AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶದಲ್ಲಿ ಸ್ವಲ್ಪದರಲ್ಲೇ ತಪ್ಪಿದ ವಿಮಾನ ದುರಂತ; ರನ್​ ವೇಯಿಂದ ಜಾರಿ ಬದಿಗೆ ನಿಂತ ಫ್ಲೈಟ್​

ವಿಮಾನಗಳು ಇಳಿಯುವ ಮತ್ತು ಟೇಕ್​ ಆಫ್ ಆಗುವ ​ ಪಾಯಿಂಟ್​ ವಿಮಾನ ನಿಲ್ದಾಣದಿಂದ ತುಸು ದೂರದಲ್ಲಿದ್ದು, ಅಲ್ಲಿಯವರೆಗೆ ರನ್​ ವೇ ನಿರ್ಮಿಸಲಾಗಿರುತ್ತದೆ.

ಮಧ್ಯಪ್ರದೇಶದಲ್ಲಿ ಸ್ವಲ್ಪದರಲ್ಲೇ ತಪ್ಪಿದ ವಿಮಾನ ದುರಂತ; ರನ್​ ವೇಯಿಂದ ಜಾರಿ ಬದಿಗೆ ನಿಂತ ಫ್ಲೈಟ್​
ರನ್​ ವೇ ತಪ್ಪಿದ ವಿಮಾನ
TV9 Web
| Edited By: |

Updated on: Mar 12, 2022 | 4:31 PM

Share

ಅಲಯನ್ಸ್​ ಏರ್​ ಸಂಸ್ಥೆಯ ವಿಮಾನ ರನ್​ ವೇಯಿಂದ ಜಾರಿದ (Runway Excursion) ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ. ಎಟಿಆರ್​ 72 ಎಂಬ ವಿಮಾನ ಇದಾಗಿದ್ದು, 55 ಪ್ರಯಾಣಿಕರು ಇದ್ದರು. ಬೆಳಗ್ಗೆ 11.32ಕ್ಕೆ ದೆಹಲಿಯಿಂದ ಹೊರಟಿತ್ತು. ಲ್ಯಾಂಡ್ ಆಗಿ ನಿಲ್ದಾಣದವರೆಗೆ  ಬರುವಾಗ ರನ್​ ವೇ ತಪ್ಪಿದೆ. ಇದು ಸಣ್ಣಮಟ್ಟದ ಅವಘಡ ಆಗಿದ್ದು, ಯಾವುದೇ ಪ್ರಯಾಣಿಕರಿಗೂ ಅಪಾಯ ಆಗಿಲ್ಲ ಎಂದು ಅಲಯನ್ಸ್ ಏರ್​ ತಿಳಿಸಿದೆ.  

ವಿಮಾನಗಳು ಯಾವುದೇ ನಿಲ್ದಾಣದಲ್ಲಿ ಒಮ್ಮೆಲೇ ಬಂದು ಇಳಿಯುವುದಿಲ್ಲ ಮತ್ತು ನಿಲ್ದಾಣದಿಂದಲೇ ಟೇಕ್​ ಆಫ್​ ಆಗುವುದಿಲ್ಲ. ಅವುಗಳ ಇಳಿಯುವ ಮತ್ತು ಟೇಕ್​ ಆಫ್​ ಆಗುವ ಪಾಯಿಂಟ್​ ವಿಮಾನ ನಿಲ್ದಾಣದಿಂದ ತುಸು ದೂರದಲ್ಲಿದ್ದು, ಅಲ್ಲಿಯವರೆಗೆ ರನ್​ ವೇ ನಿರ್ಮಿಸಲಾಗಿರುತ್ತದೆ. ಈ ಪಾಯಿಂಟ್​ವರೆಗೆ ಅವು ಪುಟ್ಟ ಗಾಲಿಯಲ್ಲಿ ಸಂಚರಿಸುತ್ತವೆ. ಆದರೆ ಆ ರನ್​ ವೇಯಿಂದ ಜಾರಿದರೆ ಬಹುದೊಡ್ಡ ಅಪಾಯವಾಗುವ ಸಾಧ್ಯತೆಯೂ ಇರುತ್ತದೆ. ಈ ವಿಮಾನ ರನ್​ ವೇಯಿಂದ ಬಹುದೂರ ಹೋಗಿ ನಿಂತಿದ್ದರೂ ಅದೃಷ್ಟವಶಾತ್​ ಯಾರಿಗೂ ಏನೂ ಆಗಲಿಲ್ಲ.

ಈ ರನ್​ ವೇದಲ್ಲಿಯೇ ವಿಮಾನಗಳು ಭೀಕರ ಅಪಘಾತಕ್ಕೀಡಾಗಿ, ಅನೇಕರು ಪ್ರಾಣ ಕಳೆದುಕೊಂಡ ಉದಾಹರಣೆಗಳು ಇವೆ. 2010ರಲ್ಲಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಹುದೊಡ್ಡ ದುರಂತ ನಡೆದು ಹೋಗಿತ್ತು. ದುಬೈನಿಂದ ಬಂದಿದ್ದ ಏರ್​ ಇಂಡಿಯಾ ವಿಮಾನ ಮಂಗಳೂರಿನ ವಿಮಾನ ನಿಲ್ದಾಣದ ಬಳಿ ರನ್​ ವೇದಲ್ಲಿ ಲ್ಯಾಂಡ್ ಆಗುವಾಗ ರನ್​ ವೇದಲ್ಲಿಯೇ ಅಪಘಾತಕ್ಕೀಡಾಗಿತ್ತು. ಇದರಲ್ಲಿ 160ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಇದನ್ನೂ ಓದಿ: ಉಕ್ರೇನ್​​ಗೆ ಜಗತ್ತಿನ ಡೆಡ್ಲಿ ಸ್ನೈಪರ್​ ವಾಲಿ ಬಲ; ದಿನಕ್ಕೆ 40 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದ್ದಾರಂತೆ ಈ ಯೋಧ !

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ