AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶದಲ್ಲಿ ಸ್ವಲ್ಪದರಲ್ಲೇ ತಪ್ಪಿದ ವಿಮಾನ ದುರಂತ; ರನ್​ ವೇಯಿಂದ ಜಾರಿ ಬದಿಗೆ ನಿಂತ ಫ್ಲೈಟ್​

ವಿಮಾನಗಳು ಇಳಿಯುವ ಮತ್ತು ಟೇಕ್​ ಆಫ್ ಆಗುವ ​ ಪಾಯಿಂಟ್​ ವಿಮಾನ ನಿಲ್ದಾಣದಿಂದ ತುಸು ದೂರದಲ್ಲಿದ್ದು, ಅಲ್ಲಿಯವರೆಗೆ ರನ್​ ವೇ ನಿರ್ಮಿಸಲಾಗಿರುತ್ತದೆ.

ಮಧ್ಯಪ್ರದೇಶದಲ್ಲಿ ಸ್ವಲ್ಪದರಲ್ಲೇ ತಪ್ಪಿದ ವಿಮಾನ ದುರಂತ; ರನ್​ ವೇಯಿಂದ ಜಾರಿ ಬದಿಗೆ ನಿಂತ ಫ್ಲೈಟ್​
ರನ್​ ವೇ ತಪ್ಪಿದ ವಿಮಾನ
TV9 Web
| Edited By: |

Updated on: Mar 12, 2022 | 4:31 PM

Share

ಅಲಯನ್ಸ್​ ಏರ್​ ಸಂಸ್ಥೆಯ ವಿಮಾನ ರನ್​ ವೇಯಿಂದ ಜಾರಿದ (Runway Excursion) ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ. ಎಟಿಆರ್​ 72 ಎಂಬ ವಿಮಾನ ಇದಾಗಿದ್ದು, 55 ಪ್ರಯಾಣಿಕರು ಇದ್ದರು. ಬೆಳಗ್ಗೆ 11.32ಕ್ಕೆ ದೆಹಲಿಯಿಂದ ಹೊರಟಿತ್ತು. ಲ್ಯಾಂಡ್ ಆಗಿ ನಿಲ್ದಾಣದವರೆಗೆ  ಬರುವಾಗ ರನ್​ ವೇ ತಪ್ಪಿದೆ. ಇದು ಸಣ್ಣಮಟ್ಟದ ಅವಘಡ ಆಗಿದ್ದು, ಯಾವುದೇ ಪ್ರಯಾಣಿಕರಿಗೂ ಅಪಾಯ ಆಗಿಲ್ಲ ಎಂದು ಅಲಯನ್ಸ್ ಏರ್​ ತಿಳಿಸಿದೆ.  

ವಿಮಾನಗಳು ಯಾವುದೇ ನಿಲ್ದಾಣದಲ್ಲಿ ಒಮ್ಮೆಲೇ ಬಂದು ಇಳಿಯುವುದಿಲ್ಲ ಮತ್ತು ನಿಲ್ದಾಣದಿಂದಲೇ ಟೇಕ್​ ಆಫ್​ ಆಗುವುದಿಲ್ಲ. ಅವುಗಳ ಇಳಿಯುವ ಮತ್ತು ಟೇಕ್​ ಆಫ್​ ಆಗುವ ಪಾಯಿಂಟ್​ ವಿಮಾನ ನಿಲ್ದಾಣದಿಂದ ತುಸು ದೂರದಲ್ಲಿದ್ದು, ಅಲ್ಲಿಯವರೆಗೆ ರನ್​ ವೇ ನಿರ್ಮಿಸಲಾಗಿರುತ್ತದೆ. ಈ ಪಾಯಿಂಟ್​ವರೆಗೆ ಅವು ಪುಟ್ಟ ಗಾಲಿಯಲ್ಲಿ ಸಂಚರಿಸುತ್ತವೆ. ಆದರೆ ಆ ರನ್​ ವೇಯಿಂದ ಜಾರಿದರೆ ಬಹುದೊಡ್ಡ ಅಪಾಯವಾಗುವ ಸಾಧ್ಯತೆಯೂ ಇರುತ್ತದೆ. ಈ ವಿಮಾನ ರನ್​ ವೇಯಿಂದ ಬಹುದೂರ ಹೋಗಿ ನಿಂತಿದ್ದರೂ ಅದೃಷ್ಟವಶಾತ್​ ಯಾರಿಗೂ ಏನೂ ಆಗಲಿಲ್ಲ.

ಈ ರನ್​ ವೇದಲ್ಲಿಯೇ ವಿಮಾನಗಳು ಭೀಕರ ಅಪಘಾತಕ್ಕೀಡಾಗಿ, ಅನೇಕರು ಪ್ರಾಣ ಕಳೆದುಕೊಂಡ ಉದಾಹರಣೆಗಳು ಇವೆ. 2010ರಲ್ಲಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಹುದೊಡ್ಡ ದುರಂತ ನಡೆದು ಹೋಗಿತ್ತು. ದುಬೈನಿಂದ ಬಂದಿದ್ದ ಏರ್​ ಇಂಡಿಯಾ ವಿಮಾನ ಮಂಗಳೂರಿನ ವಿಮಾನ ನಿಲ್ದಾಣದ ಬಳಿ ರನ್​ ವೇದಲ್ಲಿ ಲ್ಯಾಂಡ್ ಆಗುವಾಗ ರನ್​ ವೇದಲ್ಲಿಯೇ ಅಪಘಾತಕ್ಕೀಡಾಗಿತ್ತು. ಇದರಲ್ಲಿ 160ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಇದನ್ನೂ ಓದಿ: ಉಕ್ರೇನ್​​ಗೆ ಜಗತ್ತಿನ ಡೆಡ್ಲಿ ಸ್ನೈಪರ್​ ವಾಲಿ ಬಲ; ದಿನಕ್ಕೆ 40 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದ್ದಾರಂತೆ ಈ ಯೋಧ !

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ