AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6ವರ್ಷಕ್ಕಿಂತಲೂ ಹೆಚ್ಚಿನ ಶಿಕ್ಷಾರ್ಹ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆ ಕಡ್ಡಾಯಗೊಳಿಸಲು ಚಿಂತನೆ: ಅಮಿತ್​ ಶಾ

ವಿಧಿ ವಿಜ್ಞಾನ ತಂಡಗಳ ಕಾರ್ಯವ್ಯಾಪ್ತಿ ಹೆಚ್ಚಿಸಿ, 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರಯೋಗಾಲಯ ನಿರ್ಮಾಣಗೊಂಡರೆ, ಸುಮಾರು 30ರಿಂದ 40 ಸಾವಿರ  ವಿಧಿ ವಿಜ್ಞಾನಿಗಳ ಅಗತ್ಯ ಬೀಳುತ್ತದೆ.

6ವರ್ಷಕ್ಕಿಂತಲೂ ಹೆಚ್ಚಿನ ಶಿಕ್ಷಾರ್ಹ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆ ಕಡ್ಡಾಯಗೊಳಿಸಲು ಚಿಂತನೆ: ಅಮಿತ್​ ಶಾ
ಅಮಿತ್​ ಶಾ
TV9 Web
| Updated By: Lakshmi Hegde|

Updated on:Oct 14, 2021 | 7:12 PM

Share

ಆರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಶಿಕ್ಷೆಯನ್ನು ಒಳಗೊಂಡಿರುವ ಯಾವುದೇ ವಿಧದ ಅಪರಾಧ ನಡೆದಾಗ, ಅದರ ತನಿಖೆ ಪ್ರಕ್ರಿಯೆ ವಿಧಿವಿಜ್ಞಾನ ತನಿಖೆಯನ್ನು ಒಳಗೊಂಡಿರಬೇಕು ಎಂದು ಗೃಹ ಸಚಿವ ಅಮಿತ್​ ಶಾ ಹೇಳಿದರು. ಇಂದು ಗೋವಾದಲ್ಲಿ ಮಾತನಾಡಿದ ಅವರು,  ಆರು ಮತ್ತು ಅದಕ್ಕೂ ಹೆಚ್ಚಿನ ಅವಧಿಯ ಶಿಕ್ಷಾರ್ಹ ಅಪರಾಧಗಳು (ಗಂಭೀರ ಅಪರಾಧಗಳು) ನಡೆದಾಗ, ಆ ಸ್ಥಳಗಳಿಗೆ ವಿಧಿ ವಿಜ್ಞಾನ ತಂಡಗಳು ಕಡ್ಡಾಯವಾಗಿ ಭೇಟಿ ನೀಡಿವೆ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳುವತ್ತ ಗಮನಹರಿಸಲಿದ್ದೇವೆ ಎಂದು ತಿಳಿಸಿದ್ದಾರೆ. 

ಯಾವುದೇ ಗಂಭೀರ ಪ್ರಕರಣದ ಸಂದರ್ಭದಲ್ಲಿ ವಿಧಿವಿಜ್ಞಾನ ಸಾಕ್ಷ್ಯವು ಪ್ರಾಸಿಕ್ಯೂಷನ್​​​ನ್ನು ಬಲಪಡಿಸುತ್ತದೆ.ಹಾಗೇ, ಈ ಸಾಕ್ಷ್ಯಗಳು ಆರೋಪಿಯ ಶಿಕ್ಷೆಯ ಪ್ರಮಾಣವನ್ನು ಸರಿಯಾಗಿ ತಿಳಿಸುತ್ತವೆ. ಹೆಚ್ಚಿಸಲೂ ಬಹುದು ಎಂದು ಅಮಿತ್​ ಶಾ ಹೇಳಿದರು. ಹೀಗೆ ವಿಧಿ ವಿಜ್ಞಾನ ತಂಡಗಳ ಭೇಟಿ, ತನಿಖೆ ಕಡ್ಡಾಯಗೊಂಡರೆ ದೇಶದ 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಂದು ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿತವಾಗಬೇಕಾಗುತ್ತದೆ. ಚಿಕ್ಕಾದರೂ ಸರಿ, ಮೊಬೈಲ್​ ಫೊರೆನ್ಸಿಕ್​​ ವ್ಯಾನ್​​ಗಳ ರಚನೆಯಾಗಲೇಬೇಕಾಗುತ್ತದೆ ಎಂದು ತಿಳಿಸಿದರು.

ಹೀಗೆ ವಿಧಿ ವಿಜ್ಞಾನ ತಂಡಗಳ ಕಾರ್ಯವ್ಯಾಪ್ತಿ ಹೆಚ್ಚಿಸಿ, 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರಯೋಗಾಲಯ ನಿರ್ಮಾಣಗೊಂಡರೆ, ಸುಮಾರು 30ರಿಂದ 40 ಸಾವಿರ  ವಿಧಿ ವಿಜ್ಞಾನಿಗಳ ಅಗತ್ಯ ಬೀಳುತ್ತದೆ. ನಿರುದ್ಯೋಗ ಸಮಸ್ಯೆ ನೀಗುತ್ತದೆ..ಹಾಗೇ ಈ ವಿಭಾಗದಲ್ಲಿ ಕೌಶಲತೆ ಹೆಚ್ಚಿಸಲು  ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತಿದ್ದೇವೆ ಎಂದೂ ಅವರು ತಿಳಿಸಿದರು.

ಗೋವಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಅಡಿಗಲ್ಲು ಸ್ಥಾಪನೆ ಮಾಡಲಿರುವ ಅಮಿತ್​ ಶಾ, ಗೋವಾದಲ್ಲಿ ಹೀಗೊಂದು ಯೂನಿರ್ವಸಿಟಿ ನಿರ್ಮಾಣ ಆಗುತ್ತಿರುವುದು ಯುವಜನರಿಗೆ ಸಿಕ್ಕ ಬಹುದೊಡ್ಡ ಕೊಡುಗೆಯಾಗಿದೆ. ಇಲ್ಲಿ ಸಾಮಾನ್ಯ ವಿಧಿ ವಿಜ್ಞಾನ,  ವಿಧಿ ವಿಜ್ಞಾನ ರಸಾಯನ ಶಾಸ್ತ್ರ, ಟಾಕ್ಸಿಕಾಲಜಿ, ಜೈವಿಕ ತಂತ್ರಜ್ಞಾನ,ಬೆರಳಚ್ಚು, ಡಿಎನ್​ಎ ವಿಜ್ಞಾನ, ಹಣಕಾಸು ಅಪರಾಧಗಳ ತನಿಖೆ, ಸೈಬರ್-ಭದ್ರತೆ ವಿಶ್ಲೇಷಣೆ, ಡಿಜಿಟಲ್ ವಿಧಿ ವಿಜ್ಞಾನ ಮತ್ತು ವನ್ಯಜೀವಿ ವಿಧಿ ವಿಜ್ಞಾನ ಕೋರ್ಸ್​​​ಗಳು ಲಭ್ಯವಿದೆ.  ಈ ಕೋರ್ಸ್​ಗಳಿಗೆ ಹೆಚ್ಚೆಚ್ಚು ವಿದ್ಯಾರ್ಥಿಗಳು ಸೇರಿಕೊಳ್ಳಿ. ನಿಮಗೆ ಖಂಡಿತ ಮುಂದೆ ಉದ್ಯೋಗಾವಕಾಶ ಇದೆ ಎಂದು ಅಮಿತ್​ ಶಾ ಕರೆ ನೀಡಿದರು.

ಇದನ್ನೂ ಓದಿ: ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಹೊಗಳಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್

Reliance Industries: ಫೋರ್ಬ್ಸ್​ನಿಂದ ಭಾರತದ ಟಾಪ್ 1 ಉದ್ಯೋಗದಾತ ಸಂಸ್ಥೆಯಾಗಿ ರಿಲಯನ್ಸ್​ ಇಂಡಸ್ಟ್ರೀಸ್ ಆಯ್ಕೆ

Published On - 7:12 pm, Thu, 14 October 21

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್