AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6ವರ್ಷಕ್ಕಿಂತಲೂ ಹೆಚ್ಚಿನ ಶಿಕ್ಷಾರ್ಹ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆ ಕಡ್ಡಾಯಗೊಳಿಸಲು ಚಿಂತನೆ: ಅಮಿತ್​ ಶಾ

ವಿಧಿ ವಿಜ್ಞಾನ ತಂಡಗಳ ಕಾರ್ಯವ್ಯಾಪ್ತಿ ಹೆಚ್ಚಿಸಿ, 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರಯೋಗಾಲಯ ನಿರ್ಮಾಣಗೊಂಡರೆ, ಸುಮಾರು 30ರಿಂದ 40 ಸಾವಿರ  ವಿಧಿ ವಿಜ್ಞಾನಿಗಳ ಅಗತ್ಯ ಬೀಳುತ್ತದೆ.

6ವರ್ಷಕ್ಕಿಂತಲೂ ಹೆಚ್ಚಿನ ಶಿಕ್ಷಾರ್ಹ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆ ಕಡ್ಡಾಯಗೊಳಿಸಲು ಚಿಂತನೆ: ಅಮಿತ್​ ಶಾ
ಅಮಿತ್​ ಶಾ
Follow us
TV9 Web
| Updated By: Lakshmi Hegde

Updated on:Oct 14, 2021 | 7:12 PM

ಆರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಶಿಕ್ಷೆಯನ್ನು ಒಳಗೊಂಡಿರುವ ಯಾವುದೇ ವಿಧದ ಅಪರಾಧ ನಡೆದಾಗ, ಅದರ ತನಿಖೆ ಪ್ರಕ್ರಿಯೆ ವಿಧಿವಿಜ್ಞಾನ ತನಿಖೆಯನ್ನು ಒಳಗೊಂಡಿರಬೇಕು ಎಂದು ಗೃಹ ಸಚಿವ ಅಮಿತ್​ ಶಾ ಹೇಳಿದರು. ಇಂದು ಗೋವಾದಲ್ಲಿ ಮಾತನಾಡಿದ ಅವರು,  ಆರು ಮತ್ತು ಅದಕ್ಕೂ ಹೆಚ್ಚಿನ ಅವಧಿಯ ಶಿಕ್ಷಾರ್ಹ ಅಪರಾಧಗಳು (ಗಂಭೀರ ಅಪರಾಧಗಳು) ನಡೆದಾಗ, ಆ ಸ್ಥಳಗಳಿಗೆ ವಿಧಿ ವಿಜ್ಞಾನ ತಂಡಗಳು ಕಡ್ಡಾಯವಾಗಿ ಭೇಟಿ ನೀಡಿವೆ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳುವತ್ತ ಗಮನಹರಿಸಲಿದ್ದೇವೆ ಎಂದು ತಿಳಿಸಿದ್ದಾರೆ. 

ಯಾವುದೇ ಗಂಭೀರ ಪ್ರಕರಣದ ಸಂದರ್ಭದಲ್ಲಿ ವಿಧಿವಿಜ್ಞಾನ ಸಾಕ್ಷ್ಯವು ಪ್ರಾಸಿಕ್ಯೂಷನ್​​​ನ್ನು ಬಲಪಡಿಸುತ್ತದೆ.ಹಾಗೇ, ಈ ಸಾಕ್ಷ್ಯಗಳು ಆರೋಪಿಯ ಶಿಕ್ಷೆಯ ಪ್ರಮಾಣವನ್ನು ಸರಿಯಾಗಿ ತಿಳಿಸುತ್ತವೆ. ಹೆಚ್ಚಿಸಲೂ ಬಹುದು ಎಂದು ಅಮಿತ್​ ಶಾ ಹೇಳಿದರು. ಹೀಗೆ ವಿಧಿ ವಿಜ್ಞಾನ ತಂಡಗಳ ಭೇಟಿ, ತನಿಖೆ ಕಡ್ಡಾಯಗೊಂಡರೆ ದೇಶದ 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಂದು ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿತವಾಗಬೇಕಾಗುತ್ತದೆ. ಚಿಕ್ಕಾದರೂ ಸರಿ, ಮೊಬೈಲ್​ ಫೊರೆನ್ಸಿಕ್​​ ವ್ಯಾನ್​​ಗಳ ರಚನೆಯಾಗಲೇಬೇಕಾಗುತ್ತದೆ ಎಂದು ತಿಳಿಸಿದರು.

ಹೀಗೆ ವಿಧಿ ವಿಜ್ಞಾನ ತಂಡಗಳ ಕಾರ್ಯವ್ಯಾಪ್ತಿ ಹೆಚ್ಚಿಸಿ, 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರಯೋಗಾಲಯ ನಿರ್ಮಾಣಗೊಂಡರೆ, ಸುಮಾರು 30ರಿಂದ 40 ಸಾವಿರ  ವಿಧಿ ವಿಜ್ಞಾನಿಗಳ ಅಗತ್ಯ ಬೀಳುತ್ತದೆ. ನಿರುದ್ಯೋಗ ಸಮಸ್ಯೆ ನೀಗುತ್ತದೆ..ಹಾಗೇ ಈ ವಿಭಾಗದಲ್ಲಿ ಕೌಶಲತೆ ಹೆಚ್ಚಿಸಲು  ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತಿದ್ದೇವೆ ಎಂದೂ ಅವರು ತಿಳಿಸಿದರು.

ಗೋವಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಅಡಿಗಲ್ಲು ಸ್ಥಾಪನೆ ಮಾಡಲಿರುವ ಅಮಿತ್​ ಶಾ, ಗೋವಾದಲ್ಲಿ ಹೀಗೊಂದು ಯೂನಿರ್ವಸಿಟಿ ನಿರ್ಮಾಣ ಆಗುತ್ತಿರುವುದು ಯುವಜನರಿಗೆ ಸಿಕ್ಕ ಬಹುದೊಡ್ಡ ಕೊಡುಗೆಯಾಗಿದೆ. ಇಲ್ಲಿ ಸಾಮಾನ್ಯ ವಿಧಿ ವಿಜ್ಞಾನ,  ವಿಧಿ ವಿಜ್ಞಾನ ರಸಾಯನ ಶಾಸ್ತ್ರ, ಟಾಕ್ಸಿಕಾಲಜಿ, ಜೈವಿಕ ತಂತ್ರಜ್ಞಾನ,ಬೆರಳಚ್ಚು, ಡಿಎನ್​ಎ ವಿಜ್ಞಾನ, ಹಣಕಾಸು ಅಪರಾಧಗಳ ತನಿಖೆ, ಸೈಬರ್-ಭದ್ರತೆ ವಿಶ್ಲೇಷಣೆ, ಡಿಜಿಟಲ್ ವಿಧಿ ವಿಜ್ಞಾನ ಮತ್ತು ವನ್ಯಜೀವಿ ವಿಧಿ ವಿಜ್ಞಾನ ಕೋರ್ಸ್​​​ಗಳು ಲಭ್ಯವಿದೆ.  ಈ ಕೋರ್ಸ್​ಗಳಿಗೆ ಹೆಚ್ಚೆಚ್ಚು ವಿದ್ಯಾರ್ಥಿಗಳು ಸೇರಿಕೊಳ್ಳಿ. ನಿಮಗೆ ಖಂಡಿತ ಮುಂದೆ ಉದ್ಯೋಗಾವಕಾಶ ಇದೆ ಎಂದು ಅಮಿತ್​ ಶಾ ಕರೆ ನೀಡಿದರು.

ಇದನ್ನೂ ಓದಿ: ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಹೊಗಳಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್

Reliance Industries: ಫೋರ್ಬ್ಸ್​ನಿಂದ ಭಾರತದ ಟಾಪ್ 1 ಉದ್ಯೋಗದಾತ ಸಂಸ್ಥೆಯಾಗಿ ರಿಲಯನ್ಸ್​ ಇಂಡಸ್ಟ್ರೀಸ್ ಆಯ್ಕೆ

Published On - 7:12 pm, Thu, 14 October 21

ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?