AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amarnath Yatra: ಪ್ರತಿಕೂಲ ಹವಾಮಾನದಿಂದ ಅಮರನಾಥ ಯಾತ್ರೆ ಮತ್ತೆ ಸ್ಥಗಿತ, ಈವರೆಗೆ 2.29 ಲಕ್ಷ ಭಕ್ತರಿಂದ ದರ್ಶನ

ಕಳೆದ ಜೂನ್ 30ರಂದು ಆರಂಭವಾದ ಅಮರನಾಥ್ ಯಾತ್ರೆಯಲ್ಲಿ ಈವರೆಗೆ 2.29 ಲಕ್ಷ ಮಂದಿ ಶಿವಲಿಂಗದ ದರ್ಶನ ಪಡೆದಿದ್ದಾರೆ.

Amarnath Yatra: ಪ್ರತಿಕೂಲ ಹವಾಮಾನದಿಂದ ಅಮರನಾಥ ಯಾತ್ರೆ ಮತ್ತೆ ಸ್ಥಗಿತ, ಈವರೆಗೆ 2.29 ಲಕ್ಷ ಭಕ್ತರಿಂದ ದರ್ಶನ
ಅಮರನಾಥ ಯಾತ್ರಿಗಳು (ಸಂಗ್ರಹ ಚಿತ್ರ)
TV9 Web
| Edited By: |

Updated on:Jul 22, 2022 | 9:14 AM

Share

ದೆಹಲಿ: ಅಮರನಾಥ ಯಾತ್ರೆಗೆ (Amarnath Yatra) ಬಳಕೆಯಾಗುವ ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯ ಸುಮಾರು 300 ಕಿಮೀ ಪ್ರದೇಶದಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಯಾತ್ರೆಯನ್ನು ಶುಕ್ರವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭೂಕುಸಿತ ಮತ್ತು ಬಂಡೆಗಳು ಉರುಳಿ ಬೀಳುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಸಂಚಾರವನ್ನು ಸಂಪೂರ್ಣ ನಿರ್ಬಂಭಿಸಲಾಗಿದೆ. ಕಳೆದ ಜೂನ್ 30ರಂದು ಆರಂಭವಾದ ಅಮರನಾಥ್ ಯಾತ್ರೆಯಲ್ಲಿ ಈವರೆಗೆ 2.29 ಲಕ್ಷ ಮಂದಿ ಶಿವಲಿಂಗದ ದರ್ಶನ ಪಡೆದಿದ್ದಾರೆ.

ಹೆದ್ದಾರಿಯಲ್ಲಿ ಇಂದು ವಾಹನ ಸಂಚಾರ ಇರುವುದಿಲ್ಲ. ಅದೇ ರೀತಿ ಜಮ್ಮುವಿನಿಂದ ಕಾಶ್ಮೀರ ಕಣಿವೆಯ ಕಡೆಗೆ, ಅಮರನಾಥ್ ಕಣಿವೆಗೆ ಪ್ರವಾಸಿಗರ ಸಂಚಾರವನ್ನೂ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 22 ದಿನಗಳಲ್ಲಿ 2,29,744 ಯಾತ್ರಿಗಳು ಪವಿತ್ರ ಗುಹೆಯಲ್ಲಿ ಶಿವಲಿಂಗದ ದರ್ಶನ ಪಡೆದುಕೊಂಡಿದ್ದಾರೆ. ನಿನ್ನೆ (ಜುಲೈ 21, ಗುರುವಾರ) ಒಂದೇ ದಿನ 10,310 ಯಾತ್ರಿಕರು ಪವಿತ್ರ ಗುಹೆ ಸಂದರ್ಶಿಸಿದ್ದರು. ಹಿಮಾಲಯದಲ್ಲಿರುವ ಅಮರನಾಥ ಗುಹೆಯು ಸಮುದ್ರ ಮಟ್ಟಕ್ಕಿಂತಲೂ 3,888 ಮೀಟರ್ ಎತ್ತರದಲ್ಲಿದೆ.

ಉತ್ತರ ಕಾಶ್ಮೀರದ ಬಲ್​ತಲ್ ಮಾರ್ಗವು ಅಮರನಾಥಕ್ಕೆ ಹತ್ತಿರದ ದಾರಿಯಾಗಿದೆ. ದಕ್ಷಿಣ ಕಾಶ್ಮೀರದ ಪಹಲ್​ಗಾಮ್ ಮಾರ್ಗದಲ್ಲಿ ಮತ್ತೊಂದು ಹಾದಿಯೂ ಇದೆ. ಆದರೆ ಇದು ತುಸು ದೂರವಾಗುತ್ತದೆ. ಬಲ್​ತಲ್ ಮಾರ್ಗದಲ್ಲಿ ಬರುವ ಯಾತ್ರಿಕರು ಪವಿತ್ರ ಗುಹೆ ತಲುಪಲು 14 ಕಿಮೀ ನಡೆದು ಬರಬೇಕಾಗುತ್ತದೆ. ಈ ಮಾರ್ಗದಲ್ಲಿ ಬರುವ ಭಕ್ತರು ದರ್ಶನದ ನಂತರ ಅಂದೇ ಮೂಲ ನೆಲೆಗೆ ಮರಳುತ್ತಾರೆ.

ಪಹಲ್​ಗಾಮ್ ಮಾರ್ಗವಾಗಿ ಬರುವವರು 48 ಕಿಮೀ ನಡೆಯಬೇಕಾಗಿದ್ದು, 4 ದಿನ ತೆಗೆದುಕೊಳ್ಳುತ್ತಾರೆ. ಎರಡೂ ಮಾರ್ಗಗಳಲ್ಲಿ ಯಾತ್ರಿಕರಿಗೆ ಹೆಲಿಕಾಪ್ಟರ್ ಸೌಲಭ್ಯವೂ ಲಭ್ಯವಿದೆ. ಎರಡೂ ಮಾರ್ಗಗಳಲ್ಲಿ ಶುಕ್ರವಾರ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಚೆದುರಿದಂತೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಮರನಾಥ ಯಾತ್ರಿಕರು ಭೂ ಕುಸಿತ ಮತ್ತು ಹಠಾತ್ ಪ್ರವಾಹಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಪ್ರಸಕ್ತ ಸಾಲಿನ ಅಮರನಾಥ ಯಾತ್ರೆಯು ಆಗಸ್ಟ್ 11ರ ಶ್ರಾವಣ ಹುಣ್ಣಿಮೆ, ರಕ್ಷಾಬಂಧನದ ದಿನ ಅಂತ್ಯಗೊಳ್ಳಲಿದೆ.

Published On - 9:14 am, Fri, 22 July 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ