AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ನಲ್ಲಿ ಫೇಕ್​ ಕೇಜ್ರಿವಾಲ್​ ಕಾಟ !; ಮಹಿಳೆಯರ ಮತ ಸೆಳೆಯಲು ವಿಶೇಷ ಘೋಷಣೆ ಮಾಡಿದ ದೆಹಲಿ ಮುಖ್ಯಮಂತ್ರಿ

Punjab Assembly Election 2022: ಕಳೆದ ಬಾರಿ ಕೇಜ್ರಿವಾಲ್​ ಪಂಜಾಬ್​ಗೆ ಬಂದಿದ್ದಾಗ ಇಲ್ಲಿನ ಜನರಿಗೆ ಉಚಿತ ವಿದ್ಯುತ್​ ಮತ್ತು ಉಚಿತ ಆರೋಗ್ಯ ಸೇವೆಯ ಭರವಸೆ ನೀಡಿದ್ದರು.

ಪಂಜಾಬ್​​ನಲ್ಲಿ ಫೇಕ್​ ಕೇಜ್ರಿವಾಲ್​ ಕಾಟ !; ಮಹಿಳೆಯರ ಮತ ಸೆಳೆಯಲು ವಿಶೇಷ ಘೋಷಣೆ ಮಾಡಿದ ದೆಹಲಿ ಮುಖ್ಯಮಂತ್ರಿ
ಅರವಿಂದ್ ಕೇಜ್ರಿವಾಲ್​
TV9 Web
| Edited By: |

Updated on: Nov 22, 2021 | 5:42 PM

Share

ಮೋಗಾ: ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ (Arvind Kejriwal) ಸದ್ಯ ಪಂಜಾಬ್​, ಉತ್ತರಾಖಂಡ್​ ಚುನಾವಣೆಗೆ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ನಿನ್ನೆ ಉತ್ತರಾಖಂಡ್​​ಗೆ ಭೇಟಿ ಕೊಟ್ಟಿದ್ದ ಕೇಜ್ರಿವಾಲ್​, ಇಂದು ಪಂಜಾಬ್​ಗೆ ಹೋಗಿದ್ದಾರೆ. ಅಲ್ಲಿನ ಮಹಿಳೆಯರ ಮತ ಸೆಳೆಯಲು ಮುಂದಾಗಿದ್ದಾರೆ. ಪಂಜಾಬ್​​ನಲ್ಲಿ ಆಮ್​ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಪಂಜಾಬ್​ನ ಪ್ರತಿ ಮಹಿಳೆಗೂ ಪ್ರತಿ ತಿಂಗಳೂ 1 ಸಾವಿರ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಹೀಗಾಗಿ ಆಪ್​ ಸೇರಿ ಎಲ್ಲ ರಾಜಕೀಯ ಪಕ್ಷಗಳು ತಮ್ಮದೇ ಮಾದರಿಯಲ್ಲಿ ಜನರನ್ನು ಸೆಳೆಯಲು ಶುರುವಿಟ್ಟುಕೊಂಡಿವೆ. 

ಇನ್ನು ಇಂದು ಪಂಜಾಬ್​ಗೆ ಭೇಟಿಕೊಟ್ಟಿರುವ ಅರವಿಂದ್ ಕೇಜ್ರಿವಾಲ್​, ಪಂಜಾಬ್​​ನಲ್ಲಿ 2022ರ ಚುನಾವಣೆಯಲ್ಲಿ ಆಪ್​ ಸರ್ಕಾರ ಅಧಿಕಾರಕ್ಕೆ ಬಂದರೆ  18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೂ ತಿಂಗಳಿಗೆ 1 ಸಾವಿರ ರೂಪಾಯಿ ನೀಡುತ್ತೇವೆ. ಅದೂ ಕೂಡ ನೇರವಾಗಿ ಅವರ ಅಕೌಂಟ್​ಗೇ ತಲುಪಲಿದೆ. ಒಂದು ಕುಟುಂಬದಲ್ಲಿ ಮೂವರು ಮಹಿಳೆಯರು ಇದ್ದರೆ, ಆ ಮೂವರ ಅಕೌಂಟ್​ಗಳು ತಲಾ 1 ಸಾವಿರ ರೂಪಾಯಿ ಹಾಕಲಾಗುವುದು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತರಲು ನಿರ್ಧರಿಸಿರುವ ಈ ಯೋಜನೆ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಮಹಿಳಾ ಸಬಲೀಕರಣ ಯೋಜನೆಯಾಗಿದೆ ಎಂದು ಮೋಗಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.

ಇದೇ ವೇಳೆ ಪಂಜಾಬ್​ ಸಿಎಂ ಚರಣಜಿತ್​ ಸಿಂಗ್​ ಛನ್ನಿ ವಿರುದ್ಧ  ಕೇಜ್ರಿವಾಲ್ ಹರಿಹಾಯ್ದಿದ್ದಾರೆ. ಕಳೆದ ಬಾರಿ ಕೇಜ್ರಿವಾಲ್​ ಪಂಜಾಬ್​ಗೆ ಬಂದಿದ್ದಾಗ ಇಲ್ಲಿನ ಜನರಿಗೆ ಉಚಿತ ವಿದ್ಯುತ್​ ಮತ್ತು ಉಚಿತ ಆರೋಗ್ಯ ಸೇವೆಯ ಭರವಸೆ ನೀಡಿದ್ದರು. ಅವರು ಅತ್ತ ಹೋಗುತ್ತಿದ್ದಂತೆ ಇತ್ತ ಮುಖ್ಯಮಂತ್ರಿ ಛನ್ನಿ, ಒಂದು ಯೂನಿಟ್​ ವಿದ್ಯುತ್​ ಬೆಲೆಯನ್ನು 3 ರೂಪಾಯಿಗೆ ಇಳಿಸಿದ್ದರು. ಅಷ್ಟೇ ಅಲ್ಲ, ರಾಜ್ಯದ ಜನರಿಗೆ ಕಡಿಮೆ ದರದಲ್ಲಿ ವಿದ್ಯುತ್​ ನೀಡಬೇಕೆ ಹೊರತು, ಉಚಿತವಾಗಿ ನೀಡುವುದಲ್ಲ ಎಂದಿದ್ದರು. ಈ ಬಾರಿ ಕೇಜ್ರಿವಾಲ್​ ಅದನ್ನೇ ಪ್ರಸ್ತಾಪ ಮಾಡಿದ್ದಾರೆ.‘ಪಂಜಾಬ್​​ನಲ್ಲಿ ಫೇಕ್​ ಕೇಜ್ರಿವಾಲ್​ (ಸಿಎಂ ಛೆನ್ನಿಯನ್ನು ಉದ್ದೇಶಿಸಿ ಹೇಳಿದ್ದು) ಅಲೆದಾಡುತ್ತಿದ್ದಾರೆ. ನಾನು ಇಲ್ಲಿ ಏನಾದರೂ ಭರವಸೆ ನೀಡಿ, ಅತ್ತ ಹೋಗುತ್ತಿದ್ದಂತೆ ಇತ್ತ ಅದನ್ನೇ ಅನುಷ್ಠಾನಕ್ಕೆ ತರುತ್ತಾರೆ. ಆ ಫೇಕ್​ ಕೇಜ್ರಿವಾಲ್​ ಬಗ್ಗೆ ನೀವೆಲ್ಲ ಎಚ್ಚರಿಕೆಯಿಂದ ಇರಬೇಕು’ ಎಂದು ಟಾಂಗ್​ ಕೊಟ್ಟಿದ್ದಾರೆ.

ಅರವಿಂದ್ ಕೇಜ್ರಿವಾಲ್ ಎರಡು ದಿನಗಳ ಪಂಜಾಬ್​ ಪ್ರವಾಸದಲ್ಲಿದ್ದಾರೆ. ಅವರಿಲ್ಲಿ ಮಿಷನ್ ಪಂಜಾಬ್ ಉದ್ಘಾಟನೆ ಮಾಡಲು ಬಂದವರು. ಇಂದು ಸಂಜೆಹೊತ್ತಿಗೆ ಅವರು ಲುಧಿಯಾನಾಕ್ಕೆ ಭೇಟಿ ಕೊಟ್ಟು, ಆಟೋ ಚಾಲಕರೊಂದಿಗೆ ಚರ್ಚೆ ನಡೆಸುವರು. ಮಂಗಳವಾರ ಕೇಜ್ರಿವಾಲ್​ ಅವರು ಆಪ್​ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಇದನ್ನೂ ಓದಿ: ಸರ್ಕಾರ ನಮ್ಮೊಂದಿಗೆ ಮಾತುಕತೆ ನಡೆಸಿದರೆ ಮಾತ್ರ ನಾವು ಮನೆಗೆ ಹೋಗುತ್ತೇವೆ: ರಾಕೇಶ್ ಟಿಕಾಯತ್

Follow Us
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್