AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನೈ ಮೊಸಳೆ ಪಾರ್ಕ್​ನಲ್ಲಿದ್ದ 15 ಲಕ್ಷ ರೂ.ಮೌಲ್ಯದ, ದೊಡ್ಡ ಗಾತ್ರದ ಆಮೆ ಕಳವು; ಆಡಳಿತ ಸಿಬ್ಬಂದಿಯ ಮೇಲೆ ಪೊಲೀಸರ ಡೌಟ್​

ಪಾರ್ಕ್​ ನಿರ್ದೇಶಕರು ಇನ್ನೂ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಇದುವರೆಗೂ ಇಂಥ ಪ್ರಕರಣಗಳು ಇಲ್ಲಿ ನಡೆದೂ ಇರಲಿಲ್ಲ. ಇನ್ನೊಂದು ವಿಚಿತ್ರವೆಂದರೆ, ಅಲ್ಡಾಬ್ರಾದ ಒಂದು ಆಮೆ ಕಳವಾಗಿದ್ದರೂ, ಪಾರ್ಕ್​ನ ಫೇಸ್​ಬುಕ್​ ಪೇಜ್​ನಲ್ಲಿ ಕ್ರಿಸ್ಮಸ್​ ಶುಭಾಶಯ ಕೋರಲು ಇದೇ ಪ್ರಭೇದದ ಆಮೆಯ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ.

ಚೆನ್ನೈ ಮೊಸಳೆ ಪಾರ್ಕ್​ನಲ್ಲಿದ್ದ 15 ಲಕ್ಷ ರೂ.ಮೌಲ್ಯದ, ದೊಡ್ಡ ಗಾತ್ರದ ಆಮೆ ಕಳವು; ಆಡಳಿತ ಸಿಬ್ಬಂದಿಯ ಮೇಲೆ ಪೊಲೀಸರ ಡೌಟ್​
ಅಲ್ಡಾಬ್ರಾ ಆಮೆಯ ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on:Dec 26, 2020 | 3:28 PM

Share

ಚೆನ್ನೈ: ದಕ್ಷಿಣ ಚೆನ್ನೈನ ಮಹಾಬಲಿಪುರಂನಲ್ಲಿರುವ ಮದ್ರಾಸ್​ ಕ್ರೊಕೊಡೈಲ್ ಬ್ಯಾಂಕ್​ ಟ್ರಸ್ಟ್​ ​(ಮೊಸಳೆ ಪಾರ್ಕ್) ಪಾರ್ಕ್​​​ನಲ್ಲಿದ್ದ ಅಂದಾಜು 80-100 ಕೆಜಿ ತೂಕದ, ಜಗತ್ತಿನ ದೊಡ್ಡ ಗಾತ್ರದ ಆಮೆಗಳಲ್ಲಿ ಒಂದಾದ ಅಲ್ಡಾಬ್ರಾ ಆಮೆ ಕಾಣೆಯಾಗಿದೆ. ಈ ಆಮೆಗೆ ಮಾರುಕಟ್ಟೆಯಲ್ಲಿ ಏನಿಲ್ಲವೆಂದರೂ 15 ಲಕ್ಷ ರೂ.ಮೌಲ್ಯವಿದೆ.

ಅಲ್ಡಾಬ್ರಾ ಪ್ರಭೇದದ ಆಮೆಗಳು ದೀರ್ಘಾಯುಷ್ಯ ಹೊಂದಿರುತ್ತವೆ. ಈ ಉದ್ಯಾನದಲ್ಲಿದ್ದ ಆಮೆ ಕಾಣೆಯಾಗಿ ಆರುವಾರಗಳೇ ಕಳೆದಿದ್ದರೂ ಈಗಷ್ಟೇ ಬೆಳಕಿಗೆ ಬಂದಿದೆ. ಆಮೆಯನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೊಸಳೆ ಪಾರ್ಕ್​ ಆಡಳಿತ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಶುರು ಮಾಡಿರುವ ಪೊಲೀಸರು, ಇದು ಯಾರೋ ಉದ್ಯಾನದ ಸಿಬ್ಬಂದಿಯದೇ ಕೆಲಸ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗೇ ಎಲ್ಲಾ ಆಡಳಿತ ಸಿಬ್ಬಂದಿಯನ್ನೂ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ.

ಬೃಹತ್ ಆಮೆ ಇದ್ದ ಸುತ್ತಮುತ್ತಲೂ ಸಿಸಿಟಿವಿ ಕ್ಯಾಮರಾ ಇಲ್ಲ. ಸರಿಯಾಗಿ ಯೋಜನೆ ರೂಪಿಸಿ ಆಮೆಯನ್ನು ಕಳವು ಮಾಡಲಾಗಿದೆ. ಅಷ್ಟಾದರೂ ಕೆಲವು ಮಹತ್ವದ ಸುಳಿವು ಸಿಕ್ಕಿದ್ದು, ಅದರ ಆಧಾರ ಮೇಲೆ ತನಿಖೆ ನಡೆಸುತ್ತಿದ್ದೇವೆ. ಕಳ್ಳರು ಆಮೆಯನ್ನು ಹೊತ್ತು ಪೂರ್ವ ಕರಾವಳಿ ರಸ್ತೆ ಮೂಲಕ ಪರಾರಿಯಾಗಿದ್ದಾರೆ. ಪಾರ್ಕ್​ನ ಆಡಳಿತ ಸಿಬ್ಬಂದಿಯ ಕೈವಾಡ ಇಲ್ಲದೆ ಇದನ್ನು ಮಾಡುವುದು ಕಷ್ಟ ಎಂಬುದು ನಮ್ಮ ಬಲವಾದ ಅನಿಸಿಕೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ವೆಲ್ ಮುರುಗನ್ ತಿಳಿಸಿದ್ದಾರೆ.

ಇದು ಸರೀಸೃಪಗಳ ಉದ್ಯಾನವಾಗಿದ್ದು, ವಿವಿಧ ಪ್ರಭೇದಗಳ ಮೊಸಳೆಗಳು, ಆಮೆಗಳು ಇವೆ. ಅಲ್ಡಾಬ್ರಾ ಪ್ರಭೇದದ 4 ಮೊಸಳೆಗಳು ಇಲ್ಲಿದ್ದು, ಒಂದು ಕಾಣೆಯಾಗಿದೆ. ಅಲ್ಡಾಬ್ರಾ ಆಮೆಗಳು ಸುಮಾರು 150 ವರ್ಷ ಬದುಕುತ್ತವೆ.. ಸದ್ಯ ಕಾಣೆಯಾದ ಆಮೆಗೆ ಕೇವಲ 50 ವರ್ಷ ವಯಸ್ಸಾಗಿತ್ತು. ಆಮೆಗಳ ದೇಹದ ಅಂಗಗಳು ವೈದ್ಯಕೀಯವಾಗಿ ಹಲವು ಪ್ರಯೋಜನ ಕೊಡುತ್ತವೆ. ಬಹುಶ್ಯಃ ಇದೇ ಕಾರಣಕ್ಕೆ ಕಳವು ಮಾಡಿರಬಹುದು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಪಾರ್ಕ್​ ನಿರ್ದೇಶಕರು ಇನ್ನೂ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಇದುವರೆಗೂ ಇಂಥ ಪ್ರಕರಣಗಳು ಇಲ್ಲಿ ನಡೆದೂ ಇರಲಿಲ್ಲ. ಇನ್ನೊಂದು ವಿಚಿತ್ರವೆಂದರೆ, ಅಲ್ಡಾಬ್ರಾದ ಒಂದು ಆಮೆ ಕಳವಾಗಿದ್ದರೂ, ಪಾರ್ಕ್​ನ ಫೇಸ್​ಬುಕ್​ ಪೇಜ್​ನಲ್ಲಿ ಕ್ರಿಸ್ಮಸ್​ ಶುಭಾಶಯ ಕೋರಲು ಇದೇ ಪ್ರಭೇದದ ಆಮೆಯ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ನಿಂದ ಗೋರಕ್ಷಣೆ ಮಂತ್ರ ಪಠಣ: ಪಕ್ಷ ಸಂಘಟನೆಗೆ ಹೊಸ ತಂತ್ರ?

Published On - 3:24 pm, Sat, 26 December 20

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ