AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ಬೀಚ್‌ನಲ್ಲಿ ಯುವ ಜೋಡಿಗಳನ್ನು ಪೊರಕೆ ಹಿಡಿದು ಓಡಿಸಿದ ಬಿಜೆಪಿ ಕಾರ್ಯಕರ್ತೆಯರು

ನಾವು ಪ್ರೀತಿಗೆ ವಿರುದ್ಧವಾಗಿಲ್ಲ ಅಥವಾ ಸಮುದ್ರತೀರದಲ್ಲಿ ಪ್ರೀತಿಸುವವರ ಜೊತೆ ಕುಳಿತುಕೊಳ್ಳುವುದರ ವಿರುದ್ದವೂ ಅಲ್ಲ. ಆದರೆ ಅವರು ಸರಿಯಾಗಿ ಕುಳಿತುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಬೀಚ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂದು ಹೇಳಲು ನಾಚಿಕೆಯಾಗುತ್ತದೆ. ಅಕ್ಕಪಕ್ಕದ ಮಕ್ಕಳು ಇದನ್ನೇ ನೋಡುತ್ತಾ ಬೆಳೆಯುತ್ತಿದ್ದಾರೆ ಎಂದು ಬಿಜೆಪಿ ಸದಸ್ಯೆಯರು ಈ ಅಭಿಯಾನ ಬಗ್ಗೆ ಮಾತನಾಡಿದ್ದಾರೆ.

ಕೇರಳದ ಬೀಚ್‌ನಲ್ಲಿ ಯುವ ಜೋಡಿಗಳನ್ನು ಪೊರಕೆ ಹಿಡಿದು ಓಡಿಸಿದ ಬಿಜೆಪಿ ಕಾರ್ಯಕರ್ತೆಯರು
ಕೇರಳ ಬಿಜೆಪಿ ಮಹಿಳಾ ಘಟಕದ ಸದಸ್ಯೆಯರು
ರಶ್ಮಿ ಕಲ್ಲಕಟ್ಟ
|

Updated on: Feb 10, 2024 | 3:56 PM

Share

ಕೋಯಿಕ್ಕೋಡ್ ಫೆಬ್ರುವರಿ 10: ಕೇರಳದ ಕೋಝಿಕೋಡ್‌ನ (Kozhikode) ವೆಸ್ಟ್ ಹಿಲ್‌ನಲ್ಲಿರುವ ಕೊನ್ನಾಡ್ ಕಡಲ ಕಿನಾರೆಗೆ(Konad beach) ಫೆಬ್ರುವರಿ 8ರಂದು ಬಿಜೆಪಿ(BJP) ನೇತೃತ್ವದ 30 ಮಹಿಳೆಯರ ಗುಂಪೊಂದು ಪೊರಕೆ ಹಿಡಿದುಕೊಂಡು ಬಂದು ಅಲ್ಲಿ ಕುಳಿತಿದ್ದ ಯುವ ಜೋಡಿಗಳನ್ನು ಓಡಿಸಿದ್ದಾರೆ. ಬೀಚ್‌ನಲ್ಲಿ ನಡೆಯುತ್ತಿರುವ “ಅನೈತಿಕ ಚಟುವಟಿಕೆಗಳ” ವಿರುದ್ಧ ವೆಸ್ಟ್ ಹಿಲ್ ಬಿಜೆಪಿ ಪ್ರದೇಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಸಂತೋಷ್ ಅವರು ಅಧಿಕೃತವಾಗಿ ಉದ್ಘಾಟಿಸಿದ ‘ಪ್ರತಿಭಟನೆ’ ಸ್ವರೂಪದ ನೈತಿಕ ಪೊಲೀಸ್ ಗಿರಿ ಇದಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

“ನಾವು ಪ್ರೀತಿಗೆ ವಿರುದ್ಧವಾಗಿಲ್ಲ ಅಥವಾ ಸಮುದ್ರತೀರದಲ್ಲಿ ಪ್ರೀತಿಸುವವರ ಜೊತೆ ಕುಳಿತುಕೊಳ್ಳುವುದರ ವಿರುದ್ದವೂ ಅಲ್ಲ. ಆದರೆ ಅವರು ಸರಿಯಾಗಿ ಕುಳಿತುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಬೀಚ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂದು ಹೇಳಲು ನಾಚಿಕೆಯಾಗುತ್ತದೆ. ಅಕ್ಕಪಕ್ಕದ ಮಕ್ಕಳು ಇದನ್ನೇ ನೋಡುತ್ತಾ ಬೆಳೆಯುತ್ತಿದ್ದಾರೆ. ಅನೇಕ ಮಕ್ಕಳು ಬೀಚ್ ಪ್ರದೇಶದಲ್ಲಿ ಆಟವಾಡುತ್ತಾರೆ. ಅವರು ಮನೆಗೆ ಹಿಂತಿರುಗಿದಾಗ, ಅವರು ಅಲ್ಲಿ ಕಂಡದ್ದನ್ನು ತಮ್ಮ ಪೋಷಕರಿಗೆ ಹೇಳುತ್ತಾರೆ. ಇದರಿಂದ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಆ ಭಾಗದ ತಾಯಂದಿರೇ ಪೊರಕೆ ಹಿಡಿದು ಬೀಚ್‌ಗೆ ಬಂದು ಪ್ರತಿಭಟನೆ ನಡೆಸಿದರು ಎಂದು ಮಾಲಿನಿ ಹೇಳಿದ್ದಾರೆ.

ಇವರಲ್ಲಿ ಹಲವಾರು ತಾಯಂದಿರು ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರಾಗಿದ್ದರು. ಘಟನೆಯ ವಿಡಿಯೊದಲ್ಲಿ ಕೆಲವು ಪುರುಷರು ಮತ್ತು ಮಕ್ಕಳು ಸಹ ಗುಂಪಿನ ಭಾಗವಾಗಿದ್ದರು ಎಂದು ತೋರಿಸುತ್ತವೆ.

ಕೊನ್ನಾಡ್  ಬೀಚ್ ಪ್ರದೇಶದ ನಿವಾಸಿಗಳು “ಮಾದಕ ವ್ಯಸನಿ ಯುವಕರಿಂದ” ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಮಾಲಿನಿ ಆರೋಪಿಸಿದ್ದಾರೆ. ಅವರು ಡ್ರಗ್ಸ್ ಬಳಸಲು ಮತ್ತು “ಅನೈತಿಕ ಚಟುವಟಿಕೆಗಳಲ್ಲಿ” ತೊಡಗಿಸಿಕೊಳ್ಳಲು ಬೀಚ್‌ಗೆ ಬರುತ್ತಾರೆ. ಇಂತಹ ಚಟುವಟಿಕೆಗಳನ್ನು ತಡೆಯಲು ಪೊಲೀಸರು ಏನೂ ಮಾಡುತ್ತಿಲ್ಲ ಎಂದು ಮಹಿಳೆಯರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಈ ರೀತಿ ಪೊರಕೆ ಹಿಡಿದು ಓಡಿಸುವುದನ್ನು ಬಿಜೆಪಿ ನಾಯಕಿ, ಡ್ರಗ್ಸ್ ಮತ್ತು ಅನೈತಿಕ ಚಟುವಟಿಕೆಗಳ ವಿರುದ್ಧ “ಜಾಗೃತಿ ಅಭಿಯಾನ” ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ, ಆ ಪ್ರದೇಶದ ವೃದ್ಧರೊಬ್ಬರು ರಸ್ತೆಬದಿಯಲ್ಲಿ ಕುಳಿತು ‘ಈ ರೀತಿಯ ಕೃತ್ಯದಲ್ಲಿ’ ತೊಡಗಿಸಿಕೊಂಡಿದ್ದ ದಂಪತಿಯನ್ನು ಸ್ವಲ್ಪ ದೂರ ಸರಿಯುವಂತೆ ಕೇಳಿಕೊಂಡರು. ಆದರೆ ಕೋಪಗೊಂಡ ದಂಪತಿಗಳು ಆತನ ಮೇಲೆ ರೇಗಾಡಿದರು. ನಮ್ಮ ಪ್ರದೇಶದಲ್ಲಿ ಶಾಂತಿಯುತವಾಗಿ ಬದುಕುವ ಹಕ್ಕು ನಮಗಿಲ್ಲವೇ?. ಸಮವಸ್ತ್ರದಲ್ಲಿ ಹಲವಾರು ಶಾಲಾ ವಿದ್ಯಾರ್ಥಿಗಳು ನಿಯಮಿತವಾಗಿ ಬೀಚ್‌ಗೆ ಬರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೇರಳ: ಕಾಡಾನೆ ದಾಳಿಗೆ 47 ವರ್ಷದ ವ್ಯಕ್ತಿ ಬಲಿ, ವಯನಾಡಿನಲ್ಲಿ ಸೆಕ್ಷನ್ 144 ಜಾರಿ

“ಹೆಂಗಸರು ಸಮುದ್ರತೀರದಲ್ಲಿ ಕುಳಿತಿದ್ದ ಅನೇಕ ದಂಪತಿ ಮತ್ತು ಇತರ ಯುವಕರೊಂದಿಗೆ ಮಾತನಾಡಿದರು. ಅವರೆಲ್ಲರೂ ಯಾವುದೇ ಆಕ್ಷೇಪಣೆಯಿಲ್ಲದೆ ಎದ್ದು ಹೋದರು. ನಮ್ಮೊಂದಿಗೆ ಪೊಲೀಸರೂ ಇದ್ದರು ಎಂದು ಬಿಜೆಪಿ  ಮಹಿಳಾ ಘಟಕದ ಸದಸ್ಯರು ಹೇಳಿದ್ದಾರೆ.  ಸಮವಸ್ತ್ರ ಧರಿಸಿದ ಹಲವಾರು ಶಾಲಾ ವಿದ್ಯಾರ್ಥಿಗಳು ಸಹ ಕಡಲತೀರಕ್ಕೆ ನಿಯಮಿತವಾಗಿ ಬರುತ್ತಿದ್ದಾರೆ ಎಂದಿದ್ದಾರೆ ಅವರು.

ವೆಳ್ಳೈಲ್ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರೂ ಇಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಯಾವುದೇ ದೂರುಗಳು ದಾಖಲಾಗಿಲ್ಲ ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗೆ ಅಡ್ಡಿಯೇನೂ ಆಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. “ಮಹಿಳಾ ಪ್ರತಿಭಟನಾಕಾರರು ಬೀಚ್‌ನಲ್ಲಿ ಕುಳಿತಿದ್ದ ಪ್ರತಿಯೊಬ್ಬ ವ್ಯಕ್ತಿಯ ಬಳಿಗೆ ಬಂದು ಯಾವುದೇ ಕೆಟ್ಟ ನಡವಳಿಕೆಯನ್ನು ಕಂಡರೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಅಂದಹಾಗೆ, ಆ ಸಮಯದಲ್ಲಿ ಕೆಲವೇ ಜನರಿದ್ದರು ”ಎಂದು ಪೊಲೀಸರು ಹೇಳಿದ್ದಾರೆ. ಏತನ್ಮಧ್ಯೆ, ತಮ್ಮ ಸಮಸ್ಯೆಗಳು ಬಗೆಹರಿಯುವವರೆಗೂ ನೈತಿಕ ಪೊಲೀಸ್‌ ಗಿರಿ ಮುಂದುವರಿಸುವುದಾಗಿ ಮಾಲಿನಿ ಎಚ್ಚರಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್