AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿಯನ್ನು ಭೇಟಿಯಾಗಿ ಪೇಂಟಿಂಗ್ ಗಿಫ್ಟ್ ಕೊಟ್ಟ ಅಸ್ಸಾಂನ ವಾಕ್-ಶ್ರವಣದೋಷ ಇರುವ ಕಲಾವಿದ

ನಾನು ಪ್ರಧಾನಿಯವರನ್ನು ಪ್ರತಿದಿನ ಟಿವಿಯಲ್ಲಿ ನೋಡುತ್ತಿದ್ದೆ. ಇವತ್ತು ನಾನು ಅವರನ್ನು ಮುಖತಃ ಭೇಟಿಯಾದೆ. ತುಂಬಾ ಖುಷಿಯಾಗಿದೆ. ಅವರು ನನ್ನ ಪೇಂಟಿಂಗ್  ಮೆಚ್ಚಿ ಅದು ಚಂದವಿದೆ ಎಂದು ಹೊಗಳಿದಾಗ  ಖುಷಿಯಾಯಿತು.

ಪ್ರಧಾನಿಯನ್ನು ಭೇಟಿಯಾಗಿ ಪೇಂಟಿಂಗ್ ಗಿಫ್ಟ್ ಕೊಟ್ಟ ಅಸ್ಸಾಂನ ವಾಕ್-ಶ್ರವಣದೋಷ ಇರುವ ಕಲಾವಿದ
ಮೋದಿ ಭೇಟಿ ಮಾಡಿದ ಅಸ್ಸಾಂ ಕಲಾವಿದ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jul 22, 2022 | 4:39 PM

Share

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi)( ಭೇಟಿ ಮಾಡಬೇಕೆಂಬ ಅದಮ್ಯ ಆಸೆ ಇದ್ದ ವಾಕ್-ಶ್ರವಣದೋಷ ಇರುವ ಕಲಾವಿದನ ಕನಸನ್ನು ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ(Himanta Biswa Sarma) ನನಸಾಗಿಸಿದ್ದಾರೆ. 28ರ ಹರೆಯದ ಯುವ ಕಲಾವಿದ ಶುಕ್ರವಾರ ಮೋದಿಯವರನ್ನು ಭೇಟಿ ಮಾಡಿ ಅವರಿಗೊಂದು ಉಡುಗೊರೆ ನೀಡಿದ್ದಾರೆ. ಅಸ್ಸಾಂನ ಸಿಲ್ಚಾರ್ ಜಿಲ್ಲೆಯ ಅಭಿಜಿತ್ ಗೊತಾನಿ ತನ್ನ ಅಮ್ಮನೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದರು. ಗೊತಾನಿಯ ದೊಡ್ಡ ಕನಸೊಂದು ಸಾಕಾರವಾದ ಕ್ಷಣವಾಗಿತ್ತು ಅದು. ಪ್ರಧಾನಿ ನರೇಂದ್ರ ಮೋದಿಯವರ ಬದುಕಿನ ಪಯಣವನ್ನು ತೋರಿಸುವ ಪೇಟಿಂಗ್​​ನ್ನು ಗೊತಾನಿ ಮೋದಿಯವರಿಗೆ ನೀಡಿದ್ದಾರೆ. ಈ ಪೇಂಟಿಂಗ್​​ನಲ್ಲಿ ಪ್ರಧಾನಿ ಮೋದಿ ಮತ್ತು ಅವರ ಅಮ್ಮ, ಪಿಎಂ ಮೋದಿ ಯುಎನ್ ಜಿಎಯಲ್ಲಿ ಮಾತಾನಾಡುತ್ತಿರುವುದು, ಅವರು ಬಾಲಕನಾಗಿದ್ದಾಗಲಿಂದ ಹಿಡಿದು ಪ್ರಧಾನಿಯಾಗುವವರೆಗಿನ ಪಯಣದ ಚಿತ್ರ ಈ ಕಲಾವಿದನ ಕುಂಚದಲ್ಲಿ ಮೂಡಿ ಬಂದಿದೆ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದು ಅವನಿಗೆ ತುಂಬಾ ಖುಷಿ ಕೊಟ್ಟಿದೆ. ಅದ್ಭುತ ಚಿತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅವನ ಬೆನ್ನು ತಟ್ಟಿದಾಗ ಅವನ ಕಣ್ಣಲ್ಲಿ ಹೊಳಪು ಕಂಡೆ ಎಂದು ಗೋತಾನಿ ಅವರ ಅಮ್ಮ ಹೇಳಿದ್ದಾರೆ.

ನಾನು ಪ್ರಧಾನಿಯವರನ್ನು ಪ್ರತಿದಿನ ಟಿವಿಯಲ್ಲಿ ನೋಡುತ್ತಿದ್ದೆ. ಇವತ್ತು ನಾನು ಅವರನ್ನು ಮುಖತಃ ಭೇಟಿಯಾದೆ. ತುಂಬಾ ಖುಷಿಯಾಗಿದೆ. ಅವರು ನನ್ನ ಪೇಟಿಂಗ್  ಮೆಚ್ಚಿ ಅದು ಚಂದವಿದೆ ಎಂದು ಹೊಗಳಿದಾಗ  ಖುಷಿಯಾಯಿತು. ಪ್ರಧಾನಿ ನನ್ನ ಬೆನ್ನು ತಟ್ಟಿ ಈ ಕಲಾಕೃತಿ ಚೆನ್ನಾಗಿದೆ ಎಂದರು. ಇವತ್ತು ನನ್ನ ಕನಸು ನನಸಾಗಿದೆ. ಅವರು ತುಂಬಾ ಮೃದು ಹೃದಯದ ಸರಳ ವ್ಯಕ್ತಿ. ನಾನು ಪ್ರಧಾನಿಯವರನ್ನು ಭೇಟಿ ಮಾಡಿದರ ಬಗ್ಗೆ ನನ್ನ ಕುಟುಂಬಕ್ಕೆ ಹೆಮ್ಮೆಯಾಗಿದೆ. ನನ್ನಂತಿರುವ ವ್ಯಕ್ತಿಗಳು ಹಿಂದೇಟು ಹಾಕದೆ ನಮಗೂ ಅದು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಡಬೇಕು ಎಂದು ಸಂಜ್ಞಾಭಾಷೆಯಲ್ಲಿ ಗೊತಾನಿ ಹೇಳಿದ್ದು, ಅದನ್ನು ಅವರ ಅಮ್ಮ ವಿವರಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಇವರು ಸಿಲ್ಚಾರ್​​ನಿಂದ ಗುವಾಹಟಿಗೆ ಹೋಗಿ ಮುಖ್ಯಮಂತ್ರಿ ಶರ್ಮಾ ಅವರಿಗೆ ಪೇಟಿಂಗ್ ಉಡುಗೊರಯಾಗಿ ನೀಡಿದ್ದರು. ಈ ಭೇಟಿ ವೇಳೆ ಪ್ರಧಾನಿ ಮೋದಿಯವರಿಗೂ ಪೇಟಿಂಗ್ ನೀಡಬೇಕು ಎಂದು ಬಯಸುತ್ತಿರುವುದಾಗಿ ಗೊತಾನಿ ಹೇಳಿದ್ದರು. ತಕ್ಷಣವೇ ಶರ್ಮಾ ಅವರು ಪ್ರಧಾನಿ ಕಚೇರಿಗೆ ಪತ್ರ ಬರೆದು ಭೇಟಿಗಾಗಿ ಮನವಿ ಮಾಡಿದ್ದರು.

ಅವರು ಒಬ್ಬ ಒಳ್ಳೆಯ ಹುಡುಗ, ತುಂಬಾ ಚೆನ್ನಾಗಿ ಚಿತ್ರ ಬರೆಯುತ್ತಾರೆ. ತನಗೆ ಮೋದಿಯವರನ್ನು ಭೇಟಿ ಮಾಡಬೇಕು ಎಂದು ಅವರು ತಮ್ಮ ಬಯಕೆಯನ್ನು ತಿಳಿಸಿದಾಗ ನಾನು ತಕ್ಷಣವೇ ಪಿಎಂ ಕಚೇರಿಗೆ ಪತ್ರ ಬರೆದು ಭೇಟಿಗಾಗಿ ಅನುಮತಿ ಕೋರಿದೆ ಎಂದು ಅಸ್ಸಾಂ ಸಿಎಂ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

Published On - 3:25 pm, Fri, 22 July 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ