AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ನಲ್ಲಿ ಫೇಕ್​ ಕೇಜ್ರಿವಾಲ್​ ಕಾಟ !; ಮಹಿಳೆಯರ ಮತ ಸೆಳೆಯಲು ವಿಶೇಷ ಘೋಷಣೆ ಮಾಡಿದ ದೆಹಲಿ ಮುಖ್ಯಮಂತ್ರಿ

Punjab Assembly Election 2022: ಕಳೆದ ಬಾರಿ ಕೇಜ್ರಿವಾಲ್​ ಪಂಜಾಬ್​ಗೆ ಬಂದಿದ್ದಾಗ ಇಲ್ಲಿನ ಜನರಿಗೆ ಉಚಿತ ವಿದ್ಯುತ್​ ಮತ್ತು ಉಚಿತ ಆರೋಗ್ಯ ಸೇವೆಯ ಭರವಸೆ ನೀಡಿದ್ದರು.

ಪಂಜಾಬ್​​ನಲ್ಲಿ ಫೇಕ್​ ಕೇಜ್ರಿವಾಲ್​ ಕಾಟ !; ಮಹಿಳೆಯರ ಮತ ಸೆಳೆಯಲು ವಿಶೇಷ ಘೋಷಣೆ ಮಾಡಿದ ದೆಹಲಿ ಮುಖ್ಯಮಂತ್ರಿ
ಅರವಿಂದ್ ಕೇಜ್ರಿವಾಲ್​
TV9 Web
| Updated By: Lakshmi Hegde|

Updated on: Nov 22, 2021 | 5:42 PM

Share

ಮೋಗಾ: ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ (Arvind Kejriwal) ಸದ್ಯ ಪಂಜಾಬ್​, ಉತ್ತರಾಖಂಡ್​ ಚುನಾವಣೆಗೆ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ನಿನ್ನೆ ಉತ್ತರಾಖಂಡ್​​ಗೆ ಭೇಟಿ ಕೊಟ್ಟಿದ್ದ ಕೇಜ್ರಿವಾಲ್​, ಇಂದು ಪಂಜಾಬ್​ಗೆ ಹೋಗಿದ್ದಾರೆ. ಅಲ್ಲಿನ ಮಹಿಳೆಯರ ಮತ ಸೆಳೆಯಲು ಮುಂದಾಗಿದ್ದಾರೆ. ಪಂಜಾಬ್​​ನಲ್ಲಿ ಆಮ್​ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಪಂಜಾಬ್​ನ ಪ್ರತಿ ಮಹಿಳೆಗೂ ಪ್ರತಿ ತಿಂಗಳೂ 1 ಸಾವಿರ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಹೀಗಾಗಿ ಆಪ್​ ಸೇರಿ ಎಲ್ಲ ರಾಜಕೀಯ ಪಕ್ಷಗಳು ತಮ್ಮದೇ ಮಾದರಿಯಲ್ಲಿ ಜನರನ್ನು ಸೆಳೆಯಲು ಶುರುವಿಟ್ಟುಕೊಂಡಿವೆ. 

ಇನ್ನು ಇಂದು ಪಂಜಾಬ್​ಗೆ ಭೇಟಿಕೊಟ್ಟಿರುವ ಅರವಿಂದ್ ಕೇಜ್ರಿವಾಲ್​, ಪಂಜಾಬ್​​ನಲ್ಲಿ 2022ರ ಚುನಾವಣೆಯಲ್ಲಿ ಆಪ್​ ಸರ್ಕಾರ ಅಧಿಕಾರಕ್ಕೆ ಬಂದರೆ  18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೂ ತಿಂಗಳಿಗೆ 1 ಸಾವಿರ ರೂಪಾಯಿ ನೀಡುತ್ತೇವೆ. ಅದೂ ಕೂಡ ನೇರವಾಗಿ ಅವರ ಅಕೌಂಟ್​ಗೇ ತಲುಪಲಿದೆ. ಒಂದು ಕುಟುಂಬದಲ್ಲಿ ಮೂವರು ಮಹಿಳೆಯರು ಇದ್ದರೆ, ಆ ಮೂವರ ಅಕೌಂಟ್​ಗಳು ತಲಾ 1 ಸಾವಿರ ರೂಪಾಯಿ ಹಾಕಲಾಗುವುದು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತರಲು ನಿರ್ಧರಿಸಿರುವ ಈ ಯೋಜನೆ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಮಹಿಳಾ ಸಬಲೀಕರಣ ಯೋಜನೆಯಾಗಿದೆ ಎಂದು ಮೋಗಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.

ಇದೇ ವೇಳೆ ಪಂಜಾಬ್​ ಸಿಎಂ ಚರಣಜಿತ್​ ಸಿಂಗ್​ ಛನ್ನಿ ವಿರುದ್ಧ  ಕೇಜ್ರಿವಾಲ್ ಹರಿಹಾಯ್ದಿದ್ದಾರೆ. ಕಳೆದ ಬಾರಿ ಕೇಜ್ರಿವಾಲ್​ ಪಂಜಾಬ್​ಗೆ ಬಂದಿದ್ದಾಗ ಇಲ್ಲಿನ ಜನರಿಗೆ ಉಚಿತ ವಿದ್ಯುತ್​ ಮತ್ತು ಉಚಿತ ಆರೋಗ್ಯ ಸೇವೆಯ ಭರವಸೆ ನೀಡಿದ್ದರು. ಅವರು ಅತ್ತ ಹೋಗುತ್ತಿದ್ದಂತೆ ಇತ್ತ ಮುಖ್ಯಮಂತ್ರಿ ಛನ್ನಿ, ಒಂದು ಯೂನಿಟ್​ ವಿದ್ಯುತ್​ ಬೆಲೆಯನ್ನು 3 ರೂಪಾಯಿಗೆ ಇಳಿಸಿದ್ದರು. ಅಷ್ಟೇ ಅಲ್ಲ, ರಾಜ್ಯದ ಜನರಿಗೆ ಕಡಿಮೆ ದರದಲ್ಲಿ ವಿದ್ಯುತ್​ ನೀಡಬೇಕೆ ಹೊರತು, ಉಚಿತವಾಗಿ ನೀಡುವುದಲ್ಲ ಎಂದಿದ್ದರು. ಈ ಬಾರಿ ಕೇಜ್ರಿವಾಲ್​ ಅದನ್ನೇ ಪ್ರಸ್ತಾಪ ಮಾಡಿದ್ದಾರೆ.‘ಪಂಜಾಬ್​​ನಲ್ಲಿ ಫೇಕ್​ ಕೇಜ್ರಿವಾಲ್​ (ಸಿಎಂ ಛೆನ್ನಿಯನ್ನು ಉದ್ದೇಶಿಸಿ ಹೇಳಿದ್ದು) ಅಲೆದಾಡುತ್ತಿದ್ದಾರೆ. ನಾನು ಇಲ್ಲಿ ಏನಾದರೂ ಭರವಸೆ ನೀಡಿ, ಅತ್ತ ಹೋಗುತ್ತಿದ್ದಂತೆ ಇತ್ತ ಅದನ್ನೇ ಅನುಷ್ಠಾನಕ್ಕೆ ತರುತ್ತಾರೆ. ಆ ಫೇಕ್​ ಕೇಜ್ರಿವಾಲ್​ ಬಗ್ಗೆ ನೀವೆಲ್ಲ ಎಚ್ಚರಿಕೆಯಿಂದ ಇರಬೇಕು’ ಎಂದು ಟಾಂಗ್​ ಕೊಟ್ಟಿದ್ದಾರೆ.

ಅರವಿಂದ್ ಕೇಜ್ರಿವಾಲ್ ಎರಡು ದಿನಗಳ ಪಂಜಾಬ್​ ಪ್ರವಾಸದಲ್ಲಿದ್ದಾರೆ. ಅವರಿಲ್ಲಿ ಮಿಷನ್ ಪಂಜಾಬ್ ಉದ್ಘಾಟನೆ ಮಾಡಲು ಬಂದವರು. ಇಂದು ಸಂಜೆಹೊತ್ತಿಗೆ ಅವರು ಲುಧಿಯಾನಾಕ್ಕೆ ಭೇಟಿ ಕೊಟ್ಟು, ಆಟೋ ಚಾಲಕರೊಂದಿಗೆ ಚರ್ಚೆ ನಡೆಸುವರು. ಮಂಗಳವಾರ ಕೇಜ್ರಿವಾಲ್​ ಅವರು ಆಪ್​ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಇದನ್ನೂ ಓದಿ: ಸರ್ಕಾರ ನಮ್ಮೊಂದಿಗೆ ಮಾತುಕತೆ ನಡೆಸಿದರೆ ಮಾತ್ರ ನಾವು ಮನೆಗೆ ಹೋಗುತ್ತೇವೆ: ರಾಕೇಶ್ ಟಿಕಾಯತ್

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ