AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿಯನ್ನು ಭೇಟಿಯಾಗಿ ಪೇಂಟಿಂಗ್ ಗಿಫ್ಟ್ ಕೊಟ್ಟ ಅಸ್ಸಾಂನ ವಾಕ್-ಶ್ರವಣದೋಷ ಇರುವ ಕಲಾವಿದ

ನಾನು ಪ್ರಧಾನಿಯವರನ್ನು ಪ್ರತಿದಿನ ಟಿವಿಯಲ್ಲಿ ನೋಡುತ್ತಿದ್ದೆ. ಇವತ್ತು ನಾನು ಅವರನ್ನು ಮುಖತಃ ಭೇಟಿಯಾದೆ. ತುಂಬಾ ಖುಷಿಯಾಗಿದೆ. ಅವರು ನನ್ನ ಪೇಂಟಿಂಗ್  ಮೆಚ್ಚಿ ಅದು ಚಂದವಿದೆ ಎಂದು ಹೊಗಳಿದಾಗ  ಖುಷಿಯಾಯಿತು.

ಪ್ರಧಾನಿಯನ್ನು ಭೇಟಿಯಾಗಿ ಪೇಂಟಿಂಗ್ ಗಿಫ್ಟ್ ಕೊಟ್ಟ ಅಸ್ಸಾಂನ ವಾಕ್-ಶ್ರವಣದೋಷ ಇರುವ ಕಲಾವಿದ
ಮೋದಿ ಭೇಟಿ ಮಾಡಿದ ಅಸ್ಸಾಂ ಕಲಾವಿದ
TV9 Web
| Edited By: |

Updated on:Jul 22, 2022 | 4:39 PM

Share

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi)( ಭೇಟಿ ಮಾಡಬೇಕೆಂಬ ಅದಮ್ಯ ಆಸೆ ಇದ್ದ ವಾಕ್-ಶ್ರವಣದೋಷ ಇರುವ ಕಲಾವಿದನ ಕನಸನ್ನು ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ(Himanta Biswa Sarma) ನನಸಾಗಿಸಿದ್ದಾರೆ. 28ರ ಹರೆಯದ ಯುವ ಕಲಾವಿದ ಶುಕ್ರವಾರ ಮೋದಿಯವರನ್ನು ಭೇಟಿ ಮಾಡಿ ಅವರಿಗೊಂದು ಉಡುಗೊರೆ ನೀಡಿದ್ದಾರೆ. ಅಸ್ಸಾಂನ ಸಿಲ್ಚಾರ್ ಜಿಲ್ಲೆಯ ಅಭಿಜಿತ್ ಗೊತಾನಿ ತನ್ನ ಅಮ್ಮನೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದರು. ಗೊತಾನಿಯ ದೊಡ್ಡ ಕನಸೊಂದು ಸಾಕಾರವಾದ ಕ್ಷಣವಾಗಿತ್ತು ಅದು. ಪ್ರಧಾನಿ ನರೇಂದ್ರ ಮೋದಿಯವರ ಬದುಕಿನ ಪಯಣವನ್ನು ತೋರಿಸುವ ಪೇಟಿಂಗ್​​ನ್ನು ಗೊತಾನಿ ಮೋದಿಯವರಿಗೆ ನೀಡಿದ್ದಾರೆ. ಈ ಪೇಂಟಿಂಗ್​​ನಲ್ಲಿ ಪ್ರಧಾನಿ ಮೋದಿ ಮತ್ತು ಅವರ ಅಮ್ಮ, ಪಿಎಂ ಮೋದಿ ಯುಎನ್ ಜಿಎಯಲ್ಲಿ ಮಾತಾನಾಡುತ್ತಿರುವುದು, ಅವರು ಬಾಲಕನಾಗಿದ್ದಾಗಲಿಂದ ಹಿಡಿದು ಪ್ರಧಾನಿಯಾಗುವವರೆಗಿನ ಪಯಣದ ಚಿತ್ರ ಈ ಕಲಾವಿದನ ಕುಂಚದಲ್ಲಿ ಮೂಡಿ ಬಂದಿದೆ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದು ಅವನಿಗೆ ತುಂಬಾ ಖುಷಿ ಕೊಟ್ಟಿದೆ. ಅದ್ಭುತ ಚಿತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅವನ ಬೆನ್ನು ತಟ್ಟಿದಾಗ ಅವನ ಕಣ್ಣಲ್ಲಿ ಹೊಳಪು ಕಂಡೆ ಎಂದು ಗೋತಾನಿ ಅವರ ಅಮ್ಮ ಹೇಳಿದ್ದಾರೆ.

ನಾನು ಪ್ರಧಾನಿಯವರನ್ನು ಪ್ರತಿದಿನ ಟಿವಿಯಲ್ಲಿ ನೋಡುತ್ತಿದ್ದೆ. ಇವತ್ತು ನಾನು ಅವರನ್ನು ಮುಖತಃ ಭೇಟಿಯಾದೆ. ತುಂಬಾ ಖುಷಿಯಾಗಿದೆ. ಅವರು ನನ್ನ ಪೇಟಿಂಗ್  ಮೆಚ್ಚಿ ಅದು ಚಂದವಿದೆ ಎಂದು ಹೊಗಳಿದಾಗ  ಖುಷಿಯಾಯಿತು. ಪ್ರಧಾನಿ ನನ್ನ ಬೆನ್ನು ತಟ್ಟಿ ಈ ಕಲಾಕೃತಿ ಚೆನ್ನಾಗಿದೆ ಎಂದರು. ಇವತ್ತು ನನ್ನ ಕನಸು ನನಸಾಗಿದೆ. ಅವರು ತುಂಬಾ ಮೃದು ಹೃದಯದ ಸರಳ ವ್ಯಕ್ತಿ. ನಾನು ಪ್ರಧಾನಿಯವರನ್ನು ಭೇಟಿ ಮಾಡಿದರ ಬಗ್ಗೆ ನನ್ನ ಕುಟುಂಬಕ್ಕೆ ಹೆಮ್ಮೆಯಾಗಿದೆ. ನನ್ನಂತಿರುವ ವ್ಯಕ್ತಿಗಳು ಹಿಂದೇಟು ಹಾಕದೆ ನಮಗೂ ಅದು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಡಬೇಕು ಎಂದು ಸಂಜ್ಞಾಭಾಷೆಯಲ್ಲಿ ಗೊತಾನಿ ಹೇಳಿದ್ದು, ಅದನ್ನು ಅವರ ಅಮ್ಮ ವಿವರಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಇವರು ಸಿಲ್ಚಾರ್​​ನಿಂದ ಗುವಾಹಟಿಗೆ ಹೋಗಿ ಮುಖ್ಯಮಂತ್ರಿ ಶರ್ಮಾ ಅವರಿಗೆ ಪೇಟಿಂಗ್ ಉಡುಗೊರಯಾಗಿ ನೀಡಿದ್ದರು. ಈ ಭೇಟಿ ವೇಳೆ ಪ್ರಧಾನಿ ಮೋದಿಯವರಿಗೂ ಪೇಟಿಂಗ್ ನೀಡಬೇಕು ಎಂದು ಬಯಸುತ್ತಿರುವುದಾಗಿ ಗೊತಾನಿ ಹೇಳಿದ್ದರು. ತಕ್ಷಣವೇ ಶರ್ಮಾ ಅವರು ಪ್ರಧಾನಿ ಕಚೇರಿಗೆ ಪತ್ರ ಬರೆದು ಭೇಟಿಗಾಗಿ ಮನವಿ ಮಾಡಿದ್ದರು.

ಅವರು ಒಬ್ಬ ಒಳ್ಳೆಯ ಹುಡುಗ, ತುಂಬಾ ಚೆನ್ನಾಗಿ ಚಿತ್ರ ಬರೆಯುತ್ತಾರೆ. ತನಗೆ ಮೋದಿಯವರನ್ನು ಭೇಟಿ ಮಾಡಬೇಕು ಎಂದು ಅವರು ತಮ್ಮ ಬಯಕೆಯನ್ನು ತಿಳಿಸಿದಾಗ ನಾನು ತಕ್ಷಣವೇ ಪಿಎಂ ಕಚೇರಿಗೆ ಪತ್ರ ಬರೆದು ಭೇಟಿಗಾಗಿ ಅನುಮತಿ ಕೋರಿದೆ ಎಂದು ಅಸ್ಸಾಂ ಸಿಎಂ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

Published On - 3:25 pm, Fri, 22 July 22

ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ