸಿಪೋಲಿಸ್​ ಪ್ರಾಂತ್ಯದಲ್ಲಿ ಪತ್ತೆಯಾಗಿದ್ದ ಈ 2,400 ವರ್ಷಗಳ ಪುರಾತನ ಮಮ್ಮಿಯನ್ನ 130 ವರ್ಷಗಳ ಹಿಂದೆ ರಾಜಸ್ಥಾನದ ಜೈಪುರದಲ್ಲಿರುವ ಆಲ್ಬರ್ಟ್ ಹಾಲ್​ ಸಂಗ್ರಹಾಲಯಕ್ಕೆ ತರಲಾಗಿತ್ತು. ಟುಟು ಎಂಬ ಮಹಿಳೆಯ ಕಳೇಬರ ಇದಾಗಿದ್ದು ಮ್ಯೂಸಿಯಂ ಮುಖ್ಯ ಆಕರ್ಷಣೆಯಾಗಿ ಸಹ ಮಾರ್ಪಾಡಾಗಿತ್ತು.

ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಮಮ್ಮಿ ಬಚಾವ್​! ಆದರೆ, ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯ ಪರಿಣಾಮವಾಗಿ ಸಂಗ್ರಹಾಲಯಕ್ಕೆ ನೀರು ನುಗ್ಗಿಬಿಟ್ಟಿತು. ಇದರಿಂದ ಪ್ರದರ್ಶನಕ್ಕೆ ಇಡಲಾಗಿದ್ದ ಸಾಕಷ್ಟು ಪುರಾತನ ವಸ್ತುಗಳಿಗೆ ಹಾನಿ ಉಂಟಾಯಿತು. ಆದರೆ, ಅದೃಷ್ಟವಶಾತ್, ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಮಮ್ಮಿಯನ್ನ ಪ್ರದರ್ಶನಕ್ಕೆ ಇರಿಸಲಾಗಿದ್ದ ಗಾಜಿನ ಪೆಟ್ಟಿಗೆ ಒಡೆದು ಹೊರತರಲಾಯಿತು. ಸಂಗ್ರಹಾಲದ ಅಧೀಕ್ಷಕ ಡಾ. ರಾಕೇಶ್​ ಪ್ರಕಾರ ಸಿಬ್ಬಂದಿಯ ಕೆಲವೇ ನಿಮಿಷಗಳು ತಡಮಾಡಿದ್ದರೆ 2,400 ವರ್ಷಗಳ ಐತಿಹ್ಯ ಹೊಂದಿರುವ ಈ ಮಹತ್ವಪೂರ್ಣ ಅವಶೇಷವನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತಿತ್ತು.

ಸದ್ಯ, ಟುಟು ಮಮ್ಮಿಯನ್ನ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದ್ದು ಇತರೆ ಪ್ರಾಚೀನ ವಸ್ತುಗಳಿಗೆ ಉಂಟಾಗಿರುವ ಹಾನಿಯನ್ನ ಸರಿಪಡಿಸಲು ಸಂಗ್ರಹಾಲಯವನ್ನು ಏಳು ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

Published On - 1:42 pm, Wed, 19 August 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!